'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು
'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ.
ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ
ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ
ಬಾರಿಸುತ್ತಿದೆ. ಆಗಿದ್ದು ಆಗಿ ಹೋಯಿತು ಎಂದು
ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ
ವರೆಸಿಕೊಳ್ಳುವ ದುರಂತ ಇದಲ್ಲ. ಈ
ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು,
ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are
Twenty, Problems are Plenty ಎಂಬುದನ್ನು
ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ ಸುಮಾರು 20 ಅಂಶಗಳನ್ನು
ಚಲನಚಿತ್ರರಂಗದ ಪಾದಾರವಿಂದಗಳಲ್ಲಿ
ಅರ್ಪಿಸುತ್ತಿದ್ದಾರೆ.
ಓದಿ
1: ತಿಪ್ಪಗೊಂಡನಹಳ್ಳಿ ಜಲಾಶಯದ ನಿಷೇಧಿತ
ಪ್ರದೇಶಗಳಲ್ಲಿ ಚಿತ್ರೀಕರಿಸಬಾರದು ಅಂತ
ಜಲಮಂಡಳಿ ಷರತ್ತು ವಿಧಿಸಿದ್ದರೂ,
ಉಲ್ಲಂಘಿಸಿದ್ದು ಯಾಕೆ?
2: ನೀರಿನಲ್ಲಿ ಚಿತ್ರೀಕರಣ ಮಾಡಬಾರದು
ಅಂತ ಹೇಳಿದ್ದರೂ, ಆ ಕೆಲಸ ಮಾಡಲು ಅಂಥ
ಕಾರಣವೇನಿತ್ತು?
3: ಭಾರತೀಯ ಚಿತ್ರರಂಗದ ಖ್ಯಾತ ಸಾಹಸ
ನಿರ್ದೇಶಕ ಅಂತ್ಹೇಳಿಕೊಳ್ಳುವ ರವಿವರ್ಮ
ರವರಿಗೆ 'ನೀರಿನ ಸ್ಟಂಟ್' ಮತ್ತು
ಅದರಿಂದ ಆಗಬಹುದಾದ ಅಪಾಯದ ಅರಿವಿರಲಿಲ್ಲವೇ?
4: ಈಜು ಬಾರದೇ ಇರುವವರನ್ನು 100ಕ್ಕೂ ಹೆಚ್ಚು ಅಡಿ
ಎತ್ತರದಿಂದ ಧುಮುಕಿಸಿದ್ದು ಎಷ್ಟು ಸರಿ?
5: ಮೊದಲು 30-40 ಅಡಿ ಅಂತ ಕಲಾವಿದರಿಗೆ
ಹೇಳಿ, ಸ್ಪಾಟ್ ಗೆ ಬಂದ ಮೇಲೆ 100 ಅಡಿ ಎತ್ತರ
ಎಂದು ಅನಿಲ್ ಹಾಗೂ ಉದಯ್ ಗೆ ಶಾಕ್
ಕೊಟ್ಟಿದ್ದು ಯಾಕೆ?
6: ಡ್ಯೂಪ್ ಬಳಕೆ ಮಾಡಲಿಲ್ಲ. ಕಾರಣ ಏನು.?
7: ಜ್ವರ ಅಂತ ಉದಯ್ ಹೇಳಿದ್ದರೂ, ಪರ್ಯಾಯ
ವ್ಯವಸ್ಥೆ ಏಕೆ ಮಾಡಲಿಲ್ಲ?
8: ಮೊದಲು ಡ್ಯೂಪ್ ಅಂತ ಹೇಳಿ, ನಂತರ
'ನೀವೇ ಮಾಡಬೇಕು' ಅಂತ ಅನಿಲ್ ಹಾಗೂ ಉದಯ್
ಗೆ ಬಲವಂತ ಮಾಡಿದ್ದರ ಹಿಂದಿನ ಉದ್ದೇಶ?
9: ಹೆಲಿಕಾಫ್ಟರ್ ನಿಂದ ಜಿಗಿಯುವಂತೆ ಅನಿಲ್ ಹಾಗೂ
ಉದಯ್ ಮೇಲೆ ಒತ್ತಡ ಹೇರಿದ್ದು ಯಾಕೆ?
10: ಹೆಲಿಕಾಫ್ಟರ್ ನಿಂದ ಖಳನಟರು ಹಾರಬೇಕಾದಾಗ ರೋಪ್
(ಹಗ್ಗ) ಬಳಕೆ ಮಾಡಲಿಲ್ಲ. ಇದು ಸರಿಯೇ?
11: ನೀರಿಗೆ ಹಾರಲಿದ್ದಾರೆ ಅಂತ
ಗೊತ್ತಿದ್ದರೂ, ಲೈಫ್ ಜಾಕೆಟ್
ತೊಡಿಸಲಿಲ್ಲ. ನಿಮಗೆ ಜವಾಬ್ದಾರಿ ಇಲ್ಲವೇ.?
12: ಖಳನಟರಿಗೆ ನೀವು ಯಾವುದೇ ರೀತಿಯ
ಟ್ರೈನಿಂಗ್ ಕೊಟ್ಟಿರಲಿಲ್ಲವೇಕೆ.?
13: ಹೆಲಿಕಾಪ್ಟರ್ ನಿಂದ ಹಾರುವ ಜಾಗದ ಕಡೆ ಮೋಟರ್ ಬೋಟ್
ಇರಿಸದೆ ದಡದಲ್ಲಿ ಇರಿಸುವ ಪ್ಲಾನ್ ಕೊಟ್ಟವರು
ಯಾರು?
14: ಸ್ಪೀಡ್ ಬೋಟ್ ಅವಶ್ಯಕವಾಗಿತ್ತು. ಆದರೂ
ಅದನ್ನ ಇಟ್ಟುಕೊಂಡಿರಲಿಲ್ಲ. ಯಾಕೆ?
15: ಇಂತಹ ದುಸ್ಸಾಹಸಕ್ಕೆ ಕೈಹಾಕುವ ಬದಲು ಗ್ರಾಫಿಕ್ಸ್
ಮೂಲಕ ಕೆಲಸ ಮುಗಿಸಬಹುದಿತ್ತಲ್ಲವೇ?
16: ಚಿತ್ರೀಕರಣ ನಡೆಯುವಾಗ ಯಾವುದೇ ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳದೇ ಇರುವುದು ನಿಮ್ಮ
ಮೂರ್ಖತನ ಎಂದು ಭಾವಿಸಬಹುದೇ?
17: ದುನಿಯಾ ವಿಜಯ್ ರವರನ್ನ ರಕ್ಷಿಸಿದ ನೀವು,
ಖಳನಟರ ಜೀವವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ
ಕಾರಣ?
18: ಉದಯೋನ್ಮುಖ ನಟರ ಜೀವ ನಿಮಗೆ ತೃಣ
ಸಮಾನವಾಯಿತೇ?
19: ತಿಪ್ಪಗೊಂಡನಹಳ್ಳಿ ಕೆರೆಯ ಸ್ಥಿತಿ-ಗತಿ
ಬಗ್ಗೆ ಅರಿವಿರಲಿಲ್ಲವೇ?
20: ಅನಿಲ್ ಮತ್ತು ಉದಯ್ ಸಾವಿಗೆ ಹೊಣೆ
ಯಾರು?