ಪುಟಗಳು

Saturday, June 11, 2016

🌹ಭಾರತದ ಇತಿಹಾಸ🌹                    ■. ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

●. ಧೃವ ••┈┈┈┈• ಜೆಟ್ಟಾಯಿ ಶಾಸನ

●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

●.ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ

●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.
...

☀#INDIANA_STATE

1) ರಾಜ್ಯ: - ಆಂಧ್ರ ಪ್ರದೇಶ
   ಕ್ಯಾಪಿಟಲ್ - ಹೈದರಾಬಾದ್
   ಪ್ರದೇಶ (sq.km.): - 160205
   ಜನಸಂಖ್ಯೆ: -49386799
   ಸಾಂದ್ರತೆ: -308
   ಸಾಕ್ಷರತೆ: -67,41%
   Distrects: -

2) ಅರುಣಾಚಲ peadesh: -
   ರಾಜಧಾನಿ: - ಇಟಾನಗರ
   sq.km ಏರಿಯಾ :-() 83743
   ಜನಸಂಖ್ಯೆ: -1382611
   ಸಾಂದ್ರತೆ: -17
   ಸಾಕ್ಷರತೆ: -67,0%
   ಸಾಂದ್ರತೆ: -16

3) ಅಸ್ಸಾಂ
   ರಾಜಧಾನಿ: -dispur
   ಪ್ರದೇಶ: -78438
   ಜನಸಂಖ್ಯೆ: -31169272
   ಸಾಂದ್ರತೆ: -397
   ಸಾಕ್ಷರತೆ: -73,2%
   ಜಿಲ್ಲೆ: -27

4) ಬಿಹಾರ
   ರಾಜಧಾನಿ: -Patna
   ಪ್ರದೇಶ: -94163
   ಜನಸಂಖ್ಯೆ: -103804637
   ಸಾಂದ್ರತೆ: -1102
   ಸಾಕ್ಷರತೆ: -63,8%
   ಜಿಲ್ಲೆ: -38

5) ಛತ್ತೀಸ್ಗಢ
   ರಾಜಧಾನಿ: -Raipur
   ಪ್ರದೇಶ: -136034
   ಜನಸಂಖ್ಯೆ: -25540196
   ಸಾಂದ್ರತೆ: -189
   ಸಾಕ್ಷರತೆ: 71.0%
   ಜಿಲ್ಲೆ: -18 + 9

6) ಗೋವಾ
  ರಾಜಧಾನಿ: ಪಣಜಿ
  ಪ್ರದೇಶ: -3702
  ಜನಸಂಖ್ಯೆ: -1457723
  ಸಾಂದ್ರತೆ: -394
  ಸಾಕ್ಷರತೆ: -87,4%
  ಜಿಲ್ಲೆ: -2

7) ಗುಜರಾತ್
   ರಾಜಧಾನಿ: -gandhinagar
   ಪ್ರದೇಶ: -196024
   ಜನಸಂಖ್ಯೆ: -60383628
   ಸಾಂದ್ರತೆ: -308
   ಸಾಕ್ಷರತೆ: -79,3%
   ಜಿಲ್ಲೆ: -26

8) ಹರಿಯಾಣ
  ರಾಜಧಾನಿ: -Chandigarh
  ಪ್ರದೇಶ: -44212
  ಜನಸಂಖ್ಯೆ: -25353081
  ಸಾಂದ್ರತೆ: -573
  ಸಾಕ್ಷರತೆ: -76,6%
  ಜಿಲ್ಲೆ: -21

9) ಹಿಮಾಚಲ ಪ್ರದೇಶ
   ರಾಜಧಾನಿ: -Shimla
   ಪ್ರದೇಶ: -55673
   ಜನಸಂಖ್ಯೆ: -6856509
   ಸಾಂದ್ರತೆ: -123
   ಸಾಕ್ಷರತೆ: -83,8%
   ಜಿಲ್ಲೆ: -12

10) ಜಮ್ಮು kashimir
     ರಾಜಧಾನಿ: ಶ್ರೀನಗರ
     ಪ್ರದೇಶ: -222236
     ಜನಸಂಖ್ಯೆ: -12548926
     ಸಾಂದ್ರತೆ: -124
     ಸಾಕ್ಷರತೆ: -68,7%
     ಜಿಲ್ಲೆ: -22

11) ಜಾರ್ಖಂಡ್
     ರಾಜಧಾನಿ: ರಾಂಚಿ
     ಪ್ರದೇಶ: -79714
     ಜನಸಂಖ್ಯೆ 32966238
     ಸಾಂದ್ರತೆ: -414
     ಸಾಕ್ಷರತೆ: -67,6%
     ಜಿಲ್ಲೆ: -24

12) ಕರ್ನಾಟಕ
    ರಾಜಧಾನಿ: -Bengaluru
    ಪ್ರದೇಶ: -191791
    ಜನಸಂಖ್ಯೆ: -61130704
    ಸಾಂದ್ರತೆ: -319
    ಸಾಕ್ಷರತೆ: -75,6%
    ಜಿಲ್ಲೆ: -30

13) ಕೇರಳ
     ರಾಜಧಾನಿ: - Thiruvanatapuram
ಪ್ರದೇಶ: -38863
ಜನಸಂಖ್ಯೆ: -33387677
ಸಾಂದ್ರತೆ: -859
ಸಾಕ್ಷರತೆ: -93,9%
ಜಿಲ್ಲೆ: -14

14) Madhy ಪ್ರದೇಶ
    ರಾಜಧಾನಿ: -Boopal
    ಪ್ರದೇಶ: -308346
    ಜನಸಂಖ್ಯೆ: -72597565
    ಸಾಂದ್ರತೆ: -236
    ಸಾಕ್ಷರತೆ: -70,6%
    ಜಿಲ್ಲೆ: -50

15) ಮಹಾರಾಷ್ಟ್ರ
     ರಾಜಧಾನಿ: -Mumbai
     ಪ್ರದೇಶ: -307577
     ಜನಸಂಖ್ಯೆ: -112372972
     ಸಾಂದ್ರತೆ: -365
     ಸಾಕ್ಷರತೆ: -82,9%
     ಜಿಲ್ಲೆ: -35

16) ಮಣಿಪುರ
    ರಾಜಧಾನಿ: -Imphal
    ಪ್ರದೇಶ: -22327
    ಜನಸಂಖ್ಯೆ: -2721756
    ಸಾಂದ್ರತೆ: -122
    ಸಾಕ್ಷರತೆ: -79,8%
    ಜಿಲ್ಲೆ: -9

17) ಮೇಘಾಲಯ
    ರಾಜಧಾನಿ: -Shilong
    ಪ್ರದೇಶ: -22429
    ಜನಸಂಖ್ಯೆ: -2964007
    ಸಾಂದ್ರತೆ: -132
    ಸಾಕ್ಷರತೆ: - 75.5%
    ಜಿಲ್ಲೆ: -7

18) ಮಿಜೋರಾಂ
    ರಾಜಧಾನಿ: -Aizawal
   ಪ್ರದೇಶ: -21087
   ಜನಸಂಖ್ಯೆ: -1091014
   ಸಾಂದ್ರತೆ: -52
   ಸಾಕ್ಷರತೆ: -91,6%
   ಜಿಲ್ಲೆ: -8

19) ನಾಗಾಲ್ಯಾಂಡ್
    ರಾಜಧಾನಿ: -kohima
    ಪ್ರದೇಶ: -16579
    ಜನಸಂಖ್ಯೆ: -1980602
    ಸಾಂದ್ರತೆ: -119
    ಸಾಕ್ಷರತೆ: -80,1%
    ಜಿಲ್ಲೆ: -11

20) ಒಡಿಶಾ
    ರಾಜಧಾನಿ: -Bhuneshwar
    ಪ್ರದೇಶ: -
    ಜನಸಂಖ್ಯೆ: -41947358
    ಸಾಂದ್ರತೆ: -269
    ಸಾಕ್ಷರತೆ: -73,5%
    ಜಿಲ್ಲೆ: -30

21) ಪಂಜಾಬ್
    ರಾಜಧಾನಿ: -Chandigarh
    ಪ್ರದೇಶ: -50362
    ಜನಸಂಖ್ಯೆ: -27704236
   ಸಾಂದ್ರತೆ: -550
   ಸಾಕ್ಷರತೆ: -76,7%
   ಜಿಲ್ಲೆ: -20 +2

22) ರಾಜಸ್ಥಾನ
    ರಾಜಧಾನಿ: -Jaipur
    ಪ್ರದೇಶ: -342239
    ಜನಸಂಖ್ಯೆ: -68621012
    ಸಾಂದ್ರತೆ: -201
    ಸಾಕ್ಷರತೆ: -67% 1
    ಜಿಲ್ಲೆ: -33

23) ಸಿಕ್ಕಿಂ
     ರಾಜಧಾನಿ: - ಗ್ಯಾಂಗ್ಟಾಕ್
     ಪ್ರದೇಶ: -7096
     ಜನಸಂಖ್ಯೆ: -607688
     ಸಾಂದ್ರತೆ: -86
     ಸಾಕ್ಷರತೆ: -82,2%
     ಜಿಲ್ಲೆ: -4

24) ತಮಿಳುನಾಡು
     ರಾಜಧಾನಿ: -Chennai
     ಪ್ರದೇಶ: -130058
     ಜನಸಂಖ್ಯೆ: -72138958
    ಸಾಂದ್ರತೆ: -555
    ಸಾಕ್ಷರತೆ: -80,3%
    ಜಿಲ್ಲೆ: -32

25) ತ್ರಿಪುರ
    ರಾಜಧಾನಿ: -Agartala
    ಪ್ರದೇಶ: -10492
    ಜನಸಂಖ್ಯೆ: -3671032
    ಸಾಂದ್ರತೆ: -350
    ಸಾಕ್ಷರತೆ: -87,8%
    ಜಿಲ್ಲೆ: -4

26) ತೆಲಂಗಾಣ
    ರಾಜಧಾನಿ: -Hyderabad
    ಪ್ರದೇಶ: -114840
    ಜನಸಂಖ್ಯೆ: -35193978
    ಸಾಂದ್ರತೆ: -307
    ಸಾಕ್ಷರತೆ: -
    ಜಿಲ್ಲೆ: -

27) ಉತ್ತರಾಖಂಡ್
    ರಾಜಧಾನಿ: -Dehra ಡನ್
    ಪ್ರದೇಶ: -53484
    ಜನಸಂಖ್ಯೆ: -10116752
    ಸಾಂದ್ರತೆ: -189
    ಸಾಕ್ಷರತೆ: -79,6%
    ಜಿಲ್ಲೆ: -13 +4

28) ಉತ್ತರ ಪ್ರದೇಶ
     ರಾಜಧಾನಿ: -Lucknow
     ಪ್ರದೇಶ: -240928
     ಜನಸಂಖ್ಯೆ: -199581477
     ಸಾಂದ್ರತೆ: -828
     ಸಾಕ್ಷರತೆ: -69,7%
     ಜಿಲ್ಲೆ: -72

29) ಪಶ್ಚಿಮ ಬಂಗಾಳ
     ರಾಜಧಾನಿ: - ಕೋಲ್ಕತಾ
     ಪ್ರದೇಶ: -88752
     ಜನಸಂಖ್ಯೆ: -91347736
     ಸಾಂದ್ರತೆ: -1029
     ಸಾಕ್ಷರತೆ: -77,1%
     ಜಿಲ್ಲೆ: -19

30) ದೆಹಲಿ
    ರಾಜಧಾನಿ: -Delhi
    ಪ್ರದೇಶ: -1483
   ಜನಸಂಖ್ಯೆ: -16753235
   ಸಾಂದ್ರತೆ: -11297
   ಸಾಕ್
ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
ಮಂಗಳೂರಿನ ವೇಳೆ ಭಾರತೀಯ ಪ್ರಮಾಣ ವೇಳೆಗಿಂತ ಅರ್ಧಗಂಟೆ ಹಿಂದೆ ಇರುತ್ತದೆ. ಏಕೆಂದರೆ, ಅದು 75° ಪೂರ್ವ ರೇಖಾಂಶದ ಮೇಲಿದೆ. ಪಶ್ಚಿಮಕ್ಕೆ 7 1/2° ಅಂತರದಲ್ಲಿದೆ.
ಭೂಮಿಯ ತೂಕ 6 ಕೋಟಿ ಟನ್ ಗಳು, ಭೂಮಿಯ ಅಂದಾಜು ವಯಸ್ಸು 4500 ದಶಲಕ್ಷ ವರ್ಷಗಳು, ಭೂಮಿಯು ಸೂರ್ಯನಿಗೆ ಅಂತ್ಯಂತ ಸಮೀಪಿಸುವ ದಿನ ಜನವರಿ 3, ಭೂಮಿಯ ಚಲನೆಯ ವೇಗ 1610 ಕಿ.ಮೀ/ ಗಂಟೆಗೆ.
ಭೂಮಿಯ ವಾರ್ಷಿಕ ಚಲನೆ 365 ದಿನ, 5 ಗಂಟೆ, 48 ನಿಮಿಷ, 46 ಸೆಕೆಂಡ್, ಭೂಮಿಯ ದೈನಂದಿನ ಚಲನೆ 23 ಗಂಟೆ 56 ನಿಮಿಷ, 4.09 ಸೆಕೆಂಡ್ಗಳು.
ಮಂಗಳ ಗ್ರಹದ ಉಪಗ್ರಹಗಳು ಫೋಬೋಸ್ & ಡಿಮೋಸ್, ಗ್ಯಾನಿಮೇಡ್ ಉಪಗ್ರಹವು ಸೌರವ್ಯೂಹದಲ್ಲೇ ಅತಿ ದೊಡ್ಡ ಉಪಗ್ರಹವಾಗಿದೆ.
ಪ್ಲೂಟೋ ಗ್ರಹವನ್ನು 1930 ರಲ್ಲಿ ಟಾಂಬ್ ಎಂಬುವವರು ಆವಿಷ್ಕರಿಸಿದರು. 2006 ರಲ್ಲಿ ಇದು ಗ್ರಹ ಅಲ್ಲವೆಂದು ಘೋಷಿಸಲಾಯಿತು.
ಉಬ್ಬರವಿಳಿತಗಳು ಸಂಭವಿಸುವ ಅವಧಿ ಪ್ರತಿ 12 ಗಂಟೆ 26 ನಿಮಿಷಗಳಿಗೊಮ್ಮೆ,, ಅತ್ಯಂತ ಎತ್ತರವಾದ ಸಾಗರದ ಉಬ್ಬರವಿಳಿತಗಳು ದಾಖಲಾದ ಸ್ಥಳ ಬೇ ಆಫ್ ಘಂಡಿ (ಉತ್ತರ ಅಮೆರಿಕ),
ಭಾರತದಲ್ಲಿ ಎತ್ತರದ ಉಬ್ಬರಗಳು ದಾಖಲಾದ ಸ್ಥಳ ಓಕ, ಉಬ್ಬರವಿಳಿತಗಳ ಪ್ರಗತ್ಯಾತ್ಮಕ ಅಲೆಗಳ ಸಿದ್ದಾಂತವನ್ನು ಪ್ರತಿಪಾದಿಸಿದವರು ಆರ್. ಎ. ಹ್ಯಾರಿಸ್.
ಏಷ್ಯಾ & ಯುರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳೆಂದರೆ ಯೂರಲ್ ಪರ್ವತಗಳು,ಐಯಾನ್ ಪದರವು 80 - 400 k.m ಎತ್ತರದಲ್ಲಿದೆ, ರಾಶಿ- ವೃಷ್ಟಿ ಮೋಡಗಳಿಂದ ಧಾರಾಕಾರ ಮಳೆ ಸುರಿಯುತ್ತದೆ, ಭೂಕಂಪನದ L - ತರಂಗಗಳು ಅತ್ಯಂತ ವಿನಾಶಕಾರಿಯಾಗಿವೆ, ಒಂದು ಭೂಪಟವನ್ನು ಹಿಗ್ಗಿಸಲು ಅಥವಾ ಕುಗ್ಗಿಸಲು ಬಳಸುವಂತಹ ಸಲಕರಣೆ ಪ್ಯಾಂಟೋಗ್ರಾಫ್.
ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನಾಂಗಗಳು
🏻 🏻 🏻 🏻 🏻
ಅಮೆಜಾನ್ ಇಂಡಿಯನ್ ರು 🏻ಅಮೆಜಾನ್ ನದಿ ಪ್ರದೇಶ.
ಪಿಗ್ಮಿಗಳು 🏻ಕಾಂಗೋನದಿ ಪ್ರದೇಶ
ಪಾಪುವನ್ನರು 🏻ಪಪುವ ನ್ಯೂಗಿನಿಯಾ (ತಲೆ ಬೇಟೆಗಾರರು)
ಡಯಾಕ್ ರು 🏻 ಬೋರ್ನಿಯೋ
ಸೇಮಾಂಗ್ 🏻 ಮಲೇಷಿಯಾ
ಹೌಸಾಸ್ 🏻ಉತ್ತರ ನೈಜೀರಿಯ
ಬೆಡೊಯಿನ್ಸ್👉🏻 ಅರೇಬಿಯಾ ಮರುಭೂಮಿ
🌺ತ್ವಾರೆಗ್ಸ್ ( ಬ್ಲೂ ಬೆರ್ಬೆರ್ಸ್)👉🏻ಸಹರಾ ಮರುಭೂಮಿ
🌺ಕಲಹರಿ ಮರುಭೂಮಿ 👉🏻 ಬುಷ್ ಮನ್
🌺ಆಸ್ಟ್ರೇಲಿಯ ಮರುಭೂಮಿ 👉🏻 ಬಿಂಡಿಬಸ್
🌺ಕಿರ್ಗಿಜರು 👉🏻ಮಧ್ಯ ಏಷ್ಯಾ
🌺ದಕ್ಷಿಣ ಏಷ್ಯಾ 👉🏻 ಹೊಟೆಂಟಾಟ್
🌺ಮಾವೊರಿ ಜನಾಂಗ 👉🏻 ನ್ಯೂಜಿಲ್ಯಾಂಡ್
💐ಪ್ರಪಂಚದ ಹಣ್ಣಿನ ತೋಟಗಳೆಂದು ಹೆಸರುವಾಸಿಯಾಗಿರುವುದು ಮೆಡಿಟರೇನಿಯನ್ ಪ್ರದೇಶ, ಚರ್ನೊಜಮ್ಸ್ ಎಂದರೆ, ಸಮಶೀತೋಷ್ಣ ವಲಯದ ಹುಲ್ಲುಗಾವಲಿನ ಕಪ್ಪು ಮಣ್ಣು, ಮೃತ್ಯುಕ ಸೇವೆ ಎಂಬ ಭೂಭಾಗ ದಕ್ಷಿಣ ಅಮೆರಿಕದ ಅತ್ಯಂತ ಕೆಳಮಟ್ಟದ ಸ್ಥಳ,ಸಿವಾಲಿಕ್ ಬೆಟ್ಟಗಳ ಶ್ರೇಣಿಯಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿಗೆ 'ಡೂನ್ 'ಗಳೆನ್ನುವರು.
🌷ವರ್ಗಾವಣೆ ಬೇಸಾಯವನ್ನು ವಿವಿಧ ರಾಜ್ಯಗಳಲ್ಲಿ ಕರೆಯುವ ಹೆಸರುಗಳು🌷
👇🏻👇🏻👇🏻👇🏻👇🏻
🍃ಕರ್ನಾಟಕ 👉🏻ಕುಮರಿ
🍃ಅಸ್ಸಾಂ 👉🏻ಜೂಮಿಂಗ್
🍃ಕೇರಳ👉🏻ಪೊನಮ್
🍃ಆಂಧ್ರಪ್ರದೇಶ👉🏻ಪಿಡುಗು
🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷
👇🏻👇🏻👇🏻👇🏻👇🏻
🌴ಮಣ್ಣು ಸಂಶೋಧನಾ ಸಂಸ್ಥೆ👉🏻 ಭೊಪಾಲ್.
🌴ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ👉🏻 ಕಾನ್ಪುರ.
🌴ತರಕಾರಿ ಸಂಶೋಧನಾ ಸಂಸ್ಥೆ👉🏻ವಾರಣಾಸಿ.
🌴ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ 👉🏻 ಬಿಕನೆರ್
🌴ಸೆಣಬು ಸಂಶೋಧನಾ ಸಂಸ್ಥೆ 👉🏻ಬ್ಯಾರಕ್ ಪುರ.
🌴ಜೇನು ಸಂಶೋಧನಾ ಸಂಸ್ಥೆ 👉🏻ಪುಣೆ
🌴ಮೆಕ್ಕೆಜೋಳ ಸಂಶೋಧನಾ ಸಂಸ್ಥೆ👉🏻 ಮಂಡ್ಯ.
🌴ನೆಲಗಡಲೆ ಸಂಶೋಧನಾ ಸಂಸ್ಥೆ 👉🏻ಜುನಾಗಡ್
🌴ಖನಿಜ ಸಂಶೋಧನಾ ಸಂಸ್ಥೆ 👉🏻 ಧನಾಬಾದ್
🌴ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ 👉🏻 ಕಲ್ಲಿಕೋಟೆ .
🌴ಆಲೂಗಡ್ಡೆ ಸಂಶೋಧನಾ ಸಂಸ್ಥೆ 👉🏻 ಶಿಮ್ಲಾ .
🌷ಭಾರತದ ಆರ್ಥಿಕತೆಯಲ್ಲಿ ಕ್ರಾಂತಿಗಳು🌷
👇🏻👇🏻👇🏻👇🏻👇🏻
🍃ರಜತನಾರು 👉🏻ಹತ್ತಿ ಉತ್ಪಾದನೆ
🍃ರಜತ 👉🏻ತತ್ತಿ
🍃ಕೆಂಪು 👉🏻ಮಾಂಸ/ ಟೊಮೆಟೊ
🍃ವೃತ್ತ👉🏻ಆಲೂಗಡ್ಡೆ ಉತ್ಪಾದನೆ.
🍃ಗುಲಾಬಿ 👉🏻 ಸಮುದ್ರದಲ್ಲಿನ ಚಿಕ್ಕ ಜೀವರಾಶಿಯ ರಕ್ಷಣೆ.
🍃ಕಂದು 👉🏻 ಮಸಾಲೆ ಪದಾರ್ಥಗಳು
🍃ಸ್ವರ್ಣ👉🏻ಹಣ್ಣುಗಳು/ಸೇಬು
🍃ಬೂದಿಬಣ್ಣದ ಕ್ರಾಂತಿ 👉🏻 ರಸಗೊಬ್ಬರಗಳು
💐ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರೊಯ್ಲಿ ,
ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ಸ್ಥಳ ಚಳ್ಳಕೆರೆ,
ಭಾರತದ ಸರಾಸರಿ ಮಳೆಯ ಪ್ರಮಾಣ 118 ಸೆಂ.ಮೀ ,
ಮೌಸಿನ್ರಾಮ್ ಅತಿ ಹೆಚ್ಚು ಮಳೆ ಪಡೆಯಲು ಕಾರಣವಾಗುವ ಪರ್ವತ ಖಾಸಿ ಬೆಟ್ಟ,
ಉತ್ತರ ಪ್ರದೇಶದಲ್ಲಿ ಸುಂಟರಗಾಳಿಗೆ ಹೀಗೆ ಕರೆಯುವರು ಆಂಧೀಸ್.
💐ಭಾರತದ ಪ್ರಮುಖ ಅರಣ್ಯಜೀವಿ ಧಾಮಗಳು💐
👇🏻👇🏻👇🏻👇🏻👇🏻
🍃ಸರಸ್ವತಿ ಕಣಿವೆ ಅರಣ್ಯ ಧಾಮ 👉🏻ಶಿವಮೊಗ್ಗ.
🍃ಅಚಾನಕ್ಮಾರ್ 👉🏻ಛತ್ತೀಸ್ ಘರ್.
🍃ಬಂದಾವ್ ಗರ್👉🏻 ಮಧ್ಯ ಪ್ರದೇಶ
🍃ವೈಲ್ಡ್ ಆ್ಯಸ್👉🏻 ಗುಜರಾತ್
🍃ಗಾಂಧಿಸಾಗರ 👉🏻ಮಧ್ಯ ಪ್ರದೇಶ
🍃ಹಜಾರಿಬಾಗ್👉🏻 ಜಾರ್ಖಂಡ್
🍃ಪಚಮಾರಿ👉🏻 ಮಧ್ಯಪ್ರದೇಶ
🍃ಶಿಕಾರಿದೇವಿ 👉🏻ಹಿಮಾಚಲ ಪ್ರದೇಶ
🍃ತಾನ್ಸ್👉🏻 ಮಹಾರಾಷ್ಟ್ರ
💐ಭಾರತದ ಪ್ರಥಮ ಜೀವಗೋಳ ಸಂರಕ್ಷಣೆ ಸ್ಥಾಪನೆಯಾದ ಸ್ಥಳ ನೀಲಗಿರಿ (ತಮಿಳುನಾಡು),
ಕಾಡು ಕತ್ತೆಗಳ ಸಂರಕ್ಷಣಾ ಕೇಂದ್ರ ಇರುವ ರಾಜ್ಯ ಗುಜರಾತ್,
ಭಾರತದಲ್ಲಿರುವ ಅರಣ್ಯ ಪ್ರದೇಶ ಸುಮಾರು 687.5 ಲಕ್ಷ ಹೆಕ್ಟೇರು.,
ಭಾರತದಲ್ಲಿಯೇ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಒರಿಸ್ಸಾ.,
ಭಾರತದಲ್ಲಿ ಅತಿ ಹೆಚ್ಚು ಶೇಕಡಾ ಪ್ರಮಾಣದ ಬಿತ್ತನೆ ಪ್ರದೇಶವುಳ್ಳ ರಾಜ್ಯ ಪಂಜಾಬ್

KSOU ವಿದ್ಯಾರ್ಥಿಗಳಿಗೊಂದು
ಶಾಕಿಂಗ್ ನ್ಯೂಸ್:~

ಪರೀಕ್ಷೆ ಪಾಸಾದರೂ ಆಯ್ಕೆ ಅವಕಾಶ ಇಲ್ಲ!!!!!

ಕೆಎಸ್‌ಓಯುನಿಂದ ಪದವಿ ಪಡೆದವರು ಅತಂತ್ರ.!!!!!

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.!!!!

*ಎಫ್‌ಡಿಎ: 22ಕ್ಕೆ ಅಂತಿಮ ಆಯ್ಕೆ ಪಟ್ಟಿ

*ಎಫ್‌ಡಿಎ: ಕೆಪಿಎಸ್‌ಸಿಗೆ ಕೆಎಸ್ಓಯು ಅಭ್ಯರ್ಥಿಗಳು ಅರ್ಹರಲ್ಲ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಓಯು) ಪದವಿ ಪಡೆದ ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಅರ್ಹರಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಾರಿದೆ.

ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) 2012–13ನೇ ಸಾಲಿನಿಂದ ಕೆಎಸ್‌ಓಯು ಮಾನ್ಯತೆ ರದ್ದುಪಡಿಸಿರುವುದೇ ಇದಕ್ಕೆ ಕಾರಣ.

2,345 ಎಫ್‌ಡಿಎ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ 2015ರ ಅ. 4ರಂದು ಪರೀಕ್ಷೆ ನಡೆಸಿತ್ತು. ಅರ್ಜಿ ಸಲ್ಲಿಸಿದ್ದ 8.04 ಲಕ್ಷ ಅಭ್ಯರ್ಥಿಗಳ ಪೈಕಿ 6.16 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ತೇರ್ಗಡೆಯಾದವರ ಪೈಕಿ 1:2 (ಒಂದು ಹುದ್ದೆಗೆ ಇಬ್ಬರು ಅಭ್ಯರ್ಥಿಗಳು) ಅನುಪಾತದಲ್ಲಿ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿತ್ತು.

ಜೂನ್‌ 6ರಂದು ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಕೆಎಸ್‌ಓಯುಗೆ ಯುಜಿಸಿ ಮಾನ್ಯತೆ ಇಲ್ಲ ಎಂಬ ಕಾರಣಕ್ಕೆ 2012–13ರ ಮತ್ತು 2013–14ರ ಸಾಲಿನಲ್ಲಿ ಪದವಿ ಮುಗಿ ಸಿದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿದೆ.

‘ಎಫ್‌ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ನನಗೆ, ದಾಖಲೆಗಳ ಪರಿಶೀಲನೆಗೆ ಜೂನ್‌ 4ರಂದು ಬೆಂಗಳೂರಿನಲ್ಲಿರುವ ಉದ್ಯೋಗಸೌಧಕ್ಕೆ ಬರುವಂತೆ ಪತ್ರ ಬಂದಿತ್ತು. ಆಗ ನಾನು ಸರ್ಕಾರಿ ಕೆಲಸ ಸಿಕ್ಕೇ ಬಿಡ್ತು ಎಂಬಷ್ಟು ಸಂಭ್ರಮಿಸಿದ್ದೆ. 2013–14ನೇ ಸಾಲಿನಲ್ಲಿ ಕೆಎಸ್‌ಓಯುನಿಂದ ಕಲಾ ವಿಷಯದಲ್ಲಿ ಪದವಿ ಪಡೆದಿದ್ದೇನೆ. ಆದರೆ, ದಾಖಲೆ ಗಳ ಪರಿಶೀಲನೆ ವೇಳೆ ಕೆಎಸ್‌ಓಯುಗೆ ಮಾನ್ಯತೆ ಇಲ್ಲ ಎಂದು ನನ್ನ ಅರ್ಜಿಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ತೆಗೆದಿಟ್ಟರು’ ಎಂದು ಕೊರಟಗೆರೆ ರುಕ್ಸಾನಾ ‘ಪ್ರಜಾ ವಾಣಿ’ ಜೊತೆ ಅಳಲು ತೋಡಿಕೊಂಡರು.

‘ಯಾವುದಾದರೂ ವಿಶ್ವವಿದ್ಯಾಲಯ ದಿಂದ ಪದವಿ ಪಡೆದಿರಬೇಕು ಎಂದು ಅರ್ಜಿ ಸಲ್ಲಿಸುವ ವೇಳೆ ಸೂಚನೆ ನೀಡ ಲಾಗಿತ್ತು. ಹೀಗಾಗಿ ₹ 300 ಶುಲ್ಕ ಪಾವ ತಿಸಿ ಅರ್ಜಿ ಸಲ್ಲಿಸಿದ್ದೆ. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ’ ಎಂದು ಬೇಸರಿಸಿದರು.

‘ನಾನು ಶೇ 59 ಅಂಕ ಪಡೆದು ಕೆಎಸ್‌ಓಯುನಲ್ಲಿ ಪದವಿ ಮುಗಿಸಿದ್ದೇನೆ. ಅಲ್ಲದೆ, ಮೈಸೂರು ವಿವಿ ಅಡಿಯಲ್ಲಿ ಬರುವ ಯಡತೊರೆ ವಿದ್ಯಾಸಂಸ್ಥೆಯಿಂದ ಶೇ 94 ಅಂಕ ಪಡೆದು ಬಿ.ಎಡ್‌ ಕೂಡಾ ಮಾಡಿದ್ದೇನೆ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸಹ ತೇರ್ಗಡೆಗೊಂಡಿದ್ದೇನೆ. ಮಾನ್ಯತೆ ಇಲ್ಲದ ವಿ.ವಿಯಿಂದ ಪದವಿ ಪಡೆದಿದ್ದೇನೆ ಎಂಬ ಕಾರಣ ನೀಡಿ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಮೈಸೂರು ಜಿಲ್ಲೆ ಕೆ.ಆರ್‌. ನಗರದ ಫರ್ಹಾನಾ ಬಾನು ಹೇಳಿದರು.

‘ಬಡ ಕುಟುಂಬದಲ್ಲಿ ಹುಟ್ಟಿರುವ ನಾನು, ಕಷ್ಟಪಟ್ಟು ಪದವಿ ಮುಗಿಸಿದ್ದೆ. ಖಾಸಗಿಯಾಗಿ ಬಿ.ಎಡ್‌. ಮುಗಿಸಲು ₹ 75 ಸಾವಿರ ಖರ್ಚು ಆಗಿದೆ. ಎಫ್‌ಡಿಎ ಹುದ್ದೆ ಸಿಗುವ ಎಲ್ಲ ವಿಶ್ವಾಸ ಇತ್ತು. ಆದರೆ ಪದವಿಗೇ ಮಾನ್ಯತೆ ಇಲ್ಲ ಎಂದ ಮೇಲೆ ಬಿ.ಎಡ್‌., ಟಿಇಟಿ ತೇರ್ಗಡೆ ಮಾಡಿದ್ದರೂ ಏನು ಪ್ರಯೋಜನ?’ ಎಂದು ಕಣ್ಣೀರು ಹಾಕಿದರು.

‘ಎಫ್‌ಡಿಎ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. 2012– 13ನೇ ಸಾಲಿನಲ್ಲಿ ಕೆಎಸ್‌ಓಯುನಲ್ಲಿ ಪದವಿ ಪಡೆದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ತಿರಸ್ಕರಿಸಲಾಗಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ತಿಳಿಸಿದರು.

‘ಕೆಎಸ್‌ಓಯು ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರು ನನ್ನನ್ನು ಭೇಟಿಯಾಗಿ ಕೆಎಸ್‌ಓಯುನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ವಿಶ್ವ ವಿದ್ಯಾಲಯಕ್ಕೆ ಮಾನ್ಯತೆ ಇಲ್ಲ ಎಂದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾನೂನು ಪ್ರಕಾರ ಅವಕಾಶ ಇಲ್ಲ. ಎಫ್‌ಡಿಎ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಇದೇ 22ಕ್ಕೆ ಪ್ರಕಟಿಸಲಾಗುವುದು’ ಎಂದು ಅವರು ವಿವರಿಸಿದರು.

ಕಣ್ಣಿನ ಬಗ್ಗೆ ಇಲ್ಲಿಯ ವರೆಗೆ ವೈಜ್ಞಾನಿಕ ಸಂಶೋಧನೆಗಳು ಹೊರಹಾಕಿರೋ 30 ನಂಬಲಾರದ ಸತ್ಯಗಳು


ಕ್ಯಾಮೆರಾ ಗೀಮೆರಾ ಎಲ್ಲ ಯಾವ ಮೂಲೆ?

ಮನುಷ್ಯನ ಕಣ್ಣು ನಿಜವಾಗಲೂ ಎಷ್ಟೊಂದು ವಿಶೇಷತೆಗಳನ್ನ ಹೊಂದಿದೆ ಅಂದ್ರೆ ಅದರ ಬಗ್ಗೆ ತಿಳ್ಕೋತಾ ಹೋದಷ್ಟೂ ಕುತೂಹಲ ಜಾಸ್ತಿ ಆಗ್ತಾ ಹೋಗುತ್ತೆ. ಈ ಕುತೂಹಲ ವಿಜ್ಞಾನಿಗಳ್ನ ಸತತವಾಗಿ ಕಣ್ಣಿನ ಬಗ್ಗೆ ಸಂಶೋಧನೆಗಳಿಗೆ ಹಚ್ಚಿದೆ. ನಮ್ ಮೈಯ್ಯಲ್ಲಿರೋ ಒಂದು ಸಣ್ಣ ಅಂಗದ ಕೀರ್ತಿ ಅಂತಿಂಥದ್ದಲ್ಲ! ಇಲ್ಲೀವರೆಗಿನ ಸಂಶೋಧನೆಗಳ ಪ್ರಕಾರ ಕಣ್ಣಿನ ಬಗ್ಗೆ ಈ 30 ವಿಷಯಗಳ್ನ ಓದಿ ನಿಮಗೆ ಆಶ್ಚರ್ಯ ಆಗೋದು ಖಂಡಿತ...

1. ನೀವು ತುಂಬಾ ಪ್ರೀತಿಸೋ ವ್ಯಕ್ತೀನ ನೋಡಿದಾಗ ನಿಮ್ಮ ಕಣ್ಣಿನ ಪಾಪೆ 45% ಹಿಗ್ಗುತ್ತೆ!
ಇದನ್ನ ನೀವೇ ಗಮನಿಸ್ಕೊಳಕ್ಕಾಗಲ್ಲ.

2. ನಮ್ಮ ಕಣ್ಣಿಗೆ ಕಾಣೋದು ಬರೀ 3 ಮೂಲಭೂತ ಬಣ್ಣಗಳು ಮಾತ್ರ (ಕೆಂಪು-ಹಸಿರು-ನೀಲಿ)
ಉಳಿದೆಲ್ಲಾ ಬಣ್ಣಗಳೂ ಇವುಗಳ ಹೊಂದಾಣಿಕೆ ಇಂದಾನೇ ಆಗಿರುತ್ವೆ.

3. ಒಂದೊಂದು ಕಣ್ಣಲ್ಲೂ 107 ಮಿಲಿಯನ್ ಜೀವಕೋಶಗಳಿರುತ್ವೆ
ಅವೆಲ್ಲಾವೂ ತುಂಬಾ ಸೂಕ್ಷ್ಮವಾದುವು. ತುಂಬಾ ಬೆಳಕಿದ್ರೆ ನಲುಗಿ ಹೋಗುತ್ವೆ.

4. ಗಂಡಸ್ರಲ್ಲಿ 8% ಜನರಿಗೆ ಎಲ್ಲಾ ಬಣ್ಣಗಳೂ ಕಾಣೋದಿಲ್ಲ
ಕೆಲವ್ರಿಗೆ ಹಸಿರು ಕಾಣಲ್ಲ, ಕೆಲವ್ರಿಗೆ ಕೆಂಪು ಕಾಣಲ್ಲ. ಕೆಲವರ್ಗೆ ಎಲ್ಲಾ ಕಪ್ಪು-ಬಿಳುಪೇ!

5. ತಾಯಿ ಹೊಟ್ಟೇಲಿ ಮಗೂಗೆ 2 ತಿಂಗ್ಳಾಗಿದ್ದಾಗ್ಲೇ ಕಣ್ ಬೆಳೆಯಕ್ ಶುರುವಾಗಿರುತ್ತೆ
ಅಂದ್ರೆ ಎಷ್ಟು ಮುಖ್ಯ ಇರಬೇಕು ನೋಡಿ!

6. ಪ್ರತಿಯೊಂದು ಕಣ್ಣಿನ ತೂಕ ಸುಮಾರು 8 ಗ್ರಾಂ ಇರುತ್ತೆ
ಅಗಲ ಸುಮಾರು 2.5 ಸೆಂಟಿಮೀಟರ್ ಇರುತ್ತೆ.

7. ಕಣ್ಣಿನ ಗುಡ್ಡೆಯಲ್ಲಿ ನಮ್ಗೆ ಕಾಣೋದು ಬರೀ ಆರನೇ ಒಂದು ಭಾಗ ಮಾತ್ರ
ಉಳಿದದ್ದು ಒಳಗಿರುತ್ತೆ

8. ಒಂದು ಅಂದಾಜಿನ್ ಪ್ರಕಾರ ನಮ್ ಇಡೀ ಜೀವನ್ದಲ್ಲಿ ನಮ್ ಕಣ್ಣು ಸುಮಾರ್ 2.4 ಕೋಟಿ ನೋಟಗಳ್ನ ನೋಡಿರುತ್ತೆ!
ಸಾಕಾ?

9. ಹೆಬ್ಬೆಟ್ಟಿನ ಗುರುತಿನ ಥರ ಕಣ್ಣಲ್ಲಿರೋ "ಐರಿಸ್" ಕೂಡಾ ನಿಮ್ಮದೇ ಆದ ಗುರುತಾಗಿರುತ್ತೆ

ನೀವ್ ಹೆಬ್ಬೆಟ್ ಒತ್ದಾಗ ಆ ಗುರುತಲ್ಲಿ ಸುಮಾರು 40 ತಮ್ಮದೇ ಆದ ಗುಣ ಲಕ್ಷಣಗಳು ಕಾಣುತ್ವೆ. ಇದು ಒಬ್ಬೊಬ್ರಿಗೂ ಬೇರೆ ಥರಾನೇ ಇರುತ್ತೆ. ನಿಮ್ ಹೆಬ್ಬೆಟ್ಟಿನ ಥರ ಇನ್ನೊಬ್ರ ಹೆಬ್ಬೆಟ್ ಇರಲ್ಲ. ಅದೇ ಥರ ಕಣ್ಣಲ್ಲಿ ಐರಿಸ್ ಅಂತ ಇರುತ್ತೆ - ಅದ್ರಲ್ಲಿ 256 ಲಕ್ಷಣಗಳಿರುತ್ವೆ. ಅದಕ್ಕೇ ಇರ್ಬೇಕು ಸೆಕ್ಯುರಿಟಿ ಹೆಚ್ಚಿಸೋಕ್ಕೆ ಇತ್ತೀಚೆಗೆ ಹೆಬ್ಬೆಟಿನ್ ಬದ್ಲು ಕಣ್ಣನ್ನೇ ಸ್ಕ್ಯಾನ್ ಮಾಡೋದೇ ಜಾಸ್ತಿ ಆಗ್ತಾ ಇರೋದು.

10. ಕಣ್ ರೆಪ್ಪೇನ ಅಲ್ಲಾಡಿಸಿದಷ್ಟು ಸುಭವಾಗಿ ನಾವು ಮೈಯ್ಯಲ್ಲಿ ಬೇರೆ ಯಾವ್ದೇ ಮಾಂಸ ಖಂಡಾನ ಅಲುಗಾಡಿಸೋಕ್ಕಾಗಲ್ಲ
ನಮ್ ಇಡೀ ಮಯ್ಯಲ್ಲಿ ಕಣ್ ರೆಪ್ಪೆನೇ ತುಂಬಾ ಬೇಗ ಅಲುಗೋಕ್ಕಾಗೋದು. ಒಂದ್ ಸೆಕೆಂಡಲ್ಲಿ ನಾವು 5 ಸಲ ಕಣ್ ಮಿಟುಕಿಸ್ಬೋದು! ಒಂದ್ ಸಲ ಕಣ್ ಮಿಟುಕ್ಸಕ್ಕೆ 100-150 ಮಿಲಿಸೆಕೆಂಡ್ ಬೇಕಾಗುತ್ತಂತೆ! ಒಂದ್ ನಿಮಿಶದಲ್ಲಿ ಸುಮಾರು 17 ಸಲ ಕಣ್ ಮಿಟುಕಿಸ್ತೀವಿ. ದಿನದಲ್ಲಿ 14,280 ಸಲ, ವರ್ಷದಲ್ಲಿ 52 ಲಕ್ಷ ಸಲ!

11. ಒಂದ್ ಗಂಟೇಲಿ ಕಣ್ಣು ಸುಮಾರು 36,000 ಮಾಹಿತಿಯ ತುಣುಕುಗಳ್ನ ಮೆದುಳಿಗೆ ತಂದು ಒಪ್ಪಿಸುತ್ತೆ
ಅಂದರೆ ಸೆಕೆಂಡಿಗೆ 10.

12. ಹತ್ತು ಸಾವಿರ ವರ್ಷದ ಹಿಂದೆ ಎಲ್ಲರ ಕಣ್ಣು ಕಂದು ಬಣ್ಣದ್ದೇ ಆಗಿತ್ತು
ತುಂಬಾ ಹಿಂದೆ ಎಲ್ಲಾರ್ಗೂ ಕಣ್ಣು ಕಂದು ಬಣ್ಣಕ್ಕೇ ಇತ್ತಂತೆ! ಯಾವನೋ ಒಬ್ಬಂಗೆ ಅದೆಂಗೋ ನೀಲಿ ಕಣ್ ಬಂತಂತೆ ಆಮೇಲೆ ತುಂಬಾ ಜನಕ್ಕೆ ನೀಲಿ ಕಣ್ ಬರೋಕ್ಕೆ ಶುರುವಾಯ್ತಂತೆ. ಈ ಲೆಕ್ಕದ್ ಪ್ರಕಾರ ನೀಲಿ ಕಣ್ ಇರೋರೆಲ್ಲಾ ಒಂದಲ್ಲಾ ಒಂದ್ ಥರ ದೂರದ್ ನೆಂಟ್ರೇ! ಕಂದು ಬಣ್ಣದ ಕಣ್ ಗುಡ್ಡೆ ಇರೋರಿಗೆ, ಕಣ್ಣಿನ ಕೆಳಗಿನ ಪದರ ನೀಲಿ ಇರುತ್ತೆ. ಲೇಸರ್ ಕೈಚಳಕದಿಂದ ಶಾಶ್ವತವಾಗಿ ಕಣ್ಣನ್ನ ನೀಲಿಯಾಗೋಹಾಗ್ ಮಾಡ್ಬೋದಂತೆ!

13. ನಿಮ್ ಕಣ್ಣು ಒಂದ್ ಸೆಕೆಂಡಲ್ಲಿ ಸುಮಾರ್ 50 ವಸ್ತುಗಳನ್ನ ನೋಡುತ್ತೆ!
ಇದರಲ್ಲಿ ಹತ್ತು ಮಾತ್ರ ಮೆದುಳಿಗೆ ಹೋಗುತ್ತೆ.

14. ಕಣ್ಣು ಮೆದುಳಿಗೆ ಕಳಿಸೋ ಚಿತ್ರಗಳು ತಲೆಕೆಳಗಾಗಿರುತ್ತವೆ!
ಇದೊಂತರಾ ಕ್ಯಾಮರಾ ಥರ. ಫೋಟೋ ತೆಗ್ದು ಮೆದುಳಿಗೆ ಕಳಿಸ್ತಾ ಇರುತ್ತೆ.

15. ಮೈಯ್ಯಲ್ಲಿರೋ ಎಲ್ಲಾ ಅಂಗಗಳಿಗೆ ಹೋಲಿಸಿದರೆ ಕಣ್ಣೇ ತುಂಬಾ ಚುರುಕು
ಬೇರೆ ಅಂಗಗಳಿಗೆಲ್ಲಾ ಚುರುಕಾಗಕ್ಕೆ ಸೊಲ್ಪ ಹೊತ್ತು ತಗೊಳುತ್ತೆ. ಆದ್ರೆ ಕಣ್ಣು ಯಾವಾಗ್ಲೂ ಚುರುಕಾಗಿರುತ್ತೆ.

16. 5 ತಿಂಗ್ಳಿಗೆ ಒಂದ್ ಸಲ ಕಣ್ರೆಪ್ಪೆ ಕೂದ್ಲು ಬದಲಾಗುತ್ತೆ!
ಎಷ್ಟೇ ಆದರೂ ಕೂದಲಲ್ಲವೇ? ಬೀಳಲೇ ಬೇಕು...

17. ಫೋಟೋನಲ್ಲಿ ಒಂದು ಕಣ್ಣಲ್ಲಿ ಮಾತ್ರ ಕೆಂಪು ಚುಕ್ಕಿ ಕಂಡ್ರೆ ಅದು ಕಣ್ಣಿನ ಕ್ಯಾನ್ಸರ್ ಇರಬಹುದು
ಫ್ಲಾಶ್ ಹಾಕಿ ತೆಗೆದ ಫೋಟೋದಲ್ಲಿ ಮಾತ್ರ ಈ ಥರ. ಪುಣ್ಯ ಏನಂದ್ರೆ, ಇದಕ್ಕೆ ಔಷದಿ ಇದೆ, 95% ಸರಿ ಮಾಡ್ಬೋದಂತೆ...

18. ನಮ್ಮಲ್ಲಿ ಕೆಲವರು ಮೆಳ್ಗಣ್ಣು ಇರೋದು ಅದೃಷ್ಟ ಅಂತಾರೆ
ಆದರೆ ಯಾಕೋ ಗೊತ್ತಿಲ್ಲ.
19. ಮನುಷ್ಯನ್ನ ಬಿಟ್ಟರೆ ನಾಯಿಗಳಿಗೆ ಮಾತ್ರ ಕಣ್ಸನ್ನೆ ಅರ್ಥವಾಗೋದು
ಬೇರೆ ಯಾವ್ದೇ ಪ್ರಾಣಿಗೆ ಅದು ಆಗಲ್ಲ. ಅಷ್ಟೇ ಅಲ್ಲ, ನಾಯಿಗಳಿಗೆ ಮನುಷ್ಯರ ಕಣ್ಸನ್ನೆ ಮಾತ್ರ ಅರ್ಥವಾಗೋದು.

20. ಹೆಂಗಸರಿಗೆ ಗಂಡಸರಿಗಿಂತ ಜಾಸ್ತಿ ಬಣ್ಣಗಳು ಕಾಣಿಸುತ್ತವೆ
ಎಲ್ಲಾ ಹೆಂಗಸ್ರೂ ಅಲ್ಲ... ಹೆಂಗಸ್ರಲ್ಲಿ 2% ಜನಕ್ಕೆ ಮಾತ್ರ ಕಣ್ಣಲ್ಲಿ ಒಂದು ಅಪರೂಪದ ಗುಣ ಇರುತ್ತೆ; ಇದ್ರಿಂದ ಔರು ಸುಮಾರು 10 ಕೋಟಿ ಬಣ್ಣಗಳನ್ನ ನೋಡ್ಬೋದಂತೆ!

21. ಕಣ್ಣಿಗೆ ಕಾಣದೇ ಇರೋ ಬಣ್ಣಗಳೂ ಇವೆ!
ಕಣ್ಣಿಗೆ ಕೆಲವು ಬಣ್ಣ ನೋಡಕ್ಕಾಗಲ್ಲ. ಅಂತಾ ಬಣ್ಣಗಳನ್ನ "ಇಂಪಾಸಿಬಲ್ ಕಲರ್ಸ್" ಅಂತಾರಂತೆ. ನಾವ್ ಕನ್ನಡದಲ್ಲಿ "ಕಾಣಲಾಗದ ಬಣ್ಣಗಳು" ಅನ್ಬೋದು.

22. ಪ್ರಾಣಿಗಳಿಗೆ ಮೊದ್ಲು ಕಣ್ ಬಂದಿದ್ದು 50 ಕೋಟಿ ವರ್ಷಗಳ ಹಿಂದೆಯಂತೆ
ಇದು ಫೋಟೋರಿಸೆಪ್ಟರ್ ಪ್ರೋಟೀನಿಂದ ಮೊದ್ಲು ಹುಟ್ಟಿದ್ದಂತೆ!

23. ಈಗತಾನೇ ಹುಟ್ಟಿದ ಮಕ್ಕಳಿಗೆ ಬಣ್ಣಗಳು ಕಾಣಲ್ಲ
ಅಂದರೆ ಅವುಗಳಿಗೆ ‘ಬಣ್ಣಗುರುಡು’ ಇರುತ್ತದೆ.

25. ಕಣ್ಣಿಗೆ ಆಗೋ ಕೆಲವು ಗಾಯಗಳು ಬಹಳ ಬೇಗ ವಾಸಿ ಆಗುತ್ತವೆ
ಸರಿಯಾಗಿ ಆರೈಕೆ ಮಾಡ್ಕೊಂಡ್ರೆ ಕಾರ್ನಿಯಾ ಮೇಲೆ ತರಚುಗಾಯ ಆದ್ರೂ 48 ಗಂಟೆಗಳಲ್ಲಿ ಸರಿಹೋಗ್ಬೋದಂತೆ.

26. ಕಣ್ಣಿನಷ್ಟು ಬೇಗ ಯಾವ ಕ್ಯಾಮರಾಗೂ ಫೋಕಸ್ ಮಾಡಕ್ಕಾಗಲ್ಲ
ಪ್ರಪಂಚದ ಬೇರೆಯಾವ್ದೇ ಕ್ಯಾಮರಾದಲ್ಲಿ ನೀವು ಆಟೋ ಫೋಕಸ್ ಇಟ್ರೂ, ನಿಮ್ ಕಣ್ಣಿನ ಲೆನ್ಸಿನಷ್ಟು ಸ್ಪೀಡಾಗಿ ಕ್ಯಾಮರಾ ಫೋಕಸ್ ಕೆಲ್ಸ ಮಾಡಕ್ಕಾಗಲ್ಲ!

27. ನಾವು ಕಣಿಂದ ನೋಡಲ್ಲ, ಮೆದುಳಿಂದ ನೋಡ್ತೀವಿ
ಎಷ್ಟೋಸಲ ಕಣ್ ಮಂಜಾಗೋದು, ಕಣ್ ಕತ್ಲಾಗೋದು ಅದೆಲ್ಲಾ ಮೆದುಳಿನ ಸಮಸ್ಯೆಗಳಾಗಿರುತ್ವೆ. ಕಣ್ಣಲ್ಲಿ ಯಾವ್ದೇ ತೊಂದ್ರೆ ಇರಲ್ಲ.

28. ಮನುಷ್ಯನ ಕಣ್ಣಿಗೆ ಶಾರ್ಕ್ ಮೀನಿನ ಕಣ್ಣಿನ ಕಾರ್ನಿಯಾ ಜೋಡಿಸಬೋದು
ಮನುಷ್ಯನ ಕಣ್ಣಿನ ಕಾರ್ನಿಯಾಗಳು ಶಾರ್ಕ್ ಮೀನಿನ ಕಣ್ಣಿನ ಕಾರ್ನಿಯಾಗಳಿಗೆ ಎಷ್ಟು ಹತ್ತಿರವಾಗಿರುತ್ತೆ ಅಂದ್ರೆ, ಮನುಷ್ಯನ ಕಣ್ಣಿಗೆ ಶಾರ್ಕ್ ಮೀನಿನ ಕಾರ್ನಿಯಾ ಜೋಡಿಸಬೋದು

29. ಹುಟ್ಟಿನಿಂದ ಕುರುಡು ಇಲ್ದೇ ಇರೋರು ಕನಸು ಕಾಣ್ಬೋದು
ಹುಟ್ಟಿನಿಂದಾನೇ ಕುರುಡಾಗಿದ್ರೆ ಕನಸು ಕಾಣೋಕ್ಕಾಗಲ್ಲ.

30. ನಿಮ್ಮ ಮೆದುಳಿಗೆ 65% ಕೆಲಸ ಕಣ್ಣುಗಳೇ ಕೊಡುತ್ವೆ
ಬೇರೆ ಯಾವ್ದೇ ಅಂಗ ಮೆದುಳಿಂದ ಇಷ್ಟೊಂದ್ ಕೆಲ್ಸ ತೆಗಿಯಲ್ಲ.