Wikipedia

Search results

Friday, June 10, 2016

ಗಣತಂತ್ರ ದಿವಸ(26/1/1950)

ಗಣತಂತ್ರ ದಿವಸವೇಕೆ ನಮಗೆ ಇಷ್ಟು ಮಹತ್ವದ್ದಾಗಿದೆ ಎಂಬ ಪ್ರಶ್ನೆ ಕೇಳಿದರೆ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆಗಾಗಿ ಬಾಯಿಪಾಠ ಮಾಡಿದ್ದ ಆ ವಾಕ್ಯಗಳೆಲ್ಲಾ ಮರೆತು ಹೋಗಿರುತ್ತವೆ. ಕೆಲವರಿಗೆ ಮಾತ್ರ ಈ ದಿನವೇ ನಮ್ಮ ರಾಜ್ಯಾಂಗ ವ್ಯವಸ್ಥೆ ಜಾರಿಗೆ ಬಂದ ದಿನ ಎಂದು ನೆನಪಿರಬಹುದು. ಈ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಭಾರತಕ್ಕೆ ಸ್ವಾತಂತ್ಯ ಲಭಿಸಿದ ಬಳಿಕ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಜಾರಿಗೆ ಬಂದ ಬಳಿಕವೂ ಭಾರತದ ಆಡಳಿತ ವ್ಯವಸ್ಥೆ ಒಂದು ನೀತಿಗೆ ಒಳಪಟ್ಟಿರಲಿಲ್ಲ. ಅಂದಿನ ಅತಿದೊಡ್ಡ ರಾಜಕೀಯ ಶಕ್ತಿಯಾಗಿದ್ದ ಕಾಂಗ್ರೆಸ್ ಮತ್ತು ನಾಯಕರಾದ ಮಹಾತ್ಮಾ ಗಾಂಧಿ, ನೆಹರೂ, ಸುಭಾಶ್ ಚಂದ್ರ ಬೋಸ್, ರಾಜಾಜಿ, ಪಟೇಲ್ ಮೊದಲಾದವರ ಮುಂದಾಳತ್ವದಲ್ಲಿ ಲಾಹೋರಿನ ರಾವಿ ನದಿಯ ತೀರದಲ್ಲಿ ಜನವರಿ ಇಪ್ಪತ್ತಾರರಂದೇ

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಲಾಗಿತ್ತು. ಆ ದಿನವೇ ಮಹಾತ್ಮಾ ಗಾಂಧೀಜಿಯವರು ತಮ್ಮ ದಂಡಿ ಯಾತ್ರೆಯನ್ನೂ ಆರಂಭಿಸಿದ್ದರು. ಹಾಗಾಗಿ ೧೯೫೦ರ ಜನವರಿ ಇಪ್ಪತ್ತಾರಕ್ಕೂ ಮೊದಲೇ ಸಂವಿಧಾನ ಸಿದ್ಧವಾಗಿದ್ದರೂ ಸುಮಾರು ಎರಡು ತಿಂಗಳ ನಂತರ ಜನವರಿ ಇಪ್ಪತ್ತಾರಂದೇ ಮಂಡಿಸಲಾಯಿತು.

ನಿಜವಾಗಿ ಹೇಳಬೇಕೆಂದರೆ ಭಾರತದ ಮೊದಲ ಸ್ವಾತಂತ್ರ್ಯದ ದಿನ ಜನವರಿ ಇಪ್ಪತ್ತಾರೇ ಆಗಿದೆ. ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.

ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವಾದ ಭಾರತದ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. ೪೪೪ ವಿಧಿಗಳನ್ನು ೨೨ ಭಾಗಗಳಲ್ಲಿಯೂ, ೧೦ (ನಂತರ ೧೨) ಅನುಚ್ಛೇದಗಳನ್ನೂ,, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನದ ಮೂಲ ಪ್ರತಿ 479 ಪುಟಗಳ, ಕೈಬರಹದಲ್ಲಿ ಬರೆದಿರುವ ಬೃಹತ್ ಗ್ರಂಥವಾಗಿದ್ದು ಅಂದಿನ ಎಲ್ಲಾ ನಾಯಕರು ಈ ಸಂವಿಧಾನದ ಬಗ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿ ಹಸ್ತಾಕ್ಷರ ನಮೂದಿಸಿದ್ದರು. ಈ ಗ್ರಂಥವನ್ನು ಇಂದಿಗೂ ಸುಸ್ಥಿತಿಯಲ್ಲಿ ಕಾಪಾಡಲಾಗಿದ್ದು ನಮ್ಮ ಪಾರ್ಲಿಮೆಂಟ್ ಭವನದಲ್ಲಿ ಹೀಲಿಯಂ ಅನಿಲ ತುಂಬಿದ ಗಾಜಿನ ಕವಚವಿರುವ ಸುಭದ್ರ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ.