ಪುಟಗಳು

Wednesday, July 26, 2017

ಇಂದು 18ನೇ ಕಾರ್ಗಿಲ್ ವಿಜಯ್ ದಿವಸ್

ಇವತ್ತು ಜುಲೈ 26. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯಪತಾಕೆ ಹಾರಿಸಿದ ದಿನ.

ಭಾರತೀಯ ಸೇನೆ ಇಂದು 18ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸ್ತಿದೆ. 1999ರ ಜುಲೈ 26ರಂದು 60 ದಿನಗಳ ಕಾರ್ಗಿಲ್ ಕದನ ಅಂತ್ಯವಾಗಿತ್ತು.

ಹೀಗಾಗಿ ಭಾರತೀಯ ಸೇನೆ ಈ ದಿನವನ್ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದೆ.

Tuesday, July 25, 2017

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ

ದೇಶದ 14 ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಇಂದು ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಅಧಿಕಾರಾವಧಿ ಮುಕ್ತಾಯವಾಗಿದ್ದು, ರಾಷ್ಟ್ರಪತಿ ಭವನದಲ್ಲಿ ಅವರು ವಿದಾಯದ ಭಾಷಣ ಮಾಡಿದ್ದಾರೆ.ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಪ್ರಮಾಣ ವಚನ ಬೋಧಿಸಲಿದ್ದಾರೆ.ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಮೂರೂ ಸೇನಾಪಡೆಗಳ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

Monday, July 24, 2017

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||

ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಸಾಹಿತ್ಯ – ದ. ರಾ. ಬೇಂದ್ರೆ

Thursday, July 20, 2017

ರಾಮನಾಥ್ ಕೋವಿಂದ

ಭಾರತದ ೧೪ನೇ ರಾಷ್ಟ್ರಪತಿಯಾಗಿ ಎನ್ ಡಿ ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆ. ಇದೇ ೨೫ರಂದು ಪ್ರಮಾಣ ವಚನ

Wednesday, July 19, 2017

ಸಹಾಯಕ ಪ್ರಾಧ್ಯಾಪಕರ ಅಂತಿಮ ಪಟ್ಟಿ ಪ್ರಕಟ.!!

ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು ಶಿಕ್ಷಣ ಇಲಾಖೆ.!!

ಬೆಂಗಳೂರು: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪದವಿ ಕಾಲೇಜಿನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗಿರುವ 1,489 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಇಲಾಖೆ ಮಂಗಳವಾರ ಪ್ರಕಟಿಸಿದೆ. ಸರಕಾರವು ಅಂತಿಮ ಪಟ್ಟಿ ಪ್ರಕಟಿಸಲು ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನೊಂದ ಅಭ್ಯರ್ಥಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಬೆಳಗ್ಗೆ ನಗರದ ಬಹುಮಹಡಿ ಕಟ್ಟಡದ ಎದುರು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಅನಂತರ ಎಂಎಲ್ಸಿ ಪುಟ್ಟಣ್ಣ ಸಮೇತವಾಗಿ, ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ಭೇಟಿ ನೀಡಿ, ತತ್ಕ್ಷಣವೇ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿದರು.

ಆಯುಕ್ತರು ರಜೆಯಲ್ಲಿದ್ದಾರೆ. ತತ್ಸಮಾನ ಅಧಿಕಾರಿಯ ಸಹಿಯ ಅನಂತರ ಪ್ರಕಟಿಸುವುದಾಗಿ ಕಚೇರಿಯ ಅಧಿಕಾರಿಗಳು ಭರವಸೆ ನೀಡಿದರು. ಅಪರಾಹ್ನ 4 ಗಂಟೆಯ ವರೆಗೂ ಪ್ರಕಟಿಸದೇ ಇದ್ದುದರಿಂದ ಪುಟ್ಟಣ್ಣ ಮತ್ತು ಅಭ್ಯರ್ಥಿಗಳು ಆಯುಕ್ತರ ಕಚೇರಿಗೆ ಪ್ರವೇಶಿಸಿ, ಪಟ್ಟಿ ಪ್ರಕಟಿಸಲೇ ಬೇಕು ಎಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದ ಅಧಿಕಾರಿಗಳು ಸರಕಾರದ ಆದೇಶದಂತೆ ಅಂತಿಮಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದರು.

ಒಟ್ಟು 2,160 ಹುದ್ದೆಯಲ್ಲಿ ಭಾಷೆ, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಶಾಸ್ತ್ರದ 1,489 ಹುದ್ದೆಯ ಪಟ್ಟಿಯನ್ನು ಪ್ರಕಟಿಸಿ, ಆ. 1ರಿಂದ 5ರ ತನಕ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ನಡೆಸುವುದಾಗಿಯೂ ಹೇಳಿದ್ದಾರೆ. ವಿವಿಧ ವಿಷಯಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕೌನ್ಸೆಲಿಂಗ್ ಹಾಜರಾಗಬೇಕಾದ ದಿನಾಂಕವನ್ನು ತಿಳಿಸಲಾಗುತ್ತದೆ ಮತ್ತು ಸ್ಪಷ್ಟ ದಾಖಲೆ ನೀಡದ ಸುಮಾರು 600 ಅಭ್ಯರ್ಥಿಗಳ ಅಂತಿಮ ಪಟ್ಟಿ ಅನಂತರ ಪ್ರಕಟಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಅತಿಥಿ ಉಪನ್ಯಾಸಕರ ನೇಮಕಕ್ಕೆ ತಾತ್ಕಾಲಿಕ ತಡೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರಕಾರಿ ಪದವಿ ಕಾಲೇಜಿಗೆ ವಿವಿಧ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ನೇಮಕದ ಅಂತಿಮ ಪಟ್ಟಿ ಸಿದ್ಧಗೊಂಡಿರುವ ಹಿನ್ನೆಲೆಯಲ್ಲಿ, ಅವರಿಗೆ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಇದಾದ ಅನಂತರ ಉಳಿಯುವ ಖಾಲಿ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರದ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕಿರುವುದರಿಂದ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ, ಮುಂದಿನ ಮೂರು ದಿನಗಳ ಕಾಲ ಬೇರ್ಯಾವ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳದಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಒಂದು ತರಗತಿಗೆ ಇನ್ಟೆಕ್ 100 ವಿದ್ಯಾರ್ಥಿ ಇರಬೇಕು ಎಂದು ಇಲಾಖೆ ಹೊರಡಿಸಿರುವ ಆದೇಶವನ್ನು 60 ವಿದ್ಯಾರ್ಥಿಗಳಿಗೆ ಇಳಿಸಬೇಕು. ಈ ಸಂಬಂಧ ಆಯುಕ್ತರೊಂದಿಗೆ ಮಾತುಕತೆ ಮಾಡಿದ್ದೇವೆ. ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇನ್ಟೆಕ್ ಕಡಿಮೆ ಮಾಡಿದರೆ, ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರಿಗೂ ಹಾಗೂ ಅತಿಥಿ ಉಪನ್ಯಾಸಕರಿಗೂ ಸಮಸ್ಯೆ ಇಲ್ಲ.
ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ

Thursday, July 13, 2017

Wednesday, July 12, 2017

Ninna mouna

https://youtu.be/TvPK-zpY0I8

Sunday, July 09, 2017

ಗುರು ಪೂರ್ಣಿಮೆಯ ಮಹತ್ವವೇನು ಗೊತ್ತೇ?

   
           ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ.
ಹಿಂದೂ ಕ್ಯಾಲೆಂಡರ್‌ನಲ್ಲಿ ಗುರು ಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರು ಅಥವಾ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ನಿಜವಾದ ಗುರುವು ವ್ಯಕ್ತಿ ಮತ್ತು ಮಹಾನ್ ಶಕ್ತಿಗೆ ಒಂದು ಸಂಪರ್ಕ ಅಥವಾ ಕೊಂಡಿ ಇದ್ದಂತೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಶಿಕ್ಷಕರಿಗೆ ಗೌರವ ತೋರುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ನಿಮ್ಮನ್ನು ಶಿಕ್ಷಣದ ಮೂಲಕ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಿದ ಗುರುಗಳಿಗೆ ಈ ದಿನವನ್ನು ಅರ್ಪಿಸಬೇಕು. ಹಿಂದೂ ತಿಂಗಳ ಆಷಾಢ ಮಾಸ (ಜುಲೈ -ಆಗಸ್ಟ್) ದಂದು ಪೂರ್ಣ ಚಂದ್ರನ ದಿನದಂದು ಗುರುವಿಗೆ ವಿಶೇಷ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.
ವ್ಯಾಸರ ನೆನಪಿಗಾಗಿ ಈ ದಿವವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು, 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ ವೇದವ್ಯಾಸರು.
ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಸಾರನಾಥದಲ್ಲಿ ಪ್ರಥಮ ಉಪದೇಶವನ್ನು ಬುದ್ಧನು ಈ ದಿನ ಮಾಡಿದರೆಂದು ಪ್ರತೀತಿ ಇದೆ.
ಗುರು ಪೂರ್ಣಿಮೆಯ ಮಹತ್ವ ಮತ್ತು ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಮುಂದೆ ಓದಿ.
ಗುರುಪೂರ್ಣಿಮೆಯ ಆಚಾರಗಳು
ಹಿಂದೂ ಆಧ್ಯಾತ್ಮಿಕ ಗುರುಗಳನ್ನು ಅವರ ಜೀವನ ಮತ್ತು ಕಲಿಸುವಿಕೆಗಳನ್ನು ಸ್ಮರಿಸಿಕೊಂಡು ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆಯನ್ನು ನೆರವೇರಿಸಲಾಗುತ್ತದೆ.
ಹೂವು ಮತ್ತು ಕೆಲವೊಂದು ಉಡುಗೊರೆಗಳನ್ನು ಅವರ ಗೌರವಕ್ಕಾಗಿ ಈ ದಿನ ಅರ್ಪಿಸಲಾಗುತ್ತದೆ. ಅನುಯಾಯಿಗಳಿಗಾಗಿ ಪ್ರಸಾದ ರೂಪದಲ್ಲಿ ಹಬ್ಬವನ್ನು ಆಚರಿಸುವವರು ಈ ದಿನವನ್ನು ಆಚರಿಸುತ್ತಾರೆ. ಅಂದರೆ ಅನುಯಾಯಿಗಳಿಗೆ ಪ್ರಸಾದ ಮತ್ತು ಫಲ ಪುಷ್ಪಗಳನ್ನು ಅರ್ಪಿಸುವುದಾಗಿದೆ.ಗುರುಗಳ ಪಾದಗಳನ್ನು ತೊಳೆಯುವುದು ಗುರುವಿನ ಕೃಪೆ ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿದೆ. ಬೌದ್ಧ ಭಿಕ್ಷುಗಳು ಈ ದಿನದಂದು ಯೋಗವನ್ನು ಮಾಡುತ್ತಾರೆ ಇದರಿಂದಾಗಿಯೇ ಅರಿಷಡ್ವರ್ಗಗಳ ವಿರುದ್ಧ ಅವರಿಗೆ ಹೋರಾಡಲು ಸಾಧ್ಯವಾಗಿರುವುದು.

ಗುರುಪೂರ್ಣಿಮೆಯ ಮಹತ್ವ:-
                      *******
ಹಿಂದೂಗಳಿಗಾಗಿ, ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ.ಬೇಸಿಗೆಯ ತಾಪದಿಂದ ತಂಪಿನ ಅನುಭೂತಿಯನ್ನು ನಮಗೆ ನೀಡುವ ಮಾನ್‌ಸೂನ್ ಅಥವಾ ಮಳೆಗಾಲ ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಪ್ರಾರಂಭಿಸಲು ಮುಖ್ಯವಾದ ದಿನಗಳಾಗಿವೆ. ಆದ್ದರಿಂದ ಗುರುಪೂರ್ಣಿಮೆಯಂದು ಸ್ವಲ್ಪ ಹೊತ್ತನ್ನು ಗುರುವಿಗಾಗಿ ಮೀಸಲಿಟ್ಟು ನಿಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ದ ಆ ಮಹಾನ್ ಚೇತನಕ್ಕೆ ನಮಸ್ಕರಿಸಿ.
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ.ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನುವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.
ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.

ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.
ಹಿಂದೂ ಪುರಾಣ
ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು.

ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ರಿಗ್ವೇದ, ಯಜುರ್ವೇದ,ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಷಂಪಾಯನ, ಜೈಮಿನಿಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.
ಹಿಂದೂ ಮತ್ತು ಬೌದ್ಧ ಆಚರಣೆಗಳು
ಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಶ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ.ಸಾಂಪ್ರದಾಯಿಕವಾಗಿ ಚಾತುರ್ಮಾಸದ ಪದ್ಧತಿಗಳಲ್ಲಿ ಒಂದಾದ ಗುರು ಪೂರ್ಣಿಮೆಯ ಆಂಗವಾಗಿ ವ್ಯಾಸ ಪೂಜೆಮಾಡುತ್ತಿರುವ ಸನ್ಯಾಸಿ.
ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಎರ್ಪಿಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನುಪ್ರಸಾದದ ಜೊತೆ ಶಿಶ್ಯರಿಗೆ ಹಂಚಲಾಗುತ್ತದೆ.

ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಶ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.
[೬] ಈ ದಿನ ಗುರುಗಳಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ.
[೭] ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ.
ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.
ಭಾರತ ಶೈಕ್ಷಣಿಕ ವೃಂದದಲ್ಲಿ ಅಚರಣೆ
ಭಾರತ ಶೈಕ್ಷಣಿಕ ವೃಂದದಲ್ಲಿ ಈ ಹಬ್ಬವನ್ನು ಧರ್ಮಾತೀತವಾಗಿ ಆಚರಿಸಲಾಗುತ್ತದೆ. ಹಲವಾರು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿತವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ ಮತ್ತು ಹಿಂದಿನ ವಿದ್ವಾಂಸರನ್ನು ನೆನೆಸುತ್ತಾರೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ

Monday, July 03, 2017

ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿ: ದ್ವಿತೀಯ ಪಿಯುಸಿ ಆದವರಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಗ್ರೇಡ್ ಡಿ ಹುದ್ದೆಗಳ ಭರ್ತಿಗಾಗಿ ಸೆಪ್ಟೆಂಬರ್ 4 ರಿಂದ 7ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯು ನಡೆಯಲಿದೆ.

ಹುದ್ದೆಗಳ ವಿವರ ಮತ್ತು ಸಂಖ್ಯೆಯನ್ನು ನಮೂದಿಸಿಲ್ಲವಾದರು ಅರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಜುಲೈ 15 ರೊಳಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಅರ್ಜಿ ಸಲ್ಲಿಸಲ್ಲಿಚ್ಛಿಸಿರುವ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮಿಸಲಾತಿ ವ್ಯಾಪ್ತಿಯಲ್ಲಿ ಬರುವ ಪರಿಷಿಷ್ಟ ಜಾತಿ/ಪರಿಷಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷ ಹಾಗ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕರೂ.100/- ಆನ್-ಲೈನ್ ಮೂಲಕ ಅಥವಾ ಎಸ್.ಬಿ.ಐ ಚಲನ್ ಮೂಲಕ ಶುಲ್ಕ ಪಾವತಿಸಬಬಹುದಾಗಿದೆ.
ಪರಿಷಿಷ್ಟ ಜಾತಿ/ಪರಿಷಿಷ್ಟ ಪಂಗಡ/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳು

ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಧಾರವಾಡ, ಮೈಸೂರು. ತಿರುವನಂತಪುರ, ಕೊಚ್ಚಿ, ತ್ರಿಶೂರ್, ಕೋಝಿಕೋಡ್,

ಪರೀಕ್ಷಾ ವಿವರ

ಜನರಲ್ ಇಂಟೆಲಿಜೆನ್ಸ್ ಅಂಡ್ ರೀಸನಿಂಗ್-50 ಅಂಕಗಳುಜೆನರಲ್ ಅವೇರ್ನೆಸ್ -50 ಅಂಕಗಳುಇಂಗ್ಲಿಷ್ ಲ್ಯಾಂಗ್ವೇಜ್ ಅಂಡ್ ಕಾಂಪ್ರೆಹೆನ್ಷನ್ -100 ಅಂಕಗಳುಒಟ್ಟು 200 ಅಂಕಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇರಲಿದ್ದು, 200 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಭ್ಯರ್ಥಿಗಳಿಗೆ ಉತ್ತರಿಸಲು 2 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.

ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೆನೋಗ್ರಾಫಿಗೆ ಸಂಬಂಧಿಸಿದಂತೆ ಕೌಶಲ ಪರೀಕ್ಷೆ ನಡೆಸಿ ಅರ್ಹರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು

ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಕ:15-07-2017

ಆಫ್-ಲೈನ್ ಚಲನ್ ಪಡೆಯಲು ಕೊನೆಯ ದಿನಾಂಕ:15-07-2017

ವೈದ್ಯರ ದಿನ:

ಭಾರತರತ್ನ ಡಾ.ಬಿದನ್ ಚಂದ್ರ ರಾಯ್
ಅವರ ನೆನಪಿನಲ್ಲಿ ಜು.1ರಂದು ದೇಶದೆಲ್ಲೆಡೆ
ರಾಷ್ಟ್ರೀಯ ವೈದರ ದಿನಾಚರಣೆ' ನಡೆಯುತ್ತಿದೆ. ಈ
ದಿನ ಮಹಾವೈದ್ಯ ಬಿಸಿ ರಾಯ್ ಅವರ ಜಯಂತಿ ಹಾಗೂ
ವರ್ಧಂತಿ(1-07-1882 To 1-07-1962) ದಿನವಾಗಿರುವುದು ವಿಶೇಷ.
ಪಶ್ಚಿಮ ಬೆಂಗಾಳದ 2ನೇ ಮುಖ್ಯಮಂತ್ರಿಯೂ ಆಗಿದ್ದ
ಡಾ.ಬಿದನ್ ಚಂದ್ರ ರಾಯ್ ಅವರು ಮಹಾತ್ಮಾ
ಗಾಂಧೀಜಿ ಅವರ ಆಪ್ತ ಮಿತ್ರ ಹಾಗೂ ಪರ್ಸನಲ್
ಡಾಕ್ಟರ್ ಆಗಿದ್ದವರು.



ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ
ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿ ಪಡೆದ
ನಂತರ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ 14 ವರ್ಷ
ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ
ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ
ಚಿಕಿತ್ಸೆಯನ್ನು ನೀಡುತ್ತಿದ್ದರು.
ಡಾ.ಬಿ.ಸಿ.ರಾಯ್ ಅವರ ಜನಸೇವೆಯನ್ನು ಪರಿಗಣಿಸಿ
ಜನಸಾಮಾನ್ಯರು ಕೃತಜ್ಞತೆಯನ್ನು ಸಲ್ಲಿಸುವ ದಿನ.



ಶಾಲೆ, ಕಾಲೇಜು, ಕಚೇರಿ, ಇವೆಲ್ಲಕ್ಕೆ ಹೋಗದಿದ್ದರೂ, ಊಟವನ್ನೇ ಮಾಡದೆ ಉಪವಾಸ ಇರುತ್ತೇನೆ ಎಂದರೂ ಔಷದ ಸೇವಿಸದೆ ಬದುಕುವವರು ಕಡಿಮೆ. ಹೀಗಾಗಿ ವೈದ್ಯರ ಸ್ಮರಣೆ ನಾರಾಯಣ ಸ್ಮರಣೆಗಿಂತ ಹೆಚ್ಚಾಗಿಯೇ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಗಳೇ ಆದರೂ ವೈದ್ಯರು ಅಂದಿನ ದಿನಗಳಲ್ಲಿ ಪ್ರೀತಿಯಿಂದ ರೋಗಿಗಳ ಶುಶ್ರೂಷೆ ಮಾಡುತ್ತಿದ್ದುದು, ನಿರಂತರವಾಗಿ ಬರುತ್ತಿದ್ದವರನ್ನು ಆತ್ಮೀಯ ಗೆಳೆಯರಂತೆ ಕಾಣುತ್ತಿದ್ದುದು ಇವೆಲ್ಲಾ ಸ್ಮರಣೆಗೆ ಬರುತ್ತವೆ. ಅಯ್ಯೋ ಅನಾರೋಗ್ಯದಿಂದ ಜಂಘಾಬಲವೇ ಉಡುಗಿಹೋಯ್ತು ಅಂದಾಗ ಮರುಜೀವ ಕೊಟ್ಟರು ಪುಣ್ಯಾತ್ಮ ಎಂಬ ಭಾವ ಕೂಡಾ ಹೃದಯದಲ್ಲಿ ನೆಲೆಸುತ್ತದೆ.
ಇಂದು ಕೂಡಾ ಹೊಸ ಡಾಕ್ಟರುಗಳ ಬಗೆಗೆ ನಿರ್ಮಿತವಾಗಿರುವ ಚರ್ವಿತಚವರ್ಣ ಹಾಸ್ಯಗಳನ್ನು ಹೊರತು ಪಡಿಸಿ ನೋಡಿದಲ್ಲಿ ನಾವು ಭೇಟಿ ಮಾಡುವ ಡಾಕ್ಟರುಗಳಲ್ಲಿ ಬಹುತೇಕರು ನಮ್ಮನ್ನು ಪ್ರೀತಿಯಿಂದಲೇ ಕಾಣುವ ಅನುಭವವಾಗುತ್ತದೆ. ಆಸ್ಪತ್ರೆಗಳಲ್ಲಿ ಕಾಣುವ ನೋವು, ಗದ್ದಲಗಳ ಮಧ್ಯದಲ್ಲಿ, ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸ ಬೇಕಾದ ಅವಶ್ಯಕತೆಗಳಲ್ಲಿ ಇಂತಹ ಸಂಯಮ, ಪ್ರೀತಿ ಇದೆಲ್ಲಾ ಹೇಗೆ ಸಾಧ್ಯ ಎಂದು ಅಚ್ಚರಿಯೂ ಆಗುತ್ತದೆ. ನನ್ನ ಜೀವನದಲ್ಲೂ ಅಸಾಮಾನ್ಯ ಸದ್ಗುಣಗಳ ವೈದ್ಯರು ಮತ್ತು ದಾದಿಯರನ್ನು ಕಂಡು ಮೂಖವಾಗಿದ್ದೇನೆ.
ಇಂದಿನ ವೈದ್ಯ ವೃತ್ತಿಯಲ್ಲಿರುವ ಜನ ನಗುವುದಿಲ್ಲ ಎಂದೇನೂ ಇಲ್ಲ. ಇಂದು ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಮದುವೆ ಮನೆಯಲ್ಲಿ ಕಾಣುವ ಫಳ ಫಳ ವಸ್ತ್ರಗಳನ್ನು ಸಮವಸ್ತ್ರವಾಗಿ ಧರಿಸಿ ಮದುವೆ ಮನೆಯಲ್ಲಿ ಓಡಾಡುವಂತೆಯೇ ನಗು ನಗುತ್ತಾ ಓಡಾಡುತ್ತಾರೆ. ಇಂದು ನಗು ಕೂಡಾ ಒಂದು ದೊಡ್ಡ ‘ಪ್ರೊಫೆಷನ್ನು’! ಹಾಗೆಂದ ಮಾತ್ರಕ್ಕೆ ಉತ್ತಮ ಮನೋಗುಣದ ಜನ ವೈದ್ಯ ವೃತ್ತಿಯಲ್ಲಿ ಇಲ್ಲ ಎಂಬುದು ನನ್ನ ಮಾತಲ್ಲ. ಇಂದಿನ ಕಾಲದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಡೊನೇಶನ್, ವೈದ್ಯ ವಿದಾರ್ಥಿಯೊಬ್ಬ ಸರಿಯಾಗಿ ಉತ್ತಮ ಕೆಲಸ ಪಡೆದುಕೊಳ್ಳುವವರೆಗೆ ದಿನ ನಿತ್ಯ ಹೊಸ ಹೊಸದಾಗಿ ಪದವಿಗಳನ್ನು ಅಂಟಿಸಿಕೊಳ್ಳಲಿಕ್ಕೆ ವಿವಿಧ ವಿಶ್ವವಿದ್ಯಾಲಯಗಳ ಕಡೆಗೆ ಎಡತಾಕಬೆಕಾದ ಅನಿವಾರ್ಯತೆ ಇವೆಲ್ಲಾ ವೈದ್ಯ ವೃತ್ತಿಗೆ ಬರುತ್ತಿರುವವರಿಗೆ ಸುಮಾರ್ ಒಂದು ಒಂದೂವರೆ ದಶಕದ ಕಾಲದವರೆಗೆ ನಿದ್ದೆ ಕೆಡಿಸುತ್ತದೆ ಎಂಬುದನ್ನು ನಾವು ಇಂದಿನ ದಿನದಲ್ಲಿ ಕಾಣುತ್ತಿದ್ದೇವೆ. ಅಂತೆಯೇ ಇಂದಿನ ದಿನಗಳಲ್ಲಿ ವೈದ್ಯ ಮನೋಭಾವನೆಯ ಗುಣಮಟ್ಟ ಕಡಿಮೆಯಾಗಿರುವುದು ನಮಗೆಲ್ಲರಿಗೂ ತಿಳಿದಿರುವುದು ನಿಜವಾದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಅನೇಕ ಯುವ ಡಾಕ್ಟರುಗಳು ವೃತ್ತಿ ಧರ್ಮದಲ್ಲಿ ಉತ್ತಮ ನಡವಳಿಕೆಯನ್ನೇ ತೋರುತ್ತಾರೆ. ವೈಪರೀತ್ಯಗಳಿವೆ ನಿಜ. ಎಲ್ಲ ರಂಗಗಳಲ್ಲೂ ವೈಪರೀತ್ಯಗಳುಂಟು. ದುರದೃಷ್ಟವಶಾತ್ ವೈಪರೀತ್ಯಗಳೇ ನಮ್ಮ ಸಹಜ ಬದುಕಾಗಿರುವ ದುರದೃಷ್ಟ ಕಾಲದಲ್ಲಿ ನಾವು ಬದುಕುತ್ತಿದ್ದೇವೆ.
ನಮಗೆ ಇಂದಿರುವ ಆತಂಕ ಡಾಕ್ಟರುಗಳು ಎಂಬ ಸೇವಾಕಾಂಕ್ಷಿ ಅಥವಾ ವೃತ್ತಿ ಔನ್ನತ್ಯಾಕಾಂಕ್ಷಿಗಳ ಕುರಿತಾದದ್ದಲ್ಲ. ನಮ್ಮ ಆತಂಕ ವೈದ್ಯಕೀಯ ಎಂಬ ವ್ಯಾಪಾರೀ ವಲಯದ ಕುರಿತದ್ದಾಗಿದೆ. ಹಿಂದಿನ ಕಾಲದಲ್ಲಿ ಶಿಕ್ಷಣ ಹೇಗೋ ಆಗುತ್ತದೆ ಮಗಳ ಮದುವೆಗೆ ಇಷ್ಟು ದುಡ್ಡು ತೆಗೆದಿಡು ಎಂಬ ಮನೋಧರ್ಮ ಇರುತ್ತಿತ್ತು. ಸ್ವಲ್ಪ ಕಾಲದ ನಂತರದಲ್ಲಿ ಮಗಳ ಮದುವೆಗೆ ಇಷ್ಟು, ಮಕ್ಕಳ ಶಿಕ್ಷಣಕ್ಕೆ ಇಷ್ಟು ಎಂಬ ಭಾವ ಪ್ರಾರಂಭವಾಯ್ತು. ಇಂದಿನ ಸಮಯದಲ್ಲಿ ಇವೆಲ್ಲವನ್ನೂ ಮೀರಿಸಿದ್ದು ಶಸ್ತ್ರ ಚಿಕಿತ್ಸೆಗಾಗಿ ಹಣ ಮೀಸಲಿಡು ಎಂಬುದು! ಎಷ್ಟು ಹಣ ಎಂಬುದನ್ನು ಆ ಬ್ರಹ್ಮನಿಗೂ ನಿಗಧಿ ಪಡಿಸಲು ಸಾಧ್ಯವಿಲ್ಲವಾಗಿದೆ. ಒಳ್ಳೆಯ ಕೆಲಸದಲ್ಲಿದ್ದು ಕೆಲಸ ಇರುವಾಗಲೇ ಕಾಯಿಲೆ ಬಂತೋ ಬಚಾವು. ಯಾವುದೋ ಕಂಪೆನಿ ಬೋಳಿಸಿಕೊಂಡು, ಯಾವುದೋ ವಿಮೆ ಕಂಪೆನಿ ತನ್ನ ಲಾಭವನ್ನು ಸ್ವಲ್ಪ ಆಸ್ಪತ್ರೆಗಳಿಗೆ ವರ್ಗಾಯಿಸಿ, ಒಂದಷ್ಟು ಖರ್ಚು–ಓಡಾಟ-ಪೇಪರ್ ಸಹಿಗಳಲ್ಲಿ ತಾತ್ಕಾಲಿಕ ಶುಶ್ರೂಷೆ ಮುಗಿಯಿತು, ಹೋಗಿ (ಮತ್ತೆ) ಬರ್ತೇನೆ ಅಂತ ಎಲ್ಲರಿಗೂ ಟಾ ಟಾ ಹೇಳುತ್ತಿರಬಹುದು. ಆದರೆ ನಿವೃತ್ತಿಯಾಗುತ್ತೇನೆ ಎನ್ನುವ ಪ್ರಾಣಿ ಪಾತ್ರ “ದೇವರೇ ನನಗೆ ಆಸ್ಪತ್ರೆ ಮಾತ್ರ ಬೇಡ, ಬೇಕಿದ್ರೆ ಡೈರಕ್ಟ್ ಟಿಕೆಟ್ಟು ಕೊಟ್ಟುಬಿಡು ಅನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ”. ವಿಮೆ ಇದ್ದವ ಹೋಟೇಲಂತಹ ವಾತಾವರಣದಲ್ಲಿ ಶುಶ್ರೂಷೆ ಪಡೆಯುತ್ತಾನೆ. ಮನೆಯಲ್ಲಿದ್ದರೆ ರೆಸ್ಟ್ ಸಿಗುವುದಿಲ್ಲ, ಆಸ್ಪತ್ರೆಗೇ ದಾಖಲಾಗುತ್ತೇನೆ ಎಂಬಂತಹ ಜನರ ದಂಡನ್ನು ಕೂಡಾ ನಮ್ಮಲ್ಲಿ ಕಾಣುತ್ತಿದ್ದೇವೆ. ಆದರೆ ವಿಮೆ ಇಲ್ಲದಂತಹವ ಆಸ್ಪತ್ರೆಯ ವಾಸದ ಕುರಿತು ಚಿಂತಿಸುವಾತ ಮಾತ್ರ ವ್ಯಕ್ತಿ ತನ್ನ ರಕ್ತದ ಒತ್ತಡಕ್ಕಿಂತ ಜೇಬಿನ ಮೇಲಿನ ಒತ್ತಡದ ಬಗ್ಗೆಯೇ ಹೆಚ್ಚು ಚಿಂತಾಕ್ರಾಂತನಾಗಿರುತ್ತಾನೆ, ದುಡ್ಡೂ ಇಲ್ಲದವ “ಇಷ್ಟೊಂದು ಆಸ್ಪತ್ರೆ ಇದೆ, ಇಲ್ಲಿ ನನ್ನನ್ನು ಅಡ್ಮಿಟ್ ಮಾಡಿಕೊಳ್ಳುವವರಾದರೂ ಉಂಟೆ” ಎಂದು ಯೋಚಿಸುವುದಷ್ಟೇ ಭಾಗ್ಯ.
ಹಿಂದಿನ ದಿನಗಳಲ್ಲಿ ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬಂದಿದ್ರೆ, ಅಯ್ಯೋ ಅವರಿಗೆ ಹೀಗಾಯ್ತಲ್ಲ ಎಂದು ಹೃದಯದಲ್ಲಿ ಸಹಾನುಭೂತಿ ತುಂಬಿರುತ್ತಿತ್ತು. ಈಗ ಈ ಆಸ್ಪತ್ರೆ ಎಂಬ ವ್ಯವಸ್ಥೆ ಹೇಗೆ ಹೇಗೆ ನಮ್ಮನ್ನು ದೋಚುತ್ತೋ ಎಂಬ ಹೆದರಿಕೆಯಲ್ಲೇ ಮನೆಯವರ ಜಂಘಾಬಲ ಉಡುಗಿ ಹೋಗಿರುತ್ತೆ. ಯಾರಾದ್ರೂ ಆಸ್ಪತ್ರೆಯಲ್ಲಿ ಹೋಗಿಬಿಟ್ರು ಅಂದ್ರೆ, ನೀವು ಹೇಳಿರೋ ಇಂಟೆನ್ಸಿವ್ ಕೇರ್ ಎಂಬ ಭೂತದ ಲಕ್ಷಾಂತರ ಬಿಲ್ಲು ಕಟ್ಟೋಕೆ ನಮ್ಮ ಕೈಲಾಗೋಲ್ಲ ನೀವೇ ಏನು ಬೇಕಾದರೂ ಮಾಡಿಕೊಳ್ಳಿ ಎಂಬ ದಿನಗಳು ಹತ್ತಿರವಾಗುವ ಲೋಕದಲ್ಲಿ ನಾವಿದ್ದೇವೆ. ಬಹಳಷ್ಟು ಜನ ಅಂತಹ ಬಿಲ್ಲನ್ನು ಹೇಗೋ ಸಾಲ ಸೋಲ ಮಾಡಿ ಕಟ್ಟುತ್ತಿದ್ದಾರೆ ನಿಜ. ಆದರೆ ಆ ಭಾರದ ವ್ಯಥೆಯ ಪರಿಣಾಮಗಳಿಂದ ತಾವೂ ಆಸ್ಪತ್ರೆಯ ಹಾಸಿಗೆಗೆ ರಿಸರ್ವೇಶನ್ ಮಾಡಿಸಿಕೊಳ್ಳುತ್ತಿದ್ದಾರೆ.
ಇಂದು ಆರೋಗ್ಯ ವಿಮೆ ಎಂಬುದು ಬದುಕಿನ ಒಂದು ದೂಡ್ಡ ವ್ಯಂಗ್ಯವಾಗಿ ಪರಿಣಮಿಸುತ್ತಿದೆ. ಉದಾಹರಣೆಗೆ ನಮಗಿರುವ ವಿಮೆ ಹೇಳುತ್ತದೆ. ನೋಡು ನಿನಗೆ ಕಾಯಿಲೆ ಬರಲಿ ಆದರೆ ನಿನಗೆಷ್ಟೇ ದೊಡ್ಡ ರೋಗ ಬಂದರೂ ಇಷ್ಟಕ್ಕೆ ಮೇಲೆ ಕೊಡುವುದಿಲ್ಲ ಅಂತ. ಅಂದರೆ ದೇವ್ರೇ ಕಾಯಿಲೆ ಕೊಡು ಆದ್ರೆ ದಯವಿಟ್ಟು ನನಗಿರುವ ಇನ್ಶೂರೆನ್ಸ್ ಲಿಮಿಟ್ಟಲ್ಲಿ ಮಾತ್ರ ಕೊಡು ಅಂತ ಆಗಾಗ ಹಣ್ಣು ಕಾಯಿ ಒಡೆಸುತ್ತಿರಬೇಕು. ಹಣ್ಣು ಕಾಯಿ ಒಡೆಸುವ ಖರ್ಚು ನಿಮ್ಮ ದಂತ ಚಿಕಿತ್ಸೆ, ಮೊಗದ ಮೊಡವೆ ಚಿಕಿತ್ಸೆಗಳಂತೆ ವಿಮೆ ವ್ಯಾಪ್ತಿಗೆ ಬರದೆ, ಅದನ್ನು ಮೀರಿದ ಕಾಸ್ಮೆಟಿಕ್ಸ್ ಸರ್ಜರಿ ಪರಿಧಿಗೆ ಬರುವಂತದ್ದು ಎಂಬುದು ಕೂಡಾ ನೆನಪಿರಲಿ. ಆಸ್ಪತ್ರೆಗೆ ಮೊದಲ ಬಾರಿಗೆ ಹೋದಾಗ ರಿಜಿಸ್ಟ್ರೇಷನ್ ಮಾಡಿದಾಗ ಅದಕ್ಕೆ ವಿಮೆ ಇಲ್ಲ. ಆ ಗುರುತಿನ ಚೀಟಿ ತಯಾರಾಗುವವರೆಗೆ ಕಾಯಬೇಕಾದದ್ದು ಮಾತ್ರ ತಪ್ಪುವುದಿಲ್ಲ. ಕಾಯಿಲೆ ಬರಿಸಿಕೊಂಡಿದ್ದಕ್ಕೆ ಉಂಟಾಗುವ ಹಲವು ಶಿಕ್ಷೆಗಳಲ್ಲಿ ಇದೂ ಒಂದು. ವೈದ್ಯರ ಭೇಟಿಗೆ ನೀಡುವ ಕನ್ಸಲ್ಟೆನ್ಸಿಗೆ ವಿಮೆ ಇರುವುದಿಲ್ಲ. ಒಂದೇ ವಾರದಲ್ಲಿ ಮತ್ತೊಮ್ಮೆ ನಿಮಗೆ ಆರೋಗ್ಯ ಕೆಟ್ಟು ಡಾಕ್ಟರ್ ನೋಡಲು ಬಂದರೆ ಭೇಟಿ ಉಚಿತ. ಡಾಕ್ಟರ್ ಕೈ ಹಿಡಿದು ಶಾಸ್ತ್ರ ಮಾಡಿದ ಮೇಲೆ ರಕ್ತ ಮತ್ತು ನಿತ್ಯವಿಧಿಗಳ ತಪಾಸಣೆ, ಎಕ್ಸ್ ರೆ, ತಲೆ ನೋವಿದ್ದರೂ ಸ್ಕಾನಿಂಗ್ ಇವೆಲ್ಲಾ ವಿಮೆಗೆ ಸೇರುತ್ತದೆ. ಆದ್ದರಿಂದ ಜೇಬಿನ ಮೇಲಿನ ಪರಿಣಾಮವಿಲ್ಲದೆ ಆಸ್ಪತ್ರೆಯಲ್ಲಿ ಉಚಿತ ವಿಹಾರ ಮಾಡಬಹುದು. ಹಾಲಿಡೇಸ್, ವೀಕೆಂಡ್ ಮತ್ತು ರಜಾ ತೆಗೆದುಕೊಂಡ ದಿನ ಏನು ಮಾಡುವುದು ಎಂದು ಚಿಂತಿಸುವ ಅಗತ್ಯವಿರುವುದಿಲ್ಲ. ನಂತರ ಈ ಮಾತ್ರೆ ತೊಗೊಳ್ಳಿ ಅಂತ ಪ್ರಿಸ್ಕ್ರಿಪ್ಷನ್ ಬರುತ್ತೆ. ಅದರಲ್ಲಿ ದಿನಕ್ಕಿಷ್ಟು ಇಷ್ಟು ದಿನಕ್ಕೆ ಅಂತಿರುತ್ತೆ. ಆದರೆ ಫಾರ್ಮೆಸಿಯಲ್ಲಿ ಕೊಡುವುದೆಲ್ಲಾ ಪೊಟ್ಟಣ ಲೆಖ್ಖದಲ್ಲಿ. ನಮಗೆ ಬೇಕಿರೋದು ನಾಲ್ಕಿದ್ದರೂ ಪೊಟ್ಟಣದಲ್ಲಿ ಹತ್ತಿರುತ್ತದೆ. ಈ ಔಷದಕ್ಕೆ ಶೇಕಡಾ ಇಪ್ಪತ್ತೋ ಮೂವತ್ತೋ ನಾವು ಕೊಡಬೇಕು. ಅಂದರೆ ಔಷದದ ಬೆಲೆ 500 ಅಂತಿಟ್ಟುಕೊಳ್ಳಿ. 500ಕ್ಕೆ ಔಷದ ಬರುತ್ತಾ ಅಂತ ನಗಬೇಡಿ ಅದಕ್ಕಿಂತ ದೊಡ್ಡ ಲೆಖ್ಖ ಬರೋಲ್ಲ ಅದಕ್ಕೆ ಕಡಿಮೆ ಬರೆದಿದ್ದೇನೆ. ಈ ಐನೂರರಲ್ಲಿ ಸುಮಾರು ನೂರರಿಂದ ನೂರೈವತ್ತು ನಾವೇ ತೆತ್ತಬೇಕು. ಅಂದರೆ ನಮಗೆ ಬೇಕಿದ್ದ ಮಾತ್ರೆಗಳ ಖರ್ಚನ್ನೆಲ್ಲಾ ನಾವೇ ಕೊಟ್ಟ ಹಾಗಾಯ್ತು, ಮಾತ್ರೆ ಉತ್ಪಾದಿಸುವ ಸಂಸ್ಥೆಯ ಹೆಚ್ಚಳ ಮಾತ್ರೆಗಳೆಲ್ಲಾ ವಿಲೇವಾರಿ ಆದಂತಾಯ್ತು. ವಿಮೆ ಕಂಪೆನಿ ಮತ್ತು ಆಸ್ಪತ್ರೆಗಳು ನಮ್ಮನ್ನು ಅಲ್ಲಿ ಇಲ್ಲಿ ಸುತ್ತಿಸಿ ನಾವು ನಿಮ್ಮನ್ನು ನೋಡಿಕೊಳ್ಳುತ್ತಿದ್ದೇವೆ ಎಂಬ ಭ್ರಮೆ ಹುಟ್ಟಿಸಿ ತಮ್ಮ ವ್ಯಾಪಾರವನ್ನು ತಮ್ಮ ನಡುವಿರುವ ಒಪ್ಪಂದ ಸಂಬಂಧಗಳನ್ನು ವೃದ್ಧಿಸಿಕೊಂಡಂತೆ ಆಯ್ತು. ಇನ್ನು ನಾವು ಒಳರೋಗಿಗಳಾಗಿ ವಿಮೆ ಸೌಲಭ್ಯ ಪಡೆಯೂವುದೇ ಆದಲ್ಲಿ, ವಿಮೆ ಕಂಪೆನಿಗೆ ನಮಗೆ ದೇವರಾಣೆಗೂ ಕಾಯಿಲೆ ಬಂದಿತ್ತು ಅಂತ ನಂಬಿಸಿ ಅವರ ಬಳಿ ಒಂದು ಚೂರು ಹಣ ಪಡೆಯುವ ಪರಿಶ್ರಮದಲ್ಲಿ ಮತ್ತಷ್ಟು ಕಾಯಿಲೆಗಳು ನಮ್ಮನ್ನು ಆಶ್ರಯಿಸಿರುತ್ತವೆ. ನಾವು ಪಡೆದ ಹಣಕ್ಕಿಂತ ಹೆಚ್ಚಿನ ಓಡಾಟದ ಖರ್ಚು ನಮಗಾಗಿರುತ್ತದೆ.
ನಮಗೆ ಮನೆಯಲ್ಲಿರುವ ಬಂಧುಗಳ ಆರೋಗ್ಯದ ಚಿಂತೆಗಿಂತ, ಯಾವ ಸಮಯದಲ್ಲಿ ಏನಾಗುತ್ತೋ, ಅವರನ್ನು ನೋಡಿಕೊಳ್ಳುವುದು ಹೇಗೋ, ಅದಕ್ಕೆ ತಗಲುವ ವೆಚ್ಚ ನಮಗೆ ಭರಿಸಲು ಸಾಧ್ಯವೇ; ಆಸ್ಪತ್ರೆಯಲ್ಲಿ ಹಿಂದೆ ಎಲ್ಲವೂ ಸಾಧಾರಣ ಬಿಳಿಯ ಬಟ್ಟೆಯಲ್ಲಿ ಕಾಣಿಸೋದು, ಹಳೇ ಕಾಲದ ಕಟ್ಟಡ ಕಾಣಿಸೋದು, ಈಗ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಿಂದ ಎಲ್ಲರಿಗೂ ರೇಷ್ಮೆ ಸಮವಸ್ತ್ರ, ಪಂಚತಾರಾ ಹೋಟೆಲ್ಲು ಮೀರಿಸುವ ಕಟ್ಟಡ - ಇವುಗಳ ಆವರಣದಲ್ಲಿ ಕುಳಿತಿರುವ ಡಾಕ್ಟರ್ ದಾದಿಯರ ಸಂವೇದನೆಯಲ್ಲಿ ಸಾಂತ್ವನ ಇದ್ದಿರಬಹುದಾದರೂ ಅದರ ಹಿನ್ನಲೆಯಲ್ಲಿ ನಮಗಿರುವ ಸಾಧ್ಯತೆಗಳನ್ನೆಲ್ಲಾ ಮೀರಿಸುವ ಹಣದ ಭೂತದ ನರ್ತನವೇ ಕಣ್ಣಿಗೆ ರಾಚುವಾಗ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಭಾವ ಉಳಿಯುವ ಪ್ರಪಂಚದಲ್ಲಿ ನಾವಿದ್ದೇವೆಯೇ ಎಂಬ ಸಂದೇಹ ಕಾಡುತ್ತಿದೆ.
ವಸ್ತುಸ್ಥಿತಿ ಅದೇನೇ ಇರಲಿ. ನಮಗೆ ಹಲವಾರು ಬಾರಿ ನಮ್ಮ ಕಷ್ಟಗಳಿಂದ ವಿಮುಕ್ತಿ ಕೊಟ್ಟು ನಮ್ಮ ಬದುಕನ್ನು ಸಹ್ಯವಾಗಿ ಮಾಡಿರುವ ಹಲವಾರು ವೈದ್ಯರುಗಳಿಗೆ ನಮ್ರವಾಗಿ ನಮಿಸುತ್ತೇನೆ. ಇಂಥಹ ಹೃದಯವಂತ ವೈದ್ಯರುಗಳ ಸಂಖ್ಯೆ ಹೆಚ್ಚಾಗಲಿ. ಹೃದಯವಂತ ವ್ಯಕ್ತಿಗಳನ್ನು ನಿರ್ಮಿಸುವ ಶಕ್ತಿ ನಮ್ಮ ಸಮಾಜಕ್ಕೆ ಹೆಚ್ಚಾಗಲಿ.