Wikipedia

Search results

Monday, May 30, 2016

ಬಡವರು ತಿಂದರೆ
ಭಗವಂತ ತಿಂದಹಾಗೆ:~

(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)


ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು  ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.

ಆ ಕೆಲಸದವ ಹಸಿವಾಗಿ ಎರಡು ಹಣ್ಣನ್ನ ಬರುವ ದಾರಿಯಲ್ಲಿ ತಿಂದು ಬಿಡುತ್ತಾನೆ ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.

ಅಂದು ರಾತ್ರಿ ದೇವರು ಆ ಶ್ರೀಮಂತನ ಕನಸಲ್ಲಿ ಬಂದು ನೀನು ಕಳುಹಿಸಿದ ಎರಡು ಹಣ್ಣನ್ನ ನಾನು ತಿಂದೆ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಆ ದೇವರು ಮರೆಯಾಗಿ ಬಿಟ್ಟರು.

ದೇವರ ಮಾತು ಕೇಳಿ ಆ ಶ್ರೀಮಂತ ಕೋಪ ಗೊಂಡ.ನಾನು ಒಂದು ಗೊನೆ ಹಣ್ಣನ್ನೆಲ್ಲವ ದೇವರಿಗೆ ಕಳುಹಿಸಿದ್ದು,
ಮತ್ತೆ ದೇವರು ಯಾಕೆ ಎರಡು ಹಣ್ಣನ್ನ ಮಾತ್ರ ತಿಂದೆ ಎಂದರು ಎಂದು.

ಕೋಪದಲ್ಲಿ ಆ ಕೆಲಸದವನನ್ನ ವಿಚಾರಿಸಿದರು ಆಗ ಕೆಲಸದವನು ವಿವರಿಸಿದ ದಾರಿಯಲ್ಲಿ ಹಸಿವಾಗಿ ಎರಡು ಹಣ್ಣನ್ನು ನಾನೇ ತಿಂದಿದ್ದು  ಬುದ್ದಿ
ನನ್ನನ್ನ ಕ್ಷಮಿಸಿ ಎಂದು ಕೇಳಿಕೊಂಡನು.

ಆಗ ಆ ಶ್ರೀಮಂತನಿಗೆ ಅರ್ಥವಾಯಿತು ಕೆಲಸದವನು ತಿಂದ ಎರಡು ಹಣ್ಣು ಮಾತ್ರ ದೇವರಿಗೆ ಹೋಗಿ ಸೇರಿದೆ ಎಂದು. ಅಂದು ಒಂದು ವಿಷಯ ಅರ್ಥವಾಯಿತು ಆ ಶ್ರೀಮಂತನಿಗೆ

ಒಬ್ಬ ಬಡವ ತಿಂದರೆ ಭಗವಂತ ತಿಂದಹಾಗೆ ಎಂದು.