Wikipedia

Search results

Thursday, January 18, 2024

ರಾಮ ಮಂದಿರದ ಬಗ್ಗೆ ನಿಮಗಿದು ಗೊತ್ತೆ

                  ಹಳೆಯ ರಾಮ ಮಂದಿರ ಕೆಡವಿದ್ದು 1528 ಬಾಬರ್ ರಾಮ ರಥಯಾತ್ರೆ ಶುರುವಾದದ್ದು1992 ರಾಮ ಜನ್ಮಭೂಮಿಗೆ ಹುತಾತ್ಮರಾದವರು 2000 ಹಿಂದೂ ಕರಸೇವಕರು..ರಾಮ ಮಂದಿರದ ಒಟ್ಟು ಜಾಗ 70ಎಕರೆ ಸುಪ್ರಿಂ ಕೋರ್ಟ್ ಆದೇಶದ ಮೂಲಕ ಪಡೆದಿದ್ದು 2.7ಎಕರೆ ಜಾಗ ಸುಪ್ರೀಂ ಮಂದಿರ ಕಟ್ಟಲು ಆದೇಶ ಬಂದಿದ್ದು 2019 ರಾಮ ಮಂದಿರ ಕಟ್ಟಲು ಶಂಕುಸ್ಥಾಪನೆ 

                    2020 ರಾಮ ಮಂದಿರದ ಮೊದಲ ಹಂತ ಸಂಪೂರ್ಣ2024 ರಾಮಲಾಲ ( ಬಾಲ ರಾಮ) ಪ್ರಾಣ ಪ್ರತಿಷ್ಠಾಪನೆ 22 ಜನವರಿ 2024 ರಾಮ ಮಂದಿರಕ್ಕೆ ಭಾರತೀಯರು  ಕೊಟ್ಟ ದೇಣಿಗೆ ಒಟ್ಟು ಸುಮಾರು 5300 ಕೋಟಿ ಉತ್ತರದ ಪ್ರದೇಶದಿಂದ 2100 ಕೆಜಿ ತೂಕದ ಅಷ್ಟದಾತುಗಳ ಗಂಟೆ ತೆಲಂಗಾಣದಿಂದ 9 ಕೆ ಜಿ ತೂಕದ ಬಂಗಾರದ ಪಾದುಕೆಗಳು ಸೂರತ್ ಬಂಗಾರದ ವ್ಯಾಪಾರಿಯಿಂದ 5000 ಅಮೇರಿಕನ್ ವಜ್ರಗಳಿಂದ  ತಯಾರಾದ ನೆಕ್ಲೇಸ್ ನೇಪಾಳದ ಜನಕನ ಊರಿನಿಂದ 3000 ವಿವಿಧ ಬೆಳ್ಳಿ ಬಂಗಾರದ ಉಡುಗೊರೆಗಳು ಉತ್ತರ ಪ್ರದೇಶದ ಬೀಗದ ವ್ಯಾಪಾರಿಯಿಂದ 400ಕೆಜಿ ತೂಕದ 10 ಅಡಿಯ ಬೀಗ ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯಿಂದ 8 ದೇಶಗಳ ಸಮಯ ತೋರಿಸುವ ಬೃಹತ್ ಗಡಿಯಾರ ಅಹಮದಾಬಾದ್ ನಿಂದ 11.5 ಕೆಜಿ ಬೆಳ್ಳಿ ಬಂಗಾರ ಮಿಶ್ರಿತ ಬಿಲ್ಲು ಬಾಣ ಗುಜರಾತಿನಿಂದ 108ಅಡಿಯ 3614 ಕೆಜಿ ತೂಕದ ಕಿಲೋ ಮೀಟರ್ ಗಳಷ್ಟು ಸುವಾಸನೆ ಬೀರುವ ಒಂದೆ ಅಗರಬತ್ತಿ ಗುಜಾರಾತಿನಿಂದ ಒಟ್ಟು 5500 ಕೆಜಿಯಲ್ಲಿ  ಕಂಚಿನ 7 ಧ್ವಜ ಸ್ಥಂಭಗಳು ಸಿದ್ದವಾಗಿವೆ ನಗಪುರದ ಬಾಣಸಿಗನಿಂದ  7000 ಕೆಜಿ ರಾಮ ಅಲ್ವಾ ತಿರುಪತಿಯಿಂದ 1 ಲಕ್ಷ ಲಡ್ಡು ಪ್ರಸಾದ ಮಥುರಾದಿಂದ 200 ಕೆಜಿ ಲಡ್ಡು ಪ್ರಸಾದ ವಡೋದರಾದ ಕೃಷಿಕನಿಂದ 1100 ಕೆಜಿ ಪಂಚದಾತು ದೀಪ 851 ಕೆ ಜಿ ತುಪ್ಪ ಹಿಡಿಸುವ 8 ಅಡಿ ಅಗಲ 9 ಅಡಿ ಉದ್ದದ ಜ್ಯೋತಿ ಕರ್ನಾಟಕದಿಂದ ವಿಶ್ವವೆ ಕೈ ಮುಗಿಯುವ ಶ್ರೀ ರಾಮಲಲ್ಲಾ ವಿಗ್ರಹ ಇದು ಈ ಪುಣ್ಯ ಭೂಮಿಯ ತಾಕತ್ತು ಸನಾತನ ಧರ್ಮದ ಪುನರುತ್ಥಾನದ ವರ್ಚಸ್ಸು🇮🚩

Wednesday, August 14, 2019

ರಕ್ಷಾ ಬಂಧನ ವಿಶೇಷತೆ

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಕಾರ್ಯ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ.. ರಕ್ಷಾ ಬಂಧನ ಪ್ರಾಚೀನ್ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದ್ದಿದೆ


ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.


  • ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.