ಪುಟಗಳು

Saturday, October 15, 2016

ಮಹಷಿ೯ ವಾಲ್ಮೀಕಿ ಕುರಿತು

ವಾಲ್ಮೀಕಿ’ ಭಾರತದ ಮತ್ತು ಪ್ರಪಂಚದ ಚರಿತ್ರೆಯಲ್ಲಿ ಎಂದೋ ಮಿನುಗಿದ ಧೃವತಾರೆ. ಆದಿಕವಿ, ಮಹರ್ಷಿ, ಮುನಿಪುಂಗವ, ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖಿ: ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿಜ್ಞ, ತತ್ವಜ್ಞಾನಿ, ಶೋಷಿತರ ನೇತಾರ, ಕವಿಯಾಗಿ ಬಹು ವೈವಿಧ್ಯಮಯಾವಾಗಿ ಜನರ ಮನಸೂರೆಗೊಂಡಿದ್ಧಾನೆ. ಇಂಥ ಮಹಾನ್ ವ್ಯಕ್ತಿಯ ಹೆಸರು ಜಗತ್ತಿಗೆ ಪರಿಚಯವಾದದ್ದು ರಾಮಾಯಣ ಕಾವ್ಯದ ಮೂಲಕ. ಸಂಸ್ಕೃತದಲ್ಲಿ ರಾಮಾಯಣವು ಭಾರತದ ಆದಿಕಾವ್ಯ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಕ ಸ್ಥಾನ ಲಭಿಸಿದೆ. ವಾಲ್ಮೀಕಿಯ ಮುಖೇನ ರಾಮಾಯಣವನ್ನು ರಾಮಾಯಣದ ಮುಖೇನ ಭಾರತದ ಜನಜೀವನವನ್ನು ಅರ್ಥೈಸಬೇಕಾದ ಅನಿವಾರ್ಯತೆ ಇಂದಿನದಾಗಿದೆ. ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದನು. ವೈದಿಕ ಮತ್ತು ಪುರೋಹಿತಶಾಹಿಗಳು ವಾಲ್ಮೀಕಿಯ ಪ್ರತಿಭೆ ಕಂಡು ಬ್ರಾಹ್ಮಣನೆಂದು ತಪ್ಪಾಗಿ ನಿರೂಪಿಸಿದ್ದಾರೆ. ಇಂಥ ಅನೇಕ ಸಂಗತಿಗಳನ್ನು ಪುನಾರಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಜೀವನ, ಕಾವ್ಯ, ವಿಶ್ವದಲ್ಲಿ ಅದು ಪಡೆದ ವಿವಿಧ ರೂಪಗಳು ಇವುಗಳನ್ನು ಹೊಸ ಬಗೆಯ ಚಿಂತನೆಗೆ ಒಳಪಡಿಸುವ ಪ್ರಯತ್ನ ಮಾಡಬೇಕಾಗಿದೆ.

ವಾಲ್ಮೀಕಿಯ ತಂದೆ ಪ್ರಚೇತಸೇನ, ವಾಲ್ಮೀಕಿ ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ. ಸಂಪ್ರದಾಯದಂತೆ ಈತನ ಮೊದಲ ಹೆಸರು ರತ್ನಾಕರ. ಈ ಬಗ್ಗೆ ಭಾರತದಲ್ಲಿ ವಿಭಿನ್ನ ಕಥೆಗಳಿರುವುದು ಸ್ಪಷ್ಟ. ಒಂದು ಮೂಲದ ಪ್ರಕಾರ ಕಳ್ಳತನ, ದರೋಡೆಯಲ್ಲಿ ನರತನದ ಈತನಿಗೊಮ್ಮೆ ನಾರದನಿಂದ ಪರೀಕ್ಷೆ ನಡೆಯಿತು. ನಿನ್ನ ಅಪರಾಧಕ್ಕೆ ನಿನ್ನ ಹೆಂಡತಿ – ಮಕ್ಕಳು ಭಾದ್ಯಸ್ಥರೇ (ಪಾಲುದಾರರು) ಎಂದು ತಿಳಿಸಿದ. ಅವನು ತನ್ನ ಕುಟುಂಬ ಪರಿವಾರವನ್ನು ವಿಚಾರಿಸಲಗಿ ನಿನ್ನ ಅಪರಾಧಕ್ಕೆ ನೀನೇ ಹೊಣೆ ಎಂದರು. ಇದರಿಂದ ಮನಃಪರಿವರ್ತನೆಗೊಂಡ ವಾಲ್ಮೀಕಿಗೆ ಅದರಂತೆ ಜ್ಞಾನೋದ ಯಾದ ಉತ್ತುಂಗ ಶಿಖರ ತಲುಪಿ ಮಹಾಕಾವ್ಯ ರಚಿಸಿದನೆಂದು ಹೇಳಲಾಗಿದೆ. ಮತ್ತೊಂದು ಮೂಲಕ ಪ್ರಕಾರ (ಬ್ರಾಹ್ಮಣೀಕರಿಸಿ) ವಾಲ್ಮೀಕಿ ಚ್ಯವನಮುನಿಯ ಪುತ್ರ, ಶೂದ್ರನಾದ ವಾಲ್ಮೀಕಿಯನ್ನು ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಂಡರೆ ನಿಜವಾಗಿಯೂ ಆತ ಬೇಟೆಗಾರ. ಅಂದು ತಪಸ್ಸು, ಧರ್ಮ, ಸತ್ಯ, ಪ್ರಾಮಾಣಿಕತೆ ವಾಲ್ಮೀಕಿಯಲ್ಲಿದ್ದವು.

ಕಾವ್ಯ ರಚನೆ (ಬರಹ) ಬ್ರಾಹ್ಮಣರಿಗೆ ಮೀಸಲಾಗಿತ್ತು. ಹೀಗಾಗಿ ಆತ್ಮನಿಗ್ರಹ, ತಪಸ್ಸು, ದಾನ, ಅಹಿಂಸಾ ಮತ್ತು ಸತ್ಯ, ಮತ್ಸರಾರಾಹಿತ್ಯ, ಕಪಟರಾಹಿತ್ಯ, ದೀನತ್ವ, ದಯಾಗುಣ ಮತ್ತು ತಪಸ್ ಇವು ಬ್ರಾಹ್ಮಣನಲ್ಲಿರಬೇಕು. ಅವು ವಾಲ್ಮೀಕಿಯಲ್ಲಿದ್ದವು. ವಾಲ್ಮೀಕಿ ಬೇಡರೊಡನೆ ಸೇರಿಕೊಂಡು. ದಾರಿಹೋಕರ ತಲೆ ಹೊಡೆದು ಅವರಿಂದ ಕಿತ್ತುಕೊಂಡ ಹಣ. ಸಂಪತ್ತಿನಿಂದ ಬದುಕುತ್ತಿದ್ದನಂತೆ. ಒಮ್ಮೆ ಇವನು ಸಪ್ತರ್ಷಿಗಳ ಪರಿಚಯವಾಗಿ ಅವರಿಂದ ರಾಮಮಂತ್ರೋಪದೇಶವನ್ನು ಪಡೆದು. ತಪಸ್ಸು ಮಾಡುವಾಗ ಈತನ ಮೇಲೆ ಹುತ್ತ (ವಾಲ್ಮೀಕ) ಬೆಳೆದು, ಸಪ್ತರ್ಷಿಗಳಿಂದ ವಾಲ್ಮೀಕಿಯಾದನು. ತಮಸಾ ನದಿಗೆ ಸ್ನಾನ್ನಕ್ಕೆ ಹೋದ ವಾಲ್ಮೀಕಿ ಅಲ್ಲಿ ಬೇಡನೊಬ್ಬ ಕ್ರೌಂಚ ಗಂಡು – ಹೆಣ್ಣು ಪಕ್ಷಿಗಳಲ್ಲಿ ಗಂಡನ್ನು ಕೊಲ್ಲಲು ಹೆಣ್ಣು ಗಂಡಿಗಗಿ ಗೋಳಿಡುವುದನ್ನು ಕಂಡು ದುಃಖಿತನಾಗಿ ಆ ಬೇಡನಿಗೆ ಶಾಪಕೊಟ್ಟನು. ಚಿಂತಾಕ್ರಾಂತನಾದ ಇವನಿಗೆ ಬ್ರಹ್ಮನು ಆಶಿರ್ವದಿಸಿ, ರಾಮಾಯಣವನ್ನು ಬರೆಯುವಂತೆ ಹೇಳಿದಂನಂತೆ. ವಾಲ್ಮೀಕಿಯು ದೈವಾನುಗ್ರಹದಿಂದ ರಾಮಾಯಾಣ ಕಾವ್ಯವನ್ನು ರಚಿಸಿದನು. ಅಂದಿನಿಂದ ಆತನ ಬಗ್ಗೆ.

ಕಾವ್ಯಶ್ರೀಯ ಕೊಂಬೆಯನ್ನೇರಿ ರಾಮ ರಾಮ ಎಂಬ ಮಧುರಅಕ್ಷರಗಳನ್ನು ಮಧುರವಾಗಿ ಧ್ವನಿಗೈಯುವ ವಾಲ್ಮೀಕಿ ಕೋಗಿಲೆಯನ್ನುವಂದಿಸುತ್ತೇನೆ

ಎಂಬ ಶ್ಲೋಕ ಇವರ ಕಾವ್ಯಸ್ಪೂರ್ತಿಗೆ ಉದಾಹರಣೆ ಮೂಲ ಶಾಶ್ವತವಾಗಿ ಉಳಿದುಬಂತು. ಹೋಮರ್ ನಂತೆ ವಾಲ್ಮೀಕಿಯು ಜಗತ್ತಿಗೆ ಮಾದರಿಯಾಗುವಂತೆ, ಮೆಚ್ಚುವಂತೆ, ಕಾವ್ಯವನ್ನು ರಚಿಸಿದ್ದು ಸ್ಮರಣೀಯ.

ರಾಮಾಯಣ ಭಾರತ ದೇಶದ ಮೊದಲ ಕಾವ್ಯ ಇದನ್ನು ಪ್ರತಿಯೊಬ್ಬ ಭಾರತೀಯನು ಬಲ್ಲ. ವಾಲ್ಮೀಕಿಯ ಬಗ್ಗೆ ತಿಳಿಯುವುದಕ್ಕಿಂತ ರಾಮಾಯಣವನ್ನು ಓದಿದರೆ ಆತನ ಬಗ್ಗೆ ಅರ್ಥವಾಗುತ್ತದೆ. ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ರಾಮ ಏಕಪತ್ನಿ ವ್ರತಸ್ಥ. ಸೀತೆ ಪತಿವ್ರತೆ, ಕುಂಭಕರ್ಣನೆಂದರೆ ನಿದ್ದೆಯ ಮನುಷ್ಯ ರಾವಣನೆಂದರೆ ರಾಕ್ಷಸ ಎಂದು ರಾಮಾಯಣದ ಪ್ರಸಂಗಗಳ ಬಗ್ಗೆ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಜನಮನದಲ್ಲಿ ಬೇರೆ ಬೇರೆ ಕಥೆಗಳಿವೆ. ರಾಮಾಯಣವನ್ನು ಬುಡಕಟ್ಟು ಮಹಾಕಾವ್ಯ ಎಂದು ಕೆಲವರು ಕರೆದರೆ, ಐತಿಹಾಸಿಕವಾದುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇನ್ನು ಕೆಲವರು ಪಾರಂಪರಿಕವಾಗಿ ಬಂದ ಮೌಖೀಕ ಮಹಾಕಾವ್ಯ (ಚರಿತ್ರೆ) ಎನ್ನುತ್ತಾರೆ. ಹೀಗೆ ಎನೆಲ್ಲಾ ಕಥಾ ಪ್ರಸಂಗಗಳು ಜೀವಂತವಾಗಿರುವುದುಂಟು.

ಇಂದಿಗೂ ರಾಮಾಯಣದ ರಚನೆಯ ಕಾಲಮಾನ ಖಚಿತವಾಗಿ ತಿಳಿದು ಬಂದಿಲ್ಲ. ಏಕವ್ಯಕ್ತಿಯಿಂದ ಮಾತ್ರ ರಚನೆಯಾದುದು ಸ್ಪಷ್ಟ. ಅವನೇ ಆದಿಕವಿ, ಮಹರ್ಷಿ ಕ್ರಿ.ಪೂ. ೯೦೦೦ರಲ್ಲಿ ಈತನ ಮಹಾಕಾವ್ಯ ರಚಿತವಾಗಿದೆ ಎಂದು ಹೇಳಿದರೆ, ಕೆಲವರು ಕ್ರಿ.ಪೂ ೫೦೦ಕ್ಕಿಂತ ಮೊದಲು ರಾಮಾಯಣ ರಚನೆಯಾಗಿರಬೇಕೆಂದು ಅಭಿಪ್ರಾಯಿಸಿದ್ದಾರೆ. ಆರ್.ಎಸ್.ಶರ್ಮ ಅವರು ಕ್ರಿ.ಶ. ೪೦೦ರ ಹೊತ್ತಿಗೆ ಎರಡು ಮಹಾಕಾವ್ಯಗಳು ಸ್ಪಷ್ಟಸ್ವರೂಪವನ್ನು ತಾಳಿದಂತಿವೆ ಎನ್ನುತ್ತಾರೆ. ರಾಮಾಯಣ ಕ್ರಿ.ಶ. ೫ – ೬ನೆಯ ಶತಮಾನಕ್ಕಿಂತ ಹಿಂದಿನದಲ್ಲ ಎಂಧು ಎಚ್.ಡಿ. ಸಂಕಾಲಿಯಾ ಅವರು ವಾದಿಸಿದ್ದಾರೆ. ಇವರ ಪ್ರಕಾರ ಮಹಾಭಾರತ ಪ್ರಾಚೀನವಾದುದು. ಇದು ಕ್ರಿ.ಪೂ. ೧೦ರಿಂದ ಕ್ರಿ.ಶ. ೪ನೆಯ ಶತಮಾನದವರೆಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯಂತೆ. ಆದಿಬುಡಕಟ್ಟುಗಳ ಕಥೆಯಾದ ಮಹಾಭಾರತದಲ್ಲಿ ೧,೦೦,೦೦೦ ಶ್ಲೋಕಗಳಿವೆ. ಕೌರವ – ಪಾಂಡವರ ಯುದ್ಧ ವೇದಕಾಲ, ವೇದೋತ್ತರ ಕಾಲವನ್ನು ಮೌರ್ಯರ ಗುಪ್ತರ ಕಾಲದ ಪರಿಸ್ಥಿತಿಯನ್ನು ಇವು ಪ್ರತಿನಿಧಿಸಿವೆ.

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ೬೦೦೦ ಶ್ಲೋಕಗಳಿಂದ ಆರಂಭ ಗೊಂಡು ೧೨,೦೦೦ಕ್ಕೆ ಏರಿ, ಕೊನೆಗೆ ೨೪,೦೦೦ ಶ್ಲೋಕಗಳ ಸ್ಪಷ್ಟರೂಪ ಪಡೆದಿವೆ. ಮಹಾಭಾರತಕ್ಕಿಂತ ಸಮಗ್ರವಾದ ಮಹಾಕಾವ್ಯವಿದು. ಕ್ರಿ.ಪೂ. ೫ನೆಯ ಶತಮಾನದಲ್ಲಿ ರಚಿತವಾಗಿ ಆನಂತರ ಐದು ಹಂತಗಳನ್ನು ದಾಟಿ, ಕ್ರಿ.ಶ. ೧೨ನೆಯ ಶತಮಾನದಲ್ಲಿ ಈಗಿನ ರೂಪ ತಳೆದಿದೆ ಎಂದು ಆರ್.ಎಸ್.ಶರ್ಮಾ ಎಂಬ ಖ್ಯಾತ ಇತಿಹಾಸಕಾರ ಹೇಳುತ್ತಾನೆ. ಅನೇಕ ವಿದ್ವಾಂಸರು ವಾಲ್ಮೀಕಿಯು ರಾಮನ ಸಮಕಾಲೀನವನೆಂದು. ‘ರಾಮರಾಜ್ಯ’ವು ಹೀಗಿರಬೇಕೆಂದು ವರ್ತಮಾನದ ಚರಿತ್ರೆಯನ್ನು ತಿಳಿಸಿರುವನೆಂದು ಅಭಿಪ್ರಾಯಿಸುತ್ತಾರೆ. ಮತ್ತೆ ಕೆಲವರು ರಾಮಾಯಣ ಭೂತವಾದದ್ದು, ವಾಲ್ಮೀಕಿ ಅದನ್ನು ಸಂಗ್ರಹಿಸಿ ಬರೆದಾಗ ಬ್ರಾಹ್ಮಣ ಪಂಡಿತರಿಗೆ ಅವಮಾನವಾಗಿ ಆತನ ರಾಮಾಯಣವನ್ನು ಅರಬ್ಬೀ ಸಮುದ್ರಕ್ಕೆ ಎಸೆದರೆಂದು ಹೇಳುತ್ತಾರೆ. ವಾಲ್ಮೀಕಿ ರಾಮಾಯಣವು ಸಮಕಾಲೀನ ಚರಿತ್ರೆ ಕುರಿತಂಥದ್ದು ಎನ್ನುವುದಕ್ಕೆ ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದಾಗ ಅಲ್ಲಿ ಹೆರಿಗೆ ಆದದ್ದು ವಾಲ್ಮೀಕಿ ಆಶ್ರಮದಲ್ಲಿ ಎಂಬುದು ಸ್ಪಷ್ಟ. ಲವ – ಕುಶರಿಗೆ ಸಕಲ ಕ್ಷತ್ರಿಯ ವಿದ್ಯೆಯನ್ನು ಬೋಧಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಹೀಗಾಗಿ ಮೇಲಿನಂತೆ ತಿಳಿಯಬಹುದಾಗಿದೆ.

ವಾಲ್ಮೀಕಿ ಜಾತ್ಯತೀತ ವ್ಯಕ್ತಿ. ದೇಶ, ಭಾಷೆ ಹೀಗೆ ಸಂಕುಚಿತ ಪ್ರಜ್ಞೆ ವಾಲ್ಮೀಕಿಗೆ ಕಾಡಿದಂತಿಲ್ಲ. ಜಾತ್ಯತೀತ ದೇಶ ಭಾರತವಾದರೂ ಇಂದು ಜಾತಿಯ ವಿಷಮಗಾಳಿ ಬೀಸುವುದು ನಿಂತಿಲ್ಲ. ಹಿಂದೆ ಜಾತಿವರ್ಗ – ಭೇದಗಳಿರದೆ ಕೆಳವರ್ಗದವರು ಮೇಲುಗೈ ಪಡೆದದ್ದು ಗಮನಾರ್ಹ. ಈ ದೇಶಕ್ಕೆ ಮಹಾಕಾವ್ಯವಾದ ಮಹಾಭಾರತ ವನ್ನು ಕೊಟ್ಟವರು ಅಂಬಿಗರ ಕುಲಕ್ಕೆ ಸೇರಿದ ವ್ಯಾಸನು. ವಾಲ್ಮೀಕಿ ಬೇಡರವನು ವಶಿಷ್ಟ ಮುನಿಯು ವೇಶ್ಯೆಯ ಮಗನಂತೆ. ಶರಣ ಹರಳಯ್ಯ ಮಾದಿಗ ಜನಾಂಗ ದವನು. ಹನುಮಂತ (ಆಂಜನೇಯ) ಶ್ರೀರಾಮನ ಆಪ್ತ ಬಂಟ ಮುಂಡಾ ಬುಡಕಟ್ಟಿಗೆ ಸೇರಿದ್ದಾನೆ. ಗುಹಾನು ರಾಮನ ಸ್ನೇಹಿತ ಬೇಡ (ಮಿಂಗುಲಿಗ) ಜನಾಂಗಕ್ಕೆ ಸೇರಿದವನು. ಶ್ರೀರಾಮನ ಗೋತ್ರ ಸಾಕೆತಲ. ಇದು ಬೇಡರ ಬೆಡಗುಗಳಲ್ಲೊಂದು. ರಾಮಾಯಣವು ಬೇಟೆಗಾರರ (ಮಾಯಾಮೃಗ, ಬಂಗಾರದ ಜಿಂಕೆ, ಮರೀಚೆ) ಚರಿತ್ರೆ ಆಗಿರುವಂತಿದೆ. ಸೀತೆಯನ್ನು ಬೇಡರವಳೆಂದು ಆಂಧ್ರರ ನೆರೆಯ ಚೀನದಲ್ಲಿ ಕರೆದರೆ, ಕರ್ನಾಟಕದಲ್ಲಿ ವಾಲ್ಮೀಕಿ, ರಾಮೋಶಿಗಳೂ (ಮಹಾರಾಷ್ಟ್ರ) ರಾಮನ ವಂಶೀಯರೆಂದು ಕರೆದುಕೊಳ್ಳುವರು. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ವಿವಿಧ ಭಂಗಿಗಳನ್ನು, ದೃಷ್ಟಿಕೋನ, ರಾಜನೀತಿ ಪರಿಕಲ್ಪನೆ ಹಾಗೂ ಪಾತ್ರವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ.

*ವಾಲ್ಮೀಕಿ ಐತಿಹಾಸಿಕ ವ್ಯಕ್ತಿಯೇ?*:

ಈವರೆಗಿನ ಅಧ್ಯಯನ, ಸಂಶೋಧನೆಗಳು ವಾಲ್ಮೀಕಿ ಒಬ್ಬ ಚಾರಿತ್ರಿಕ ಪುರುಷನೆಂದು ಸಾರಿವೆ. ಆತನ ರಾಮಾಯಣದಲ್ಲಿ ವ್ಯಕ್ತಿ. ಸ್ಥಳ, ಘಟನೆ, ವಿಚಾರ, ನೀತಿಸಂಹಿತೆ ಕಟ್ಟಳೆ, ತಾತ್ವಿಕ, ದೃಷ್ಟಿಕೋನಕ್ಕೆ ಒತ್ತುಕೊಟ್ಟಿರುವುದರಿಂದ ಆ ರೀತಿ ಹೇಳಬಹುದು. ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಮತ್ಯ್ಸಪುರಾಣ, ಭಾರ್ಗವ ವಾಲ್ಮೀಕಿ, ದಸ್ಯು ವಾಲ್ಮೀಕಿ ಮತ್ತು ಕವಿ ವಾಲ್ಮೀಕಿಗಳೆಂಬ ಮೂರು ಉಲ್ಲೇಖಗಳಿವೆ. ಇವನನ್ನು ಭಾರದ್ವಜ ಗೋತ್ರದವನೆಂದು, ಬೇಡನು ಕ್ರೌಂಚಪಕ್ಷಿಯನ್ನು ಕೊಂದಾಗ ಅವುಗಳ ಮಿಲನ ಮತ್ತು ಅಗಲುವಿಕೆ, ಸಾವನ್ನು ಕಂಡು ಮರುಗಿದವನೇ ವಾಲ್ಮೀಕಿ. ಮತ್ತೊಂದು (ಸ್ಕಂದ ಪುರಾಣ) ಮೂಲದ ಪ್ರಾಕರ ಬ್ರಹ್ಮರ್ಷಿ – ಸುಮತಿ ಎಂಬ ಬ್ರಾಹ್ಮಣ ದಂಪತಿಗಳ ಮಗನೆಂದು, ಚಿಕ್ಕಂದಿನಲ್ಲೇ ತಂದೆ – ತಾಯಿಗಳ ಸಾವಿನಿಂದ ಬೇಡನ ಬಳಿ ಬಂದು ತಪಸ್ಸು ಮಾಡಿದಾಗ ಬ್ರಾಹ್ಮಣತ್ವ ಮರೆತು, ಬೇಡನಾದನಂತೆ. ವಿಷ್ಣು ಪುರಾಣದಲ್ಲಿ ವಾಲ್ಮೀಕ ಭೃಗುಋಷಿಯ ಸಹೋದರನೆಂದು ಹೇಳಲಾಗಿದೆ. ತನ್ನ ಲೂಟಿಕ, ದರೋಡೆ, ಕಳ್ಳತನಗಳನ್ನು (ಕೆಟ್ಟ ಗುಣ) ಋಷಿಗಳ ಉಪದೇಶದಿಂದ ಬಿಟ್ಟಾಗ ಜ್ಞಾನೋದಯವಾಯಿತಂತೆ. ಇಷ್ಟೆಲ್ಲಾ ಹೇಳಿದರೂ ವಾಲ್ಮೀಕಿ ಬೇಡನೆಂಬುದು ಸತ್ಯ. ರಾಮನಾಮದಿಂದ ಪವಿತ್ರನದ ವಾಲ್ಮೀಕಿ ರಾಮನ ಸಮಕಾಲೀನ ವ್ಯಕ್ತಿಯಾಗಿ ಕಂಡುಬರುತ್ತಾನೆ. ವಾಲ್ಮೀಕಿ ಸರ್ವತೋಮುಖಿ: ಭಾಷಿಕ, ಐತಿಹಸಿಕ, ಪ್ರಾಕ್ತನಶಾಸ್ತ್ರ, ಭೋಗೋಳ, ಜನಂಗಿಕ, ತತ್ವಶಾಸ್ತ್ರೀಯ, ಧಾರ್ಮಿಕ, ಸಸ್ಯಶಾಸ್ತ್ರ ಹೀಗೆ ನಾನು ಕ್ಷೇತ್ರಗಳ ದರ್ಶನವನ್ನು ರಾಮಾಯಣದಲ್ಲಿ ಮೂಡಿಸಿದ್ದಾನೆ.

*ಸಮಾಜ ಸುಧಾರಕ ವಾಲ್ಮೀಕಿ*:

ಪ್ರಾಚೀನ ಜನಜೀವನವನ್ನು ಸುಧಾರಣೆಗೊಳಿಸುವಲ್ಲಿ, ಪವಿತ್ರಗೊಳಿಸುವಲ್ಲಿ ವಾಲ್ಮೀಕಿಯ ಪಾತ್ರ ದೊಡ್ಡದು. ತಂದೆ – ತಾಯಿಗಳಿಗೆ ಕುಟುಂಬದಲ್ಲಿರುವ ಸ್ಥಾನಮಾನ, ಸಹೋದರರಲ್ಲಿ ಪರಸ್ಪರ ಅರಿವು. ತಿಳುವಳಿಕೆ. ಹೊಂದಾಣಿಕೆಗಳಿಲ್ಲದ ಸಹಬಾಳ್ವೆಯಲ್ಲಿ ಸಾಗಿಸುವ ಬಗ್ಗೆ ಚಿತ್ರಿಸಿದ್ದಾರೆ. ಜಾತಿ ವರ್ಗಗಳನ್ನು ಮೀರಿ ಸಮುದಾಯಗಳು ತಳವರ್ಗದಿಂದ ಮೇಲ್ವರ್ಗಕ್ಕೆ ಬರಲು ಪ್ರಯಾಸ ಪಡಬೇಕಾಯಿತು. ವಾಲ್ಮೀಕಿ ಸಮಾಜದಲ್ಲಿ ಹೆಣ್ಣಿನ ಸ್ಥಾನ – ಮಾನದ ಕುರಿತು ಚಿಂತಿಸಿದ ಮೊದಲ ಸಮಾಜ ವಿಜ್ಞಾನಿ. ಸೀತೆ, ಶೂರ್ಪನಖಿ, ಮಂಡೋದರಿ ಮೊದಲಾದವರ ಪತ್ರ ಚಿತ್ರಣವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಏಕಪತ್ನಿತ್ವವು ಶ್ರೀ ರಾಮಚಂದ್ರನ ಮೂಲಕ ಸಮಾಜದಲ್ಲಿ ಬಹುಪತ್ನಿತ್ವಗಳಿಂದ ಆಗುವ ಕಲಹ, ಸಂಘರ್ಷ, ಪಾತಿವ್ರತ್ಯ, ಅಧಿಕಾರ, ಯುದ್ಧ ಹೊಂದಾಣಿಕೆ, ಬಡತನ, ಸಂಪತ್ತು ಸುಖ – ದುಃಖ – ಹೀಗೆ ಸಮಾಜದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟ ಸಂಗತಿಗಳನ್ನು ರಾಮಾಯಣದಲ್ಲಿ ಉಲ್ಲೇಖಿಸಿ ಸಮಾಜಕ್ಕೆ ಮಾದರಿಯಾಗಿರಬೇಕಾದರೆ ಪಾಲಿಸಬೇಕಾದ ಗುಣಗಳ ಬಗೆಗೂ ವಿವರಿಸಿದ್ದಾನೆ.

*ಶಿಕ್ಷಣತಜ್ಞ (ಶಿಕ್ಷಕ)*:

ರಾಮಾಯಣದ ಕರ್ತೃ ವಾಲ್ಮೀಕಿ ಕೇವಲ ಪಂಡಿತನಲ್ಲದೆ ಶಿಕ್ಷಣಪ್ರೇಮಿ, ಆದರ್ಶ ಶಿಕ್ಷಕನೂ ಆಗಿದ್ದವನು. ಸೀತೆಯನ್ನು ಶ್ರೀರಾಮನು ತ್ಯಜಿಸಲು ಆಕೆಯು ವಾಲ್ಮೀಕಿಯ ಆಶ್ರಮವನ್ನು ಸೇರಿ ಅಲ್ಲಿಬ್ಬರು ಮಕ್ಕಳನ್ನು ಹೆತ್ತಲೂ. ವಾಲ್ಮೀಕಿ ಒಮ್ಮೆ ರಾಮಾಯಣವನ್ನು (ಕಾವ್ಯ) ರಚಿಸಿ, ಸೀತಾ – ಶ್ರೀರಾಮನ ಮಕ್ಕಳಾದ ಕುಶ – ಲವರಿಗೆ ಕಂಠಪಠ ಮಾಡಿಸಿದರಂತೆ. ಈ ಮಕ್ಕಳಿಗೆ ಸಕಲ ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ ಮಾಡಿಸಿದವರು ವಾಲ್ಮೀಕಿ. ಇವರು ಕೊಟ್ಟ ಶಿಕ್ಷಣದ ಪ್ರಭಾವದಿಂದ ರಾಜ್ಯಾಳ್ವಿಕೆ, ಸಹೋದರ ಭಾವನೆ, ಯುದ್ಧ, ಸಾವು ಮೊದಲಾದವುಗಳ ಅರಿವು ಬಂದು ಮೊಳಕೆಯಲ್ಲಿ ಭವಿಷ್ಯದ ಹೆಮ್ಮರದಂಥ ಕನಸು ಕಂಡಿದ್ದರು. ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿದ ಈ ಮಕ್ಕಳೊಡನೆ ಶತ್ರುಘ್ನ, ಭರತ ಲಕ್ಷ್ಮಣ, ರಾಮರು ಕಾದಾಡಿ ಮೂರ್ಛೆ ಹೋದರಂತೆ. ಸಕಲ ವಿದ್ಯೆಗಳಲ್ಲಿ ಪಾರಂಗತರಾದ ಲವ – ಕುಶರು ಉನ್ನತ ಶಿಕ್ಷಣ ಪಡೆದಿದ್ದು ಆ ಋಷಿಯಿಂದಲೇ. ಹೀಗಾಗಿ ಅಂದಿನ ಶಿಕ್ಷಣ ವ್ಯವಸ್ಥೆ ಋಷಿ – ಮುನಿಗಳಿಂದ ಆಶ್ರಮ, ಕುಟೀರಗಳಲ್ಲಿ ನಡೆಯುತ್ತಿತ್ತು.

*ರಾಜನೀತಿಜ್ಞ*:

ವಾಲ್ಮೀಕಿ ತನ್ನ ರಾಮಾಯಣದಲ್ಲಿ ರಾಜ್ಯ ಮಂತ್ರಿ, ದಂಡನಾಯಕ, ಸೈನಿಕ, ಗೂಢಾಚಾರ, ತಳವಾರ, ರಾಣಿ, ರಾಜಕುಮಾರ, ಯುವರಾಜ ಮೊದಲಾದವರ ಸಮಗ್ರ ವಿಚಾರಗಳನ್ನು ಚಿತ್ರಿಸಿದ್ದಾನೆ. ರಾಜಪ್ರಜೆಗಳ ರಕ್ಷಕನೆಂದು ಪ್ರಜಪ್ರಭುತ್ವದ ಪರಿಕಲ್ಪನೆಯ ಅರಿವನ್ನು ಜಾರಿಗೆ ತಂದವನು ವಾಲ್ಮೀಕಿ. ರಾಜ ಎಷ್ಟೇ ನಿರಂಕುಶ ಪ್ರಭುವಾದರೂ ಪ್ರಜೆಗಳ ಮನೋಧೋರಣೆಗಳನ್ನು ಅರ್ಥಮಾಡಿಕೊಳ್ಳಬೇಕು. “ರಾಮ ರಾಜ್ಯ’ದ ಕನಸು ‘ಗ್ರಾಮ ರಾಜ್ಯ’ವೇ ಆಗಿತ್ತು. ಸರ್ ಥಾಮಸ್ ಮೊರ್‌ನ್ ಕನಸಿನ ರಾಜ್ಯದಂತೆ ಆಗಿದ್ದರೆ (ಯುಟೋಫಿಯಾ), ವಾಲ್ಮೀಕಿ ವಾಸ್ತವಕ್ಕೆ, ವರ್ತಮಾನಕ್ಕೆ ಸ್ಪಂದಿಸುವಂತೆ ಚಿಂತಿಸುತ್ತಿದ್ದನು. ದಾರ್ಶನಿಕ ಪ್ಲೇಟೋನ ‘ಆದರ್ಶ ರಾಜ್ಯ’, ಡಾಂಟೆಯ ಡಿವೈನ್ ಕಾಮಿಡಿ, ಹೋಮರನ ಈಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯ ಗ್ರಂಥಗಳಾಗಿವೆ. ವಾಲ್ಮೀಕಿ ಇವರಿಗಿಂತ ಮೇರು ಪರ್ವತದಂತೆ ಕಂಡುಬರುತ್ತಾನೆ. ಪ್ರಾಚೀನ ರಾಷ್ಟ್ರದ ಪರಿಕಲ್ಪನೆಯನ್ನು, ಆಳ್ವಿಕೆಯ ಪೈಪೋಟಿಯನ್ನು ಭಾರತೀಯ ಸಂಸ್ಕೃತಿ ಮೂಲಕ ಹೇಳಿದ್ದಾನೆ. ರಾಜಕಾರಣ ಎನ್ನುವುದು ಐಕ್ಯತೆ, ಸಮನ್ವಯತೆಯನ್ನು ಸಾಧಿಸಲಾಗದ ವ್ಯವಸ್ಥೆ. ಸ್ವಾತಂತ್ರ್ಯ, ಸಹೋದರತೆ, ಸಮಾನತೆಗಳಿರಬೇಕೆಂದು ಶ್ರೀರಾಮ, ಭರತ, ಲಕ್ಷ್ಮಣನ ಪಾತ್ರಗಳ ಮೂಲಕ ದಶರಥ ಕೌಸಲ್ಯ, ಕೈಕೇಯಿ ಮೊದಲಾದವರು ಪಾತ್ರ, ಚಿತ್ರಣಗಳನ್ನು ಗಮನಿಸಬಹುದು. ಪಿತೃವಾಕ್ಯ ಪರಿಪಾಲನೆ, ವನವಾಸ, ಸಿಂಹಾಸನತ್ಯಾಗ ಇವೆಲ್ಲವೂ ರಾಜ್ಯಾಡಳಿತದಲ್ಲಿ ಕೆಲಸ ಮಾಡಿದೆ. ವಾಲ್ಮೀಕಿಗೆ “ಆದರ್ಶ ರಾಜ್ಯದ” ಪರಿಕಲ್ಪನೆಯಿತ್ತು. ಅದು ಪ್ರಜೆಗಳ ರಾಜ್ಯ (ವೆಲ್ಫೇರ್ ಸ್ಟೇಟ್) ಕಲ್ಯಾಣ ರಾಜ್ಯ (೨೦ ಶ್ಲೋಕಗಳು) ಶ್ರೀರಾಮನ ರಾಜ್ಯಭಾರವೆಂದು ತಿಳಿದು ಪ್ರಜೆಗಳೆಲ್ಲಾ ಸುಖಿಗಳಾಗಿದ್ದರು. ಬರಗಾಲ, ಕ್ಷಾಮಗಳೂ ಆಗ ಉಲ್ಬಣಗೊಂಡಿರಲಿಲ್ಲ. ಇಂಥ ಸುಭಿಕ್ಷೆ ಕಾಲ ಮತ್ತೊಮ್ಮೆ ಬರಬೇಕೆಂದು ಬಯಸುವ ಕನಸು ಪ್ರಜೆಗಳಿಗೆ ಕಾಡಿದೆ. ರಾಮ, ಸೀತೆ, ಲಕ್ಷ್ಮಣ ಹಾಗೂ ಹನಮಂತನ ಆದರ್ಶಗಳನ್ನು, ಕಲ್ಯಾಣ ಗುಣಗಳನ್ನು ಕಾವ್ಯದಲ್ಲಿ ಹೃದಯಂಗಮವಾಗಿ ಚಿತ್ರಿಸಲಾಗಿದೆ.

*ತತ್ವಜ್ಞಾನಿ*:

ಮೇಲಿನ ಎಲ್ಲಾ ಸಂಗತಿಗಳ ಮೂಲಕ ವಾಲ್ಮೀಕಿಯನ್ನು ತತ್ವಜ್ಞಾನಿಯೆಂದು ಒಪ್ಪಿಕೊಳ್ಳಲೇಬೇಕು. ರಾಮಾಯಣ ಕಾವ್ಯದಲ್ಲಿ ಹಿಂಸೆ, ಕ್ರೌರ್ಯವನ್ನು ತೆಗಳಿ ಇದು ಸಾಮಾಜಕ್ಕೆ ಮಾರಕ ಎಂದಿದ್ದಾನೆ. ಏಕ ಪತ್ನಿಯಿಂದ ಸುಖ, ನೆಮ್ಮದೆ ಇದೆ. ಇದನ್ನು ಮೀರಿದರೆ ಜೀವನವೇ ಅಸ್ತವ್ಯಸ್ತವೆಂಬುದು ನಿಜವೇ ಆಗಿದೆ, ಕ್ರಾಂತಿ, ಯುದ್ಧಗಳು ತಾತ್ವಿಕ, ನ್ಯಾಯಪರವಾಗಿ ನಡೆಯಬೇಕು. ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ರಾವಣ, ವಾಲಿ, ಸುಗ್ರೀವ, ಆಂಜನೇಯನ ಕಥಾ ಪ್ರಸಂಗಗಳನ್ನು ಅರ್ಥೈಸಿದ್ದಾನೆ. ಅವಿಭಕ್ತ, ವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ ಮತ್ತು ಪ್ರಜಾಪ್ರಭುತ್ವಗಳ ಬಗ್ಗೆ ಚಿಂತಿಸಿದ್ದ ವಾಲ್ಮೀಕಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯನ್ನು ಸಾರಿದ.

Friday, October 14, 2016

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR TET-2016) ರ ಪತ್ರಿಕಾ ಪ್ರಕಟಣೆ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ -14/10/2016

ಕೊನೆಯ ದಿನಾಂಕ 09/11/2016

ಟಿಇಟಿ ಪರೀಕ್ಷಾ ದಿನಾಂಕ  18/12/2016

For more info visit www.schooleducation.Kar.nic. in

Friday, October 07, 2016

ಬನ್ನಿ

🌿🌿ಬನ್ನಿ
ಬಂಗಾರವಾಗಲಿ
ಪ್ರೀತಿ
ಪವಿತ್ರವಾಗಲಿ
ಮನಸು
ಮಲ್ಲಿಗೆಯಾಗಲಿ
ನಿಮ್ಮ ನಮ್ಮ
ಸ್ನೇಹ ಚಿರಕಾಲವಿರಲಿ
ತಾಯಿ ಚಾಮುಂಡೇಶ್ವರಿಯು
ನಿಮ್ಮೆಲ್ಲರಿಗೂ ಸುಖ ಸಮೃದ್ಧಿ
ನೀಡಲೆಂದು
ಹಾರೈಸುತ್ತಾ
ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರಿಗೆ  ಆಯುಧ ಪೂಜಾ ಮತ್ತು ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು

Thursday, October 06, 2016

KPSC ಯಿಂದ ಮತ್ತೊಂದು ಅಧಿಸೂಚನೆ:~

ಕೆಪಿಎಸ್ಸಿ:
1353 ಹುದ್ದೆಗಳಿಗೆ ಅಧಿಸೂಚನೆ

ವಿವಿಧ ಇಲಾಖೆಯಲ್ಲಿನ ಗ್ರೂಪ್ ಸಿ ಹುದ್ದೆಗಳಿಗೆ ನೇಮಕ ಕರ್ನಾಟಕ ಲೋಕ ಸೇವಾ ಆಯೋಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಶುಕ್ರವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಒಟ್ಟು 1,353 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಮುಖ್ಯವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ವಿವಿಧ ಶಿಕ್ಷಕರ ಮತ್ತು ನಿಲಯ ಪಾಲಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.

ಉಳಿದಂತೆ ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಸದೀಯ ಸಚಿವಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಆಯೋಗದ ದಿನಾಂಕ 03-03-2016ರ ಅಧಿಸೂಚನೆಯಲ್ಲಿ ಅಧಿಸೂಚಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ 86 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ 557 ಹುದ್ದೆಗಳಿಗೆ ಮತ್ತೇ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿದೆ.

*ವಿದ್ಯಾರ್ಹತೆ ಏನು?*

ಪ್ರತಿ ಹುದ್ದೆಗೆ ಬೇರೆ ಬೇರೆಯಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಹುತೇಕ ಎಲ್ಲ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ, ನಿಲಯಪಾಲಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಹಾಗೂ ಶಿಕ್ಷಕರ ಹುದ್ದೆಗಳಿಗೆ ನಿರ್ದಿಷ್ಟ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. (ಯಾವ ಹುದ್ದೆಗೆ ವಿದ್ಯಾರ್ಹತೆ ಏನೆಂಬ ವಿವರವನ್ನು ಗುರುವಾರದ ವಿಜಯ ಕರ್ನಾಟಕ -ಮಿನಿಯಲ್ಲಿ ಪ್ರಕಟಿಸಲಾಗುತ್ತದೆ)
ವಯೋಮಿತಿ ಎಷ್ಟು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು. ಗರಿಷ್ಠ ವಯೋಮಿತಿ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38ವರ್ಷಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 40ವರ್ಷಗಳು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 300ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ್-1 ಹಾಗೂ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 ರೂ ಅರ್ಜಿ ಶುಲ್ಕವಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ : 07-10-2016 GKPOINTS
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-11-2016
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 08-11-2016
ಸಹಾಯವಾಣಿ ಸಂಖ್ಯೆ: 7899617837/ 9901294490
ಹೆಚ್ಚಿನ ಮಾಹಿತಿಗೆ: www.kpsc.kar.nic.in
ಇತ್ತ ಗಮನಿಸಿ

* ಈ ನೇಮಕಾತಿಯಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಮಟ್ಟದಲ್ಲಿರುತ್ತವೆ. ಪದವಿ ವಿದ್ಯಾರ್ಹತೆಯುಳ್ಳ ಎಲ್ಲಾ ಹುದ್ದೆಗಳಿಗೆ ಒಂದು ಪರೀಕ್ಷೆ ಹಾಗೂ ಪದವಿಗಿಂತ
ಕೆಳಮಟ್ಟದ ವಿದ್ಯಾರ್ಹತೆಯನ್ನುಳ್ಳ ಎಲ್ಲಾ ಹುದ್ದೆಗಳಿಗೆ ಇನ್ನೊಂದು ಪರೀಕ್ಷೆ ನಡೆಯಲಿದೆ.

* ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯುಳ್ಳ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ಪದವಿ ಮಟ್ಟದ ಪರೀಕ್ಷೆಯನ್ನು ಬರೆದರೆ ಸಾಕು, ಈ ಪರೀಕ್ಷೆಯ ಫಲಿತಾಂಶವನ್ನು ಅವರು ಅರ್ಜಿ ಸಲ್ಲಿಸಿದ ಪದವಿ ಮಟ್ಟದ ವಿದ್ಯಾರ್ಹತೆಯುಳ್ಳ ಇತರೆ ಎಲ್ಲಾ ಹುದ್ದೆಗಳಿಗೂ ಪರಿಗಣಿಸಲಾಗುತ್ತದೆ.

* ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರ ಆಯ್ಕೆಯ ಆದ್ಯತೆಯನ್ನು ಅರ್ಜಿ ಸಲ್ಲಿಸುವ ಹಂತದಲ್ಲೇ ನೀಡಬೇಕಾಗಿರುತ್ತದೆ.

*ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕಿದೆ.

* ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಲೋಕ ಸೇವಾ ಆಯೋಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಶುಕ್ರವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಒಟ್ಟು 1,353 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮುಖ್ಯವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ವಿವಿಧ ಶಿಕ್ಷಕರ ಮತ್ತು ನಿಲಯ ಪಾಲಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.

ಉಳಿದಂತೆ ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಸದೀಯ ಸಚಿವಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯೋಗದ ದಿನಾಂಕ 03-03-2016ರ ಅಧಿಸೂಚನೆಯಲ್ಲಿ ಅಧಿಸೂಚಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ 86 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ 557 ಹುದ್ದೆಗಳಿಗೆ ಮತ್ತೇ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿದೆ.

*ವಿದ್ಯಾರ್ಹತೆ ಏನು?*

ಪ್ರತಿ ಹುದ್ದೆಗೆ ಬೇರೆ ಬೇರೆಯಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಹುತೇಕ ಎಲ್ಲ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ, ನಿಲಯಪಾಲಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಹಾಗೂ ಶಿಕ್ಷಕರ ಹುದ್ದೆಗಳಿಗೆ ನಿರ್ದಿಷ್ಟ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

(ಯಾವ ಹುದ್ದೆಗೆ ವಿದ್ಯಾರ್ಹತೆ ಏನೆಂಬ ವಿವರವನ್ನು ಗುರುವಾರದ ವಿಜಯ ಕರ್ನಾಟಕ -ಮಿನಿಯಲ್ಲಿ ಪ್ರಕಟಿಸಲಾಗುತ್ತದೆ)

*ವಯೋಮಿತಿ ಎಷ್ಟು?*

: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು. ಗರಿಷ್ಠ ವಯೋಮಿತಿ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38ವರ್ಷಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 40ವರ್ಷಗಳು. ಅರ್ಜಿ ಶುಲ್ಕ: ಸಾಮಾನ್ಯ ವರ್ಗ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 300ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವಗÜರ್-1 ಹಾಗೂ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 ರೂ ಅರ್ಜಿ ಶುಲ್ಕವಿರುತ್ತದೆ.

*ಕ್ವಿಕ್ ಲುಕ್ ಅರ್ಜಿ ಸಲ್ಲಿಸಲು ಪ್ರಾರಂಭ*

07-10-2016 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-11-2016 ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 08-11-2016 ಸಹಾಯವಾಣಿ ಸಂಖ್ಯೆ: 7899617837/ 9901294490 ಹೆಚ್ಚಿನ ಮಾಹಿತಿಗೆ: www.kpsc.kar.nic.in

*ಇತ್ತ ಗಮನಿಸಿ*

* ಈ ನೇಮಕಾತಿಯಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಮಟ್ಟದಲ್ಲಿರುತ್ತವೆ. ಪದವಿ ವಿದ್ಯಾರ್ಹತೆಯುಳ್ಳ ಎಲ್ಲಾ ಹುದ್ದೆಗಳಿಗೆ ಒಂದು ಪರೀಕ್ಷೆ ಹಾಗೂ ಪದವಿಗಿಂತ ಕೆಳಮಟ್ಟದ ವಿದ್ಯಾರ್ಹತೆಯನ್ನುಳ್ಳ ಎಲ್ಲಾ ಹುದ್ದೆಗಳಿಗೆ ಇನ್ನೊಂದು ಪರೀಕ್ಷೆ ನಡೆಯಲಿದೆ.

* ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯುಳ್ಳ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ಪದವಿ ಮಟ್ಟದ ಪರೀಕ್ಷೆಯನ್ನು ಬರೆದರೆ ಸಾಕು, ಈ ಪರೀಕ್ಷೆಯ ಫಲಿತಾಂಶವನ್ನು ಅವರು ಅರ್ಜಿ ಸಲ್ಲಿಸಿದ ಪದವಿ ಮಟ್ಟದ ವಿದ್ಯಾರ್ಹತೆಯುಳ್ಳ ಇತರೆ ಎಲ್ಲಾ ಹುದ್ದೆಗಳಿಗೂ ಪರಿಗಣಿಸಲಾಗುತ್ತದೆ.

* ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರ ಆಯ್ಕೆಯ ಆದ್ಯತೆಯನ್ನು ಅರ್ಜಿ ಸಲ್ಲಿಸುವ ಹಂತದಲ್ಲೇ ನೀಡಬೇಕಾಗಿರುತ್ತದೆ.

*ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕಿದೆ.

* ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Saturday, October 01, 2016

ಮರೆಯಲಾಗದ ಮಹಾನುಭಾವರು ಶಾಸ್ತ್ರೀಜಿ & ಗಾಂಧೀಜಿ:~

ಇವರಿಬ್ಬರೂ ಹುಟ್ಟಿದ ತಿಂಗಳು ಮತ್ತು ದಿನಾಂಕ ಒಂದೇ(ಅಕ್ಟೋಬರ್.2)

*ಇವರಿಬ್ಬರ ಹೆಸರುಗಳೂ
ಅವು ಅವರ ಮೂಲ ಹೆಸರುಗಳಲ್ಲ.!!
(ಗಾಂಧೀಜಿ =ಮೋಹನದಾಸ, ಶಾಸ್ತ್ರೀಜಿ=ಲಾಲ್ ಬಹಾದ್ದೂರ್ ಶ್ರೀವಾತ್ಸವ)

*ಇವರಿಬ್ಬರೂ ಮರಣಿಸಿದ ತಿಂಗಳು ಕೂಡಾ ಒಂದೇ (ಜನೇವರಿ).

*ಗಾಂಧೀಜಿಯವರು ರಾಷ್ಟ್ರದ 'ಪ್ರಧಾನ' ವ್ಯಕ್ತಿಯಾದರೆ,
ಶಾಸ್ತ್ರೀಜಿಯವರು ರಾಷ್ಟ್ರದ 'ಪ್ರಧಾನಿ' ವ್ಯಕ್ತಿ. !!

*ದೇಶದ ಜನರ ಕಷ್ಟವನ್ನು ಕಂಡು ಗಾಂಧೀಜಿಯವರು
'ಆಡಂಬರದ ವಸ್ತ್ರ' ಹೊಂದಿರಲಿಲ್ಲ,
ಶಾಸ್ತ್ರೀಜಿಯವರು 'ಸ್ವಂತ ವಸತಿ'(ಮನೆ) ಹೊಂದಿರಲಿಲ್ಲ.

*ದೇಶದ ಜನರಿಗೆ 'ಆಹಾರ ಕೊಡಲು'
ಶಾಸ್ತ್ರೀಜಿ ಉಪವಾಸವಿದ್ದರೆ,
ದೇಶಕ್ಕೆ 'ಸ್ವಾತಂತ್ರ್ಯ ತಂದು ಕೊಡಲು
ಗಾಂಧೀಜಿ ಉಪವಾಸ ಮಾಡುತ್ತಿದ್ದರು.

*ಒಬ್ಬರು 'ರಾಷ್ಟಪಿತ',
ಇನ್ನೊಬ್ಬರು 'ರಾಷ್ಟ್ರಸುತ.'

*ಇವರಿಬ್ಬರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಹಾಗೂ ಜೀವನವನ್ನು ಮುಡುಪಾಗಿಟ್ಟ ಮಹಾನ್ ಚೇತನರು.

*ಶಾಸ್ತ್ರೀಜಿಯವರು
ಕಷ್ಟಪಟ್ಟು ಮೇಲೆ ಬಂದವರು,
ಗಾಂಧೀಜಿಯವರು
ಮೇಲೆ ಬಂದು ಕಷ್ಟಪಟ್ಟವರು.!!

*ಇವರಿಬ್ಬರದೂ ಸಹಜ
(ಸ್ವಾಭಾವಿಕ) ಸಾವಲ್ಲ.!!