_*ಶಾತವಾಹನರು*_
⭐ ಶಾತವಾಹನರು ಕರ್ನಾಟಕವನ್ನು ಆಳಿದ ಮೊಟ್ಟಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ.
⭐ಇವರು ಮೊದಲು ಮೌರ್ಯರ ಸಾಮಂತರಾಗಿದ್ದರು.
⭐ ಮೌರ್ಯರ ಪತನದ ನಂತರ ಸ್ವತಂತ್ರರಾಗಿ ಶಾತವಾಹನ ಸಾಮ್ರಾಜ್ಯ ಸ್ಥಾಪಿಸಿಕೊಂಡರು
⭐ *ಸಿಮುಖ*ನು ಶಾತವಾಹನ ವಂಶದ ಸ್ಥಾಪಕ
⭐ ಪೈಥಾನ ಇವರ ರಾಜಧಾನಿಯಾಗಿತ್ತು.
⭐ ಇವರು ಸುಮಾರು 460 ವರ್ಷಗಳ ಕಾಲ ಕರ್ನಾಟಕವನ್ನು ಆಳಿದರು.
⭐ ಹಾಲ, 1 ನೇ ಶಾತಕರ್ಣಿ, ಗೌತಮಿಪುತ್ರ, ವಸಿಷ್ಠ ಪುತ್ರ, ಪುಲಮಾವಿ, ಯಜ್ಞಶ್ರೀ ಶಾತಕರ್ಣಿಗಳು ಈ ವಂಶದ ಪ್ರಮುಖ ದೊರೆಗಳು.
*ಆಧಾರಗಳು*
🔸ಪುರಾಣಗಳು
🔸ಪೆರಿಪ್ಲಸ್ ನ ಗ್ರಂಥ
🔸ಗುಣಾಡ್ಯನ ಬೃಹತಕಥಾ
🔸ಹಾಲನ ಗಾತಸಪ್ತಶತಿ
🔸ಸಿಲೋನಿನ ಬೌದ್ಧ ಗ್ರಂಥಗಳು
🔸ಕನ್ನೇರಿ,ನಾನಘಾಟ,ಗಿರ್ನಾರ ಶಾಸನಗಳು
ಇನ್ನು ಅನೇಕ ಆಧಾರಗಳು ಶಾತವಾಹನರ ರಾಜಕೀಯ, ಆರ್ಥಿಕ,ಸಾಮಾಜಿಕ ಸ್ಥಿತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.
*ಶಾತವಾಹನರ ಮೂಲ*
🔹 ಇವರ ಮೂಲದ ಬಗ್ಗೆ ಹಲವಾರು ವಾದಗಳಿವೆ
🔹ಕೆಲವು ವಿದ್ವಾಂಸರು ಸಾತ ಎಂದರೆ ಕುದುರೆ ಎಂದು ಹೇಳಿ, ಶಾತವಾಹನರು ಕುದುರೆಯನ್ನು ವಾಹನವಾಗಿ ಬಳಸುತ್ತಿದ್ದರೆಂದು
🔹 ಮತ್ತೇ ಕೆಲವರು ಸಾತ ಎಂದರೆ ಮತ್ಸ್ಯ( ಮೀನು) ಎಂದು ಹೇಳಿ, ಅವರು ಮೀನು ಹಿಡಿದು ಜೀವನ ನಡೆಸುವ ಜನರೆಂದು ವಾದಿಸಿದ್ದಾರೆ.
🔹ಕರ್ಣಿ ಎಂದರೆ ಹಡಗಿನ ಯಜಮಾನ ಎಂಬರ್ಥ ಬರುವುದರಿಂದ ಅವರು ಸಮುದ್ರ ವ್ಯಾಪಾರ ಮಾಡುತ್ತಿದ್ದರೆಂದು ಹೇಳಿದ್ದಾರೆ.
🔹ಇವರು ಆಂಧ್ರರು ಎಂದು ಆಂಧ್ರ ಭೃತ್ಯರೆಂದು,ಶಾತವಾನರ ನಾಣ್ಯಗಳು ಇವರನ್ನು ಆಂಧ್ರರೆಂದು, ಅಶೋಕನ ಶಾಸನಗಳು ಶಾತಕರ್ಣಿಗಳೆಂದು,ಆಂಧ್ರ ಭೃತ್ಯ(ಸೇವಕ) (ಅಶೋಕನ 12 ನೇ ಶಿಲಾಶಾಸನ)ಎಂದು ಹೇಳಿವೆ.
🔹🔹 *ಕನ್ನಡಮೂಲ*🔹🔹
🔺 ಕೆ ಪಿ ಜಯಸ್ವಾಲ್ ಮತ್ತು ರಾಯ್ ಚೌಧರಿಯವರು ಶಾತವಾಹನರು ಆಂಧ್ರರೆಂದು ಹೇಳುವ ಯಾವ ಆಧಾರಗಳು ಇಲ್ಲ ಎಂದು ಅವರು ಕರ್ನಾಟಕದವರೇ ಹೊರತು ಆಂಧ್ರರಲ್ಲ ಎಂದಿದ್ದಾರೆ.
🔺 ತಾಳಗುಂದಾ, ಹಾಥಿಗುಂಪಾ, ಗಿರ್ನಾರ ಶಾಸನಗಳು ಅವರನ್ನು ಶಾತವಾಹನರೆಂದು ಅವರನ್ನು ಕನ್ನಡಿಗರೆಂದು ತಾಳಗುಂದದ ಪ್ರಾಣೇಶ್ವರನ ಆರಾಧಕರೆಂದು ಹೇಳಿವೆ.
🔺ಹೀರೆಹಡಗಲಿಯಲ್ಲಿ ದೊರೆತ ಶಾಸನವು ಶಾತವಾಹನರ ಮೂಲನೆಲೆ *ಶಾತನರಹಟ್ಟಿ* (ಶಾತವಾಹನಿಹಾರ) ಅಂದರೆ ಬಳ್ಳಾರಿ ಜಿಲ್ಲೆಯ ವಾಸಿಗಳೆಂದು ತಿಳಿಸುತ್ತದೆ.
⭐ ಪ್ರಸ್ತುತವಾಗಿ ಎಲ್ಲರೂ ಒಪ್ಪುವ ವಾದ ಎಂದರೆ ಅವರು ಆಂಧ್ರರು.
⭐ ಶಾತವಾಹನರ ಮೂಲ ನೆಲೆ ಆಂಧ್ರದ ಗೋದಾವರಿ ನದಿ ತೀರದ ಔರಂಗಬಾದ್ ಜಿಲ್ಲೆಯ ಪೈಥಾನ ಅಥವಾ ಪ್ರತಿಷ್ಠಾನವಾಗಿತ್ತು. ಈಗದು ಮಹಾರಾಷ್ಟ್ರದಲ್ಲಿದೆ. ಆಗದು ಕರ್ನಾಟಕದ ವ್ಯಾಪ್ತಿಯಲ್ಲಿತ್ತು.
*ರಾಜಕೀಯ ಇತಿಹಾಸ*
📢 ಸಿಮುಖ ಶಾತವಾಹನ ವಂಶದ ಸ್ಥಾಪಕ
📢 ಹಳೆ ಹೈದರಾಬಾದಿನ ಔರಂಗಾಬಾದ ಜಿಲ್ಲೆಯ ಪೈಥಾನ ಇವರ ರಾಜಧಾನಿ.
📢 ಕನವ ಸಂತತಿಯ ಕೊನೆಯ ದೊರೆ ಸುಶರ್ಮನನ್ನು ಕೊಂದು ಸ್ವತಂತ್ರವಾಗಿ ಸುಮಾರು 23 ವರ್ಷಗಳ ಕಾಲ ರಾಜ್ಯವಾಳಿದನು.
📢 ಇವನು ದಖನನಲ್ಲಿ ಮೌರ್ಯರ ಆಧಿಪತ್ಯವನ್ನು ಕೊನೆಗಾಣಿಸಿ, ಶುಂಗರು, ಹಾಗೂ ಕಣ್ವರನ್ನು ಸೋಲಿಸಿದನು.
📢 *ನಾನಘಾಟ* ಶಾಸನ ಸಿಮುಖನನ್ನು *ರಾಯಸಿಮುಕ* ಎಂದು ವರ್ಣಿಸಿದೆ.
📢 ಜೈನ ಗ್ರಂತವೊಂದು ಸಿಮುಖನಿಗೆ *ಶಾಲಿವಾಹನ* ಎಂದು ಹೆಸರಿಸಿದರು.
📢 ನಾಸಿಕ ಶಾಸನ ಅದ್ವಿತೀಯನಾದವನೆಂದು ವರ್ಣಿಸಿದೆ. ಸಿಮುಖ(ಶ್ರೀಮುಖ)
*1 ನೇ ಶಾತಕರ್ಣಿ*
📢 ಆರಂಭ ಶಾತವಾಹನರಲ್ಲಿ ಅತ್ಯಂತ ಪ್ರಬಲ ದೊರೆ
📢 ಇವನ ರಾಣಿ ಕೊರೆಯಿಸಿದ *ನಾನಘಾಟ ಗುಹಾಶಾಸನ*ವು ಇವನ ಸಾಧನೆಗಳನ್ನು ಹೇಳುತ್ತದೆ
📢 *ನಾನಘಾಟ ಗುಹಾಶಾಸನದ* ಪ್ರಕಾರ ಶಾತಕರ್ಣಿ ಅಭಿಪ್ರಾಯ,ನಾಸಿಕ, ಪೂರ್ವ ಮಾಳ್ವ, ಬಿರಾರ, ವಿದರ್ಭ, ಹೈದರಾಬಾದು ಹಾಗೂ ಮಧ್ಯಭಾರತಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಂಧ್ಯ ಪರ್ವತದಿಂದ ಕೊಂಕಣದವರೆಗೆ ವಿಸ್ತರಿಸಿದನು.
📢 ತನ್ನ ಈ ದಿಗ್ವಿಜಯಗಳ ಜ್ಞಾಪಕಾರ್ಥ 2 ಅಶ್ವಮೇಧಯಾಗ ಹಾಗೂ ರಾಜಸೂಯ ಯಾಗ ಆಚರಿಸಿದನು.
📢 ಇವನಿಗೆ *ದಕ್ಷಿಣ ಪಥಪತಿ*, *ದಕ್ಷಿಣಪಥ ಸಾರ್ವಭೌಮ*, *ಅಪ್ರತಿಹಥ್* ಎಂಬ ಬಿರುದುಗಳಿದ್ದವು.
*ಹಾಲ*
🔸 ಹಾಲ ಶಾಂತಪ್ರೀಯ ಅರಸ
🔸ಸಾಹಿತಿ ಮತ್ತು ವಿದ್ವಾಂಸನು ಆಗಿದ್ದನು
🔸ಹಾಲನು ಪ್ರಾಕೃತ ಭಾಷೆಯಲ್ಲಿ *ಗಥಾಸಪ್ತಶತಿ* ಎಂಬ ಶೃಂಗಾರ ಕಾವ್ಯ ರಚಿಸಿದ್ದಾನೆ(ಇದರಲ್ಲಿ 700 ಕಾವ್ಯಗಳನ್ನು ಹೊಂದಿದೆ)
🔸ಇವನ ಇನ್ನೊಂದು ಗ್ರಂಥ *ಸತ್ತಶೈ*
🔸 ಹಾಲನ ಸಮಕಾಲೀನನವನಾದ ಗುಣಾಡ್ಯನು *ಬೃಹತ್ ಕಥಾ* ಬರೆದನು.
🔸 ಲೀಲಾವತಿ ಪರಿಣಯ ಗ್ರಂಥ ಹೇಳಿರುವಂತೆ ಹಾಲನು ಸಿಲೋನನ್ನು ಗೆದ್ದು ಅಲ್ಲಿನ ರಾಜನ ಮಗಳಾದ ಲೀಲಾವತಿಯನ್ನು ವಿವಾಹವಾದನು.
🔸ಕ್ರಿ.ಶ 78 ರಲ್ಲಿ *ಶಾಲಿವಾಹನ*ಅಥವಾ *ಶಕವರ್ಷ*ದ ಸ್ಥಾಪಕ ಹಾಲ ದೊರೆ
🔸 ಬಾಣನು ತನ್ನ ಹರ್ಷಚರಿತೆಯಲ್ಲಿ ಹಾಲನ ಕೃತಿ ಮೇರು ಕೃತಿ ಎಂದು ಹೊಗಳಿದ್ದಾನೆ.
*ಗೌತಮಿಪುತ್ರ ಶಾತಕರ್ಣಿ*
🔰 ಗೌತಮಿಪುತ್ರ ಶಾತಕರ್ಣಿಯು ಶಾತವಾಹನರಲ್ಲಿ ಅತ್ಯಂತ ಪ್ರಸಿದ್ಧ ದೊರೆ.
🔰 ಕಳೆದುಹೋದ ಶಾತವಾಹನರ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸಿ, ಅವರ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ.
🔰 ಅಧಿಕಾರಕ್ಕೆ ಬಂದ ತಕ್ಷಣ ಶಕರ ಮೇಲೆ ದಂಡೆತ್ತಿ ಹೋಗಿ ಶಕರಾಜ *ನಹಪಾಣ* ಮತ್ತು ಅವನ ಅಳಿಯ *ಉಸವದತ್ತ*ರನ್ನು ಕೊಂದು ಕ್ಷತ್ರಪರನ್ನು ನಿರ್ಮೂಲನೆ ಮಾಡಿದನು.
🔰 ಶಕರಿಂದ ಸೌರಾಷ್ಟ್ರ, ಕೊಂಕಣ, ಮಹಾರಾಷ್ಟ್ರ, ಮಾಳ್ವಗಳನ್ನು ಕಿತ್ತುಕೊಂಡನು.
🔰 ಶಕರ ನಾಣ್ಯಗಳ ಮೇಲೆ ತನ್ನ ಲಾಂಛನವನ್ನು ಮುದ್ರಿಸಿ ವಿಜಯೋತ್ಸವ ಆಚರಿಸಿದನು.
🔰 ನಾಸಿಕ ಬಳಿ ದೊರೆತಿರುವ ನಹಪಾನನ 8000 ಬೆಳ್ಳಿ ನಾಣ್ಯಗಳ ಮೇಲೆ ಶಾತವಾಹನರ ಪುನರ್ ಮುದ್ರೆ ಕಂಡುಬಂದಿರುವುದೆ ಇದಕ್ಕೆ ಸಾಕ್ಷಿ
🔰 ಗೌತಮಿಪುತ್ರನ ತಾಯಿ ಬಾಳಶ್ರೀ ಕೆತ್ತಸಿದ *ನಾಸಿಕ ಶಾಸನವು* ಇವನ ಸಾಧನೆಗಳನ್ನು ವಿವರಿಸುತ್ತದೆ.
🔰 ಇವನ ಸಾಮ್ರಾಜ್ಯವು ಉತ್ತರದಲ್ಲಿ ಸೌರಾಷ್ಟ್ರ, ಮಾಳ್ವದಿಂದ ಹಿಡಿದು ದಕ್ಷಿಣದ ಕೃಷ್ಣಾನದಿ ಅಥವಾ ಬನವಾಸಿ, ಪೂರ್ವದಲ್ಲಿ ಬಿರಾರನಿಂದ ಪಶ್ಚಿಮದ ಕೊಂಕಣದವರೆಗೂ ಹಬ್ಬಿತ್ತು.
🔰 ಅಂದರೆ ಉತ್ತರದ ವಿಂಧ್ಯ ಪರ್ವತಗಳಿಂದ ದಕ್ಷಿಣದ ಅರಬ್ಬೀ ಸಮುದ್ರ ಹಾಗೂ ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಹಬ್ಬಿತ್ತು ಹೀಗಾಗಿ ಅವನಿಗೆ *ತ್ರೈ ಸಮುದ್ರ ತೋಯಾ ಪೀತಾವಾಹನ*ಎಂಬ ಬಿರುದು ಬಂದಿತು.
🔰 *ತ್ರೈ ಸಮುದ್ರ ತೋಯಾ ಪೀತಾವಾಹನ* ಎಂದರೆ ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವಾಗಿ ಪಡೆದವನು.
🔰 *ಪಶ್ಚಿಮ ಪ್ರಭು*, *ವಿಂಧ್ಯ ವಸಡು*, *ಪ್ರತಿಷ್ಠಾನ ಪ್ರಭು*, *ಶಾತವಾಹನ ಕುಲಪ್ರತಿಷ್ಠಾಪಕ* ಎಂಬ ಬಿರುದುಗಳಿದ್ದವು.
🔰 ಗೌತಮಿಪುತ್ರ ಶಾತಕರ್ಣಿಯು ತನ್ನನ್ನು ಬ್ರಾಹ್ಮಣರ ಏಕಮೇವ ರಕ್ಷಕನೆಂದು ಕರೆದುಕೊಂಡಿದ್ದಾನೆ.
*ವಶಿಷ್ಠಪುತ್ರ ಪುಲಮಾವಿ*
🎈ಗೌತಮಿಪುತ್ರ ಶಾತಕರ್ಣಿಯ ನಂತರ ಅವನ ಮಗ ವಶಿಷ್ಠಪುತ್ರ ಪುಲಮಾವಿ( 2ನೇ ಪುಲಮಾವಿ) ಅಧಿಕಾರಕ್ಕೆ ಬಂದನು.
🎈 ಇವನು ಆಂಧ್ರಪ್ರದೇಶವನ್ನು ಗೆದ್ದು *ಆಂಧ್ರರಾಜ* ಎಂದು ಕರೆಯಿಸಿಕೊಂಡನು
🎈 ಇವನಿಗೆ ದಕ್ಷಿಣ ಪಥೆಶ್ವರ ಎಂಬ ಬಿರುದು ಬಂದಿತು
🎈 ಇವನು *ಅಮರಾವತಿ* ಬೌದ್ಧ ಸ್ತಂಭವನ್ನು ನಿರ್ಮಿಸಿದುದಲ್ಲದೇ, ನವನಗರವನ್ನು ನಿರ್ಮಿಸಿ *ನವನಗರ ಸ್ವಾಮಿ* ಎಂಬ ಬಿರುದು ಧರಿಸಿದನು.
🎈 ನವನಗರ ಇವನ ರಾಜಧಾನಿಯಾಗಿತ್ತು
🎈 ಗಿರ್ನಾರ ಶಾಸನದ ಪ್ರಕಾರ ಈತ ಉಜ್ಜಯಿನಿಯ ಶಕರಾಜ ರುದ್ರರಾಮನಿಂದ ಎರಡು ಬಾರಿ ಸೋತನು. ಪುಲಮಾವಿ ಒಂದನೇ ರುದ್ರರಾಮನ ಮಗಳನ್ನು ವರಿಸಿದ್ದನು.
*ನಾಣ್ಯಗಳು*
🍭 ಶಾತವಾಹನರು ದೀನಾರ, ಸುವರ್ಣ ಎಂಬ ಚಿನ್ನದ ನಾಣ್ಯಗಳು
🍭 ಕುಷಾಣ ಮತ್ತು ಕರ್ಷಪಣ ಎಂಬ ಬೆಳ್ಳಿ ನಾಣ್ಯಗಳು
🍭 ದ್ರಮ್ಯ, ಗದ್ಯಾಣ, ಪಣಗಣ್ಯ, ಎಂಬ ತಾಮ್ರ ಮತ್ತು ಸೀಸದ ನಾಣ್ಯಗಳನ್ನು ಚಲಾವಣೆಗೆ ತಂದರು
*ಕೃಷಿ*
⚡ ಕೃಷಿ ಬಹು ಜನರ ವೃತ್ತಿಯಾಗಿತ್ತು
⚡ ಭೂಕಂದಾಯವು ರಾಜ್ಯದ ಮುಖ್ಯ ವರಮಾನದ ಮೂಲವಾಗಿತ್ತು
⚡ ಒಟ್ಟು ಉತ್ಪನ್ನದ 1/6. ಭಾಗ ಸರ್ಕಾರಕ್ಕೆ ಕಂದಾಯವಾಗಿ ಕೊಡುತ್ತಿದ್ದರು
⚡ ಭತ್ತ ಮತ್ತು ಗೋಧಿ ಆಗಿನ ಮುಖ್ಯ ಬೆಳೆಗಳಾಗಿದ್ದವು
⚡ ಕೃಷ್ಣಾ ಮತ್ತು ಗೋದಾವರಿ ನದಿಗಳು ಕೃಷಿಗೆ ನೀರು ಒದಗಿಸುತ್ತಿದ್ದವು
*ಧಾರ್ಮಿಕ ಸ್ಥಿತಿ*
🔺 ಇವರು ಪರಮತ ಸಹಿಷ್ಣರು
🔺 ಬ್ರಾಹ್ಮಣ, ಶೈವ, ವೈಷ್ಣವ, ಬೌದ್ಧ ಧರ್ಮಗಳಿಗೆ ಆಶ್ರಯ ನೀಡಿ *ಚತುತ್ಸಮಯ ಸಮುದ್ಧರಣ* ಎಂಬ ಕೀರ್ತಿಗೆ ಪಾತ್ರಾರಾದರು.
🔺ನಾಸಿಕ ಶಾಸನು ಗೌತಮೀಪುತ್ರ ಶಾತಕರ್ಣಿಯನ್ನು *ಏಕಬ್ರಾಹ್ಮಣ* ಎಂದು ಕರೆದಿದೆ.
🔺ನಾನಘಾಟ ಶಾಸನು ಬ್ರಾಹ್ಮಣರಿಗೆ ಗೋದಾನ ಮತ್ತು 20 ಯಜ್ಞಗಳನ್ನು ಆಚರಿಸಿದ ವಿಷಯವಿದೆ
🔺 ಮಹಾಸಾಂಘೀಕ ಬೌದ್ಧ ಪಂಥ ಜನಪ್ರಿಯವಾಗುತ್ತಿವೆ
#karnataka_tet
*ಸಾಹಿತ್ಯ*
🔸ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳು ಶಾತವಾಹನರ ಪೋಷಣೆಯಲ್ಲಿದ್ದವು.
🔸ಪ್ರಾಕೃತ ಅವರ ಅಧಿಕೃತ ರಾಜ್ಯಭಾಷೆಯಾಗಿತ್ತು
🔸 ಜೈನ ಪಂಡಿತನಾದ ಕುಂದಾಚಾರ್ಯನಿಂದ ಪ್ರಭೃತಸಾರ,ರಾಯನಸಾರ, ಪ್ರವಚನಸಾರ, ಸಮಯಸಾರ, ದ್ವಾದಶಾನುಪ್ರೇಕ್ಷ,ಎಂಬ ಕೃತಿ ರಚಿಸಿದರು.
🔸 ಹಾಲನ ಪ್ರಾಕೃತ ಭಾಷೆಯಲ್ಲಿ *ಗಥಾಸಪ್ತಶತಿ* ಶೃಂಗಾರ ಕಾವ್ಯವನ್ನು ಬರೆದನು.
🔸 ಲೀಲಾವೈ(ಲೀಲಾವತಿ ಪರಿಣಯ) ಗ್ರಂಥವು ಹಾಲನ ಸೋಲಿನ ದಂಡಯಾತ್ರೆಯನ್ನು ತಿಳಿಸುತ್ತದೆ
🔸ಗುಣಾಡ್ಯನು ಪೈಶಾಚಿ ಭಾಷೆಯಲ್ಲಿ *ಬೃಹತಕತಾ*
🔸 ನಾಗಾರ್ಜುನ ಸಂಸ್ಕೃತಿದಲ್ಲಿ *ಶತಸಹಸ್ರಿಕ* ಮತ್ತು *ಮಾಧ್ಯಮಿಕ ಸೂತ್ರ*ಗಳನ್ನು ರಚಿಸಿದರು.
🔸ಕ್ಷೇಮೆಂದ್ರನು *ಕಥಾಸರಿತ್ಸಾಗರ*ವನ್ನು ರಚಿಸಿದನು