ಪುಟಗಳು

Wednesday, June 22, 2016

ಕೆಲಸದಲ್ಲಿ ಬೇಗ ಮೇಲ್ ಬರಬೇಕು ಅನ್ನೋ ಆಸೆ ನಿಮಗಿದ್ದರೆ ಅದಕ್ಕೆ ದಾರಿ ಇಲ್ಲಿದೆ | ಅಂತೆಕಂತೆ http://antekante.com/

_*ಶಾತವಾಹನರು*_

⭐ ಶಾತವಾಹನರು ಕರ್ನಾಟಕವನ್ನು ಆಳಿದ ಮೊಟ್ಟಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ.
⭐ಇವರು ಮೊದಲು ಮೌರ್ಯರ ಸಾಮಂತರಾಗಿದ್ದರು.
⭐ ಮೌರ್ಯರ ಪತನದ ನಂತರ ಸ್ವತಂತ್ರರಾಗಿ ಶಾತವಾಹನ ಸಾಮ್ರಾಜ್ಯ ಸ್ಥಾಪಿಸಿಕೊಂಡರು
⭐ *ಸಿಮುಖ*ನು ಶಾತವಾಹನ ವಂಶದ ಸ್ಥಾಪಕ
⭐ ಪೈಥಾನ ಇವರ ರಾಜಧಾನಿಯಾಗಿತ್ತು.
⭐ ಇವರು ಸುಮಾರು 460 ವರ್ಷಗಳ ಕಾಲ ಕರ್ನಾಟಕವನ್ನು ಆಳಿದರು.
⭐ ಹಾಲ, 1 ನೇ ಶಾತಕರ್ಣಿ, ಗೌತಮಿಪುತ್ರ, ವಸಿಷ್ಠ ಪುತ್ರ, ಪುಲಮಾವಿ, ಯಜ್ಞಶ್ರೀ ಶಾತಕರ್ಣಿಗಳು ಈ ವಂಶದ ಪ್ರಮುಖ ದೊರೆಗಳು.

*ಆಧಾರಗಳು*
🔸ಪುರಾಣಗಳು
🔸ಪೆರಿಪ್ಲಸ್ ನ ಗ್ರಂಥ
🔸ಗುಣಾಡ್ಯನ ಬೃಹತಕಥಾ
🔸ಹಾಲನ ಗಾತಸಪ್ತಶತಿ
🔸ಸಿಲೋನಿನ ಬೌದ್ಧ ಗ್ರಂಥಗಳು
🔸ಕನ್ನೇರಿ,ನಾನಘಾಟ,ಗಿರ್ನಾರ ಶಾಸನಗಳು
ಇನ್ನು ಅನೇಕ ಆಧಾರಗಳು ಶಾತವಾಹನರ ರಾಜಕೀಯ, ಆರ್ಥಿಕ,ಸಾಮಾಜಿಕ ಸ್ಥಿತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.

*ಶಾತವಾಹನರ ಮೂಲ*
🔹 ಇವರ ಮೂಲದ ಬಗ್ಗೆ ಹಲವಾರು ವಾದಗಳಿವೆ
🔹ಕೆಲವು ವಿದ್ವಾಂಸರು ಸಾತ ಎಂದರೆ ಕುದುರೆ ಎಂದು ಹೇಳಿ, ಶಾತವಾಹನರು ಕುದುರೆಯನ್ನು ವಾಹನವಾಗಿ ಬಳಸುತ್ತಿದ್ದರೆಂದು
🔹 ಮತ್ತೇ ಕೆಲವರು ಸಾತ ಎಂದರೆ ಮತ್ಸ್ಯ( ಮೀನು)  ಎಂದು ಹೇಳಿ, ಅವರು ಮೀನು ಹಿಡಿದು ಜೀವನ ನಡೆಸುವ ಜನರೆಂದು ವಾದಿಸಿದ್ದಾರೆ.
🔹ಕರ್ಣಿ ಎಂದರೆ ಹಡಗಿನ ಯಜಮಾನ ಎಂಬರ್ಥ ಬರುವುದರಿಂದ ಅವರು ಸಮುದ್ರ ವ್ಯಾಪಾರ ಮಾಡುತ್ತಿದ್ದರೆಂದು ಹೇಳಿದ್ದಾರೆ.
🔹ಇವರು ಆಂಧ್ರರು ಎಂದು ಆಂಧ್ರ ಭೃತ್ಯರೆಂದು,ಶಾತವಾನರ ನಾಣ್ಯಗಳು ಇವರನ್ನು ಆಂಧ್ರರೆಂದು, ಅಶೋಕನ ಶಾಸನಗಳು ಶಾತಕರ್ಣಿಗಳೆಂದು,ಆಂಧ್ರ ಭೃತ್ಯ(ಸೇವಕ) (ಅಶೋಕನ 12 ನೇ ಶಿಲಾಶಾಸನ)ಎಂದು ಹೇಳಿವೆ.

🔹🔹  *ಕನ್ನಡಮೂಲ*🔹🔹
🔺 ಕೆ ಪಿ ಜಯಸ್ವಾಲ್ ಮತ್ತು ರಾಯ್ ಚೌಧರಿಯವರು ಶಾತವಾಹನರು ಆಂಧ್ರರೆಂದು ಹೇಳುವ ಯಾವ ಆಧಾರಗಳು ಇಲ್ಲ ಎಂದು ಅವರು ಕರ್ನಾಟಕದವರೇ ಹೊರತು ಆಂಧ್ರರಲ್ಲ ಎಂದಿದ್ದಾರೆ.
🔺 ತಾಳಗುಂದಾ, ಹಾಥಿಗುಂಪಾ, ಗಿರ್ನಾರ ಶಾಸನಗಳು ಅವರನ್ನು ಶಾತವಾಹನರೆಂದು ಅವರನ್ನು ಕನ್ನಡಿಗರೆಂದು ತಾಳಗುಂದದ ಪ್ರಾಣೇಶ್ವರನ ಆರಾಧಕರೆಂದು ಹೇಳಿವೆ.
🔺ಹೀರೆಹಡಗಲಿಯಲ್ಲಿ ದೊರೆತ ಶಾಸನವು ಶಾತವಾಹನರ ಮೂಲನೆಲೆ *ಶಾತನರಹಟ್ಟಿ* (ಶಾತವಾಹನಿಹಾರ) ಅಂದರೆ ಬಳ್ಳಾರಿ ಜಿಲ್ಲೆಯ ವಾಸಿಗಳೆಂದು ತಿಳಿಸುತ್ತದೆ.
⭐ ಪ್ರಸ್ತುತವಾಗಿ ಎಲ್ಲರೂ ಒಪ್ಪುವ ವಾದ ಎಂದರೆ ಅವರು ಆಂಧ್ರರು.
⭐ ಶಾತವಾಹನರ ಮೂಲ ನೆಲೆ ಆಂಧ್ರದ ಗೋದಾವರಿ ನದಿ ತೀರದ ಔರಂಗಬಾದ್ ಜಿಲ್ಲೆಯ ಪೈಥಾನ ಅಥವಾ ಪ್ರತಿಷ್ಠಾನವಾಗಿತ್ತು. ಈಗದು ಮಹಾರಾಷ್ಟ್ರದಲ್ಲಿದೆ. ಆಗದು ಕರ್ನಾಟಕದ ವ್ಯಾಪ್ತಿಯಲ್ಲಿತ್ತು.

*ರಾಜಕೀಯ ಇತಿಹಾಸ*
📢 ಸಿಮುಖ ಶಾತವಾಹನ ವಂಶದ ಸ್ಥಾಪಕ
📢 ಹಳೆ ಹೈದರಾಬಾದಿನ ಔರಂಗಾಬಾದ ಜಿಲ್ಲೆಯ ಪೈಥಾನ ಇವರ ರಾಜಧಾನಿ.
📢 ಕನವ ಸಂತತಿಯ ಕೊನೆಯ ದೊರೆ ಸುಶರ್ಮನನ್ನು ಕೊಂದು ಸ್ವತಂತ್ರವಾಗಿ ಸುಮಾರು 23 ವರ್ಷಗಳ ಕಾಲ ರಾಜ್ಯವಾಳಿದನು.
📢 ಇವನು ದಖನನಲ್ಲಿ ಮೌರ್ಯರ ಆಧಿಪತ್ಯವನ್ನು ಕೊನೆಗಾಣಿಸಿ, ಶುಂಗರು, ಹಾಗೂ ಕಣ್ವರನ್ನು ಸೋಲಿಸಿದನು.
📢 *ನಾನಘಾಟ* ಶಾಸನ ಸಿಮುಖನನ್ನು *ರಾಯಸಿಮುಕ* ಎಂದು ವರ್ಣಿಸಿದೆ.
📢 ಜೈನ ಗ್ರಂತವೊಂದು ಸಿಮುಖನಿಗೆ *ಶಾಲಿವಾಹನ* ಎಂದು ಹೆಸರಿಸಿದರು.
📢 ನಾಸಿಕ ಶಾಸನ ಅದ್ವಿತೀಯನಾದವನೆಂದು ವರ್ಣಿಸಿದೆ. ಸಿಮುಖ(ಶ್ರೀಮುಖ)

*1 ನೇ ಶಾತಕರ್ಣಿ*
📢 ಆರಂಭ ಶಾತವಾಹನರಲ್ಲಿ ಅತ್ಯಂತ ಪ್ರಬಲ ದೊರೆ
📢 ಇವನ ರಾಣಿ ಕೊರೆಯಿಸಿದ *ನಾನಘಾಟ ಗುಹಾಶಾಸನ*ವು ಇವನ ಸಾಧನೆಗಳನ್ನು ಹೇಳುತ್ತದೆ
📢 *ನಾನಘಾಟ ಗುಹಾಶಾಸನದ* ಪ್ರಕಾರ ಶಾತಕರ್ಣಿ ಅಭಿಪ್ರಾಯ,ನಾಸಿಕ, ಪೂರ್ವ ಮಾಳ್ವ, ಬಿರಾರ, ವಿದರ್ಭ, ಹೈದರಾಬಾದು ಹಾಗೂ ಮಧ್ಯಭಾರತಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಂಧ್ಯ ಪರ್ವತದಿಂದ ಕೊಂಕಣದವರೆಗೆ ವಿಸ್ತರಿಸಿದನು.
📢 ತನ್ನ ಈ ದಿಗ್ವಿಜಯಗಳ ಜ್ಞಾಪಕಾರ್ಥ 2 ಅಶ್ವಮೇಧಯಾಗ ಹಾಗೂ ರಾಜಸೂಯ ಯಾಗ ಆಚರಿಸಿದನು.
📢 ಇವನಿಗೆ *ದಕ್ಷಿಣ ಪಥಪತಿ*, *ದಕ್ಷಿಣಪಥ  ಸಾರ್ವಭೌಮ*, *ಅಪ್ರತಿಹಥ್* ಎಂಬ ಬಿರುದುಗಳಿದ್ದವು.

*ಹಾಲ*
🔸 ಹಾಲ ಶಾಂತಪ್ರೀಯ ಅರಸ
🔸ಸಾಹಿತಿ ಮತ್ತು ವಿದ್ವಾಂಸನು ಆಗಿದ್ದನು
🔸ಹಾಲನು ಪ್ರಾಕೃತ ಭಾಷೆಯಲ್ಲಿ *ಗಥಾಸಪ್ತಶತಿ* ಎಂಬ ಶೃಂಗಾರ ಕಾವ್ಯ ರಚಿಸಿದ್ದಾನೆ(ಇದರಲ್ಲಿ 700 ಕಾವ್ಯಗಳನ್ನು ಹೊಂದಿದೆ)
🔸ಇವನ ಇನ್ನೊಂದು ಗ್ರಂಥ *ಸತ್ತಶೈ*
🔸 ಹಾಲನ ಸಮಕಾಲೀನನವನಾದ ಗುಣಾಡ್ಯನು *ಬೃಹತ್ ಕಥಾ* ಬರೆದನು.
🔸 ಲೀಲಾವತಿ ಪರಿಣಯ ಗ್ರಂಥ ಹೇಳಿರುವಂತೆ ಹಾಲನು ಸಿಲೋನನ್ನು ಗೆದ್ದು ಅಲ್ಲಿನ ರಾಜನ ಮಗಳಾದ ಲೀಲಾವತಿಯನ್ನು ವಿವಾಹವಾದನು.
🔸ಕ್ರಿ.ಶ 78 ರಲ್ಲಿ *ಶಾಲಿವಾಹನ*ಅಥವಾ *ಶಕವರ್ಷ*ದ ಸ್ಥಾಪಕ ಹಾಲ ದೊರೆ
🔸 ಬಾಣನು ತನ್ನ ಹರ್ಷಚರಿತೆಯಲ್ಲಿ ಹಾಲನ ಕೃತಿ ಮೇರು ಕೃತಿ ಎಂದು ಹೊಗಳಿದ್ದಾನೆ.

*ಗೌತಮಿಪುತ್ರ ಶಾತಕರ್ಣಿ*
🔰 ಗೌತಮಿಪುತ್ರ ಶಾತಕರ್ಣಿಯು ಶಾತವಾಹನರಲ್ಲಿ ಅತ್ಯಂತ ಪ್ರಸಿದ್ಧ ದೊರೆ.
🔰 ಕಳೆದುಹೋದ ಶಾತವಾಹನರ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸಿ, ಅವರ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ.
🔰 ಅಧಿಕಾರಕ್ಕೆ ಬಂದ ತಕ್ಷಣ ಶಕರ ಮೇಲೆ ದಂಡೆತ್ತಿ ಹೋಗಿ ಶಕರಾಜ *ನಹಪಾಣ* ಮತ್ತು ಅವನ ಅಳಿಯ *ಉಸವದತ್ತ*ರನ್ನು ಕೊಂದು ಕ್ಷತ್ರಪರನ್ನು ನಿರ್ಮೂಲನೆ ಮಾಡಿದನು.
🔰 ಶಕರಿಂದ ಸೌರಾಷ್ಟ್ರ, ಕೊಂಕಣ, ಮಹಾರಾಷ್ಟ್ರ,  ಮಾಳ್ವಗಳನ್ನು ಕಿತ್ತುಕೊಂಡನು.
🔰 ಶಕರ ನಾಣ್ಯಗಳ ಮೇಲೆ ತನ್ನ ಲಾಂಛನವನ್ನು ಮುದ್ರಿಸಿ ವಿಜಯೋತ್ಸವ ಆಚರಿಸಿದನು.
🔰 ನಾಸಿಕ ಬಳಿ ದೊರೆತಿರುವ ನಹಪಾನನ 8000 ಬೆಳ್ಳಿ ನಾಣ್ಯಗಳ ಮೇಲೆ ಶಾತವಾಹನರ ಪುನರ್  ಮುದ್ರೆ ಕಂಡುಬಂದಿರುವುದೆ ಇದಕ್ಕೆ ಸಾಕ್ಷಿ
🔰 ಗೌತಮಿಪುತ್ರನ ತಾಯಿ ಬಾಳಶ್ರೀ ಕೆತ್ತಸಿದ *ನಾಸಿಕ ಶಾಸನವು* ಇವನ ಸಾಧನೆಗಳನ್ನು ವಿವರಿಸುತ್ತದೆ.
🔰 ಇವನ ಸಾಮ್ರಾಜ್ಯವು ಉತ್ತರದಲ್ಲಿ ಸೌರಾಷ್ಟ್ರ, ಮಾಳ್ವದಿಂದ ಹಿಡಿದು ದಕ್ಷಿಣದ ಕೃಷ್ಣಾನದಿ ಅಥವಾ ಬನವಾಸಿ, ಪೂರ್ವದಲ್ಲಿ ಬಿರಾರನಿಂದ ಪಶ್ಚಿಮದ ಕೊಂಕಣದವರೆಗೂ ಹಬ್ಬಿತ್ತು.
🔰 ಅಂದರೆ ಉತ್ತರದ ವಿಂಧ್ಯ ಪರ್ವತಗಳಿಂದ ದಕ್ಷಿಣದ ಅರಬ್ಬೀ ಸಮುದ್ರ ಹಾಗೂ ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಹಬ್ಬಿತ್ತು ಹೀಗಾಗಿ ಅವನಿಗೆ *ತ್ರೈ ಸಮುದ್ರ ತೋಯಾ ಪೀತಾವಾಹನ*ಎಂಬ ಬಿರುದು ಬಂದಿತು.
🔰 *ತ್ರೈ ಸಮುದ್ರ ತೋಯಾ ಪೀತಾವಾಹನ* ಎಂದರೆ ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವಾಗಿ ಪಡೆದವನು.
🔰 *ಪಶ್ಚಿಮ ಪ್ರಭು*, *ವಿಂಧ್ಯ ವಸಡು*, *ಪ್ರತಿಷ್ಠಾನ ಪ್ರಭು*, *ಶಾತವಾಹನ ಕುಲಪ್ರತಿಷ್ಠಾಪಕ* ಎಂಬ ಬಿರುದುಗಳಿದ್ದವು.
🔰 ಗೌತಮಿಪುತ್ರ ಶಾತಕರ್ಣಿಯು ತನ್ನನ್ನು ಬ್ರಾಹ್ಮಣರ ಏಕಮೇವ ರಕ್ಷಕನೆಂದು ಕರೆದುಕೊಂಡಿದ್ದಾನೆ.

*ವಶಿಷ್ಠಪುತ್ರ ಪುಲಮಾವಿ*

🎈ಗೌತಮಿಪುತ್ರ ಶಾತಕರ್ಣಿಯ ನಂತರ ಅವನ ಮಗ ವಶಿಷ್ಠಪುತ್ರ ಪುಲಮಾವಿ( 2ನೇ ಪುಲಮಾವಿ) ಅಧಿಕಾರಕ್ಕೆ ಬಂದನು.
🎈 ಇವನು ಆಂಧ್ರಪ್ರದೇಶವನ್ನು ಗೆದ್ದು *ಆಂಧ್ರರಾಜ* ಎಂದು ಕರೆಯಿಸಿಕೊಂಡನು
🎈 ಇವನಿಗೆ ದಕ್ಷಿಣ ಪಥೆಶ್ವರ ಎಂಬ ಬಿರುದು ಬಂದಿತು
🎈 ಇವನು *ಅಮರಾವತಿ* ಬೌದ್ಧ ಸ್ತಂಭವನ್ನು ನಿರ್ಮಿಸಿದುದಲ್ಲದೇ, ನವನಗರವನ್ನು ನಿರ್ಮಿಸಿ *ನವನಗರ ಸ್ವಾಮಿ* ಎಂಬ ಬಿರುದು ಧರಿಸಿದನು.
🎈 ನವನಗರ ಇವನ ರಾಜಧಾನಿಯಾಗಿತ್ತು
🎈 ಗಿರ್ನಾರ ಶಾಸನದ ಪ್ರಕಾರ ಈತ ಉಜ್ಜಯಿನಿಯ ಶಕರಾಜ ರುದ್ರರಾಮನಿಂದ ಎರಡು ಬಾರಿ ಸೋತನು. ಪುಲಮಾವಿ ಒಂದನೇ ರುದ್ರರಾಮನ ಮಗಳನ್ನು ವರಿಸಿದ್ದನು.

*ನಾಣ್ಯಗಳು*
🍭 ಶಾತವಾಹನರು ದೀನಾರ, ಸುವರ್ಣ ಎಂಬ ಚಿನ್ನದ ನಾಣ್ಯಗಳು
🍭 ಕುಷಾಣ ಮತ್ತು ಕರ್ಷಪಣ ಎಂಬ ಬೆಳ್ಳಿ ನಾಣ್ಯಗಳು
🍭 ದ್ರಮ್ಯ, ಗದ್ಯಾಣ, ಪಣಗಣ್ಯ, ಎಂಬ ತಾಮ್ರ ಮತ್ತು ಸೀಸದ ನಾಣ್ಯಗಳನ್ನು ಚಲಾವಣೆಗೆ ತಂದರು

*ಕೃಷಿ*
⚡ ಕೃಷಿ ಬಹು ಜನರ ವೃತ್ತಿಯಾಗಿತ್ತು
⚡ ಭೂಕಂದಾಯವು ರಾಜ್ಯದ ಮುಖ್ಯ ವರಮಾನದ ಮೂಲವಾಗಿತ್ತು
⚡ ಒಟ್ಟು ಉತ್ಪನ್ನದ 1/6. ಭಾಗ ಸರ್ಕಾರಕ್ಕೆ ಕಂದಾಯವಾಗಿ ಕೊಡುತ್ತಿದ್ದರು
⚡ ಭತ್ತ ಮತ್ತು ಗೋಧಿ ಆಗಿನ ಮುಖ್ಯ ಬೆಳೆಗಳಾಗಿದ್ದವು
⚡ ಕೃಷ್ಣಾ ಮತ್ತು ಗೋದಾವರಿ ನದಿಗಳು ಕೃಷಿಗೆ ನೀರು ಒದಗಿಸುತ್ತಿದ್ದವು

*ಧಾರ್ಮಿಕ ಸ್ಥಿತಿ*
🔺 ಇವರು ಪರಮತ ಸಹಿಷ್ಣರು
🔺 ಬ್ರಾಹ್ಮಣ, ಶೈವ, ವೈಷ್ಣವ, ಬೌದ್ಧ ಧರ್ಮಗಳಿಗೆ ಆಶ್ರಯ ನೀಡಿ *ಚತುತ್ಸಮಯ ಸಮುದ್ಧರಣ* ಎಂಬ ಕೀರ್ತಿಗೆ ಪಾತ್ರಾರಾದರು.
🔺ನಾಸಿಕ ಶಾಸನು ಗೌತಮೀಪುತ್ರ ಶಾತಕರ್ಣಿಯನ್ನು *ಏಕಬ್ರಾಹ್ಮಣ* ಎಂದು ಕರೆದಿದೆ.
🔺ನಾನಘಾಟ ಶಾಸನು ಬ್ರಾಹ್ಮಣರಿಗೆ ಗೋದಾನ ಮತ್ತು 20 ಯಜ್ಞಗಳನ್ನು ಆಚರಿಸಿದ ವಿಷಯವಿದೆ
🔺 ಮಹಾಸಾಂಘೀಕ ಬೌದ್ಧ ಪಂಥ ಜನಪ್ರಿಯವಾಗುತ್ತಿವೆ
#karnataka_tet
*ಸಾಹಿತ್ಯ*
🔸ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳು ಶಾತವಾಹನರ ಪೋಷಣೆಯಲ್ಲಿದ್ದವು.
🔸ಪ್ರಾಕೃತ ಅವರ ಅಧಿಕೃತ ರಾಜ್ಯಭಾಷೆಯಾಗಿತ್ತು
🔸 ಜೈನ ಪಂಡಿತನಾದ ಕುಂದಾಚಾರ್ಯನಿಂದ ಪ್ರಭೃತಸಾರ,ರಾಯನಸಾರ, ಪ್ರವಚನಸಾರ, ಸಮಯಸಾರ, ದ್ವಾದಶಾನುಪ್ರೇಕ್ಷ,ಎಂಬ ಕೃತಿ ರಚಿಸಿದರು.
🔸 ಹಾಲನ ಪ್ರಾಕೃತ ಭಾಷೆಯಲ್ಲಿ *ಗಥಾಸಪ್ತಶತಿ* ಶೃಂಗಾರ ಕಾವ್ಯವನ್ನು ಬರೆದನು.
🔸 ಲೀಲಾವೈ(ಲೀಲಾವತಿ ಪರಿಣಯ) ಗ್ರಂಥವು ಹಾಲನ ಸೋಲಿನ ದಂಡಯಾತ್ರೆಯನ್ನು ತಿಳಿಸುತ್ತದೆ
🔸ಗುಣಾಡ್ಯನು ಪೈಶಾಚಿ ಭಾಷೆಯಲ್ಲಿ *ಬೃಹತಕತಾ*
🔸 ನಾಗಾರ್ಜುನ ಸಂಸ್ಕೃತಿದಲ್ಲಿ *ಶತಸಹಸ್ರಿಕ* ಮತ್ತು *ಮಾಧ್ಯಮಿಕ ಸೂತ್ರ*ಗಳನ್ನು ರಚಿಸಿದರು.
🔸ಕ್ಷೇಮೆಂದ್ರನು *ಕಥಾಸರಿತ್ಸಾಗರ*ವನ್ನು ರಚಿಸಿದನು

ಕರ್ನಾಟಕ

ಯಾವ ಜಿಲ್ಲೆಗೆ ಯಾರ ಉಸ್ತುವಾರಿ? ಇಲ್ಲಿದೆ ವಿವರ

ಭಾನುವಾರದಂದು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾತೆಗಳ ಹಂಚಿಕೆ ಮಾಡಿದ ತರುವಾಯ ಈಗ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಯಾಗಿದ್ದಾರೆಂಬ ವಿವರ ಇಲ್ಲಿದೆ ನೋಡಿ.

ಕಾಗೋಡು ತಿಮ್ಮಪ್ಪ- ಶಿವಮೊಗ್ಗ, ಪ್ರಮೋದ್ ಮಧ್ವರಾಜ್- ಉಡುಪಿ, ಪ್ರಿಯಾಂಕ್ ಖರ್ಗೆ- ಯಾದಗಿರಿ, ಹೆಚ್.ವೈ. ಮೇಟಿ- ಬಾಗಲಕೋಟೆ, ಹೆಚ್.ಕೆ. ಪಾಟೀಲ್- ಗದಗ, ಕೆ.ಜೆ. ಜಾರ್ಜ್- ಬೆಂಗಳೂರು ನಗರ, ಎಂ.ಬಿ. ಪಾಟೀಲ್- ವಿಜಯಪುರ, ತನ್ವೀರ್ ಸೇಠ್- ರಾಯಚೂರು.

ಸಂತೋಷ್ ಲಾಡ್- ಬಳ್ಳಾರಿ, ಎ. ಮಂಜು- ಹಾಸನ, ಡಾ. ಶರಣ ಪ್ರಕಾಶ್ ಪಾಟೀಲ್- ಕಲಬುರ್ಗಿ, ಟಿ.ಬಿ. ಜಯಚಂದ್ರ- ತುಮಕೂರು, ಹೆಚ್. ಆಂಜನೇಯ- ಚಿತ್ರದುರ್ಗ, ರಮೇಶ್ ಜಾರಕಿಹೊಳಿ- ಬೆಳಗಾವಿ, ವಿನಯ್ ಕುಲಕರ್ಣಿ- ಧಾರವಾಡ, ಆರ್.ವಿ.ದೇಶಪಾಂಡೆ- ಉತ್ತರ ಕನ್ನಡ, ರಮೇಶ್ ಕುಮಾರ್- ಕೋಲಾರ, ಎಂ. ಸೀತಾರಾಂ- ಕೊಡಗು, ಬಸವರಾಜ ರಾಯರೆಡ್ಡಿ- ಕೊಪ್ಪಳ, ಎಸ್.ಎಸ್. ಮಲ್ಲಿಕಾರ್ಜುನ್- ದಾವಣಗೆರೆ, ಡಿ.ಕೆ. ಶಿವಕುಮಾರ್- ಮಂಡ್ಯ ಮತ್ತು ರಾಮನಗರ, ಹೆಚ್.ಎಸ್.

ಮಹಾದೇವ ಪ್ರಸಾದ್- ಚಾಮರಾಜನಗರ, ರುದ್ರಪ್ಪ ಲಮಾಣಿ- ಹಾವೇರಿ, ಈಶ್ವರ್ ಖಂಡ್ರೆ- ಬೀದರ್, ಕೃಷ್ಣ ಭೈರೇಗೌಡ- ಬೆಂಗಳೂರು ಗ್ರಾಮಾಂತರ ಹಾಗೂ ರಾಮಲಿಂಗಾರೆಡ್ಡಿ- ಚಿಕ್ಕ ಬಳ್ಳಾಪುರ ಉಸ್ತುವಾರಿ ಸಚಿವರುಗಳಾಗಿದ್ದಾರೆ.