Wikipedia

Search results

Tuesday, November 08, 2016

ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!

'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು
'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ.
ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ
ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ
ಬಾರಿಸುತ್ತಿದೆ. ಆಗಿದ್ದು ಆಗಿ ಹೋಯಿತು ಎಂದು
ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ
ವರೆಸಿಕೊಳ್ಳುವ ದುರಂತ ಇದಲ್ಲ. ಈ
ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು,
ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are
Twenty, Problems are Plenty ಎಂಬುದನ್ನು
ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ  ಸುಮಾರು 20 ಅಂಶಗಳನ್ನು
ಚಲನಚಿತ್ರರಂಗದ ಪಾದಾರವಿಂದಗಳಲ್ಲಿ
ಅರ್ಪಿಸುತ್ತಿದ್ದಾರೆ.

ಓದಿ

1: ತಿಪ್ಪಗೊಂಡನಹಳ್ಳಿ ಜಲಾಶಯದ ನಿಷೇಧಿತ
ಪ್ರದೇಶಗಳಲ್ಲಿ ಚಿತ್ರೀಕರಿಸಬಾರದು ಅಂತ
ಜಲಮಂಡಳಿ ಷರತ್ತು ವಿಧಿಸಿದ್ದರೂ,
ಉಲ್ಲಂಘಿಸಿದ್ದು ಯಾಕೆ?

2: ನೀರಿನಲ್ಲಿ ಚಿತ್ರೀಕರಣ ಮಾಡಬಾರದು
ಅಂತ ಹೇಳಿದ್ದರೂ, ಆ ಕೆಲಸ ಮಾಡಲು ಅಂಥ
ಕಾರಣವೇನಿತ್ತು?

3: ಭಾರತೀಯ ಚಿತ್ರರಂಗದ ಖ್ಯಾತ ಸಾಹಸ
ನಿರ್ದೇಶಕ ಅಂತ್ಹೇಳಿಕೊಳ್ಳುವ ರವಿವರ್ಮ
ರವರಿಗೆ 'ನೀರಿನ ಸ್ಟಂಟ್' ಮತ್ತು
ಅದರಿಂದ ಆಗಬಹುದಾದ ಅಪಾಯದ ಅರಿವಿರಲಿಲ್ಲವೇ?

4: ಈಜು ಬಾರದೇ ಇರುವವರನ್ನು 100ಕ್ಕೂ ಹೆಚ್ಚು ಅಡಿ
ಎತ್ತರದಿಂದ ಧುಮುಕಿಸಿದ್ದು ಎಷ್ಟು ಸರಿ?

5: ಮೊದಲು 30-40 ಅಡಿ ಅಂತ ಕಲಾವಿದರಿಗೆ
ಹೇಳಿ, ಸ್ಪಾಟ್ ಗೆ ಬಂದ ಮೇಲೆ 100 ಅಡಿ ಎತ್ತರ
ಎಂದು ಅನಿಲ್ ಹಾಗೂ ಉದಯ್ ಗೆ ಶಾಕ್
ಕೊಟ್ಟಿದ್ದು ಯಾಕೆ?

6: ಡ್ಯೂಪ್ ಬಳಕೆ ಮಾಡಲಿಲ್ಲ. ಕಾರಣ ಏನು.?

7: ಜ್ವರ ಅಂತ ಉದಯ್ ಹೇಳಿದ್ದರೂ, ಪರ್ಯಾಯ
ವ್ಯವಸ್ಥೆ ಏಕೆ ಮಾಡಲಿಲ್ಲ?

8: ಮೊದಲು ಡ್ಯೂಪ್ ಅಂತ ಹೇಳಿ, ನಂತರ
'ನೀವೇ ಮಾಡಬೇಕು' ಅಂತ ಅನಿಲ್ ಹಾಗೂ ಉದಯ್
ಗೆ ಬಲವಂತ ಮಾಡಿದ್ದರ ಹಿಂದಿನ ಉದ್ದೇಶ?

9: ಹೆಲಿಕಾಫ್ಟರ್ ನಿಂದ ಜಿಗಿಯುವಂತೆ ಅನಿಲ್ ಹಾಗೂ
ಉದಯ್ ಮೇಲೆ ಒತ್ತಡ ಹೇರಿದ್ದು ಯಾಕೆ?

10: ಹೆಲಿಕಾಫ್ಟರ್ ನಿಂದ ಖಳನಟರು ಹಾರಬೇಕಾದಾಗ ರೋಪ್
(ಹಗ್ಗ) ಬಳಕೆ ಮಾಡಲಿಲ್ಲ. ಇದು ಸರಿಯೇ?

11: ನೀರಿಗೆ ಹಾರಲಿದ್ದಾರೆ ಅಂತ
ಗೊತ್ತಿದ್ದರೂ, ಲೈಫ್ ಜಾಕೆಟ್
ತೊಡಿಸಲಿಲ್ಲ. ನಿಮಗೆ ಜವಾಬ್ದಾರಿ ಇಲ್ಲವೇ.?

12: ಖಳನಟರಿಗೆ ನೀವು ಯಾವುದೇ ರೀತಿಯ
ಟ್ರೈನಿಂಗ್ ಕೊಟ್ಟಿರಲಿಲ್ಲವೇಕೆ.?

13: ಹೆಲಿಕಾಪ್ಟರ್ ನಿಂದ ಹಾರುವ ಜಾಗದ ಕಡೆ ಮೋಟರ್ ಬೋಟ್
ಇರಿಸದೆ ದಡದಲ್ಲಿ ಇರಿಸುವ ಪ್ಲಾನ್ ಕೊಟ್ಟವರು
ಯಾರು?

14: ಸ್ಪೀಡ್ ಬೋಟ್ ಅವಶ್ಯಕವಾಗಿತ್ತು. ಆದರೂ
ಅದನ್ನ ಇಟ್ಟುಕೊಂಡಿರಲಿಲ್ಲ. ಯಾಕೆ?

15: ಇಂತಹ ದುಸ್ಸಾಹಸಕ್ಕೆ ಕೈಹಾಕುವ ಬದಲು ಗ್ರಾಫಿಕ್ಸ್
ಮೂಲಕ ಕೆಲಸ ಮುಗಿಸಬಹುದಿತ್ತಲ್ಲವೇ?

16: ಚಿತ್ರೀಕರಣ ನಡೆಯುವಾಗ ಯಾವುದೇ ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳದೇ ಇರುವುದು ನಿಮ್ಮ
ಮೂರ್ಖತನ ಎಂದು ಭಾವಿಸಬಹುದೇ?

17: ದುನಿಯಾ ವಿಜಯ್ ರವರನ್ನ ರಕ್ಷಿಸಿದ ನೀವು,
ಖಳನಟರ ಜೀವವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ
ಕಾರಣ?

18: ಉದಯೋನ್ಮುಖ ನಟರ ಜೀವ ನಿಮಗೆ ತೃಣ
ಸಮಾನವಾಯಿತೇ?

19: ತಿಪ್ಪಗೊಂಡನಹಳ್ಳಿ ಕೆರೆಯ ಸ್ಥಿತಿ-ಗತಿ
ಬಗ್ಗೆ ಅರಿವಿರಲಿಲ್ಲವೇ?

20: ಅನಿಲ್ ಮತ್ತು ಉದಯ್ ಸಾವಿಗೆ ಹೊಣೆ
ಯಾರು?