ಪುಟಗಳು

Friday, April 15, 2016

"ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿ ಪಡೆದರೆ ಸಂಬಳ, ಸೌಲಭ್ಯ ಕಡಿಮೆ...!!"


ಮೈಸೂರು: ಇಲ್ಲಿ ಬಡ್ತಿ ಪಡೆದರೆ ಸಂಬಳ ಮತ್ತಿತರ ಸೌಲಭ್ಯಗಳು ಕಡಿಮೆಯಾಗುತ್ತವೆ. ಸುಮ್ಮನಿದ್ದರೆ ಸಂಬಳ, ಸೌಲಭ್ಯ ಹೆಚ್ಚು!

ಇದು ಶಿಕ್ಷಣ ಇಲಾಖೆಯ ತಾರತಮ್ಯಕ್ಕೊಂದು ಉದಾಹರಣೆ. ಮೌಲ್ಯಮಾಪಕರ ಗೊಂದಲ ಬಗೆ ಹರಿಯುವಷ್ಟರಲ್ಲಿ ಶಿಕ್ಷಣ ಇಲಾಖೆಗೆ ಮತ್ತೊಂದು ತಲೆಬಿಸಿ ಎದುರಾಗಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ವ್ಯಕ್ತಿ ಬಿ.ಇಡಿ ವ್ಯಾಸಂಗ ಮಾಡಿ ಬಡ್ತಿ ಪಡೆದರೆ, ತನ್ನೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಗಿಂತ ಕಡಿಮೆ ಸಂಬಳ ಪಡೆಯುವ ಅಚ್ಚರಿ ಇಲ್ಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಾರಿಯಲ್ಲಿರುವ ಕಾಲಮಿತಿ ವೇತನ ಬಡ್ತಿ ವ್ಯವಸ್ಥೆ ಪ್ರಕಾರ ಮೊದಲ 10 ವರ್ಷ ಹಾಗೂ ನಂತರದ ಪ್ರತಿ 5 ವರ್ಷಕ್ಕೊಮ್ಮೆ ಹೆಚ್ಚುವರಿ ಬಡ್ತಿ ವೇತನ ನೀಡಲಾಗುತ್ತದೆ. ಆದರೆ ಪ್ರೌಢಶಾಲೆಗೆ ಬಡ್ತಿ ಪಡೆಯುವ ಶಿಕ್ಷಕರಿಗೆ ಈ ಸೌಲಭ್ಯ ಸಿಗುವುದಿಲ್ಲ. ಇದರಿಂದಾಗಿ ತನ್ನೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇರಿದ ವ್ಯಕ್ತಿಗಿಂತ ಬಡ್ತಿ ಪಡೆದ ಪ್ರೌಢಶಾಲಾ ಶಿಕ್ಷಕ ಪಡೆಯುವ ಸಂಬಳ 475 ರೂ. ಕಡಿಮೆ ಇರುತ್ತದೆ.

ವರ್ಗಾವಣೆ ಹಾಗೂ ಮುಖ್ಯ ಶಿಕ್ಷಕರ ನೇಮಕ ಸಂದರ್ಭದಲ್ಲಿ ಕೂಡ ಬಡ್ತಿ ಪಡೆದ ಶಿಕ್ಷಕರು ವಂಚನೆಗೆ ಒಳಗಾಗುತ್ತಿದ್ದಾರೆ. ವರ್ಗಾವಣೆ ಸಂದರ್ಭದಲ್ಲಿ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಲಾಗುತ್ತದೆ.

ನಿಗದಿತ ಅವಧಿಯೊಳಗೆ ಹಳ್ಳಿಗಳಲ್ಲಿ ಕೆಲಸ ಮಾಡಿದ ಶಿಕ್ಷಕರು ಪಟ್ಟಣ ಹಾಗೂ ನಂತರ ನಗರ ಪ್ರದೇಶದಲ್ಲಿ ಕೆಲಸ ಮಾಡಲು ಅರ್ಹರಾಗುತ್ತಾರೆ. ಆದರೆ, ಬಡ್ತಿ ಪಡೆದ ಪ್ರೌಢಶಾಲಾ ಶಿಕ್ಷಕರು ಇದರಿಂದಲೂ ವಂಚಿತರಾಗುತ್ತಾರೆ. ಬಡ್ತಿ ನಂತರ ಅವರ ಹಿಂದಿನ ಸೇವಾ ಅರ್ಹತೆಗಳನ್ನು ಪರಿಗಣಿಸುವುದಿಲ್ಲ. ಮತ್ತೆ ಅವರು ಗ್ರಾಮೀಣ ಪ್ರದೇಶದಿಂದ ಸೇವೆ ಸಲ್ಲಿಸಬೇಕಾಗುತ್ತದೆ. ಸೇವಾವಧಿಯ ಅರ್ಧ ಭಾಗದಲ್ಲಿ ಬಡ್ತಿ ಪಡೆದ ವ್ಯಕ್ತಿ ಪಟ್ಟಣ ಅಥವಾ ನಗರ ಪ್ರದೇಶಕ್ಕೆ ವರ್ಗಾವಣೆ ಪಡೆಯಲು ಸಾಧ್ಯವಾಗುವುದೇ ಇಲ್ಲ.

ಮುಖ್ಯಶಿಕ್ಷಕರಾಗಿ ಬಡ್ತಿ ಪಡೆಲು ಶೇ.75 ಸೇವಾ ಹಿರಿತನ ಹಾಗೂ ಶೇ.25 ನೇರ ನೇಮಕಾತಿಗೆ ಅವಕಾಶವಿದೆ. ಪ್ರೌಢಶಾಲೆಗೆ ನೇರ ನೇಮಕಗೊಂಡ ಶಿಕ್ಷಕರು ಹಾಗೂ ಬಡ್ತಿ ಪಡೆದ ಶಿಕ್ಷಕರ ನಡುವೆ ವ್ಯತ್ಯಾಸವಿಲ್ಲ. ಬಡ್ತಿ ಪಡೆದವರು ಈ ಹಾಗಾಗಿ ಮುಖ್ಯ ಶಿಕ್ಷಕರ ಬಡ್ತಿ ಸಂದರ್ಭದಲ್ಲೂ ಇವರು ವಂಚನೆಗೆ ಒಳಗಾಗುತ್ತಾರೆ.

* ವಂಚಿತರು:

ರಾಜ್ಯದಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿದ 10,905 ಶಿಕ್ಷಕರಿದ್ದಾರೆ. ಸರ್ಕಾರದ ತಾರತಮ್ಯದಿಂದ ತೊಂದರೆಗೆ ಒಳಗಾಗಿದ್ದಾರೆ.

* ಗೊಂದಲಕ್ಕೆ ಕಾರಣ:

2007ರಲ್ಲಿ ಶಿಕ್ಷಣ ಇಲಾಖೆ ವಿಧೇಯಕ ಜಾರಿಗೆ ತಂದ ಸಂದರ್ಭದಲ್ಲಿ ಇದ್ದ ‘ಎಲ್ಲ ವೃಂದದ ಶಿಕ್ಷಕರಿಗೆ’ ಎಂಬ ಪದವನ್ನು ನಂತರದ ದಿನಗಳಲ್ಲಿ ತಿದ್ದಲಾಗಿದೆ ಎಂಬ ಆರೋಪವಿದೆ. ವಿಧಾನಮಂಡಲದ ಗಮನಕ್ಕೆ ಬಾರದಂತೆ ‘ಎಲ್ಲ ವೃಂದ’ ಎಂಬ ಪದವನ್ನು ‘ಆಯಾ ವೃಂದ’ ಎಂದು ಬದಲಾಯಿಸಿದ್ದೇ ಬಹುಪಾಲು ಗೊಂದಲಕ್ಕೆ ಕಾರಣ.

ಇದನ್ನು ಸರಿಪಡಿಸುವಂತೆ ಶಿಕ್ಷಣ ಸಚಿವರನ್ನು ಹಲವಾರು ಬಾರಿ ರಾಜ್ಯ ಸರ್ಕಾರಿ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ವತಿಯಿಂದ ಒತ್ತಾಯಿಸಲಾಗಿದೆ. ಒಂದಲ್ಲ ಒಂದು ಕಾರಣದಿಂದಾಗಿ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೇ ತಿಂಗಳ 15ರಂದು ಬೆಂಗಳೂರಿನಲ್ಲಿ ನಮ್ಮ ಸಂಘದ ವತಿಯಿಂದ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ತೀರ್ವನ ಕೈಗೊಳ್ಳಲಾಗುವುದು. ಸರ್ಕಾರ ಗಮನ ಹರಿಸದೆ ಇದ್ದರೆ ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ.
ನನ್ನ Twitter Account
https://twitter.com/PasteManju?s=08
ಇಂದು ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮ 


ಬೆಳಗಾವಿ:15 ನಗರದ ಹಿಂದವಾಡಿ ಆರ್‍ಪಿಡಿ ಕಾಲೇಜಿನ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಶನಿವಾರ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸನ್‍ಬರ್ನ ಸಂಗೀತ ಕಾರ್ಯಕ್ರಮ ಜರುಗಲಿದೆ.
ಕನ್ನಡಮ್ಮ ದಿನಪತ್ರಿಕೆ ಹಾಗೂ ವಿಶ್ವವಾಣಿ ಮಾಧ್ಯಮ ಸಹಯೋಗದಲ್ಲಿ ಮೊಟ್ಟ ಮೊದಲ ಬಾರಿಗೆ ಗಡಿನಾಡಿನಲ್ಲಿ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಸಂಗೀತ ಕಾರ್ಯಕ್ರಮದಲ್ಲಿ ಜಗತೀನ ಅತ್ಯಂತ ದೊಡ್ಡ ಸಂಗೀತ ಸಲಕರಣೆಗಳು ಹಾಗೂ ಡಿಜೆ ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಿದ್ದೇಶ ಪುಠಾಣಿ 7676267676, ಪವನ 8147974626 ಸಂಪರ್ಕಿಸಲು ವಿನಂತಿ.