ಈ ಬಾರಿ ಯಾರೂ ಸಹ ದೀಪಾವಳಿಗೆ ಪಟಾಕಿಗಳನ್ನು ಖರೀದಿಸಬೇಡಿ..
ಕಾರಣ ಇಷ್ಟೇ... ನಾವು ಖರೀದಿಸುವ ಎಲ್ಲಾ ತರಹದ ಪಟಾಕಿಗಳು ಉತ್ಪಾದನೆಯಾಗುವುದು *ತಮಿಳುನಾಡಿನಲ್ಲಿ*..
ಈ ರೀತಿ ಪಟಾಕಿ ಹಚ್ಚುವುದನ್ನು ನಿಲ್ಲಿಸಿದರೆ ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ನಮ್ಮ ಜೀವಜಲ ಕಿತ್ತುಕೊಂಡ ತಮಿಳಿಗರಿಗೆ ಬೃಹತ್ ನಷ್ಟ ಆಗುತ್ತದೆ..
ಆದ್ದರಿಂದ ಸರಿಯಾಗಿ ಯೋಚಿಸಿ ಕೆಚ್ಚೆದೆಯ ಕನ್ನಡಿಗರೇ...
ಸ್ವಾಭಿಮಾನಿ ಕನ್ನಡಿಗರಾಗಿ.. ಪಟಾಕಿ ನಿಷೇಧಿಸಿ..
ಪ್ರತಿಯೊಬ್ಬ ನಿಜವಾದ ಕನ್ನಡಿಗನೂ ಶೇರ್ ಮಾಡಿ..
ಪುಟಗಳು
Thursday, September 15, 2016
ಪಟಾಕಿ
(ಸೆಪ್ಟೆಂಬರ್-16) "ವಿಶ್ವ ಓಝೋನ್ ದಿನ"
ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ
"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ.
ಹೀಗಾಗಿ ಕಷ್ಟ-ಸಂಕಷ್ಟ,
ಕೀಟ-ಕೋಟಲೆಗಳ ಭಯವೇಕೆ?
ಸಂಕಷ್ಟ ಬಂದರೆ
ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು." ಎಂಬ ಮಾತಿನಂತೆ
ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ.
“If earth is our mother,
then Ozone is our father”
ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ,
ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ.
ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು.
ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!!
ಭೂಮಿ ಬದುಕಲು
ಓಝೋನ್ ಬೇಕೇ-ಬೇಕು.
ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ,
ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ.
ಇತಿಹಾಸ:
ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್,
ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ಕ್ರಿಸ್ಟಿಯನ್ ಫ್ರೆಡ್ರಿಕ್ ಸ್ಕಾನ್ಬೀನ್ ಎಂಬಾತನಿಂದ 1840ರಲ್ಲಿ ಸೂಚಿಸಲ್ಪಟ್ಟಿತು.
ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ 'ಓಝೀನ್'
(ವಾಸನೆ ಬೀರುವುದು) ಎಂಬ ಗ್ರೀಕ್ ಕ್ರಿಯಾಪದದ ಹೆಸರನ್ನು ಅವನು ಓಝೋನ್ಗೆ ಇರಿಸಿದ.
ಓಝೋನ್ಗೆ ಸಂಬಂಧಿಸಿದ ಸೂತ್ರವಾದ O3 ಎಂಬುದು,
ಜಾಕ್ವೆಸ್-ಲೂಯಿಸ್ ಸೋರೆಟ್ ಎಂಬಾತನಿಂದ 1865ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್ಬೀನ್ ಎಂಬಾತನಿಂದ 1867ರಲ್ಲಿ ದೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.
1985ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು.ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸಕಾ೯ರದ ಮುಖ್ಯಸ್ಥರು ಒಟ್ಟಾಗಿ ಸೇರಿ
1987ರ ಸೆ.16ರಲ್ಲಿ ವಿಯೆನ್ನಾದಲ್ಲಿ ಓಜೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು.
ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧದ
"ಮಾಂಟ್ರೆಲ್ ಪ್ರೊಟೊಕಾಲ್"ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಜೋನ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ಹಾಗೂ 1994 ಸೆಪ್ಟೆಂಬರ್ 16 ರಂದು ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಿ,
1987ರ ಸೆಪ್ಟೆಂಬರ್ 16ರಂದು ಮಾಂಟ್ರಿಯಲ್ ಪ್ರೋಟೊಕಾಲ್ಗೆ ಸಹಿಹಾಕಿರುವುದನ್ನು ನೆನಪಿಸಲು,
ಸೆಪ್ಟೆಂಬರ್ 16 ಅನ್ನು
"ವಿಶ್ವ ಓಝೋನ್ ದಿನ" ಆಚರಿಸಲು ತೀರ್ಮಾನಿಸಿತು.
ಇದರ ಉದ್ದೇಶ ಓಜೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.
“Ozone is like your Heart,
If broken,
then you are Finish.” ಎಂಬ ಮಾತಿನಂತೆ ಓಝೋನ್ ಪದರ
250 ರಿಂದ 305 ಡಾಬ್ಸನ್ ಯುನಿಟ್ಟಿಗೆ ನಷ್ಟು ದಪ್ಪ (ಗಟ್ಟಿ) ಇರಬೇಕು. ಆದರೆ ಈ ಹಿಂದೆ ಓಝೋನ್ ಪದರದಲ್ಲಿ ರಂಧ್ರವಾಗಿದೆ, ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಾಬ್ಸನ್ ನಷ್ಟಿತ್ತು.
2016 ಸಾಲಿನ ಘೋಷವಾಕ್ಯ(Theme):
"Ozone and climate: Restored by a world united"
ಅಂದರೆ ವಿಶ್ವವೇ ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವುದು.
ಆಮ್ಲಜನಕದ ಮೂರು ಪರಮಾಣುಗಳು ಸೇರಿ ಓಝೋನ್ (03) ಆಗುತ್ತದೆ.
ವಾತಾವರಣದ ಮೇಲೆ ಭೂಮಿಯನ್ನು ಆವರಿಸಿರುವ ಓಝೋನ್ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಓಝೋನ್ ಪದರು ಭೂಮಿಯನ್ನು ಆವರಿಸಿದೆ.
ಓಝೋನ್ ಪದರಿನ ಮುಖ್ಯವಾದ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.
ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(O2) ಮೇಲೆ ಬಿದ್ದಾಗ ಆಮ್ಲಜನಕ ಎರಡು ಅಣುಗಳಾಗಿ (O+O) ಬೇರ್ಪಡುತ್ತವೆ.
ಬೇರ್ಪಡದೇ ಇದ್ದ ಆಮ್ಲಜನಕದ(O2) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಜೋನ್ (O3) ಆಗುತ್ತದೆ.
ಓಝೋನ್ ಪದರು ನಾಶವಾಗಲು ಮುಖ್ಯವಾದ ಕಾರಣಗಳು:
*ಪ್ರಿಜ್ ಮತ್ತು ಕೋಲ್ಡ ಹೌಸಗಳಲ್ಲಿ ಉಪಯೋಗಿಸುವ ChloroFluoroCarbons (CFC's) ಮತ್ತು ವಾಯುಮಾಲಿನ್ಯ,
CFCನ ಒಂದು ಅಣುವು
ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ.
ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.
*ಬಾಹ್ಯಾಕಾಶ ಸಂಶೋಧನೆ, ಉಪಗ್ರಹಗಳ ಉಡಾವಣೆಗೆ ಹಾರಿಬಿಡುವ ರಾಕೆಟ್ಗಳಿಂದ ಹಾನಿ.
*ಬೃಹತ್ ಕೈಗಾರಿಕೆ ಮತ್ತು ವಾಹನಗಳ ಹೊಗೆ.
ಓಝೋನ್ ಪದರದ ನಾಶದಿಂದಾಗುವ ಪರಿಣಾಮಗಳು:
ಅತಿಯಾದ ಮಳೆ,
ಅತಿಯಾದ ಬರ,
ಸಮುದ್ರ ಮಟ್ಟದ ಏರಿಕೆ,
ನದಿ ಪ್ರವಾಹಗಳು,
ಒಣಗುತ್ತಿರುವುದು & ಬರಿದಾಗುವ ಕಾಡುಗಳು,
ಭೂತಾಪ ಏರಿಕೆ,
ಅತಿಯಾದ ಚಳಿ,
ಅತಿಯಾದ ಶಾಖ,
ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಇದರಿಂದಾಗಿ ಶಹರದಲ್ಲಿ ಉಸಿರಾಡಲು ಶುದ್ಧವಾದ ಗಾಳಿಸಿಗುವುದೇ ಕಷ್ಟವಾಗಿದೆ. ಮತ್ತು ಮನುಷ್ಯನು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಭೂಮಿಯ ಮೇಲಿರುವ ಓಝೋನ್ ಪದರು ನಾಶವಾದರೆ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ.
ಆಗ ಭೂಮಿಯ ಮೇಲೆ ಅತಿಯಾದ ಶಾಖ, ಉಂಟಾಗುತ್ತದೆ.
ಭೂಮಿಯ ಮೇಲೆ ಇರುವ ಉತ್ತರ,
ದಕ್ಷಿಣ ಧೃವದಲ್ಲಿ ಹಾಗೂ ಭೂಮಿಯ ಮೇಲೆ ಇರುವ ಎಲ್ಲ ಮಂಜುಗಡ್ಡೆ ಕರಗಿ ನೀರಾಗಿ ನದಿಗಳ ಮುಖಾಂತರ ಸಮುದ್ರವನ್ನು ಸೇರುತ್ತವೆ.
ಆಗ ಸಮುದ್ರದ ಮಟ್ಟವು 113 ಅಡಿಗಳಷ್ಟು ಏರುತ್ತದೆ.
ಸಮುದ್ರ ಮಟ್ಟ ಇಷ್ಟು ಏರಿದರೆ ಭೂಮಿಯು ನೀರಿನಿಂದ ಆವರಿಸುತ್ತದೆ.
ಈ ದಿನವನ್ನೇ ನಾವು "ಡೂಮ್ಸಡೇ" ಎಂದು ಕರೆಯುತ್ತೇವೆ.
ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ.
ಓಝೋನ ಪದರನ್ನು ರಕ್ಷಣೆ ಮಾಡುವ ವಿಧಾನಗಳು :
ಓಜೋನ್ ರಕ್ಷಣೆಗಾಗಿ ಇಷ್ಟು ಮಾಡಬೇಕು
* ಕೃಷಿಯಲ್ಲಿ ಕೀಟನಾಶಕವಾಗಿ ಬಳಸುತ್ತಿರುವ ಮಿಥೈಲ್ ಬ್ರೋಮೈಡ್ಗೆ ನಿಷೇಧ
* ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ
* ಸಿಎಫ್ಸಿ ಇಲ್ಲದ ಶೀತಲ ಯಂತ್ರಗಳು, ಹವಾ ನಿಯಂತ್ರಣದ ಉಪಕರಣಗಳ ಬಳಕೆ.
* ಭೂಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ,
* ಅರಣ್ಯನಾಶ ಮಾಡಬಾರದು
* ಹೆಚ್ಚೆಚ್ಚು ಸಸ್ಯ ಬೆಳೆಸುವುದು
* ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.
* ಪೆಟ್ರೋಲ್, ಡಿಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು.
* ರೆಪ್ರಿಜರೇಟರ್ ಹಾಗೂ ಕೋಲ್ಡ್ ಹೌಸಗಳಲ್ಲಿ CFCs ಅಣುವಿನ ಬದಲು Hydro ChloroFluoroCarbon (HCFCs) ರಾಸಾಯಿನಿಕ ಉಪಯೋಗಿಸಬೇಕು.
ನಾವೆಲ್ಲರೂ ಮಾಡಲೇಬೇಕಾದ ಸಂಕಲ್ಪ:
“Save ozone layer else you may lie in no zone”
"ಓಝೋನ್ ಇಲ್ಲದ ಭೂಮಿಯು
ಮೇಲ್ಛಾವಣಿ ಇಲ್ಲದ ಮನೆಯಂತೆ"
ಆದ್ದರಿಂದ
‘ವಿಶ್ವ ಓಝೋನ್ ದಿನ’ ದಂದು ನಾವು ಪ್ರತಿಜ್ಞೆ ಗೈಯೋಣ
“ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸುತ್ತೇವೆ.
ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ, ಹಾಗೆ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡುತ್ತೇವೆ”.ಎಂದು ಸಂಕಲ್ಪ ಮಾಡೋಣ, ಆ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಗಳಾಗೋಣ.
ಇಂದು(ಸೆಪ್ಟೆಂಬರ 15) "ಅಭಿಯಂತರರ (ಎಂಜಿನಿಯರ್ಸ್) ದಿನ"
ಇಂಜಿನಿಯರ್ ಕ್ಷೇತ್ರದಲ್ಲಿ
ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು
ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು(ಸೆಪ್ಟೆಂಬರ್ ೧೫) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.
ಸರ್.ಎಂ.ವಿ ಯವರ
ಸಂಕ್ಷಿಪ್ತ ಪರಿಚಯ:
*ಪೂಣ೯ ಹೆಸರು:
ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ
*ಜನನ:
ಸಪ್ಟೆಂಬರ್ 15, 1860
*ಊರು:
ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ, ಕರ್ನಾಟಕ, ಭಾರತ
*ತಂದೆ: ಶ್ರೀನಿವಾಸ ಶಾಸ್ತ್ರಿ
*ತಾಯಿ: ವೆಂಕಟ ಲಕ್ಷ್ಮಮ್ಮ
*ಅಭ್ಯಸಿಸಿದ ವಿದ್ಯಾಪೀಠ:
ಪುಣೆ ಸಿವಿಲ್ ಇಂಜಿನಿಯರಿಂಗ್ ಕಾಲೇಜ್
*ವೃತ್ತಿ: ಇಂಜಿನಿಯರ್
*ಮರಣ:
ಏಪ್ರಿಲ್ 14 1962
(ತೀರಿದಾಗ ವಯಸ್ಸು 101)
ಬೆಂಗಳೂರು
ಸರ್ ಎಂ.ವಿ. ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ಮೈಸೂರು ಸಂಸ್ಥಾನದ ದಿವಾನರಾಗಿದ್ದವರು.
*ಬಾಲ್ಯ, ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ:
ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯನವರು ಜನಿಸಿದ್ದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
*ಇಂಜಿನಿಯರ್ ಆಗಿ ವೃತ್ತಿ:
ವಿಶ್ವೇಶ್ವರಯ್ಯನವರು ನಂತರ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ೧೮೮೪ರಲ್ಲಿ. ಇದಾದ ಮೇಲೆ ಭಾರತೀಯ ನೀರಾವರಿ ಕಮಿಷನ್ ಇಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ ಅನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್.
ದಿವಾನರಾಗಿ:
'ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್'
೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.
*ಗೌರವಗಳು:
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು. -
The Knight Commander of The Indian Empire medal
*ಭಾರತ ರತ್ನ ಪದಕ:
೧೯೫೫ ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು.
ಈಗ ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ.
ಭಾರತ ದೇಶದಲ್ಲಿ ಮೊದಲ EDUSAT ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಇದರ ಮುಖ್ಯ ಉದ್ದೇಶ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವುದು. ಕರ್ನಾಟಕದಲ್ಲಿನ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗವಾಗಿವೆ.
ವಿಶ್ವೇಶ್ವರಯ್ಯನವರು ವಿಶ್ವಕ್ಕೇ
ಮಾದರಿಯಾಗಿರುವ ಮಹಾಮಾನವ