ಕರ್ನಾಟಕ ಲೋಕ ಸೇವಾ ಆಯೋಗವು ಎಫ್ಡಿಎ ಮತ್ತು ಎಸ್ಡಿಎ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಈ ನೇಮಕಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಗೊಂದಲವನ್ನು ದೂರ ಮಾಡುವ ಪ್ರಶ್ನೋತ್ತರ ಇಲ್ಲಿದೆ. * ಮೀಸಲಾತಿಯನ್ವಯ ಹುದ್ದೆಗಳು ಹಂಚಿಕೆಯಾಗಿರುತ್ತದೆಯೇ? ಹೌದು, ಸರಕಾರದ ವಿವಿಧ ಇಲಾಖೆ, ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ ಹೀಗೆ ವಿವಿದೆಡೆ ಖಾಲಿ ಇರುವ ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ. ಪ್ರತಿ ಇಲಾಖೆಯಲ್ಲಿನ ಹುದ್ದೆಯೂ ಮೀಸಲಾತಿಯನ್ವಯ ಹಂಚಿಕೆಯಾಗಿರುತ್ತದೆ. ಉದಾರಹರಣೆಗೆ ಬೆಂಗಳೂರಿನ ಹಿಂದುಳಿದ ವರ್ಗಗಳ ಆಯುಕ್ತರ ಕಚೇರಿಯಲ್ಲಿ ಒಟ್ಟು 58 ಎಫ್ಡಿಎ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಹೈ.ಕ. ವೃಂದಕ್ಕೆ 10 ಹುದ್ದೆಗಳು ಸೇರಿದ್ದರೆ ಉಳಿದವು ಮೂಲ ವೃಂದಕ್ಕೆ ಸೇರಿದ ಹುದ್ದೆಗಳಾಗಿವೆ. ಈ ಉಳಿಕೆ ಮೂಲ ವೃಂದದ ಹುದ್ದೆಗಳು ಈ ಕೆಳಗಿನಂತೆ ಹಂಚಿಕೆಯಾಗಿರುತ್ತವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಆದ್ಯತೆಯ ಇಲಾಖೆಯನ್ನು ಗುರುತಿಸಬೇಕಿರುತ್ತದೆ. ಈ ಮೀಸಲಾತಿಯನ್ನು ಸಂಪೂರ್ಣವಾಗಿ ನೋಡಿಕೊಂಡು ಅರ್ಜಿ ಸಲ್ಲಿಸಬೇಕು. ಇದನ್ನು ಆಯೋಗದ ವೆಬ್ನಲ್ಲಿ ಪ್ರಕಟವಾಗಿರುವ ಅಧಿಸೂಚನೆಯಲ್ಲಿ ನೀಡಲಾಗಿದೆ. * ಎಫ್ಡಿಎ/ಎಸ್ಡಿಎ ಎರಡಕ್ಕೂ ಅರ್ಜಿ ಸಲ್ಲಿಸಬಹುದೇ? ವಿದ್ಯಾರ್ಹತೆ ಹೊಂದಿದಲ್ಲಿ ಎರಡಕ್ಕು ಅರ್ಜಿ ಸಲ್ಲಿಸಬಹುದು. ಆದರೆ ಪ್ರತ್ಯೇಕ ಅರ್ಜಿ ಮತ್ತು ಪ್ರತ್ಯೇಕ ಶುಲ್ಕ ಪಾವತಿಸಬೇಕಿರುತ್ತದೆ. ಅಭ್ಯರ್ಥಿಯು ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಎರಡೂ ಹುದ್ದೆಗಳಿಗೂ ಅರ್ಹತೆ ಹೊಂದಿದ ಪಕ್ಷದಲ್ಲಿ, ಅಭ್ಯರ್ಥಿಯು ಬಯಸುವ ಯಾವುದಾದರೂ ಒಂದು ಹುದ್ದೆಗೆ ಮಾತ್ರ ಪರಿಗಣಿಸಿ, ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ನಂತರ ಕೌನ್ಸಿಲಿಂಗ್ ಮೂಲಕ ಇಲಾಖಾ ಹಂಚಿಕೆಯನ್ನು ಮಾಡಿ,ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. * ವೇತನ ಎಷ್ಟಿರುತ್ತದೆ? ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 14,550-ಧಿ350-ಧಿ15,600-ಧಿ400-ಧಿ17,200ಧಿ-450-ಧಿ19,000-ಧಿ500-ಧಿ21,000ಧಿ-600-ಧಿ24,600-ಧಿ700-ಧಿ26,700 ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 11,600-ಧಿ200-ಧಿ12,000ಧಿ-250ಧಿ-13,000ಧಿ-300-ಧಿ14,200-ಧಿ350-ಧಿ15,600ಧಿ-400ಧಿ-17,200-ಧಿ450-ಧಿ19,000ಧಿ-500-ಧಿ21,000 * ಲಿಖಿತ ಪರೀಕ್ಷೆಯು ಹೇಗಿರುತ್ತದೆ? ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಕ್ಕೆ ಒಂದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪತ್ರಿಕೆ-1 ಕಡ್ಡಾಯ ಕನ್ನಡ ಪರೀಕ್ಷೆಯನ್ನು ಹೊರತು ಪಡಿಸಿ, ಉಳಿದ ಪರೀಕ್ಷೆಗಳು ವಸ್ತುನಿಷ್ಠ ಮಾದರಿಯಲ್ಲಿ (ಬಹು ಆಯ್ಕೆಯಪ್ರಶ್ನೆಪತ್ರಿಕೆ) ಮಾದರಿಯಲ್ಲಿ ನಡೆಯಲಿದ್ದು, ಮೂರು ಪತ್ರಿಕೆಗಳನ್ನು ಹೊಂದಿರುತ್ತದೆ. ಪತ್ರಿಕೆ - 1 ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯು 150 ಅಂಕಗಳಿಗೆ ನಡೆಯಲಿದ್ದು, ಪರೀಕ್ಷೆ ಬರೆಯಲು 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪತ್ರಿಕೆ -2 ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲಿಷ್ ಪತ್ರಿಕೆಯು 100 ಅಂಕಗಳಿಗೆ ನಡೆಯಲಿದ್ದು, ಈ ಪರೀಕ್ಷೆ ಬರೆಯಲೂ 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪತ್ರಿಕೆ -3 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, 100 ಅಂಕಗಳಿಗೆ ನಡೆಯಲಿದೆ. ಈ ಪರೀಕ್ಷೆ ಬರೆಯಲೂ 90 ನಿಮಿಷ ಸಮಯ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ. ಇದರ ಮೂಲಕ ಅಭ್ಯರ್ಥಿಯ ಕನ್ನಡ / ಇಂಗ್ಲಿಷ್ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ (ಖpಛ್ಝ್ಝಿಜ್ಞಿಜ) ಸಮನಾರ್ಥಕ ಪದಗಳು, ವಿರುದಾಟಛಿರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲಿಷ್ / ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಸಾಮರ್ಥ್ಯ ಮತ್ತು ಅದರ ಸರಿಯಾದ ಹಾಗೂ ತಪ್ಪುಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲಾಗುತ್ತದೆ. ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯ ವಾಗಿ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ. ಇದು ಭಾರತದ ಸಂವಿಧಾನ, ಭಾರತದ ಇತಿಹಾಸ, ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. * ಪರೀಕ್ಷೆ ಎಲ್ಲಿ ನಡೆಯುತ್ತದೆ? ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಆಯೋಗವು ನಿಗದಿಪಡಿಸುವ ಇತರೆ ಯಾವುದೇ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ಅವರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ಕೇಂದ್ರವನ್ನು ನಮೂದಿಸಬೇಕು. ಆದರೂ, ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ಸನ್ನಿವೇಶ ಎದುರಾದಲ್ಲಿ ಅರ್ಜಿಯಲ್ಲಿ ಅಭ್ಯರ್ಥಿಗಳು ನೀಡಿರುವ ವಿಳಾಸವನ್ನಾಧರಿಸಿ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸುವುದು ಆಯೋಗದ ಅಂತಿಮ ತೀರ್ಮಾನವಾಗಿರುತ್ತದೆ. * ಈ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತದೆಯೇ? ಖಂಡಿತಾ ಇಲ್ಲ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಇರುವ ಮೀಸಲಾತಿಯನ್ವಯ ಅಂತಿಮವಾಗಿ ಲಭ್ಯವಾಗುವ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. * ಅರ್ಜಿ ಸಲ್ಲಿಸಲುಇರಲೇಬೇಕಾದ ದಾಖಲೆಗಳೇನು? ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯನ್ನು ದೃಢೀಕರಿಸುವ ಪ್ರಮಾಣ ಪತ್ರಗಳನ್ನು ಮತ್ತು ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಿಂದಿರಬೇಕು. ಜನ್ಮದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್ಸಿಯ ಅಂಕಪಟ್ಟಿ ಹೊಂದಿರಬೇಕು. ಇದರ ಜತೆಗೆ ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಹೊಂದಿರಬೇಕು.
ಪುಟಗಳು
Monday, September 25, 2017
Sunday, September 24, 2017
ಭಾರತಕ್ಕೆ ಸರಣಿ ಗೆಲುವು
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 78 ರನ್(72 ಎ, 5ಬೌ, 4ಸಿಇಂದೋರ್, ಸೆ.24: ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಭರ್ಜರಿ ಜಯ ಗಳಿಸಿದ್ದು ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಪಡೆ ಐದು ಏಕದಿನ ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 294 ಸವಾಲನ್ನು ಪಡೆದ ಭಾರತ ಇನ್ನೂ ಎಸೆತಗಳು 13 ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ ಅಗತ್ಯ ರನ್ ಗಳಿಸಿ ಗೆಲುವಿನ ದಡ ಸೇರಿತು.ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 78 ರನ್(72 ಎ, 5ಬೌ, 4ಸಿ) ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ(71) ಮತ್ತು ಅಜಿಂಕ್ಯ ರಹಾನೆ(70) ಅವರ ಅರ್ಧಶತಕಗಳ ನೆರವಿನಲ್ಲಿ ಭಾರತ ಗೆಲುವಿನ ದಡ ಸೇರಿತು.ಮನೀಷ್ ಪಾಂಡೆ ಔಟಾಗದೆ 36 ರನ್ , ಎಂಎಸ್ ಧೋನಿ ಔಟಾಗದೆ 3 ರನ್ , ವಿರಾಟ್ ಕೊಹ್ಲಿ 28 ರನ್, ಮತ್ತು ಕೇದಾರ್ ಜಾಧವ್ 2 ರನ್ ಗಳಿಸಿದರು.
Friday, September 08, 2017
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪ್ರಶ್ನೆಪ್ರತ್ರಿಕೆ ಮತ್ತು ಅಂಕಗಳ ವಿವರ
ಹತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದು, ಮೂರು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ.
ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಮೇಲೆ ನಿಗದಿಪಡಿಸಿದ ಕನಿಷ್ಟ ಅಂಕಗಳನ್ನು ಗಳಿಸದೇ ಇದ್ದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ
ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.
ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ವಿಷಯಗಳ ಹುದ್ದೆಗಳಿಗೆ ಪೇಪರ್-1, ಪೇಪರ್-2 ಮತ್ತು ಪೇಪರ್-3 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.
ಪೇಪರ್-3 ರ ಪತ್ರಿಕೆಯು ಭಾಷಾ ಶಿಕ್ಷಕರು-ಆಂಗ್ಲ ಇವರಿಗೆ ಅನ್ವಯಿಸುವುದಿಲ್ಲ.

ಷಯ ಮತ್ತು ನಿಗದಿಪಡಿಸಿರುವ ಗರಿಷ್ಠ ಅಂಕಗಳ ವಿಂಗಡಣೆ ಕೆಳಗಿನಂತಿದೆ
ಪೇಪರ್-1: ಬಹು ಆಯ್ಕೆಯ ಪ್ರಶ್ನೆಗಳು (ಒಎಂಆರ್ ಶೀಟ್ನಲ್ಲಿ ಉತ್ತರಿಸಬೇಕಾದ ಪರೀಕ್ಷೆ)
ವಿಷಯಅಂಕಗಳುಸಾಮಾನ್ಯ ಕನ್ನಡ ಭಾಷೆ25ಸಾಮಾನ್ಯ ಆಂಗ್ಲ ಭಾಷೆ25ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು)25ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ + ಬೋಧನಾ ವಿಧಾನ50ಮೌಲ್ಯಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ15ಗಣಕ ಯಂತ್ರ ಪ್ರಬುದ್ದತೆ ಬಗ್ಗೆ10ಒಟ್ಟು150
ಪೇಪರ್-2: ಭಾಷೆ-ಆಂಗ್ಲ, ಗಣಿತ & ವಿಜ್ಞಾನ ಹಾಗು ಸಮಾಜ ಪಾಠಗಳು ಶಿಕ್ಷಕರಿಗೆ
ಆಯಾ ವಿಷಯದ ಜ್ಞಾನ - ಬಹು ಆಯ್ಕೆಯ ಪ್ರಶ್ನೆಗಳು (ಓಎಂಆರ್ಶೀಟ್ನಲ್ಲಿ ಉತ್ತರಿಸಬೇಕು)50ಆಯಾ ವಿಷಯದ ಜ್ಞಾನ - ವಿವರಣಾತ್ಮಕ ಉತ್ತರ ಬರೆಯಬೇಕಾದ ಪ್ರಶ್ನೆಗಳು100ಒಟ್ಟು150
ಪೇಪರ್-2 ಪತ್ರಿಕೆಯಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಭಾಷಾ ಸಾಮಥ್ರ್ಯ ಪರೀಕ್ಷೆ - ಪೇಪರ್-3: ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ಅಭ್ಯರ್ಥಿಗಳಿಗೆ ಮಾತ್ರ
ಆಯಾ ಬೋಧನಾ ಮಾಧ್ಯಮದ ಭಾಷಾ ಸಾಮಥ್ರ್ಯ - ವಿವರಣಾತ್ಮಕ ಪರೀಕ್ಷೆ ಅಭ್ಯರ್ಥಿಗಳು ನಿರ್ದಿಷ್ಟಪಡಿಸಿದ ಬೋಧನಾ ಮಾಧ್ಯಮದಲ್ಲಿ ಬೋಧಿಸಲು ಹೊಂದಿರುವ ಭಾಷಾ ಬಳಕೆಯ ಸಾಮಥ್ರ್ಯ, ಗ್ರಹಿಸುವಿಕೆ, ಶಬ್ದಭಂಡಾರ ಮತ್ತು ಬರವಣಿಗೆ ಸಾಮಥ್ರ್ಯಗಳನ್ನು ಪರೀಕ್ಷಿಸಲಾಗುವುದು.100ಒಟ್ಟು100
ಪೇಪರ್-3 ಪತ್ರಿಕೆಯಲ್ಲಿ ಕನಿಷ್ಟ ಶೇ. 60 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಪರೀಕ್ಷಾ ವಿಷಯಗಳಿಗೆ ನಿಗದಿಪಡಿಸಿರುವ ಪಠ್ಯವಸ್ತು: ಪ್ರಶ್ನೆಗಳ ವ್ಯಾಪ್ತಿ ಹಾಗೂ ಸ್ವರೂಪ
ಪ್ರಶ್ನೆಗಳು ನಿಗದಿಪಡಿಸಲಾಗಿರುವ ಪಠ್ಯವಸ್ತುವಿನ(ಸಿಲಬಸ್) ವ್ಯಾಪ್ತಿಯಲ್ಲಿ ಬರುತ್ತದೆ. (ವಿವರವಾದ ಪಠ್ಯವಸ್ತು ಅನುಬಂಧ-2 ರಲ್ಲಿ ನೀಡಲಾಗಿದೆ. ಇಲಾಖಾ ವೆಬ್ಸೈಟ್ನಲ್ಲಿಯೂ ಪ್ರಕಟಿಸಿದೆ.)ಪೇಪರ್-1 ರ ಪ್ರಶ್ನೆಪತ್ರಿಕೆಯ ಪ್ರಶ್ನೆಗಳು ವಸ್ತುನಿಷ್ಠವಾಗಿದ್ದು (objective type) ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಿದೆ. ಪ್ರತಿ ಪ್ರಶ್ನೆಯು ನಾಲ್ಕು ಉತ್ತರಗಳನ್ನು ಹೊಂದಿದ್ದು, ಇವುಗಳಲ್ಲಿ ಒಂದು ಸರಿ ಉತ್ತರವಾಗಿರುತ್ತದೆ. ಉತ್ತರಗಳನ್ನು 'ಓ.ಎಂ.ಆರ್' ಶೀಟಿನಲ್ಲಿ ಗುರುತಿಸುವುದು.ಪೇಪರ್ -1 ಮತ್ತು ಪೇಪರ್-2 ರ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಇರುತ್ತವೆ.ಪೇಪರ್-2 ರ ಪ್ರಶ್ನೆಪತ್ರಿಕೆಯಲ್ಲಿ ಎರಡು ಭಾಗಗಳಿದ್ದು ಮೊದಲಭಾಗದಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಗಳನ್ನು 'ಓ.ಎಂ.ಆರ್ ' ಶೀಟಿನಲ್ಲಿ ಗುರುತಿಸುವುದು. ಹಾಗೂ ಎರಡನೇ ಭಾಗದಲ್ಲಿ ವಿವರಣಾತ್ಮಕ ಉತ್ತರವನ್ನು, ಪರೀಕ್ಷಾ ಕೇಂದ್ರದಲ್ಲಿ ನೀಡುವ ಉತ್ತರಪತ್ರಿಕೆಯಲ್ಲಿ ಬರೆಯಬೇಕಾಗುತ್ತದೆ.ಪೇಪರ್-2 ರ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಅಭ್ಯರ್ಥಿಯು ಆಯ್ಕೆ ಬಯಸುವ ಹುದ್ದೆಯ ಬೋಧನಾ ಮಾಧ್ಯಮದಲ್ಲಿ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸಬೇಕು.ಪೇಪರ್-3 ರ ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಮಾದರಿಯಾಗಿದ್ದು, ಅಭ್ಯರ್ಥಿಯು ಆಯ್ಕೆ ಬಯಸುವ ವಿಷಯದ ಹುದ್ದೆಯ, ಬೋಧನಾ ಮಾಧ್ಯಮದ ಭಾಷೆಯಲ್ಲಿಯೇ ಉತ್ತರಿಸಬೇಕು.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಮಾಧ್ಯಮ: ಕನ್ನಡ ಮತ್ತು ಇಂಗ್ಲೀಷ್.