ಪುಟಗಳು

Tuesday, June 21, 2016

ಸದ್ಯಕ್ಕೆ ಸದ್ದು ಮಾಡಿದ ಸುದ್ದಿ ಇದು:~

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 99 ಮತ್ತು 2004ರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದ್ದು, ಹೊಸದಾಗಿ ಪ್ರಕ್ರಿಯೆ ನಡೆಸಬೇಕೆಂದು ಹೈ ಕೋರ್ಟ್ ಆದೇಶಿಸಿದೆ.!!!

'ಈಗಾಗಲೇ ಆಯ್ಕೆ ಆಗಿರುವವರು ನಿಯಮಬದ್ಧವಾಗಿದ್ದರೆ, ಮುಂದುವರಿಯಲಿ. ಇಲ್ಲದಿದ್ದರೆ ಹುದ್ದೆ ತ್ಯಜಿಸಬೇಕು,' ಎಂದು ನ್ಯಾ.ಎನ್ ಕುಮಾರ್ ಮತ್ತು ನ್ಯಾ.ಬಿ ವೀರಪ್ಪ ಅವರಿದ್ದ ಪೀಠ ಹೇಳಿದೆ.

ಈ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಮುಗಿಸಬೇಕೆಂದು ಕೆಪಿಎಸ್‌ಸಿಗೆ ಕೋರ್ಟ್ ಸೂಚಿಸಿದೆ.

'ಸರಕಾರಕ್ಕೆ ನಿಜಕ್ಕೂ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ದೀನ ದಲಿತರಿಗೆ ಒಳ್ಳೆಯದು ಮಾಡಬೇಕು ಅಂತ ಇದ್ದರೆ ಕೆಪಿಎಸ್‌ಸಿ ಆಯೋಗದ ಅಧ್ಯಕ್ಷರು ಸದಸ್ಯರನ್ನು ನೇಮಿಸುವಾಗ ಹೋಟಾ ಸಮಿತಿ ವರದಿಯಂತೆ ದಕ್ಷ ಪ್ರಾಮಾಣಿಕರನ್ನು ನೇಮಿಸಬೇಕು. ಅದಕ್ಕೆ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು,' ಎಂದಿದೆ.