ಪುಟಗಳು

Friday, June 24, 2016

✍✍TodayImportant News✍✍✍

💥ಜಾಗತಿಕ ಷೇರು ಮಾರುಕಟ್ಟೆ ಕುಸಿತ, ರಾಜೀನಾಮೆಗೆ ಬ್ರಿಟನ್ ಪ್ರಧಾನಿ ಕೆಮರೂನ್ ನಿರ್ಧಾರ:-

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದರೆ, ಒಕ್ಕೂಟದಿಂದ ಹೊರನಡೆಯಬೇಕು ಎಂಬುದರ ಪರವಾಗಿ ಶೇಕಡಾ 51.8 ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವುದೆಂಬ ಭೀತಿ ಇದೀಗ ನಿಜವಾಗಿದೆ.

ಜನಮತಗಣನೆಯ ಪರಿಣಾಮವಾಗಿ ಭಾರತವೂ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳು ಕುಸಿದಿದ್ದು ಸೂಚ್ಯಂಕ 1000 ಪಾಯಿಂಟ್​ನಷ್ಟು ಕೆಳಗಿಳಿದಿದೆ. ಜನಮತಗಣನೆ ಪರಾಭವದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡುವುದಾಗಿಯೂ ಅಕ್ಟೋಬರ್ ವೇಳೆಗೆ ನೂತನ ಪ್ರಧಾನಿ ಅಧಿಕಾರ ವಹಿಸಿಕೊಳ್ಳುವುದಾಗಿಯೂ ಬ್ರಿಟನ್ ಪ್ರಧಾನಿ ಕೆಮರೂನ್ ಪ್ರಕಟಿಸಿದ್ದಾರೆ.

✍ಭಾರತಕ್ಕೆ ಸದಸ್ಯತ್ವ, ಮೂಡದ ಒಮ್ಮತ, ತೀರ್ಮಾನ ಇಲ್ಲದೆ ಮುಗಿದ ಎನ್​ಎಸ್​ಜಿ ಸಭೆ:-

ಸಿಯೋಲ್​ನಲ್ಲಿ ನಡೆದ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ತೀರ್ಮಾನವನ್ನೂ ತೆಗೆದುಕೊಳ್ಳದೆಯೇ ಶುಕ್ರವಾರ ಅಂತ್ಯಗೊಂಡಿದ್ದು ಪರಮಾಣು ಕ್ಲಬ್ ಸೇರುವ ಭಾರತದ ಆಶಯಕ್ಕೆ ಹಿನ್ನಡೆಯಾಗಿದೆ. ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪು (ಎನ್‌ಎಸ್‌ಜಿ) ಸೇರಲು ಭಾರತವನ್ನು ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾವನ್ನು ಒತ್ತಾಯಿಸಿದರೂ, ಸೋಲ್‌ನಲ್ಲಿ ನಡೆಯುತ್ತಿರುವ ಎನ್‌ಎಸ್‌ಜಿ ರಾಷ್ಟ್ರಗಳ ಸಭೆಯಲ್ಲಿ ಈ ಕುರಿತು ಒಮ್ಮತ ಮೂಡಿಲ್ಲ.

✍ಪುಣೆಯಲ್ಲಿ ಮೋದಿ ಅವರಿಂದ ಸ್ಮಾರ್ಟ್‌ಸಿಟಿ ಕಾಮಗಾರಿಗೆ ನಾಳೆ ಚಾಲನೆ:-

ದೇಶದ 20 ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 25ರಂದು (ಶನಿವಾರ) ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ.ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಪ್ರಧಾನಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು  ನಗರಾಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದೇಶದ ಎಲ್ಲಾ 20 ನಗರಗಳಲ್ಲಿ ಏಕಕಾಲಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಪುಣೆ ನಗರದಲ್ಲಿ  ಹಮ್ಮಿಕೊಳ್ಳಲಾಗಿರುವ 14 ವಿವಿಧ ಕಾಮಗಾರಿಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ..

ಕೆ.ಪಿ.ಎಸ್.ಸಿ‌ ಎಸ್.ಡಿ.ಎ ಹಾಗೂ ಎಫ್.ಡಿ.ಎ ನೇಮಕಾತಿಗಳಲಗಳಲ್ಲಿ ಅಕ್ರಮಗಳ ಸರಮಾಲೆ
ಅಭ್ಯರ್ಥಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಿ ಸುಮ್ಮನಿದ್ದರೇ ನಿಮಗೆನೂ ಸಿಗೋದಿಲ್ಲ ನಿಮ್ಮ ಹಕ್ಕು ಕೇಳಿ.
ಇಷ್ಟು ವರ್ಷ ನಡೆದ ಎಲ್ಲ ನೇಮಕಾತಿಗಳಲ್ಲಿ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸಲಾಗುತ್ತಿತ್ತು. ಹಾಗೆಯೇ ಕಟ್ ಆಫ್ ಅಂಕಗಳನ್ನು ಪ್ರಕಟಿಸಲಾಗುತ್ತಿತ್ತು. ಆದರೆ ಈ ಸಲದ ಎಸ್.ಡಿ.ಎ ಹಾಗೂ ಎಫ್.ಡಿ.ಎ ನೇಮಕಾತಿಯಲ್ಲಿ  ಹಳೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕನಿಷ್ಟಪಕ್ಷ ಆಯ್ಕೆಯಾದವರ ಅಂಕಗಳನ್ನು ಹಾಗೂ ಕಟ್ ಆಫ್ ಅಂಕಗಳನ್ನು ಪ್ರಕಟಿಸುವ ಮನಸ್ಸು ಮಾಡಿಲ್ಲ. ಯಾಕೆ ಮೊದಲಿದ್ದ ನಿಯಮ ಈಗ ಯಾಕೆ ಬದಲಾಗಿದೆ. ಆಯ್ಕೆಯಾದವರಿಗೆ ಗೊತ್ತಿಲ್ಲ ತಮಗೆ ಎಷ್ಟು ಅಂಕಗಳು ಲಭಿಸಿವೆ.
ಈಗಲಾದರೂ ವಂಚಿತರಾದ ರಾಜ್ಯದ ಅಭ್ಯರ್ಥಿಗಳು ಎಚ್ಚೆತ್ತುಕೊಳ್ಳಬೇಕಿದೆ. ಸುಮ್ಮನಿದ್ದರೆ ಕೆ.ಪಿ.ಎಸ್.ಸಿ ಪಂಗನಾಮ ಹಾಕುವುದು ಪಕ್ಕಾ. ನಮಗೆಷ್ಟು ಅಂಕಗಳು ಲಭಿಸಿವೆ ಎಂದು ತಿಳಿಯುವುದು ನಮ್ಮೆಲ್ಲರ ಹಕ್ಕು. ನಮ್ಮ ಹಕ್ಕನ್ನು ನಾವು ಕೇಳುವುದು ತಪ್ಪೆ? ಕೆಲವು ಅಭ್ಯರ್ಥಿಗಳು ಪ್ರತಿಭಟಿಸಿದರೆ ಪ್ರಯೋಜನ ಇಲ್ಲ. ಎಲ್ಲರೂ ಸಂಘಟಿತರಾಗಿ ನಮ್ಮ ಹಕ್ಕನ್ನು ನಾವು ಕೇಳಬೆಕು. ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅಂತ ಗೊತ್ತಿದ್ದರೂ ಕೆ.ಪಿಎಸ್.ಸಿ ತನ್ನ ಪಾಡಿಗೆ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ. ವರ್ಷಗಳಿಂದ ಕಷ್ಟಪಟ್ಟು ಓದಿದವರ ಗತಿಯೇನು. ಅವರಿಗೆ ಬೆಲೆ ಇಲ್ಲವೆ? ಕೆ.ಪಿ.ಎಸ್.ಸಿ ಸರ್ವಾಧಿಕಾರಿ ಧೋರಣೆಯನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು. ಯೋಚಿಸಿ.
ಎಲ್ಲವೂ ಸುಲಭವಾಗಿ ಸಿಗುವದಿಲ್ಲ. ನ್ಯಾಯಕ್ಕಾಗಿ ಹೋರಾಡಲೇಬೇಕು. ಇಲ್ಲದಿದ್ದರೆ ಅನ್ಯಾಯ ತನ್ನ ಪಾರಮ್ಯತೆ ಮೆರೆಯುತ್ತದೆ. ಸ್ವಲ್ಪ ಯೋಚಿಸಿ..                 

ಎಫ್ಡಿಎ_ಎಸ್ಡಿಎ_ಅಕ್ರಮದ_ಘಾಟು!

ಬೆಂಗಳೂರು: ನೇಮಕಾತಿ ಅಕ್ರಮಗಳಿಗೆ
ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ
ಹಾಕುತ್ತಿದ್ದರೂ ಎಚ್ಚೆತ್ತುಕೊಳ್ಳದ, ಲಂಗು
ಲಗಾಮಿಲ್ಲದ ಸಾಂವಿಧಾನಿಕ ಸಂಸ್ಥೆ ಎಂಬ
ಅಪಖ್ಯಾತಿ ಪಡೆಯುತ್ತಿರುವ ಕರ್ನಾಟಕ
ಲೋಕಸೇವಾ ಆಯೋಗದಲ್ಲೀಗ ಎಫ್ಡಿಎ
ಹಾಗೂ ಎಸ್ಡಿಎ ನೇಮಕ ಪ್ರಕ್ರಿಯೆಯಲ್ಲೂ
ಅಕ್ರಮದ ವಾಸನೆ ಬರುತ್ತಿದೆ.
ಎಸ್ಡಿಎ ಹಾಗೂ ಎಫ್ಡಿಎ ಹುದ್ದೆಗಳಿಗೆ ದಾಖಲೆ
ಪರಿಶೀಲನೆ ಆರಂಭವಾಗಿದ್ದರೂ, ಈವರೆಗೆ
ಅಭ್ಯರ್ಥಿಗಳ ಅಂಕ ಬಹಿರಂಗಗೊಳಿಸಿಲ್ಲ.
ನಿಯಮದಂತೆ 1:2 ಅನುಪಾತದಲ್ಲಿ ತನ್ನಿಷ್ಟದ
ಅರ್ಹತಾ ಪಟ್ಟಿಯನ್ನಷ್ಟೇ ಕೆಪಿಎಸ್ಸಿ ಪ್ರಕಟಿಸಿದೆ.
ಇದು ನೇಮಕದಲ್ಲಿ ಭಾರಿ ಅವ್ಯವಹಾರ
ನಡೆದಿರುವ ಅನುಮಾನ ಮೂಡಿಸಿದೆ.
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ
ಅರ್ಹತಾ ಪಟ್ಟಿ ಪ್ರಕಟಿಸುವಾಗ ಅರ್ಹ ಅಭ್ಯರ್ಥಿಗಳ
ಅಂಕ, ಕಟ್ ಆಫ್ ಅಂಕ, ಅಭ್ಯರ್ಥಿಗಳ ವಿವರವನ್ನು
ಪ್ರಕಟಿಸಬೇಕು.
.
ಆದರೆ ಕೆಪಿಎಸ್ಸಿ ಇವ್ಯಾವುದನ್ನೂ
ಪ್ರಕಟಿಸದಿರುವುದು ಆಯ್ಕೆ ಪ್ರಕ್ರಿಯೆ
ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ
ಅನುಮಾನಕ್ಕೆ ಪುಷ್ಟಿ ನೀಡಿದೆ. ವಿಚಿತ್ರವೆಂದರೆ
ಅರ್ಹತಾ ಪಟ್ಟಿಯಲ್ಲಿರುವವರಿಗೆ ತಮಗೆ ಎಷ್ಟು
ಅಂಕ ಬಂದಿದೆ ಎಂಬ ಮಾಹಿತಿ ಇಲ್ಲ. ಕೆಪಿಎಸ್ಸಿ ಕರೆದಿದೆ
ಎಂಬ ಕಾರಣಕ್ಕೆ ಬಂದು ದಾಖಲೆ ಪರಿಶೀಲನೆಗೆ
ಮುಂದಾಗಿದ್ದಾರೆ.
ಸುಮ್ಮನಿರುವ ಸಿಎಂ!: ಎಫ್ಡಿಎ ಹಾಗೂ ಎಸ್ಡಿಎ
ಅರ್ಹತಾ ಪಟ್ಟಿ ಪ್ರಕಟವಾಗುತ್ತಿದ್ದಂತೆ ಪ್ರತಿಭಟನೆ
ನಡೆಸಿದ ಕೆಲ ಅಭ್ಯರ್ಥಿಗಳು
ಮುಖ್ಯಮಂತ್ರಿಯನ್ನು ಭೇಟಿ ಮಾಡಿ,
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಒಂದೇ ಜಿಲ್ಲೆ
ಹಾಗೂ ಪರೀಕ್ಷಾ ಕೊಠಡಿಯ ಸಾಕಷ್ಟು
ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿ ಹೆಸರು
ಗಳಿಸಿದ್ದಾರೆ. ನೇಮಕದಲ್ಲಿ ಭಾರಿ
ಅವ್ಯವಹಾರವಾಗಿದೆ ಎಂದು ದೂರು ಪತ್ರ
ನೀಡಿದ್ದರು. ಆದರೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಇದನ್ನು ಗಂಭೀರವಾಗಿ
ತೆಗೆದುಕೊಂಡಿಲ್ಲ.
ನನ್ನನ್ನು ಅರ್ಹತಾ ಪಟ್ಟಿಗೆ ಸೇರಿಸಿಕೊಳ್ಳಿ
ಎನ್ನುತ್ತಿಲ್ಲ. ಕ್ರಮಬದ್ಧವಾಗಿ ನಾನು
ಅರ್ಹನಾಗುತ್ತೇನೆ. ಆದರೆ ಅರ್ಹತೆ ಪಡೆದವರ
ಅಂಕವೆಷ್ಟು ಎನ್ನುವ ಕುತೂಹಲಕ್ಕಾದರೂ
ಬಹಿರಂಗಪಡಿಸಬೇಕು.
.

| ಶಾಲಿನಿ ರಾವ್ ಬೆಂಗಳೂರು
ದೂರು ಆಲಿಸದ ಕರ್ನಾಟಕ ಲೋಕಸೇವಾ
ಆಯೋಗ
ಎಫ್ಡಿಎ ಹಾಗೂ ಎಸ್ಡಿಎ ಆಯ್ಕೆ ಪ್ರಕ್ರಿಯೆ
ಪಾರದರ್ಶಕವಾಗಿ ನಡೆದಿಲ್ಲ. ಮಾದರಿ ಉತ್ತರ ಪತ್ರಿಕೆ
ಪ್ರಕಾರ ನನಗೆ 157 ಅಂಕಗಳು ಬರಬೇಕಿತ್ತು.
ಆದರೆ ನನಗಿಂತ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳ
ಹೆಸರು ಅರ್ಹತಾ ಪಟ್ಟಿಯಲ್ಲಿದೆ ಎಂದು
ತಿಳಿದುಬಂದಿದೆ. ಈ ಬಗ್ಗೆ ಸ್ಪಷ್ಟನೆ ಕೊಡಿ.
ಅಂಕಗಳನ್ನು ಬಹಿರಂಗಗೊಳಿಸಿ. ಈ ಮೂಲಕ
ನಮ್ಮ ಆಯ್ಕೆಗೆ ಇರುವ ಸಮಸ್ಯೆಯನ್ನು ತಿಳಿಯಲು
ಆಗುತ್ತದೆ ಎಂದು ಮೈಸೂರಿನ ಶಿವಾನಂದ
ಎನ್ನುವ ಅಭ್ಯರ್ಥಿ ದೂರು ನೀಡಲು ಕೆಪಿಎಸ್ಸಿಗೆ
ಬಂದಿದ್ದಾರೆ. ಆದರೆ, ಅವರಿಗೆ ಕಚೇರಿ ಒಳಗೆ
ಹೋಗಲು ಅವಕಾಶ ನೀಡದೆ ಕಳುಹಿಸಿದ್ದಾರೆ.
'ವಿಜಯವಾಣಿ'ಗೆ ಲಭ್ಯವಾದ ಮಾಹಿತಿ ಪ್ರಕಾರ, ಎಸ್
ಡಿಎಯಲ್ಲಿ 152-154 ಅಂಕ ಗಳಿಸಿದ ಅಭ್ಯರ್ಥಿಗಳಿಗೂ
ದಾಖಲೆ ಪರಿಶೀಲನೆಗೆ ಕರೆಯಲಾಗಿದೆ. ತನ್ನ ಅಕ್ರಮ
ಮುಚ್ಚಿಕೊಳ್ಳುವ ಉದ್ದೇಶದಿಂದಲೇ
ಕೆಪಿಎಸ್ಸಿ ಅರ್ಹತಾ ಪಟ್ಟಿಯ ಅಭ್ಯರ್ಥಿಗಳ ಅಂಕ
ಬಹಿರಂಗಗೊಳಿಸುತ್ತಿಲ್ಲ ಎನ್ನಲಾಗಿದೆ.
ಅ'ಸಹಾಯಕ'ರಾದ ಅಭ್ಯರ್ಥಿಗಳು
ವಿವಾದಕ್ಕೆ ಗುರಿಯಾದ ಪ್ರಥಮ, ದ್ವಿತೀಯ ದರ್ಜೆ
ಸಹಾಯಕರ ನೇಮಕ ಪ್ರಕ್ರಿಯೆ
ದಾಖಲೆ ಪರಿಶೀಲನೆ ಆರಂಭವಾದರೂ ಅಂಕ
ಪ್ರಕಟಿಸದ ಕೆಪಿಎಸ್ಸಿ
ಮುಚ್ಚುಮರೆಯೇಕೆ?
.
ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಯಲ್ಲಿ ಉತ್ತರ
ಬರೆದ ಪ್ರತಿ ವಿದ್ಯಾರ್ಥಿಯ ಅಂಕಗಳ ವಿವರ ಕೆಪಿಎಸ್ಸಿ ಬಳಿ
ಇದೆ. ಆದರೆ ಈ ಅಂಕಗಳನ್ನು ಬಹಿರಂಗಪಡಿಸಲು
ಆಯೋಗ ಮೀನಮೇಷ ಎಣಿಸುತ್ತಿದೆ. ಈ ಬಗ್ಗೆ
ಆಯೋಗದ ಕಾರ್ಯದರ್ಶಿ ಮನೋಜ್
ಕುಮಾರ ಮೀನಾ ಅವರನ್ನು 'ವಿಜಯವಾಣಿ'
ಸಂರ್ಪಸಿದಾಗ, 'ಅರ್ಹತಾ ಪಟ್ಟಿ ಪ್ರಕಟಿಸುವ
ಸಂದರ್ಭದಲ್ಲಿ ಅಂಕ ಪ್ರಕಟಿಸುವ
ಅಗತ್ಯವೇನಿದೆ?' ಎಂದು ಮರುಪ್ರಶ್ನೆ
ಹಾಕಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು!
ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ
ತಂಡವೇ ಎಫ್ಡಿಎ ಹಾಗೂ ಎಸ್ಡಿಎ
ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿತ್ತು
ಎನ್ನುವುದು ಸಿಐಡಿ ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ
ಆರೋಪದ ಬಗೆಗೂ ಕಣ್ಮುಚ್ಚಿ ಕುಳಿತಿರುವ
ಸರ್ಕಾರ ಹಾಗೂ ಕೆಪಿಎಸ್ಸಿ, ಸೋರಿಕೆಯ ತೀವ್ರತೆ
ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆ ಎಫ್ಡಿಎ
ಹಾಗೂ ಎಸ್ಡಿಎ ಪರೀಕ್ಷೆಗಳಲ್ಲಿಯೂ ಕೆಪಿಎಸ್ಸಿ
'ಅವ್ಯವಹಾರ' ಇತಿಹಾಸ
ಮುಂದುವರಿದುಕೊಂಡು ಬಂದಿದೆ.
ಪರೀಕ್ಷೆ ಬರೆದ ಅಭ್ಯರ್ಥಿಗೆ ಅಂಕ
ತಿಳಿದುಕೊಳ್ಳುವ ಹಕ್ಕಿಲ್ಲವೆ? ಮಾದರಿ ಉತ್ತರ
ಪತ್ರಿಕೆ ಪ್ರಕಾರ ನನಗಿಂತ ಕಡಿಮೆ ಅಂಕ ಪಡೆದ ನನ್ನ
ಸ್ನೇಹಿತರು ಅರ್ಹತಾ ಪಟ್ಟಿಯಲ್ಲಿ
ಸೇರಿದ್ದಾರೆ.

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ

1. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ.
10 ನಿಮಿಷಗಳ ಮೌನ ಆಚರಿಸಿ,
ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!!

2. ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ.
ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.

3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.

4.ಹಗಲು ಧಾರಾಳವಾಗಿ ನೀರು ಕುಡಿಯಿರಿ.
ರಾತ್ರಿ ಮಲಗುವಾಗ ನೀರು ಮಿತವಾಗಿರಲಿ.

5. ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ,
ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ.

6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.

7. ಜಾಸ್ತಿ ಮುಗುಳು ನಗಿ.
ಹೆಚ್ಚೆಚ್ಚು ನಕ್ಕುಬಿಡಿ.
ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.

8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.

9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ.
ಜೀವನ ಚಿಕ್ಕದು.
ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ.
ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.

10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಡನೆ ಕಾಲ ಕಳೆಯಿರಿ.

11. ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ.
ಸೋತು ಗೆದ್ದುಬಿಡಿ.

12. ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.

13. ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

14. ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.

15. ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು.
ಅವರಿಗೆ ಯಾವಾಗಲೂ ಸಮಯ ಕೊಡಿ.

16. ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.

17.ಸಿಟ್ಟು ತನ್ನ ವೈರಿ,
ಶಾಂತಿ ಪರರ ವೈರಿ ಎಂಬುದನ್ನು ಎಂದಿಗೂ ಮರೆಯದಿರಿ.

18.ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ,
ಏಕೆಂದರೆ ನನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ನಾನು ತುಂಬಾ ಬ್ಯೂಜಿಯಾಗಿದ್ದೇನೆ.
ಎಂಬುದು ನಿಮ್ಮ ಮನೋಧೋರಣೆಯಾಗಿರಲಿ.

19.ನೀವು ಬೇಯಿಸುವ ಅನ್ನದ ನೀರು
ಅದು ನಿಮ್ಮ ಬೆವರಿನ ಹನಿಯಾಗಿರಬೇಕೆ ಹೊರತು,
ಬೇರೆಯವರ ಕಣ್ಣೀರಾಗದಂತೆ ನೋಡಿಕೊಳ್ಳಿ.

20.ಪ್ರತಿ ದಿನವೂ ಇದು ನಮ್ಮ ಕೊನೆಯ ದಿನವೆಂದು ತಿಳಿದು ಗಳಿಸಬೇಕು,
ಪ್ರತಿ ದಿನವೂ ಇದು ನಮ್ಮ ಮೊದಲ ದಿನವೆಂದು ತಿಳಿದು ಉಳಿಸಬೇಕು.🙏

ಗೋಧಿ-ಸಂಸ್ಕೃತದಲ್ಲಿ ಗೋಧೂಮ ಎಂಬುದು ವೇದಕಾಲದಲ್ಲೇ ಉಲ್ಲೇಖ ಇದೆ. ಯಜ್ಞ ಯಾಗಾದಿಗಳಲ್ಲಿ,  ದಾನಕ್ಕಾಗಿ, ಜ್ಯೌತಿಷ್ಯೋಕ್ತ ವಿವಿಧ ಪರಿಹಾರಗಳಲ್ಲಿ ಗೋಧೂಮವನ್ನು ಉಲ್ಲೇಖಿಸಿದ್ದಾರೆ.ಆಯುರ್ವೇದದಲ್ಲೂ ಗೂಧೂಮದ ಬಗ್ಗೆ ಬೇಕಾದಷ್ಟು ಆಧಾರ ಇದೆ. ಉದಾಹರಣೆಗೆ ಮೇಲಿನ ಶ್ಲೋಕವನ್ನು ನೋಡಿ. ಗೋಧಿಯು ವಾತ ಪಿತ್ತ ಶಮಕ, ಬಲ್ಯ, ವೃಷ್ಯ, ಸಂಧಾನೀಯ ,ವರ್ಣ್ಯವಿಷಯ, , ಶರೀರ ವನ್ನು ಸರ್ವಾಂಗೀಣವಾಗಿ ಗಟ್ಟಿ ಗೊಳಿಸುವಿಕೆ ಇತ್ಯಾದಿ ಹಲವು ಉಪಯೋಗಗಳನ್ನು.ಹೇಳಲಾಗಿದೆ. ಆದ್ದರಿಂದ ಯಾವುದೇ ಗೊಡ್ಡು ಲೇಖನಗಳಿಗೆ ಕಿವಿಗೊಡದೆ ಗೋಧಿಯ ಉಪಯೋಗ ಮಾಡಬಹುದು. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ಆಧಾರ ಸಹಿತ ಕೊಡಬಹುದು. ಆದರೆ ಮೈದಾ ದ ಉಪಯೋಗ ಒಳ್ಳೆಯದಲ್ಲ.           ಮನೆಯಲ್ಲಿ ಸತ್ಯನಾರಾಯಣ ಕಥೆ ವೃತ ನಡೆದಿರುತ್ತದೆಂದು ಭಾವಿಸಿ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ಸತ್ಯನಾರಾಯಣ ಕಥೆಯಲ್ಲಿ ಪ್ರಸಾದರೂಪದಲ್ಲಿ ಕೊಡುವ ಸಪಾದಭಕ್ಷ್ಯವನ್ನು ತಯಾರು ಮಾಡುವ ವಿಧಾನವನ್ನೂ ಸತ್ಯನಾರಾಯಣ ಕಥೆಯಲ್ಲೇ ಹೇಳಲಾಗಿದೆ. ಅದರಲ್ಲಿ ಗೋದೂಮಶ್ಚಕ ಚೂರ್ಣಂ ಎಂದು ಕರೆಯಲ್ಪಡುವ ಗೋಧಿ ನಮ್ಮ ದೇಶಕ್ಕೆ ಕೇವಲ ಐವತ್ತು ವರ್ಷಗಳ ಹಿಂದೆ ಪರಿಚಯವಾಯಿತೆನ್ನುವ ಮೂರ್ಖ ವಾದಸರಣಿಗೆ ಏನಾದರೂ ಸಾಕ್ಷ್ಯಾಧಾರಗಳಿವೆಯೇ? ಹಾಗಾದರೆ ಸತ್ಯನಾರಾಯಣ ಕಥೆಗೆ ಕೇವಲ ಐವತ್ತೇ ವರ್ಷಗಳ ಇತಿಹಾಸವೇ?  ಇತ್ತೀಚೆಗೆ ಪ್ರಸಿದ್ದವಾಗುತ್ತಿರುವ ರಾಮ್ ದೇವ್ ಬಾಬಾರವರ ಪತಂಜಲೀ ಉತ್ಪನ್ನಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮೈದಾವನ್ನು ಬಳಸದೇ ಶುದ್ದ ಗೋಧಿಯನ್ನೇ ಬಳಸುತ್ತಿರುವುದರಿಂದ ತಮ್ಮ ಮಾರುಕಟ್ಟೆಯನ್ನು ಕಳೆದು ಕೊಂಡ ಕೆಲ ವಿದೇಶಿ ಕಂಪೆನಿಗಳು ವ್ಯವಸ್ತಿತವಾಗಿ ಇಂತಹದ್ದೊಂದು ಅಪಪ್ರಚಾರ ನಡೆಸುತ್ತಿವೆ. ದಯಮಾಡಿ ಅಂತಹ ಸಂದೇಶಗಳಲ್ಲಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಇನ್ನೊಂದು ಗುಂಪಿಗೆ ದಾಟಿಸಿ. ಇವತ್ತು ಗೋದಿಯ ಬಗ್ಗೆ ಹೇಳಿದವರು ನಾಳೆ ಅಕ್ಕಿಯ ಬಗೆಗೂ ಹೇಳುತ್ತಾರೆ.  ಸುಮ್ಮನೆ ಸುದ್ದಿ ಹರಡುತ್ತ ಹೋದರೆ ನಮ್ಮ ರೈತರಿಗೆ ನಾವೇ ವಿಷ ಕೊಟ್ಟಂತಾಗುತ್ತದೆ.

ತಿಂಗಳೊಳಗೆ ಧಾರವಾಡ ಐಐಟಿ ಕಾರ್ಯಾರಂಭ
              

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಇನ್ನು ಕೇವಲ 2 ರಿಂದ 3 ವಾರಗಳಲ್ಲಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
ಧಾರವಾಡದ ಜಲ ಮತ್ತು ಭೂ ನಿರ್ವಹಣೆ ಸಂಸ್ಥೆ (ವಾಲ್ಮಿ) ಕ್ಯಾಂಪಸ್​ನಲ್ಲಿ ತಾತ್ಕಾಲಿಕವಾಗಿ ಕಟ್ಟಡ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಐಐಟಿ ಮುಖ್ಯ ಕ್ಯಾಂಪಸ್ ಕಟ್ಟಡ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ.

ಧಾರವಾಡದ ಶಿಕ್ಷಣ ಗರಿಮೆಗೆ ಐಐಟಿ ಮತ್ತಷ್ಟು ಪುಷ್ಠಿ ನೀಡಿದೆ. ಈ ವರ್ಷ 120 ವಿದ್ಯಾರ್ಥಿಗಳೊಂದಿಗೆ ಆರಂಭವಾಗಲಿರುವ ಐಐಟಿ ವಿದ್ಯಾರ್ಥಿಗಳ ವಸತಿಗಾಗಿ ಹಾಸ್ಟೆಲ್ ಒಂದನ್ನು ಬಾಡಿಗೆಗೆ ಪಡೆದಿದ್ದು, ಮೂಲ ಕಟ್ಟಡ ಅಂದಾಜು 3.05 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಧಾರವಾಡದಿಂದ 12 ಕಿ. ಮೀ. ದೂರದಲ್ಲಿ 590 ಎಕರೆ ವಿಶಾಲ ಜಾಗದಲ್ಲಿ ಐಐಟಿ ಹೊಸ ಕಟ್ಟಡ ತಲೆ ಎತ್ತುತ್ತಿದೆ. ಇದರೊಂದಿಗೆ ಧಾರವಾಡಕ್ಕೆ ಬೃಹತ್ ಉದ್ಯಮಗಳು ಎಂಟ್ರಿ ಕೊಡಲಿವೆ. ಇದರಿಂದ ಐಐಟಿ ವಿದ್ಯಾರ್ಥಿಗಳ ಅಧ್ಯಯನದ ಜತೆ ಸ್ಥಳೀಯ ನಾಗರಿಕರಿಗೆ ಉದ್ಯೋಗವಕಾಶಗಳು ಹೆಚ್ಚಲಿವೆ.