ಗಾಂಧೀಜಿಯವರ ಮೇಲೆ ನಾನು ಗುಂಡು ಹಾರಿಸಿದ ಕ್ಷಣದಲ್ಲಿಯೇ ನನ್ನ ಜೀವನವು ಸಹ ಅಂತ್ಯಗೊಂಡಿತು. ಆ ಕ್ಷಣದಿಂದ ನಾನು ತನ್ಮಯಾವಸ್ಥೆಯಲ್ಲಿರುವಂತೆಯೂ ಧ್ಯಾನಾವಸ್ಥೆಯಲ್ಲಿರುವಂತೆಯೂ ದಿನಗಳನಳನ್ನು ಕಳೆಯುತ್ತಿದ್ದೇನೆ.ಗಾಂಧೀಜಿಯವರು ದೇಶದ ಸಲುವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಎಂಬುವದನ್ನು ನಾನು ಒಪ್ಪಿಕೊಳ್ಳಲು ಸಿದ್ದನಿದ್ದೇನೆ. ಅವರ ದೇಶ ಸೇವೆಗೆ ಮತ್ತು ಅವರಿಗೆ ನಾನು ತಲೆ ಬಾಗಿಸುತ್ತೆನೆ. ಆದರೆ, ಈ ದೇಶ ಸೇವಕನು ಜನರನ್ನು ಮೋಸಗೊಳಿಸಿ ದೇಶವನ್ನು ವಿಭಜನೆ ಮಾಡಲು ಯಾವ ಹಕ್ಕನ್ನು ಹೊಂದಿರುವದಿಲ್ಲ.ನನಗೆ ಯಾವುದೆ ರೀತಿಯಲ್ಲಿ ದಯೆ ತೋರಿಸಬೇಕೆಂದು ನಾನು ಇಚ್ಛಿಸುವದಿಲ್ಲ. ಇದೂ ಅಲ್ಲದೇ, ಬೇರೆ ಯಾರಾದರು ನನ್ನ ಪರವಾಗಿ ನನಗೆ ದಯೆ ತೋರಿಸುವಂತೆ ಬೇಡಿಕೊಳ್ಳಬೇಕೆಂದು ನಾನು ಆಶಿಸುವದಿಲ್ಲ.ತನ್ನ ದೇಶಕ್ಕೆ ನಿಷ್ಠೆ ತೊರಿಸುವದು ಪಾಪವೆಂದು ಗಣಿಸಲ್ಪಟ್ಟರೆ, ನಾನು ಅಂಥ ಪಾಪ ಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಅದು ಪುಣ್ಯದ ಕೆಲಸವಾಗಿದ್ದರೆ ಅಂಥ ಶ್ರೇಯಸ್ಸನ್ನು ನಾನು ವಿನಮ್ರನಾಗಿ ಅರ್ಹತೆಯೊಡನೆ ಸ್ವೀಕರಿಸುತ್ತೆನೆ.ಎಲ್ಲ ಕಡೆಗಳಿಂದರೂ ನನ್ನ ಕೃತ್ಯವು ಖಂಡಿಸಲ್ಪಟ್ಟಿದರೂ ಸಹ, ನನ್ನ ಕೃತ್ಯದ ನೈತಿಕತೆಯ ವಿಷಯವಾಗಿ ನನ್ನ ವಿಶ್ವಾಸವು ಅಲುಗಾಡದೇ ನಿಶ್ಚಲವಾಗಿದೆ.ಭವಿಷ್ಯತ್ತಿನ ಒಂದು ದಿನ ಪ್ರಾಮಾಣಿಕರಾದ ಇತಿಹಾಸದ ಲೇಖಕರು ನನ್ನ ಕೃತ್ಯವನ್ನು ತೂಗಿ ನೋಡಿ ಅದರ ನಿಜವಾದ ಬೆಲೆಯನ್ನು ಕಂಡುಹಿಡಿಯುತ್ತಾರೆ ಎಂಬುವದರಲ್ಲಿ ನನಗೆ ಸಂಶಯವಿಲ್ಲ.
- ನಾಥೂರಾಮ ಗೋಡ್ಸೆ