✍✍TodayImportant News✍✍✍
💥ಜಾಗತಿಕ ಷೇರು ಮಾರುಕಟ್ಟೆ ಕುಸಿತ, ರಾಜೀನಾಮೆಗೆ ಬ್ರಿಟನ್ ಪ್ರಧಾನಿ ಕೆಮರೂನ್ ನಿರ್ಧಾರ:-
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದರೆ, ಒಕ್ಕೂಟದಿಂದ ಹೊರನಡೆಯಬೇಕು ಎಂಬುದರ ಪರವಾಗಿ ಶೇಕಡಾ 51.8 ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವುದೆಂಬ ಭೀತಿ ಇದೀಗ ನಿಜವಾಗಿದೆ.
ಜನಮತಗಣನೆಯ ಪರಿಣಾಮವಾಗಿ ಭಾರತವೂ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳು ಕುಸಿದಿದ್ದು ಸೂಚ್ಯಂಕ 1000 ಪಾಯಿಂಟ್ನಷ್ಟು ಕೆಳಗಿಳಿದಿದೆ. ಜನಮತಗಣನೆ ಪರಾಭವದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡುವುದಾಗಿಯೂ ಅಕ್ಟೋಬರ್ ವೇಳೆಗೆ ನೂತನ ಪ್ರಧಾನಿ ಅಧಿಕಾರ ವಹಿಸಿಕೊಳ್ಳುವುದಾಗಿಯೂ ಬ್ರಿಟನ್ ಪ್ರಧಾನಿ ಕೆಮರೂನ್ ಪ್ರಕಟಿಸಿದ್ದಾರೆ.
✍ಭಾರತಕ್ಕೆ ಸದಸ್ಯತ್ವ, ಮೂಡದ ಒಮ್ಮತ, ತೀರ್ಮಾನ ಇಲ್ಲದೆ ಮುಗಿದ ಎನ್ಎಸ್ಜಿ ಸಭೆ:-
ಸಿಯೋಲ್ನಲ್ಲಿ ನಡೆದ ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ತೀರ್ಮಾನವನ್ನೂ ತೆಗೆದುಕೊಳ್ಳದೆಯೇ ಶುಕ್ರವಾರ ಅಂತ್ಯಗೊಂಡಿದ್ದು ಪರಮಾಣು ಕ್ಲಬ್ ಸೇರುವ ಭಾರತದ ಆಶಯಕ್ಕೆ ಹಿನ್ನಡೆಯಾಗಿದೆ. ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪು (ಎನ್ಎಸ್ಜಿ) ಸೇರಲು ಭಾರತವನ್ನು ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾವನ್ನು ಒತ್ತಾಯಿಸಿದರೂ, ಸೋಲ್ನಲ್ಲಿ ನಡೆಯುತ್ತಿರುವ ಎನ್ಎಸ್ಜಿ ರಾಷ್ಟ್ರಗಳ ಸಭೆಯಲ್ಲಿ ಈ ಕುರಿತು ಒಮ್ಮತ ಮೂಡಿಲ್ಲ.
✍ಪುಣೆಯಲ್ಲಿ ಮೋದಿ ಅವರಿಂದ ಸ್ಮಾರ್ಟ್ಸಿಟಿ ಕಾಮಗಾರಿಗೆ ನಾಳೆ ಚಾಲನೆ:-
ದೇಶದ 20 ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 25ರಂದು (ಶನಿವಾರ) ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ.ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಪ್ರಧಾನಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದೇಶದ ಎಲ್ಲಾ 20 ನಗರಗಳಲ್ಲಿ ಏಕಕಾಲಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಪುಣೆ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ 14 ವಿವಿಧ ಕಾಮಗಾರಿಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ..