ಕೆ.ಪಿ.ಎಸ್.ಸಿ ಎಸ್.ಡಿ.ಎ ಹಾಗೂ ಎಫ್.ಡಿ.ಎ ನೇಮಕಾತಿಗಳಲಗಳಲ್ಲಿ ಅಕ್ರಮಗಳ ಸರಮಾಲೆ
ಅಭ್ಯರ್ಥಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಿ ಸುಮ್ಮನಿದ್ದರೇ ನಿಮಗೆನೂ ಸಿಗೋದಿಲ್ಲ ನಿಮ್ಮ ಹಕ್ಕು ಕೇಳಿ.
ಇಷ್ಟು ವರ್ಷ ನಡೆದ ಎಲ್ಲ ನೇಮಕಾತಿಗಳಲ್ಲಿ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸಲಾಗುತ್ತಿತ್ತು. ಹಾಗೆಯೇ ಕಟ್ ಆಫ್ ಅಂಕಗಳನ್ನು ಪ್ರಕಟಿಸಲಾಗುತ್ತಿತ್ತು. ಆದರೆ ಈ ಸಲದ ಎಸ್.ಡಿ.ಎ ಹಾಗೂ ಎಫ್.ಡಿ.ಎ ನೇಮಕಾತಿಯಲ್ಲಿ ಹಳೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕನಿಷ್ಟಪಕ್ಷ ಆಯ್ಕೆಯಾದವರ ಅಂಕಗಳನ್ನು ಹಾಗೂ ಕಟ್ ಆಫ್ ಅಂಕಗಳನ್ನು ಪ್ರಕಟಿಸುವ ಮನಸ್ಸು ಮಾಡಿಲ್ಲ. ಯಾಕೆ ಮೊದಲಿದ್ದ ನಿಯಮ ಈಗ ಯಾಕೆ ಬದಲಾಗಿದೆ. ಆಯ್ಕೆಯಾದವರಿಗೆ ಗೊತ್ತಿಲ್ಲ ತಮಗೆ ಎಷ್ಟು ಅಂಕಗಳು ಲಭಿಸಿವೆ.
ಈಗಲಾದರೂ ವಂಚಿತರಾದ ರಾಜ್ಯದ ಅಭ್ಯರ್ಥಿಗಳು ಎಚ್ಚೆತ್ತುಕೊಳ್ಳಬೇಕಿದೆ. ಸುಮ್ಮನಿದ್ದರೆ ಕೆ.ಪಿ.ಎಸ್.ಸಿ ಪಂಗನಾಮ ಹಾಕುವುದು ಪಕ್ಕಾ. ನಮಗೆಷ್ಟು ಅಂಕಗಳು ಲಭಿಸಿವೆ ಎಂದು ತಿಳಿಯುವುದು ನಮ್ಮೆಲ್ಲರ ಹಕ್ಕು. ನಮ್ಮ ಹಕ್ಕನ್ನು ನಾವು ಕೇಳುವುದು ತಪ್ಪೆ? ಕೆಲವು ಅಭ್ಯರ್ಥಿಗಳು ಪ್ರತಿಭಟಿಸಿದರೆ ಪ್ರಯೋಜನ ಇಲ್ಲ. ಎಲ್ಲರೂ ಸಂಘಟಿತರಾಗಿ ನಮ್ಮ ಹಕ್ಕನ್ನು ನಾವು ಕೇಳಬೆಕು. ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅಂತ ಗೊತ್ತಿದ್ದರೂ ಕೆ.ಪಿಎಸ್.ಸಿ ತನ್ನ ಪಾಡಿಗೆ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ. ವರ್ಷಗಳಿಂದ ಕಷ್ಟಪಟ್ಟು ಓದಿದವರ ಗತಿಯೇನು. ಅವರಿಗೆ ಬೆಲೆ ಇಲ್ಲವೆ? ಕೆ.ಪಿ.ಎಸ್.ಸಿ ಸರ್ವಾಧಿಕಾರಿ ಧೋರಣೆಯನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು. ಯೋಚಿಸಿ.
ಎಲ್ಲವೂ ಸುಲಭವಾಗಿ ಸಿಗುವದಿಲ್ಲ. ನ್ಯಾಯಕ್ಕಾಗಿ ಹೋರಾಡಲೇಬೇಕು. ಇಲ್ಲದಿದ್ದರೆ ಅನ್ಯಾಯ ತನ್ನ ಪಾರಮ್ಯತೆ ಮೆರೆಯುತ್ತದೆ. ಸ್ವಲ್ಪ ಯೋಚಿಸಿ..
ಪುಟಗಳು
▼