ಪುಟಗಳು

Thursday, June 09, 2016

ಕಣ್ಣೀರನ್ನು ಕಾಣದ ನಗೆ:~
(ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿ)

ನಾನು ಬಹಳ ವರ್ಷಗಳ ಹಿಂದೆ ಒಂದು ಕಾದಂಬರಿ ಓದಿದ್ದೆ.
ಬಹುಶ: ಅದೊಂದು ರಷ್ಯಾದ ಕಾದಂಬರಿ ಇದ್ದಿರಬೇಕು.
ನನಗೆ ಕಾದಂಬರಿಯ ಹೆಸರು, ಲೇಖಕರ ಹೆಸರು ಮರೆತು ಹೋಗಿದ್ದರೂ
ಆ ಕಥೆಯ ಸಾರಾಂಶ ಮನದಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿದೆ.

ಅದನ್ನು ಓದಿದ ಕೆಲವು ದಿನಗಳೇಕೆ,
ಕೆಲ ತಿಂಗಳುಗಳವರೆಗೆ ಅದು ನನ್ನನ್ನು ಚೆನ್ನಾಗಿ ಅಲುಗಾಡಿಸಿಬಿಟ್ಟಿತ್ತು,
ಮನದಲ್ಲಿ ಭಯ ಹುಟ್ಟಿಸಿತ್ತು.!!!

ಒಂದು ಊರಿನ ಹೊರಗಡೆ ಒಂದು ಸಂಸಾರ ವಾಸವಾಗಿತ್ತು.
ಅವರ ಮನೆಯ ಪಕ್ಕದಲ್ಲೇ ಸ್ಮಶಾನ.
ಈ ಮನೆಯಲ್ಲಿದ್ದವರು ಮೂವರೇ ಜನ. ತಂದೆ, ತಾಯಿ ಮತ್ತು ಪುಟ್ಟ ಮಗಳು. ಅವಳಿಗೆ ಸುಮಾರು ಆರು ವರ್ಷ ವಯಸ್ಸು. ಮನೆಯಲ್ಲಿ ಕಡು ಬಡತನ. ಮನೆಯೊಳಗೆ ತಿನ್ನಲು ಆಹಾರವಿಲ್ಲ. ಹೊರಗಡೆ ತಿರುಗಾಡುವುದು ಸಾಧ್ಯವಿಲ್ಲದಷ್ಟು ಹಿಮಪಾತ.
ಅಪ್ಪನ ಕೆಲಸವೇ ವಿಚಿತ್ರ.
ಸ್ಮಶಾನಕ್ಕೆ ಯಾವುದಾದರೂ ಹೆಣ ಬಂದರೆ ಮಾತ್ರ ಅವನ ಕೆಲಸ ಪ್ರಾರಂಭ. ಆತ ಮಾಡುವುದು ಹೆಣದ ಅಲಂಕಾರ.
ಆ ದೇಶಗಳಲ್ಲಿ ಹೆಣವನ್ನು ಚೆನ್ನಾಗಿ ಅಲಂಕಾರ ಮಾಡಿ, ಮರದ ಪೆಟ್ಟಿಗೆಯೊಳಗಿರಿಸಿ ನಂತರ ನೆಲದಲ್ಲಿ ಹೂಳುತ್ತಾರೆ.

ಈತ ಹೆಣದ ಅಲಂಕಾರದಲ್ಲಿ ಪರಿಣಿತ. ಅದಕ್ಕೇ ಜನ ಮೃತದೇಹಗಳನ್ನು ಅಲ್ಲಿಗೆ ತಂದು ಒಪ್ಪಿಸುತ್ತಿದ್ದರು.
ಈತ ಹೆಣವನ್ನು ಶುದ್ಧವಾಗಿ ತೊಳೆದು, ಮುಲಾಮು ಸವರಿ ನಂತರ ಅವುಗಳಿಗೆ ಒಳ್ಳೆಯ ಪೋಷಾಕು ತೊಡಿಸುತ್ತಿದ್ದ.
ಮುಖಕ್ಕೆ ವಿಶೇಷವಾದ ಅಲಂಕಾರ ಮಾಡಿ ದೇಹವನ್ನು ಮತ್ತಷ್ಟು ಅಲಂಕಾರ ಮಾಡಿದ ಮರದ ಪೆಟ್ಟಿಗೆಯಲ್ಲಿಟ್ಟು ಸಂಬಂಧಿಕರಿಗೆ ಒಪ್ಪಿಸುತ್ತಿದ್ದ.
ಈ ಕೆಲಸಕ್ಕೆ ಅವನಿಗೆ ಸುಮಾರು ಮೂರರಿಂದ ನಾಲ್ಕು ತಾಸು ಸಮಯ ತಗಲುತ್ತಿತ್ತು. ಅದಕ್ಕಾಗಿ ಅವನಿಗೆ ಒಂದಷ್ಟು ಹಣ ದೊರಕುತ್ತಿತ್ತು. ಅದರಿಂದ ಕೆಲವು ದಿನ ಜೀವನ ಸಾಗುತ್ತಿತ್ತು.

ಹೆಣಗಳು ಬಾರದಿದ್ದ ದಿನ ಬದುಕು ದುರ್ಭರವಾಗುತ್ತಿತ್ತು.
ಮೂವರೂ ಅದೇ ಹಳತಾದ ಬ್ರೆಡ್ ಮತ್ತು ನೀರಿನಂತಹ ಸಾರಿನ ಮೇಲೆಯೇ ಬದುಕುತ್ತಿದ್ದರು.

ಈ ಹುಡುಗಿಗೆ ಅರ್ಥವಾಗಿತ್ತು,
ಹೆಣಗಳು ಬಂದರೆ ಮಾತ್ರ ಮನೆಯಲ್ಲಿ ಒಳ್ಳೆಯ ಊಟ ಎಂದು.
ಆಕೆ ಮನೆಯ ಮುಂದೆ ಹೆಣಗಳಿಗಾಗಿ ದಿನಾಲು ಕಾಯ್ದು ನಿಲ್ಲುತ್ತಿದ್ದಳು. ಯಾವುದಾದರೂ ಹೆಣವನ್ನು ಜನ ತಂದರೆ ಅವಳ ಮುಖ ಅರಳುತ್ತಿತ್ತು.
ಹೆಣದ ಹಿಂದಿದ್ದ ಜನರ ದು:ಖ ಅವಳ ಗಮನಕ್ಕೇ ಬರುತ್ತಿರಲಿಲ್ಲ. ಪ್ರತಿ ಬಾರಿ ದೇಹವೊಂದು ಮನೆಯ ಹತ್ತಿರ ಬಂದಾಗ ಅವಳ ಮುಖದಲ್ಲಿ ವಿಚಿತ್ರವಾದ ಸಂತೋಷದ ಛಾಯೆ ಮೂಡುತ್ತಿತ್ತು.

ಒಂದು ದಿನ ಹುಡುಗಿ ಮನೆಯ ಮುಂದೆ ನಿಂತಿದ್ದಾಳೆ. ದೂರದಲ್ಲಿ ಯಾರೋ ದೇಹವನ್ನು ತೆಗೆದುಕೊಂಡು ಬರುತ್ತಿದ್ದ ದೃಶ್ಯ ಕಾಣಿಸಿತು.
ಅವಳ ಮುಖದ ಮೇಲೆ ನಗೆ ತೇಲಿತು. ತಕ್ಷಣ ಅವಳಿಗೆ ನೆನಪಾಯಿತು, ಅಪ್ಪ ಮನೆಯಲ್ಲಿಲ್ಲ. ಓಡಿ ಹೋಗಿ ಅಮ್ಮನಿಗೆ ಹೆಣ ಬರುತ್ತಿರುವ ಶುಭಸುದ್ದಿ ತಿಳಿಸಿದಳು.
ಅಮ್ಮ ಹೇಳಿದರು, ಬರಲಿಬಿಡು, ನಿನ್ನ ತಂದೆ ಸ್ವಲ್ಪ ಹೊತ್ತಿನಲ್ಲೇ ಬರುತ್ತಾರೆ.

ಜನ ತಂದು ಹೆಣವನ್ನು ಮನೆಯ ಮುಂದೆ ಇಳಿಸಿದರು. ಹುಡುಗಿ ಸಂತೋಷದಿಂದ ಓಡಿಬಂದು ನೋಡಿದರೆ ಅದು ತನ್ನ ತಂದೆಯದೇ ದೇಹ.
ಹುಡುಗಿಯ ಮುಖದ ಮೇಲಿನ ನಗೆ ಮಾಯವಾಗಿ ದು:ಖ ಒತ್ತರಿಸಿ ಬಂದಿತು. ಮೊದಲ ಬಾರಿಗೆ ಹೆಣದ ದೃಶ್ಯ ಆಕೆಗೆ ದು:ಖ ತಂದಿತು.

ಈ ಕಥೆ ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಮತ್ತೊಬ್ಬರ ದು:ಖಗಳಿಗೆ ಸ್ಪಂದಿಸದೇ ತಮ್ಮ ವೈಯಕ್ತಿಕ ಲಾಭಗಳಿಗಾಗಿ ಜನರನ್ನು ಸುಲಿಯುವ ಭ್ರಷ್ಟ ಜನರು ಕೂಡ ಇದೇ ವರ್ಗಕ್ಕೆ ಸೇರುವಂಥವರು.

ಆ ಹುಡುಗಿ ಹೇಗೆ ಹೆಣದ ಹಿಂದಿದ್ದ ಜನರ ದು:ಖವನ್ನು ಕಾಣದೇ ತನ್ನ ತಂದೆಗೆ ಬರಬಹುದಾದ ಹಣವನ್ನು ಮಾತ್ರ ಅಪೇಕ್ಷಿಸಿ ಸಂತೋಷ ಪಡುತ್ತಿದ್ದಳೋ ಅದೇ ರೀತಿ ಜನರ ಕಷ್ಟಗಳ, ಕಣ್ಣೀರನ್ನು ಕಾಣದೇ ಜನರನ್ನು, ರಾಜ್ಯವನ್ನು ದೇಶವನ್ನು ಲೂಟಿ ಮಾಡುವ ಭ್ರಷ್ಟರು ಒಂದು ದಿನ ಆ ಹುಡುಗಿ ಎದುರಿಸಿದಂಥ ಆಘಾತವನ್ನು ಎದುರಿಸಲೇಬೇಕೆಂಬುದು ಸತ್ಯ.

ವೈಯಕ್ತಿಕ ಲಾಭಕ್ಕಾಗಿ ಪರರ ಕಣ್ಣೀರು ಕಾಣದ ಜನರಿಗೆ ಈ ಶಾಶ್ವತ ಸತ್ಯ ಮೊದಲೇ ಅರ್ಥವಾದರೆ ಎಷ್ಟು ಒಳ್ಳೆಯದಲ್ಲವೇ?

ಸ್ನೇಹಿತರೆ ಆದಷ್ಟು ಒಳ್ಳೆಯ ಚಿಂತನೆಗಳನ್ನು ಮಾಡೋಣ ಸಾರ್ಥಕ ಜೀವನ ನಡೆಸೋಣ.

ಯೋಚಿಸಿ ಯೋಜಿಸಿ

ಏನಂತೀರಿ ?

ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೆರವಾಗಲು ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜೂನ್ 25 ಮತ್ತು 26ರಿಂದ ಮೇಳ ನಡೆಯಲಿದ್ದು, ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. [ಉತ್ತರ ಕರ್ನಾಟಕದ ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಸಿ] ಧಾರವಾಡ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಧಾರವಾಡ ಜೆ.ಎಸ್‌.ಎಸ್.ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು, 400ಕ್ಕೂ ಅಧಿಕ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ' ಎಂದು ಹೇಳಿದ್ದಾರೆ. [ಇಸ್ರೋದಲ್ಲಿ ಕೆಲಸ ಖಾಲಿ ಇದೆ] ಉದ್ಯೋಗ ಮತ್ತು ತರಬೇತಿ ಸಂಸ್ಥೆ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇಲಾಖೆ, ಜೆ.ಎಸ್.ಎಸ್, ವೈಶುದೀಪ ಪ್ರತಿಷ್ಠಾನ ಮತ್ತು ಹುಬ್ಬಳ್ಳಿ ವಾಣಿಜ್ಯೋದ್ಯಮಿಗಳ ಸಂಘ ಜಂಟಿಯಾಗಿ ಈ ಮೇಳ ಆಯೋಜಿಸಿವೆ. ಕನಿಷ್ಠ 15 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಗುರಿ ಹೊಂದಲಾಗಿದೆ. [ವಿಜಯಪುರ ಹಾಲು ಉತ್ಪಾದಕರ ಸಂಘದಲ್ಲಿ ಕೆಲಸ ಖಾಲಿ ಇದೆ] ನೋಂದಣಿ ಮಾಡಿಸಿ : ಈ ಉದ್ಯೋಗ ಮೇಳದಲ್ಲಿ 25 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇಳದ ದಿನ ನೂಕುನುಗ್ಗಲು ಉಂಟಾಗಬಾರದು ಎಂಬ ಕಾರಣಕ್ಕಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. [ಕರ್ನಾಟಕ : ಉಗ್ರಾಣ ನಿಗಮದಲ್ಲಿ ಕೆಲಸ ಖಾಲಿ ಇದೆ] ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ vidyasnehi.org ಮತ್ತು jsspitidwd.org ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದವರು ಜಿಲ್ಲಾಧಿಕಾರಿಗಳ ಕಚೇರಿ, ಅಂಬೇಡ್ಕರ್ ಭವನ, ಜೆಎಸ್‌ಎಸ್, ಟೈಕೂನ್,ಸಿಐಐ ಕಚೇರಿಗೂ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇಳದಲ್ಲಿ ಪಾಲ್ಗೊಳ್ಳಲು ಟೋಕನ್ ನೀಡಲಾಗುತ್ತದೆ.Read more at: http://kannada.oneindia.com/news/dharwad/job-fair-in-dharwad-on-june-25-and-26-2016-103810.html

🙋🏻👣ಮಹಿಳೆಯರ ಮತದಾನದ ಹಕ್ಕು ನಡೆದು ಬಂದ ದಾರಿ 🙋🏻👣

✍🏻🗣 ಜಗತ್ತಿನ ಇತಿಹಾಸದಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನ ಹಕ್ಕು ನೀಡಿದ ಖ್ಯಾತಿ ನ್ಯೂಜಿಲೆಂಡ್ ಗೆ ಸಲ್ಲುತ್ತದೆ.

✍🏻🗣1893ರ ನವಂಬರ್ ನಲ್ಲಿ ನ್ಯೂಜಿಲೆಂಡ್ ನ ಗವರ್ನರ ಲಾರ್ಡ್ ಗ್ಲಾಸ್ಗೊ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದರು.

✍🏻🗣ಇದಕ್ಕೂ ಮುನ್ನ 1780 ರಲ್ಲಿ ಫ್ರಾನ್ಸ್ ನಲ್ಲಿ ಮಹಿಳಾ ಹೋರಾಟಗಾರ್ತಿ ಯರು ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದರು.

✍🏻🗣1888 ರಲ್ಲಿ ಮತದಾನ ಹಕ್ಕು ದೊರೆಯಿತಾದರೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ.

✍🏻🗣ಭಾರತದಲ್ಲಿ ಮಹಿಳೆಯರಿಗೆ ಮೊದಲ ಮತದಾನದ ಹಕ್ಕು ದೊರೆತಿದ್ದು 1920ರಲ್ಲಿ.

✍🏻🗣ತಿರುವಾಂಕೂರು ಸಂಸ್ಥಾನದ ರಾಜ 1920ರಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನದ ಹಕ್ಕು ನೀಡಿದ್ದರು.

✍🏻🗣 ಸ್ವಾತಂತ್ರ್ಯದ ನಂತರ ಎಲ್ಲಾ ರಾಜ್ಯಗಳಲ್ಲೂ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಿತು.

✍🏻🗣 ಜಗತ್ತಿನ 47 ಮುಸ್ಲಿಂ ರಾಷ್ಟ್ರಗಳಿಗೆ ಹೋಲಿಸಿದರೆ ಸೌದಿ ಅರೇಬಿಯಾ ಮಹಿಳೆಯರಿಗೆ ಮತದಾನದ ಹಕ್ಕು ತಡವಾಗಿಯೇ ದೊರಕಿದೆ ಎನ್ನಬಹುದು.

1) ಪ್ರಸ್ತುತ ಕೇರಳದ ಮುಖ್ಯಮಂತ್ರಿ ಯಾರು?
*  ಪಿಣರಾಯಿ ವಿಜಯನ್.

2) 'ಡೊನಾಲ್ಡ್ ಟ್ರಂಪ್' ನ ಪಕ್ಷ ಯಾವುದು?
* ರಿಪಬ್ಲಿಕನ್.

3) ಅಸ್ಸಾಂ ರಾಜ್ಯದ 14 ನೇ ಮುಖ್ಯಮಂತ್ರಿ ಯಾರು?
* ಸರ್ಬಾನಂದ ಸೋನೋವಾಲ್.

4) ಪಿಣರಾಯಿ ವಿಜಯನ್ ಕೇರಳದ ಎಷ್ಟನೇ ಮುಖ್ಯಮಂತ್ರಿ?
RBS: * 12.

5) ಬಿಸಿಸಿಐ ವಿಸ್ತರಿಸಿರಿ?
* Board of control cricket india
  (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ).

6) ಯುಗಕವಿ ಸಿದ್ದಿ ಚರಣ್ ಪುರಸ್ಕಾರಕ್ಕೆ ಪಾತ್ರರಾದ ಸಿಕ್ಕಿಂ ಮುಖ್ಯಮಂತ್ರಿ ಯಾರು?
* ಪವನ್ ಕುಮಾರ್ ಚಾಮ್ಲಿಂಗ್.

7) "ದೇವರನಾಡು" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಕೇರಳ.

8) "ಚಬಾಹರ್ ಬಂದರು" ಯಾವ ದೇಶದಲ್ಲಿದೆ?
* ಇರಾನ್.

9) 2ನೇ ಪಟ್ಟಿಯಲ್ಲಿ ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆಗೆ ಎಷ್ಟು ನಗರಗಳನ್ನು ಹೆಸರಿಸಲಾಗಿದೆ?
* 13.

10) ಕೇಂದ್ರದ ನಗರಾಭಿವೃದ್ಧಿ ಸಚಿವ ಯಾರು?
* ಎಂ.ವೆಂಕಯ್ಯನಾಯ್ಡು.

11) "ವಾರಂಗಲ್" ಯಾವ ರಾಜ್ಯದಲ್ಲಿದೆ?
* ತೆಲಂಗಾಣ.

12) ಇರಾನಿನ ರಾಜಧಾನಿ ಯಾವುದು?
* ಟೆಹರಾನ್.

13) "ಗ್ವಾದರ್ ಬಂದರು" ಯಾವ ದೇಶದ ಒಡೆತನದಲ್ಲಿದೆ?
* ಚೀನಾ.

14) ಇರಾನಿನ ಪ್ರಸ್ತುತ ಅಧ್ಯಕ್ಷರು ಯಾರು?
* ಹಸನ್ ರಹೌನಿ.

15) 'ಅಶ್ರಫ್ ಘನಿ' ಯಾವ ದೇಶದ ಅಧ್ಯಕ್ಷರು?
* ಅಫ್ಘಾನಿಸ್ಥಾನ.

16) ಭಾರತ & ಇರಾನ್ ಇತ್ತೀಚೆಗೆ ಎಷ್ಟು ಒಪ್ಪಂದಗಳಿಗೆ ಸಹಿ ಹಾಕಿವೆ?
RBS: * 12.

17) 'ಬಾಗಲ್ಪುರ' ಯಾವ ರಾಜ್ಯದಲ್ಲಿದೆ?
* ಬಿಹಾರ.

18) 'ಫರೀದಾಬಾದ್' ಯಾವ ರಾಜ್ಯದಲ್ಲಿದೆ?
* ಹರಿಯಾಣ.

19) 2015 ರ ಖೇಲ್ ರತ್ನ ಪ್ರಶಸ್ತಿ ಪಡೆದವರು ಯಾರು?
* ಸಾನಿಯಾ ಮಿರ್ಜಾ.

20) ಭಾರತೀಯ ಪರಮಾಣು ಶಕ್ತಿ ಸಹಕಾರ ಸಂಸ್ಥೆಯ ನೂತನ ಪ್ರಧಾನ ನಿರ್ದೇಶಕ ಯಾರು?
* ಎಸ್.ಕೆ.ಶರ್ಮ.

21) 'ರಾವತ್ ಭಾಟ' ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.

22) ಕೇಂದ್ರದ ಆರೋಗ್ಯ ಸಚಿವ ಯಾರು?
* ಜೆ.ಪಿ.ನಡ್ಡಾ.

23) ಪ್ರಸ್ತುತ ಅರ್ಟಾನಿ ಜನರಲ್ ಯಾರು?
* ಮುಕುಲ್ ರೋಹಟಗಿ.

24) "ವಿಶ್ವ ಕ್ಷಯದಿನ'ವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 24.

25) "ಮೈಕ್ರೋಸಾಫ್ಟ್" ಯಾವ ದೇಶದ ಕಂಪನಿ?
* ಅಮೇರಿಕಾ.

26) ಮೈಕ್ರೋಸಾಫ್ಟ್ ನ ಸಿಇಒ ಯಾರು?
* ಸತ್ಯಾನಡೆಲ್ಲಾ.

ಶಭೋದಯ......

"ಜೀವನ ಒಂದು ನಾಟಕರಂಗ ನಾವೆಲ್ಲಾ ಅದರಲ್ಲಿ ಬರುವ ಪಾತ್ರಧಾರಿಗಳು".

           ---- ವಿಲಿಯಂ ಷೇಕ್ಸ್ ಪಿಯರ್.

🔹ಸುಕನ್ಯಾ ಸಮೃದ್ಧಿ🔹

ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆ.
‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಒಂದು ಭಾಗ.

🔹ಸ್ಮಾಲ್ ಸೇವಿಂಗ್ ಸ್ಕೀಮ್..

🔺ಹತ್ತು ವರ್ಷ ವಯಸ್ಸಿನ ಮಿತಿ ದಾಟದ ಬಾಲಕಿಯರಿಗೆ ಈ ಯೋಜನೆ ಅನ್ವಯವಾಗುತ್ತದೆ.

🔺ಬಾಲಕಿಯ ಹೆಸರಿನಲ್ಲಿ ಆಕೆಯ ಪಾಲಕರು , ಲೀಗಲ್ ಗಾರ್ಡಿಯನ್ ಈ ಖಾತೆ ಆರಂಭಿಸಿ, ನಿರ್ವಹಿಸಬಹುದಾಗಿದೆ.

🔺ಬಾಲಕಿಗೆ 10 ವರ್ಷ ದಾಟಿದ ನಂತರ ಆ ಖಾತೆ ನಿರ್ವಹಿಸಲು ಆಕೆಗೇ ಹಕ್ಕು ಸಿಗುತ್ತದೆ.

🔺ಒಟ್ಟು 21 ವರ್ಷ ಕಾಲಾವಧಿಯದ್ದು , ಸ್ಕೀಮ್ಲಿ 14 ವರ್ಷ ಹಣ ಕಟ್ಟಬೇಕು. ನಂತರ 7 ವರ್ಷಗಳ ಬಳಿಕ ಯೋಜನೆಯ ಸಂಪೂರ್ಣ ಫಲ ಪಡೆದುಕೊಳ್ಳಬಹುದು.
ಕನಿಷ್ಠ 1 ಸಾವಿರ ರೂ.ನಿಂದ ಗರಿಷ್ಠ 5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.

🔺ಸೆಕ್ಷನ್ 80 C ಪ್ರಕಾರ,  ಹೂಡಿಕೆ ಮಾಡಿದ ಹಣವನ್ನು ನಿಮ್ಮ ಆದಾಯ ತೆರಿಗೆಯಲ್ಲಿ ಕಡಿತಕ್ಕೆ ಪರಿಗಣಿಸಲಾಗುತ್ತದೆ ಮತ್ತು ಮೆಚ್ಯೂರಿಟಿ ಹಣ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.
ಸಾವಿರ ರೂಪಾಯಿ ಒಮ್ಮೆಲೇ ಕಟ್ಟಬೇಕಿಲ್ಲ.

🔺ವರ್ಷಪೂರ್ತಿ ಯಾವುದೇ ವೇಳೆಯಲ್ಲಿ ನಿಮ್ಮ ಕೈಲಾದ ಮೊತ್ತ ಪಾವತಿಸಬಹುದು.
ಅಂಚೆ ಕಚೇರಿ , ಬ್ಯಾಂಕ್ನಲ್ಲಿಖಾತೆ ತೆರೆಯಬಹುದು.

🔺18 ವರ್ಷ ತುಂಬಿದಾಗ ಶೇ.50 ಹಣ ಮರಳಿ ಪಡೆಯಬಹುದು.

🔺ಶಿಕ್ಷಣ ಮತ್ತು ಮದುವೆ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಕಟ್ಟಿದ ಹಣದಲ್ಲಿ ಶೇ.50 ಹಣವನ್ನು ಮರಳಿ ಪಡೆಯಬಹುದು.

🔺21 ವರ್ಷ ವಯಸ್ಸಿಗೆ ಬರುವವರೆಗೆ ಈ ಖಾತೆ ಚಾಲನೆಯಲ್ಲಿರುತ್ತದೆ.
ಆಕಸ್ಮಿಕವಾಗಿ ಮಗು ಮೃತಪಟ್ಟರೆ ಖಾತೆ ಸ್ಥಗಿತಗೊಳ್ಳುತ್ತದೆ. ಖಾತೆಯಲ್ಲಿನ ಹಣವನ್ನು ಪಾಲಕರಿಗೆ ನೀಡಲಾಗುತ್ತದೆ.

🔺ಎರಡು ಹೆಣ್ಣುಮಕ್ಕಳಿದ್ದವರು ಎರಡು ಖಾತೆ ತೆಗೆಯಬಹುದು.

🔺ಇದು ಕೇಂದ್ರ ಸರ್ಕಾರದ ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ಕಾಯಿದೆಯಡಿಯಡಿ ಬರುತ್ತದೆ.

🔺ಈ ಕಾಯ್ದೆ ಪ್ರಕಾರ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಆಗುವುದಿಲ್ಲ.

🔺ಕೇಂದ್ರ ಸರ್ಕಾರ ಈ ಯೋಜನೆಯಲ್ಲಿಡುವ ಠೇವಣಿಗೆ ಶೇ.9.1 ವಾರ್ಷಿಕ ಬಡ್ಡಿ ನೀಡುತ್ತದೆ

ಕೃಪೆ= Namma kpsc

ಒಂದು ಸಣ್ಣ ಹೂ ತೋಟದಲ್ಲಿ ಸುಂದರವಾದ ಪುಷ್ಪಗಳು ಅರಳಿ ನಿಂತಿದ್ದವು,
ಇದನ್ನು ಕಂಡ ತೋಟದ ಮಾಲೀಕ ತುಂಬಾ ಸಂತಸಗೊಂಡು “ನನ್ನ ಶ್ರಮಕ್ಕೆ ತಕ್ಕ ಫಲ ದೇವರು ಕೊಟ್ಟಿದ್ದಾನೆಂದು” ಹೇಳಿದ.

ಅದೇ ದಾರಿಯಲ್ಲಿ ಹೋಗುತ್ತಿದ್ದ ಕವಿ ಹೂ ನೋಡಿ “ಅದರ ಸೊಬಗನ್ನು ವರ್ಣಿಸಿ ಕವಿತೆ ಬರೆದ”,

ವರ್ತಕ ನೋಡಿ, ಹೂವಿನ ಮಾರುಕಟ್ಟೆ ಬೆಲೆಯ ಬಗ್ಗೆ ಲೆಕ್ಕಹಾಕಿದ,

ಹೂವು ಮಾರುವ ಹೆಣ್ಣು ಮಗಳು ಹೂತೋಟವನ್ನು ನೋಡಿ “ಇದನ್ನು ನನ್ನ ದಿನನಿತ್ಯದ ಮನೆಗಳಿಗೆ ಕೊಟ್ಟರೆ ನನ್ನ ಆದಾಯ ದ್ವಿಗುಣವಾಗುತ್ತೆ” ಎಂದು ಆಲೋಚಿಸಿದಳು,

ಒಬ್ಬ ಪ್ರೇಮಿ ಇದನ್ನು ನೋಡಿ “ನನ್ನ ಪ್ರಿಯತಮೆಗೆ ಇದನ್ನು ಕೊಟ್ಟು ಅವಳ ಮನಃ ಸಂತೋಷಪಡಿಸುತ್ತೇನೆ ” ಎಂದು ತೀರ್ಮಾನಿಸಿದ ,

ಅದೇ ಪ್ರಕೃತಿ ಪ್ರಿಯ ನೋಡಿ “ಹಾ ಹಾ, ಸುಂದರವಾದ ಪ್ರಕೃತಿ ಸೊಬಗು ಇದು, ಹೀಗೇ ಇರಲಿ” ಎಂದ,

ಮತೊಬ್ಬ ಪುರೋಹಿತ “ಈ ಪುಷ್ಪಗಳು ದೇವರ ಪೂಜೆಗೆ ತಕ್ಕ ಹೂವು” ಎಂದ,

ಅದೇ ದಾರಿಯಲ್ಲಿ ಬಂದ ರಾಜ “ಈ ಸುಂದರವಾದ ಹೂಗಳು ಅರಮನೆಯ ಶೃಂಗಾರಕ್ಕೆ ಸರಿಯಾದುದು” ಎಂದ,

ಹೀಗೆ ಬೆಳಿಗ್ಗೆ ಅರಳಿ ಸಂಜೆ ಬಾಡುವ ಪುಷ್ಪಗಳಿಗೆ ಇಷ್ಟು, ಇನ್ನಷ್ಟು ,ಮತ್ತಷ್ಟು ಅಭಿಪ್ರಾಯಗಳು ಬರುತ್ತವೆ.,

ಅ೦ದಾಗ
ಈ ಸಮಾಜದಲ್ಲಿ ಬದುಕುತ್ತಿರುವ ನಮ್ಮನ್ನು ಜನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಣುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ನಮ್ಮ ಜೀವನವನ್ನು ಸಾರ್ಥಕವಾಗಿಸುತ್ತಾ ಸನ್ಮಾರ್ಗದಲ್ಲಿ ನಡೆಯುತ್ತಾ ದೇವರನ್ನು ನೆನೆದು ಆ ಹೂವಿನ೦ತೆ ನಮ್ಮ ಜೀವನವನ್ನರಳಿಸಬೇಕು ಮತ್ತು ನಮ್ಮ ಕರ್ತವ್ಯವನ್ನು ಪೂರ್ಣ ಮಾಡಬೇಕು.......
ಅಲ್ಲವೇ ಗೆಳೆಯರೇ ....??

ವಿಸ್ಮಯಗಳು
೧ . ಮೊನಾಲಿಸಾ ಚಿತ್ರ ಎಡ ಗೈಯಿಂದ ಬರೆಯಲ್ಪಟ್ಟಿದೆ
೨ . ಯಾವಾಗಲೂ ಗಾಳಿ ಬೀಸುವ ದಿಕ್ಕಿನಲ್ಲಿ ತಲೆಯನ್ನಿಟ್ಟು ಮಲಗುವ ಪ್ರಾಣಿ " ನಾಯಿ "
೩ . ಇರುವೆಗಳು ಆಹಾರ ಇಲ್ಲದೆ ೧೦೦ ದಿನಗಳಕಾಲ ಬಾಳುತ್ತದೆ
೪ . ಒಂದು ಪೆನ್ಸಿಲ್‌ ನಿಂದ ೫೮ ಕಿ.ಮೀ ನೀಳದ ರೇಖೆಯನ್ನ ಎಳೆಯ ಬಹುದು
೫ . ಹಾವುಗಳಿಗೆ ಕೇಳುವ ಶಕ್ತಿ ಇಲ್ಲ
೬ . ಏಡಿಕಾಯ್‌ ಗೆ ತಲೆ ಇಲ್ಲ ಅವುಗಳ ಹಲ್ಲುಗಳು ಹೊಟ್ಟೆಯಲ್ಲಿ ಇರುತ್ತದೆ
೭ . ಬಿಳುಪು ಎಂಬುದು ಒಂದು ಬಣ್ಣ ಅಲ್ಲ ಅದು ಏಳು ವರ್ಣಗಳ ಬೆರಕೆ
೮ . ಕಪ್ಪೆಗಳು ನೀರಿನಲ್ಲಿ ವಾಸಿಸುತ್ತದೆ ಆದರೆ ಅವುಗಳು ನೀರನ್ನ ಕುಡಿಯುವುದಿಲ್ಲ
೯ . ನಮಗೆ ದೇಹ ಪೂರ್ತಿ ಬೆವರುತ್ತೆ ಆದರೆ ನಾಯಿಗಳಿಗೆ ನಾಲಿಗೆಯಲ್ಲಿ ಮಾತ್ರ ಬೆವರುತ್ತದೆ
೧೦ . ಅಫ್ಘಾನಿಸ್ತಾನ್‌ ನಲ್ಲಿ ರೈಲುಗಳಿಲ್ಲ
೧೧ . ಗಂಡು ಸಿಂಹ ತಿಂದ ನಂತರವೆ ಹೆಣ್ಣು ಸಿಂಹ ತಿನ್ನುತ್ತದೆ
೧೨ . ಬಾತುಕೋಳಿ ಮುಂಜಾನೆಗಳಲ್ಲಿ ಮಾತ್ರ ಮೊಟ್ಟೆ ಇಡುತ್ತದೆ
೧೩ . ಬದನೆಕಾಯಿಯ ತವರು ಭಾರತವೇ
೧೪ . ಬ್ರೇಸಿಲ್‌ ದೇಶದ ಜೇನು ಕಹಿಯಾಗಿರುತ್ತದೆ
೧೫ . ನಮ್ಮ ಹಿಂದಿನ ಭಾರತದ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಶ್ರೇಷ್ಠ ವೀಣೆಯ ಕಲಾವಿದರು ಆಗಿದ್ದರು
೧೬ . ಪ್ರಪಂಚದಲ್ಲಿ ಬೀಚ್‌ ಇಲ್ಲದ ನಾಡುಗಳು ೨೬
೧೭ . ಅಮೇರಿಕಾಗಿಂತಲೂ ಸಹಾರ ಮರುಭೂಮಿ ದೊಡ್ಡದು.✅

ನಿಜವಾದ ಬಡವರು ಯಾರು?:~
(ವ್ಯಕ್ತಿತ್ವ ವಿಕಸನಕ್ಕಾಗಿ )

*ಒಬ್ಬ ಶ್ರೀಮಂತ ಮಹಿಳೆ
ಸೀರೆ ಅಂಗಡಿಗೆ ಬಂದು

"Excuse me
ಒಂದು ಕಡಿಮೆ ಬೆಲೆ ಸೀರೆ ತೋರಿಸಿ
ನನ್ನ ಮಗನ ಮದುವೆ ಇದೆ ಕೆಲಸದವಳಿಗೆ ಕೋಡೊಕೆ"

*ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದಳು.
"ಅಣ್ಣಾ ಒಂದು ದುಬಾರಿ ಸೀರೆ ತೋರಿಸು ನಮ್ಮ ಮಾಲಿಕರ ಮಗನ ಮದುವೆಗೆ ಉಡುಗೊರೆ ಕೊಡಬೇಕು"

*ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ? ಅಥವಾ ಆಸ್ತಿಯಲ್ಲಿ ?

ಇವರಲ್ಲಿ ಯಾರು ಬಡವರು?
ನೀವೇ ಯೋಚಿಸಿ.
=================

*ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ fiveಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು

*ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು

*ಅವಳು ಹೋಟೆಲ್ ಮ್ಯಾನೇಜರ್ ಗೆ ಕೇಳಿದಳು
"ಒಂದು ಲೋಟ ಹಾಲು ಸಿಗುತ್ತಾ..?

*"ಎಸ್ ಮೇಡಮ್",
"ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ"*

*ಮಹಿಳೆ ಹೇಳಿದಳು
"ನೋ ಪ್ರಾಬ್ಲಮ್"

*ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು
ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವವನ ಹತ್ತಿರ ಒಂದು ಲೋಟ ಹಾಲು ಕೊಂಡಳು

ಅವಳು ಕೇಳಿದಳು
ದುಡ್ಡು ಎಷ್ಟು ?

" ಆ ಮುದುಕ ನಗುತ್ತಾ ಹೇಳಿದ
ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ",*

*"ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ"

*ಆ ಮಹಿಳೆ ಇನ್ನೊಂದು ಲೋಟ ಹಾಲು ತೆಗೆದುಕೊಂಡು ಹೊರಟಳು

ಅವಳಿಗೆ ಆಶ್ಚರ್ಯ! !

ಇವರಲ್ಲಿ ಶ್ರೀಮಂತರು ಯಾರು?

* ನಿಜವಾಗಿ ಶ್ರೀಮಂತರು ಯಾರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?

ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ.

ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರೀಕ್ಷಿಸದೆ ಸಹಾಯ ಮಾಡೋಣ.

*ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ"

*ಕಾಫಿಯು
ಸಕ್ಕರೆ ಮತ್ತು ಹಾಲು ಇಲ್ಲದೆ ರುಚಿಯಾಗದು

*ಏಕಾಂಗಿಯಾಗಿ ನಾವು ಒಳ್ಳೆಯವರೆ ಆದರೆ ಎಲ್ಲರೂ ಸೇರಿದಾಗ ಕಾಳಜಿ ಕೂಡ ಬರುತ್ತದೆ*

*ಸಂಪರ್ಕದಲ್ಲಿರೋಣ:

"ಜಗತ್ತು ಒಳ್ಳೆಯವರಿಂದ ತುಂಬಿದೆ
ನಾವು ಹುಡುಕಬೇಕಷ್ಟೆ.

ಒಂದಾಗೋಣ ಜಗತ್ತನ್ನೆ ಬದಲಾಯಿಸೋಣ."

ಧರ್ಮಸಾರ:~
(ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿ)

ವ್ಯಾಸ ಮಹರ್ಷಿಗಳು  ಮಹಾಜ್ಞಾನಿಗಳು. ವೇದ-ಆಗಮ-ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದರು.

ಮಹಾಕಾವ್ಯ ಮಹಾಭಾರತವನ್ನು ರಚಿಸಿದರು. ಹದಿನೆಂಟು ಪುರಾಣಗಳನ್ನೂ ರಚಿಸಿದ ಪುಣ್ಯಪುರುಷರು. "ಬ್ರಹ್ಮಸೂತ್ರ"ದಂಥ ಆಧ್ಯಾತ್ಮದ ಮೇರುಕೃತಿ ನಿರ್ಮಿಸಿದ ಆಚಾರ್ಯರು.

ಒಮ್ಮೆ ಅದಾವುದೋ ಕಾರ್ಯದ ನಿಮಿತ್ಯ, ಮಹರ್ಷಿಗಳು ಜ್ನಾನದೆಗುಲವೇ ನಡೆದಂತೆ ನಡೆದಿದ್ದಾರೆ. ಈಗಾಗಲೇ ಅವರ ದೇಹ 80 ವಸಂತಗಳನ್ನು ಕಂಡಿದೆ. ದೇಹ ಮುಪ್ಪಾಗಿದೆ. ದೇಹದ ಒಳಗಾದರೋ ಎಂದೆಂದೂ ಮುಪ್ಪಾಗದ ಆಧ್ಯಾತ್ಮವಿದ್ಯೆ ತುಂಬಿಕೊಂಡಿದೆ.

ಬೇಸಿಗೆಯ ಬಿಸಿಲು, ದೂರದ ದಾರಿ. ಅಲ್ಲಲ್ಲಿ ದಣಿವಾರಿಸಿಕೊಳ್ಳಲೇ ಬೇಕು.
ಈ ಬಾರಿ ರೈತನು ತೋಟದ ಗಿಡದಡಿ ಕುಳಿತಿದ್ದಾನೆ.

ದೂರದಿಂದಲೇ ರೈತ ಇವರನ್ನು ನೋಡಿದ. ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲೆಂದು ಅಲ್ಲಿಗೆ ಬಂದ; ಮಹರ್ಷಿಗಳನ್ನು ಕಂಡು ನಮಸ್ಕರಿಸಿದ. ಸಂತರಂತೆ ಕಾಣುವಿರಿ. ತಾವಾರು? ದಯವಿಟ್ಟು ಹೇಳಬೇಕೆಂದು ರೈತ ಪ್ರಾರ್ಥಿಸಿದ.

ರೈತನ ಮುಗ್ಧ ಪ್ರಶ್ನೆಗೆ ಉತ್ತರಿಸುವುದು ಹೇಗೆ?
“ನನಗೆ ವ್ಯಾಸ ಮಹರ್ಷಿ ಎನ್ನುತ್ತಾರೆ. ಭಗವತ್ ಕೃಪೆಯಿಂದ ಕೆಲವೊಂದು ಧರ್ಮಗ್ರಂಥಗಳನ್ನು ಬರೆದಿದ್ದೇನೆ.”

ರೈತನು 50ವರ್ಷಗಳಿಂದ ಮಹರ್ಷಿಗಳ ಹೆಸರು ಕೇಳಿದ್ದ. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಕಾಣಬೇಕು. ಅವರಿಂದ ನಾಲ್ಕಾರು ಹಿತೊಪದೆಶಗಳನ್ನು ಕೇಳಬೇಕೆಂದು ಹಂಬಲಿಸಿದ್ದ.
ಅರಸುವ ಬಳ್ಳಿಯೇ ಕೈಗೆ ಸಿಕ್ಕಂತೆ, ಮಹರ್ಷಿಗಳು ತಾವಾಗಿಯೇ ಇವನಲ್ಲಿಗೆ ನಡೆದು ಬಂದಿದ್ದಾರೆ. ರೈತನಿಗೆ ಆದ ಸಂತಸ ಅವರ್ಣನೀಯ.
ಉದ್ದಾಗಿ ನಮಸ್ಕರಿಸುತ್ತಾ ರೈತ ಕೇಳುತ್ತಾನೆ- “ ತಾವು ನೂರಾರು ಧರ್ಮಗ್ರಂಥಗಳನ್ನು ಬರೆದಿರುವ ಪುಣ್ಯಪುರುಷರು. ನಾನೊಬ್ಬ ನಿರಕ್ಷರಿ.
ಬಡ ರೈತ. ಅಷ್ಟೆಲ್ಲಾ ಓದಲು ನನಗಾಗದು. ತಮ್ಮ ಶ್ರೀಮುಖದಿಂದಲೇ ಧರ್ಮವನ್ನು ತಿಳಿದುಕೊಳ್ಳುವ ಬಯಕೆಯಾಗಿದೆ.
ಆದರೆ ಎತ್ತು ಕಟ್ಟಿಬಂದಿದ್ದೇನೆ ಬೇಗ ಹೋಗಬೇಕು ಏನಾದರೂ ಧರ್ಮೋಪದೇಶ ಮಾಡಿರಿ ಎಂದು ರೈತನು ಪುನಃ ನಮಸ್ಕರಿಸಿದ.

ಮಹರ್ಷಿಗಳು ಚಿಕಿತರಾಗಿ ನುಡಿದರು. “ಹನ್ನೆರಡು ವರ್ಷ ಹೇಳಿದರೂ ಮುಗಿಯದ ಅನುಭವ ಐದು ನಿಮಿಷದಲ್ಲಿ ಹೇಗೆ ಹೇಳಲಿ? ಅದಾಗದು!”

“ಅದು ಹೇಗೆ ಆಗುವುದಿಲ್ಲ ಮಹರ್ಷಿಗಳೇ? ನಾಲ್ಕು ಜನ ಪಂಡಿತರಿಗೆ ಉಪದೇಶ ಮಾಡಿದರಾಯಿತೆ? ಸಾಮಾನ್ಯರೂ ಧರ್ಮವನ್ನು ತಿಳಿಯಬೇಡವೇ?
ಎಲ್ಲವನ್ನೂ ತೊರೆದು ಆಶ್ರಮವಾಸಿಗಳಾದ ಸನ್ಯಾಸಿಗಳಿಗೆ ತಾವು ವರ್ಷಾವಧಿ ಹೇಳಬಹುದು. ಆದರೆ ಸಂಸಾರದ ಹೊಣೆಯನ್ನು ಹೊತ್ತಿರುವ ನಮಗೆಲ್ಲಿ ಕೂತಿರಲಾಗುತ್ತದೆ?
ಕೂತರೆ ಸಂಸಾರ ನಡೆದೀತೆ?
ನಮ್ಮಂಥ ಪ್ರಾಪಂಚಿಕರೇ ಈ ಜಗತ್ತಿನಲ್ಲಿ ಹೆಚ್ಚಾಗಿರುವರು.
ಹೀಗೆ ಅಧಿಕಾಂಶದಲ್ಲಿರುವ ನಮಗೆ ತಾವು ಧರ್ಮೋಪದೇಶ ಮಾಡದಿದ್ದರೆ. ತಮಗೆ ಧರ್ಮವೇ ತಿಳಿದಿಲ್ಲವೆಂದು ನಾನು ಭಾವಿಸಬೇಕಾಗುತ್ತದೆ.
ಹೇಳಿ, ಬೇಗ ಹೇಳಿ, ಎತ್ತು ಕರೆಯುತ್ತಿದೆ” ಎಂದ ರೈತ ನುಡಿದ.

ಆಚಾರ್ಯರು ಕ್ಷಣ ಕಾಲ ಮೌನತಾಳಿದರು.
ಅವರ ಆಯುಷ್ಯದಲ್ಲಿಯೇ ಇಂಥ ಗಟ್ಟಿ ಶಿಷ್ಯ ದೊರೆತಿರಲಿಲ್ಲ.
“ಈ ಮುಗ್ಧನಿಗೆ ಧರ್ಮ ತಿಳಿದರೆ ಮಾತ್ರ ನಾನು ಬರೆದದ್ದು ಸಾರ್ಥಕವಾಗುತ್ತದೆ” ಎಂದು ಮಹರ್ಷಿಗಳ ಹೃದಯ ನುಡಿಯಿತು.

ಮಹರ್ಷಿಗಳು ಬರೀ ತಲೆ ಬೆಳೆಸಿಕೊಂಡ ಶುಷ್ಕ ಪಂಡಿತರಾಗಿರಲಿಲ್ಲ.
ಹೃದಯ ವೈಶಾಲ್ಯವನ್ನು ಗಳಿಸಿದ್ದ ಅನುಭಾವಿಗಳಾಗಿದ್ದರು.
ಒಂದು ಗಳಿಗೆ ಕಣ್ಣು ಮುಚ್ಚಿ ಸರ್ವಶಕ್ತ ಸರ್ವಾಂತರ್ಯಾಮಿ ಭಗವಂತನಿಗೆ ಪ್ರಾರ್ಥಿಸಿದರು.

“ಇದೀಗ ನನಗೆ ಸೋಲುವ ಪ್ರಸಂಗ ಬಂದಿದೆ. ನೀನೇ ನಿಜ ನುಡಿಸು; ದಯಾನಿಧಿ ದೇವನೆ, ಸರ್ವಜ್ಞನೇ” ಎಂದರು.

ತಡವಿಲ್ಲದೆ ಅವರ ಹೃದಯ ಪ್ರೇಮಪೂರ್ಣವಾಯಿತು.
ಕಣ್ಣಲ್ಲಿ ಶಾಂತಿ ಚಿಮ್ಮಿತು. ಮುಖದಿಂದ ಜ್ನಾನಗಂಗೆ ಪ್ರವಹರಿಸಿತು.

‘ಶ್ರೂಯತಾಂ ಧರ್ಮಸರ್ವಸ್ವ ಶ್ರುತ್ವಾ ಚೈವ ಅವಧಾರ್ಯತಾಂ’

“ಕೇಳು ಧರ್ಮ ಸರ್ವಸ್ವವನ್ನು ಕೇಳಿ, ಹೃದಯವಿಟ್ಟು ಅದರಂತೆ ಆಚರಿಸು; ಮುಕ್ತನಾಗೆಂದರು.”

ರೈತನಿಗೆ ಎಲ್ಲಿಲ್ಲದ ಸಂತಸ; ನಿಜವಾಗಿಯೂ ಧರ್ಮ ಅಷ್ಟೊಂದು ಸುಲಭವೇ? ಆಶ್ಚರ್ಯದಿಂದ ಕೇಳಿದ ರೈತ.

“ಒಂದು ಮಾವಿನಹಣ್ಣಿಗಾಗಿ ರೈತನು ಇಪ್ಪತ್ತು ವರ್ಷ ತಪಿಸಬೇಕು. ಅದೇ ಹಣ್ಣನ್ನು ಹರಿದು ಹಂಚಿ ಧರ್ಮಕಾರ್ಯ ನಡೆಸಲು ಎರಡು ನಿಮಿಷ ಸಾಕು. ಒಬ್ಬ ಮಗನನ್ನು ಮಾನವನನ್ನಾಗಿ ಮಾಡಲು ತಾಯಿಗೆ ಇಪ್ಪತ್ತು ವರ್ಷ ಬೇಕು. ಅದೇ ಮಾನವನನ್ನು ದೇವನನ್ನಾಗಿ ಮಾಡಲು ಸಮರ್ಥ ಗುರುವಿನ ಎರಡು ನಿಮಿಷ ಬಹಳವಾಯಿತು.”  ಮಹರ್ಷಿಗಳು ಸತ್ಯ ಸಾರಿದರು.

‘ಹಾಗಾದರೆ ಬೇಗ ಹೇಳಿ ಗುರುಗಳೆ,  ಕೇಳಿ ನಾನು ಧನ್ಯನಾಗಬೇಕು’ ಎಂದು ರೈತ ಮಹರ್ಷಿಗಳ ಪಾದವಿಡಿದು ಪ್ರಾರ್ಥಿಸಿದ.

‘ನಮ್ಮ ಹೃದಯ ಹೂವಾಗಬೇಕು’ ಮನದಲ್ಲಿ ಪ್ರೇಮದ ಮಕರಂದ ತುಂಬಬೇಕು.
ಶತ್ರು-ಮಿತ್ರರೆನ್ನದೆ ಸಮಸ್ತ ಪ್ರಪಂಚವನ್ನು ಅದರಲ್ಲಿ ಇದ್ದಿ ತೆಗೆಯಬೇಕು.
ಇದೇ ಧರ್ಮ ಸರ್ವಸ್ವ’ ಎಂದು ಮಹರ್ಷಿಗಳು ಮನದುಂಬಿ ನುಡಿದರು.

ಈ ಗುರುಗೀತೆಯನ್ನು ಕೇಳಿದಾಗ ರೈತನ ಹೃದಯವೂ ತುಂಬಿ ಬಂದಿತು. ಆನಂದ ಭಾಷ್ಪದೊಂದಿಗೆ ಗುರುಗಳಿಗೆ ಹಣೆಮಣಿದು ದೇವ ದೇವ ಮಹಾದೇವ ಧನ್ಯನಾದೆನೆಂದು ಹೂವಿನ ಹೆಜ್ಜೆಗಳನ್ನಿಡುತ್ತ ಹೊಲದತ್ತ ಹೊರಟನು.

ಎತ್ತು ಕಾಣುತ್ತಲೇ ಕೈಯೊಳಗಿನ ಬಾರಕೊಲನ್ನು ಬೀಸಾಕಿದನು.
ಎತ್ತು ಬಿಚ್ಚಿ ಎದೆಗವಚಿಕೊಂಡು ಪ್ರೇಮವರ್ಷಾ ಕರೆದನು. ಅಂದಿನಿಂದ ಮುಂದೆಂದೂ ಆ ರೈತ ಪ್ರಾಣಿಗಳನ್ನಾಗಲಿ, ಮನುಷ್ಯರನ್ನಾಗಲಿ ಕನಸು ಮನಸ್ಸಿನಲ್ಲಿಯೂ ದ್ವೇಷಿಸಲಿಲ್ಲ. ಬದುಕಿನುದ್ದಕ್ಕೂ ತನ್ನಂತೆ ಪರರ ಬಗೆದು ಸಕಲ ಜೀವರಾಶಿಗಳ ಸೇವೆಯನ್ನು ಮಾಡಿ ಸಂತಸನಾದ, ಮಹಂತನಾದ.

-ಶ್ರೀ ಸಿದ್ಧೇಶ್ವರ ಸ್ವಾಮೀಜಿ.

ಅಮೆರಿಕ: ಇತಿಹಾಸ ಸೃಷ್ಟಿಸಿದ ಹಿಲರಿ

ಲಾಸ್‌ ಏಂಜಲಿಸ್‌ (ಪಿಟಿಐ): ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್‌ ಅವರು ನಾಮನಿರ್ದೇಶನಗೊಳ್ಳುವುದು ಖಚಿತವಾಗಿದ್ದು, ಈ ಮೂಲಕ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಮತ್ತು ರಿಪಬ್ಲಿಕನ್‌ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ನಡುವೆ ಗದ್ದುಗೆಗಾಗಿ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.

ಮಂಗಳವಾರದ ಪ್ರಾಥಮಿಕ ಚುನಾವಣೆಗಳಲ್ಲಿ ಅವರು ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್‌ ಡಕೋಟಾ ರಾಜ್ಯಗಳಲ್ಲಿ ಗೆಲುವು ಕಾಣುವ ಮೂಲಕ ಡೆಮಾಕ್ರಟಿಕ್‌ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು ಇತಿಹಾಸ ಸೃಷ್ಟಿಸಿದ್ದಾರೆ.

ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಪಡೆದಿರುವ ಹಿಲರಿ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಪರವಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್‌ ಅರ್ನೆಸ್ಟ್‌ ಅಭಿನಂದಿಸಿದ್ದಾರೆ. ಆದರೆ ಒಬಾಮ ಅವರು ಇನ್ನೂ ಅಧಿಕೃತ ಅಭಿನಂದನೆ ಹೇಳಿಕೆ ನೀಡಿಲ್ಲ.

‘ನಿಮ್ಮೆಲ್ಲರಿಗೂ ಧನ್ಯವಾದಗಳು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಮುಖ ಪಕ್ಷದಿಂದ ಮಹಿಳೆಯೊಬ್ಬಳು ನಾಮನಿರ್ದೇಶನಗೊಳ್ಳುವ ಮೂಲಕ ನಾವು ಮೈಲುಗಲ್ಲನ್ನು ಮುಟ್ಟಿದ್ದೇವೆ’ ಎಂದು ಬುಧವಾರ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ರಚಾರದ ವೇಳೆ ಅವರು ಹೇಳಿದ್ದಾರೆ.

‘ಹಿಲರಿ ಅವರ ಐತಿಹಾಸಿಕ ಪ್ರಚಾರ ವೈಖರಿಯು ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡಿದೆ. ಇದು ಮಧ್ಯಮ ವರ್ಗದ ಕುಟುಂಬ ಮತ್ತು ಮಕ್ಕಳಿಗಾಗಿ ಅವರು ಜೀವನದುದ್ದಕ್ಕೂ ನಡೆಸಿದ ಹೋರಾಟದ ವಿಸ್ತರಣೆಯಾಗಿದೆ’ ಎಂದು ಜೋಶ್‌ ಅರ್ನೆಸ್ಟ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಲರಿ ಮತ್ತು ಅವರ ಎದುರಾಳಿ ಬೆರ್ನಿ ಸ್ಯಾಂಡರ್ಸ್‌ ಇಬ್ಬರಿಗೂ ಕರೆ ಮಾಡಿದ ಒಬಾಮ, ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗರಲ್ಲಿ ಉತ್ಸಾಹ ಮೂಡಿಸುವ ಪ್ರಚಾರ ನಡೆಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಒಬಾಮ ಅವರು ಸ್ಯಾಂಡರ್ಸ್‌ ಮನವಿ ಮೇರೆಗೆ ಅವರನ್ನು ಶ್ವೇತಭವನದಲ್ಲಿ ಗುರುವಾರ ಭೇಟಿಯಾಗಲಿದ್ದಾರೆ.

‘ಪೈಪೋಟಿ ಮುಂದುವರಿಯಲಿದೆ’: ಹಿಲರಿ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್‌ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಹಿಲರಿ ಅವರು 2,755 ಪ್ರತಿನಿಧಿಗಳ ಬೆಂಬಲ ಹೊಂದಿದ್ದರೆ, ಸ್ಯಾಂಡರ್ಸ್‌ ಅವರಿಗೆ 1,852 ಪ್ರತಿನಿಧಿಗಳ ಬೆಂಬಲವಿದೆ.

ಮಂಗಳವಾರದ ಚುನಾವಣೆಯಲ್ಲಿ ಮಂಟಾನ ಮತ್ತು ನಾರ್ತ್‌ ಡಕೋಟಾಗಳಲ್ಲಿ ಗೆಲುವು ಕಂಡಿರುವ ಸ್ಯಾಂಡರ್ಸ್‌ ಅವರು ಹಿಲರಿ ಎದುರು ಸೋಲೊಪ್ಪಿಕೊಳ್ಳಲು ನಿರಾಕರಿಸಿದ್ದು, ಡೆಮಾಕ್ರಟಿಕ್‌ ಅಭ್ಯರ್ಥಿಯಾಗಿ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದಾರೆ.

ಮುಂದಿನ ಮಂಗಳವಾರ ನಡೆಯಲಿರುವ ವಾಷಿಂಗ್ಟನ್‌, ವಾಷಿಂಗ್ಟನ್‌ ಡಿಸಿಗಳಲ್ಲಿನ ಪ್ರಾಥಮಿಕ ಚುನಾವಣೆಗಳನ್ನು ಗೆಲ್ಲಲು ಕಠಿಣ ಪ್ರಯತ್ನ  ಮಾಡುವುದಾಗಿ ಅವರು ಹೇಳಿದ್ದಾರೆ.