ಪುಟಗಳು

Tuesday, June 21, 2016

ಸಚಿವರಿಗೆ ಖಾತೆ ಹಂಚಿಕೆ ಅಂತಿಮ:

ಯಾರು ಯಾವ ಸಚಿವರಾದ್ರು?:~

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಏರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಿಎಂ ಯಾರಿಗೆ ಯಾವ ಖಾತೆ ಹಂಚಿದ್ದಾರೆ ಎಂಬ ಪಟ್ಟಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸಚಿವರ ಖಾತೆಗಳು ಇಂತಿವೆ.

ವಾರ್ತಾ ಇಲಾಖೆ ತಮ್ಮ ಬಳಿಯೇ ಉಳಿಸಿಕೊಂಡ ಸಿಎಂ ಸಿದ್ದರಾಮಯ್ಯ, ಸಚಿವ ಜಯಚಂದ್ರ ಅವರ ಒಂದು ಜವಾಬ್ದಾರಿಗೆ ಕೊಕ್ಕೆ ಹಾಕಿದ್ದಾರೆ. ಉನ್ನತ ಶಿಕ್ಷಣ ಜವಬ್ದಾರಿ ಜಯಚಂದ್ರರಿಂದ ತನ್ವೀರ್ ಸೇಠ್‍ಗೆ ನೀಡಿದ ಸಿಎಂ, ಜಯಚಂದ್ರಗೆ ಸಣ್ಣ ನೀರಾವರಿ ಜವಾಬ್ದಾರಿ ನೀಡಿದ್ದಾರೆ. ಆರೋಗ್ಯ ಸಚಿವರಾಗಿದ್ದ ಖಾದರ್ ಅವರಿಗೆ ಖಾತೆ ಬದಲಾಗಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಜವಾಬ್ದಾರಿ ವಹಿಸಲಾಗಿದೆ.

# ಯಾರಿಗೆ ಯಾವ್ಯಾವ ಖಾತೆ ನೀಡಿದ್ರು ಸಿಎಂ..?:

*ಕಾಗೋಡು ತಿಮ್ಮಪ್ಪ – ಕಂದಾಯ

*ರಮೇಶ್ ಕುಮಾರ್ – ಆರೋಗ್ಯ

*ಬಸವರಾಜ ರಾಯರೆಡ್ಡಿ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

*ಸಂತೋಷ್ ಲಾಡ್ – ಕಾರ್ಮಿಕ

*ರಮೇಶ್ ಜಾರಕಿಹೊಳಿ – ಸಣ್ಣ ಕೈಗಾರಿಕೆ

*ತನ್ವೀರ್ ಸೇಠ್ – ಉನ್ನತ ಶಿಕ್ಷಣ, ಅಲ್ಪಸಂಖ್ಯಾತ ಮತ್ತು ವಕ್ಫ್

*ಎಸ್.ಎಸ್.ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ

*ಎಂ.ಆರ್ ಸೀತಾರಾಂ – ಯೋಜನೆ ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ

*ಎಚ್.ವೈ. ಮೇಟಿ – ಅಬಕಾರಿ

*ಪ್ರಿಯಾಂಕ್ ಖರ್ಗೆ – ಪ್ರವಾಸೋದ್ಯಮ, ಐಟಿ-ಬಿಟಿ

*ರುದ್ರಪ್ಪ ಲಮಾಣಿ – ಜವಳಿ ಮುಜರಾಯಿ

*ಈಶ್ವರ್ ಖಂಡ್ರೆ – ಪೌರಾಡಳಿತ

*ಪ್ರಮೋದ್ ಮಧ್ವರಾಜ್ – ಮೀನುಗಾರಿಕೆ, ಯುವಜನ ಮತ್ತು ಕ್ರೀಡೆ

*ಸಚಿವ ಯು.ಟಿ.ಖಾದರ್ ಖಾತೆ ಬದಲಾವಣೆ
ಯು.ಟಿ.ಖಾದರ್ ಗೆ ಆಹಾರ ಮತ್ತು ನಾಗರಿಕೆ ಪೂರೈಕೆ ಜವಾಬ್ದಾರಿ

*ಆರ್.ವಿ.ದೇಶಪಾಂಡೆ – ಮೂಲಸೌಕರ್ಯ ಹೆಚ್ಚುವರಿ ಹೊಣೆ