Wikipedia

Search results

Tuesday, August 30, 2016

👌 ಉದ್ಯೋಗಾವಕಾಶ: 19,243 ಬ್ಯಾಂಕ್‌ ಕ್ಲರ್ಕ್‌ ನೇಮಕ👌👇👇

A
ಐಬಿಪಿಎಸ್‌ನಿಂದ ಅಧಿಸೂಚನೆ: ರಾಜ್ಯದಲ್ಲಿ 1,467 ಹುದ್ದೆಗಳು ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) 19ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲೆರಿಕಲ್‌ ಕೇಡರ್‌ನ ಹುದ್ದೆಗಳ ನೇಮಕಾತಿಗಾಗಿ 'ಸಾಮಾನ್ಯ ಪ್ರವೇಶ ಪರೀಕ್ಷೆ ' ನಡೆಸುತ್ತಿದ್ದು, ಅರ್ಜಿ ಆಹ್ವಾನಿಸಿದೆ. ಒಟ್ಟು 19, 243 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ರಾಜ್ಯದಲ್ಲಿಯೇ 1,467 ಹುದ್ದೆಗಳು ಖಾಲಿ ಇವೆ. ಕಳೆದ ಬಾರಿಯಂತೆ ಈ ಬಾರಿಯೂ ಐಎಎಸ್‌, ಕೆಎಎಸ್‌ ಮಾದರಿಯಲ್ಲಿ ಎರಡು ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಬಾರಿಯೂ ಸಂದರ್ಶನ ಇರುವುದಿಲ್ಲ. ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಅರ್ಹತೆ ಏನು? : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್‌ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಯು ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್‌ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. (ಕಂಪ್ಯೂಟರ್‌ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್‌/ ಡಿಪ್ಲಮೊ ಅಥವಾ ಡಿಗ್ರಿ ಪಡೆದಿರುವುದು ಅಥವಾ ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್‌ ಅಥವಾ ಐಟಿಯನ್ನು ವಿಷಯವಾಗಿ ಓದಿರಬೇಕು.)ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ‌ ಹೊಂದಿರಬೇಕು. ಆಯಾ ರಾಜ್ಯದ ಹುದ್ದೆಗಳನ್ನು ಆಯಾ ರಾಜ್ಯದ ಭಾಷೆ ಗೊತ್ತಿರುವವರಿಗೇ ನೀಡಲಾಗುತ್ತದೆ. ಗಮನಿಸಿ, ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ. 20 ವರ್ಷದಿಂದ 28 ವರ್ಷದೊಳಗಿ ನವರು ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ. ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಪರೀಕ್ಷೆ ಹೇಗೆ? ನಿಗದಿತ ದಿನದಂದು ಆನ್‌ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು, 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. (ಅಂದರೆ ಒಂದು ಪ್ರಶ್ನೆಗೆ ಒಂದು ಅಂಕ ನಿಗದಿಯಾಗಿರುತ್ತದೆ ) ಇದರಲ್ಲಿ ಇಂಗ್ಲಿಷ್‌ ಲಾಂಗ್ವೇಜ್‌ನ 30, ನ್ಯೂಮರಿಕಲ್‌ ಎಬಿಲಿಟಿಯ 35 ಹಾಗೂ ರೀಸನಿಂಗ್‌ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಮುಖ್ಯಪರೀಕ್ಷೆಯು ಎರಡು ಗಂಟೆಗಳ ಕಾಲ ನಡೆಯಲಿದ್ದು, 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇದರಲ್ಲಿ ರೀಸನಿಂಗ್‌ನ 40, ಇಂಗ್ಲಿಷ್‌ ಲಾಂಗ್ವೇಜ್‌ನ 40, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ನ 40, ಜನರಲ್‌ ಅವೇರ್‌ನೆಸ್‌ನ (ಇದರಲ್ಲಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿರಲಿವೆ) 40 ಹಾಗೂ ಕಂಪ್ಯೂಟರ್‌ ಜ್ಞಾನಕ್ಕೆ ಸಂಬಂಧಿಸಿದ 40 ಪ್ರಶ್ನೆಗಳಿರಲಿವೆ. ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಒದಗಿಸಲಾಗಿರುತ್ತದೆ. *ತಪ್ಪು ಉತ್ತರ ಗುರುತಿಸಿದಲ್ಲಿ 0.25 ಅಂಕವನ್ನು ಕಳೆಯಲಾಗುತ್ತದ*ೆ. * ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕ : 22-8-2016ರಿಂದ 12-9-2016
*ಪ್ರಿಲಿಮ್ಸ್‌ ನಡೆಯುವ ದಿನಾಂಕ : 26-11-2016, 27-11-2016, 03-12-2016, 04-12-2016.

* ಪ್ರಿಲಿಮ್ಸ್‌ ಫಲಿತಾಂಶ: ಡಿಸೆಂಬರ್‌, 2016

*ಮುಖ್ಯ ಪರೀಕ್ಷೆ ನಡೆಯುವ ದಿನಾಂಕ : 31-12-2016, 01-01-2017

* ಸಂದರ್ಶನ : ಫೆಬ್ರವರಿ, 2017 * ಹುದ್ದೆಗೆ ನೇಮಕ : ಏಪ್ರಿಲ್‌, 2017

* ಪ್ರಿಲಿಮ್ಸ್‌ ನಡೆಯುವ ಕೇಂದ್ರಗಳು : *ಬೆಳಗಾವಿ, ಬೆಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.*
*ಅರ್ಜಿ ಶುಲ್ಕ: 600ರೂ. (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100ರೂ.) ರಾಜ್ಯದ ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?
*ಅಲಹಾಬಾದ್‌ ಬ್ಯಾಂಕ್‌- 17
*ಆಂಧ್ರ ಬ್ಯಾಂಕ್‌- 25
*ಬ್ಯಾಂಕ್‌ ಆಫ್‌ ಬರೋಡ-40
* ಬ್ಯಾಂಕ್‌ ಆಫ್‌ ಇಂಡಿಯಾ-8
*ಕೆನರಾ ಬ್ಯಾಂಕ್‌-425 *ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ- 57
*ಕಾರ್ಪೋರೇಷನ್‌ ಬ್ಯಾಂಕ್‌-90
*ದೇನಾ ಬ್ಯಾಂಕ್‌-3
*ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌-5
*ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌-3
*ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌-44
*ಸಿಂಡಿಕೇಟ್‌ ಬ್ಯಾಂಕ್‌-435 *ಯುಕೋ ಬ್ಯಾಂಕ್‌-12
Amasidda
* ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ-58 *ವಿಜಯಾಬ್ಯಾಂಕ್‌- 245

Sunday, August 28, 2016

*‼‼‼ಎಚ್ಚರಿಕೆ‼‼‼*

ನೀವು ವಾಟ್ಸಪ್ ಡೌನ್ಲೋಡ್ ಮಾಡಿದ ಬಳಿಕ *privacy policy* ಎಲ್ಲಾ ಓಕೆ ಮಾಡಿ ಸಾಧಾರಣವಾಗಿ ಬಳಕೆ ಮಾಡುತ್ತಿದ್ದೀರಾ..ಹಾಗಾದರೆ ನಿಮಗೆ ಗೊತ್ತಿಲ್ಲದ ಕೆಲವೊಂದು ವಿಷಯಗಳು ಇಲ್ಲಿವೆ ನೋಡಿ.!

ವಾಟ್ಸಪ್ ಕಂಪೆನಿ ಮಾಲಿಕರು ಇದೀಗ ವಾಟ್ಸಪ್ *privacy policy* ಹೊಸದಾಗಿ ತಯಾರಿಸಿ ಅದರಲ್ಲಿ ಬರುವ ಕೆಲವೊಂದು ವಿಷಯಗಳನ್ನು *Facebook*ಮುಖಾಂತರ ಪರಸ್ಯ ಕಂಪೆನಿಗಳಿಗೆ *share*ಮಾಡಲು ತೀರ್ಮಾನಿಸಿದ್ದಾರೆ.!

ಇದರಿಂದ ತಪ್ಪಿಸಿಕೊಳ್ಳಲು *೩೦ದಿವಸ* ಕಾಲಾವಧಿ ಇದೆ.

*ನಿಮ್ಮ ರಹಸ್ಯ ಬಯಲಾಗಬಾರದೆಂದರೆ*

*ಮೊದಲು ವಾಟ್ಸಪ್ ಓಪನ್ ಮಾಡಿದ ಬಳಿಕ*

*೧.settings*ನ್ನು ತೆರೆಯಿರಿ
ತದನಂತರ
*೨.@ccount*ನ್ನು ತೆರೆಯಿರಿ
ಅಲ್ಲಿ ನಿಮಗೆ
*Share my account info*✅
*Right(ಸರಿ)*ಮಾರ್ಕಿನಲ್ಲಿದ್ದರೆ
ತಕ್ಷಣ ಅದನ್ನು *cancel* ಮಾಡಿ

*cencel*ಮಾಡಲು ನೀವು ಮಾಡಬೇಕಾದದ್ದು ಇಷ್ಟೇ..
*share my contact info*✅
ಈ ಬರಹದ ಮೇಲೆ *click(ಒತ್ತಿ)*ದರೆ
ಅಲ್ಲಿ ನಿಮಗೊಂದು *warning*ಮೆಸೇಜು ಬರುವುದನ್ನು ಗಮನಿಸಿ
ಅದರಲ್ಲಿ ಎರಡು *option*ಇದ್ದು ಅದರಲ್ಲಿ
*dont share* ಎಂಬ *option*ಗೆ *click* ಮಾಡಿರಿ

ಈ ಮೆಸೇಜನ್ನು ನಿಮ್ಮ *ಮನೆಯವರಿಗೆ,ಗೆಳೆಯರಿಗೆ ಮತ್ತು ಕುಟುಂಬದವರಿಗೆ* ತಲುಪಿಸಲು
*(forward)* ಮಾಡಲು ಮರೆಯದಿರಿ.

How To Download Voter ID Card Online?

https://t.co/0DplLm1Ki9

Tuesday, August 23, 2016

*ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ; ಅಜಿಂಕ್ಯ ರೆಹಾನೆಗೆ ಅರ್ಜುನ ಪ್ರಶಸ್ತಿ*
                
ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಭಾರತೀಯ ಕ್ರೀಡಾಪಟುಗಳಾದ ಪಿವಿ ಸಿಂಧು, ಸಾಕ್ಷಿ ಮಲಿಕ್,  ದೀಪಾ ಕರ್ಮಾಕರ್ ಮತ್ತು ಜಿತು ರಾಯ್ 2016ರ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ ಕ್ರೀಡಾಪಟುಗಳಿಗೆ ನೀಡುವ ಪರಮೋನ್ನತ ಪ್ರಶಸ್ತಿಯಾಗಿದೆ ಇದು.

ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಬೆಳ್ಳಿ ಪದಕ ಗೆದ್ದ  ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಮಹಿಳೆಯರ ಕುಸ್ತಿಯಲ್ಲಿ ಮೊದಲ ಬಾರಿ ಕಂಚು ಗೆದ್ದ ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಆಟದಲ್ಲಿ ಫೈನಲ್ ಪ್ರವೇಶಿಸಿದ್ದ ದೀಪಾ ಕರ್ಮಾಕರ್ ಮತ್ತು ಶೂಟಿಂಗ್‍ನಲ್ಲಿ ಪದಕ ಗೆಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ್ದ ಜಿತು ರಾಯ್ ಅವರಿಗೆ ಪ್ರಸಕ್ತ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

*ರಾಜೀವ್ ಗಾಂಧಿ ಖೇಲ್ ರತ್ನ  ಪ್ರಶಸ್ತಿ*
ಪಿವಿ ಸಿಂಧು  -ಬ್ಯಾಡ್ಮಿಂಟನ್
ದೀಪಾ ಕರ್ಮಾಕರ್ - ಜಿಮ್ನಾಸ್ಟಿಕ್ಸ್
ಜಿತು ರಾಯ್ - ಶೂಟಿಂಗ್
ಸಾಕ್ಷಿ ಮಲಿಕ್ -  ಕುಸ್ತಿ

*ಅರ್ಜುನ ಪ್ರಶಸ್ತಿ*

ಶ್ರೀ ರಜತ್ ಚೌಹಾಣ್ - ಬಿಲ್ವಿದ್ಯೆ
ಲಲಿತಾ ಬಾಬರ್ - ಥ್ಲೆಟಿಕ್ಸ್
ಸೌರವ್ ಕೊಠಾರಿ - ಬಿಲಿಯರ್ಡ್ ಮತ್ತು ಸ್ನೂಕರ್
ಶಿವ ಥಾಪಾ - ಬಾಕ್ಸಿಂಗ್
ಅಜಿಂಕ್ಯ ರೆಹಾನೆ-  ಕ್ರಿಕೆಟ್
ಸುಬ್ರತಾ ಪೌಲ್  -ಫುಟ್ಬಾಲ್
ರಾಣಿ - ಹಾಕಿ
ರಘುನಾಥ್ ವಿ. ಆರ್-  ಹಾಕಿ
ಗುರ್ಪ್ರೀತ್ ಸಿಂಗ್-  ಶೂಟಿಂಗ್
ಅಪೂರ್ಮಿ ಚಂಡೇಲಾ -ಶೂಟಿಂಗ್
ಸೌಮ್ಯಜಿತ್ ಘೋಷ್-  ಟೇಬಲ್ ಟೆನಿಸ್
ವಿನೇಶ್ ಫೋಗಟ್ - ಕುಸ್ತಿ
ಅಮಿತ್ ಕುಮಾರ್ - ಕುಸ್ತಿ
ಸಂದೀಪ್ ಸಿಂಗ್ ಮನ್ನ್ -  ಪ್ಯಾರಾ ಅಥ್ಲೆಟಿಕ್ಸ್
ವಿರೇಂದ್ರ ಸಿಂಗ್- ಕುಸ್ತಿ

*ಧ್ಯಾನ್ ಚಂದ್ ಪ್ರಶಸ್ತಿ*

ಸತ್ತಿ ಗೀತಾ - ಅಥ್ಲೆಟಿಕ್ಸ್
ಸೆಲ್ವಾನಸ್ ಡುಂಗ್ ಡುಂಗ್ -ಹಾಕಿ
ರಾಜೇಂದ್ರ ಪ್ರಹ್ಲಾದ್ ಶೆಲ್ಕೆ-ರೋಯಿಂಗ್

*ದ್ರೋಣಾಚಾರ್ಯ ಪ್ರಶಸ್ತಿ*

ನಾಗಪುರಿ ರಮೇಶ್ -ಅಥ್ಲೆಟಿಕ್ಸ್
ಸಾಗರ್ ಮಲ್ ದಯಾಳ್ - ಬಾಕ್ಸಿಂಗ್
ರಾಜ್ ಕುಮಾರ್ ಶರ್ಮಾ -ಕ್ರಿಕೆಟ್
ಬಿಶೇಶ್ವರ್ ನಂದಿ- ಜಿಮ್ನಾಸ್ಟಿಕ್ಸ್
ಎಸ್ ಪ್ರದೀಪ್ ಕುಮಾರ್ - ಈಜು (ಜೀವಮಾನ ಸಾಧನೆ)
ಮಹಾಬೀರ್ ಸಿಂಗ್ - ಕುಸ್ತಿ  (ಜೀವಮಾನ ಸಾಧನೆ)

ಖೇಲ್ ರತ್ನ ಪ್ರಶಸ್ತಿಯು ಪದಕ, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರು.7.5 ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಅದೇ ವೇಳೆ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಮತ್ತು ಧ್ಯಾನ್‍ಚಂದ್ ಪ್ರಶಸ್ತಿ ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ತಲಾ ರು. 5 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು.

ಆಗಸ್ಟ್ 29, 2016ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Monday, August 15, 2016

ಗಾಂಧೀಜಿಯವರ ಮೇಲೆ ನಾನು ಗುಂಡು ಹಾರಿಸಿದ ಕ್ಷಣದಲ್ಲಿಯೇ ನನ್ನ ಜೀವನವು ಸಹ ಅಂತ್ಯಗೊಂಡಿತು. ಆ ಕ್ಷಣದಿಂದ ನಾನು ತನ್ಮಯಾವಸ್ಥೆಯಲ್ಲಿರುವಂತೆಯೂ ಧ್ಯಾನಾವಸ್ಥೆಯಲ್ಲಿರುವಂತೆಯೂ ದಿನಗಳನಳನ್ನು ಕಳೆಯುತ್ತಿದ್ದೇನೆ.ಗಾಂಧೀಜಿಯವರು ದೇಶದ ಸಲುವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಎಂಬುವದನ್ನು ನಾನು ಒಪ್ಪಿಕೊಳ್ಳಲು ಸಿದ್ದನಿದ್ದೇನೆ. ಅವರ ದೇಶ ಸೇವೆಗೆ ಮತ್ತು ಅವರಿಗೆ ನಾನು ತಲೆ ಬಾಗಿಸುತ್ತೆನೆ. ಆದರೆ, ಈ ದೇಶ ಸೇವಕನು ಜನರನ್ನು ಮೋಸಗೊಳಿಸಿ ದೇಶವನ್ನು ವಿಭಜನೆ ಮಾಡಲು ಯಾವ ಹಕ್ಕನ್ನು ಹೊಂದಿರುವದಿಲ್ಲ.ನನಗೆ ಯಾವುದೆ ರೀತಿಯಲ್ಲಿ ದಯೆ ತೋರಿಸಬೇಕೆಂದು ನಾನು ಇಚ್ಛಿಸುವದಿಲ್ಲ. ಇದೂ ಅಲ್ಲದೇ, ಬೇರೆ ಯಾರಾದರು ನನ್ನ ಪರವಾಗಿ ನನಗೆ ದಯೆ ತೋರಿಸುವಂತೆ ಬೇಡಿಕೊಳ್ಳಬೇಕೆಂದು ನಾನು ಆಶಿಸುವದಿಲ್ಲ.ತನ್ನ ದೇಶಕ್ಕೆ ನಿಷ್ಠೆ ತೊರಿಸುವದು ಪಾಪವೆಂದು ಗಣಿಸಲ್ಪಟ್ಟರೆ, ನಾನು ಅಂಥ ಪಾಪ ಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಅದು ಪುಣ್ಯದ ಕೆಲಸವಾಗಿದ್ದರೆ ಅಂಥ ಶ್ರೇಯಸ್ಸನ್ನು ನಾನು ವಿನಮ್ರನಾಗಿ ಅರ್ಹತೆಯೊಡನೆ ಸ್ವೀಕರಿಸುತ್ತೆನೆ.ಎಲ್ಲ ಕಡೆಗಳಿಂದರೂ ನನ್ನ ಕೃತ್ಯವು ಖಂಡಿಸಲ್ಪಟ್ಟಿದರೂ ಸಹ, ನನ್ನ ಕೃತ್ಯದ ನೈತಿಕತೆಯ ವಿಷಯವಾಗಿ ನನ್ನ ವಿಶ್ವಾಸವು ಅಲುಗಾಡದೇ ನಿಶ್ಚಲವಾಗಿದೆ.ಭವಿಷ್ಯತ್ತಿನ ಒಂದು ದಿನ ಪ್ರಾಮಾಣಿಕರಾದ ಇತಿಹಾಸದ ಲೇಖಕರು ನನ್ನ ಕೃತ್ಯವನ್ನು ತೂಗಿ ನೋಡಿ ಅದರ ನಿಜವಾದ ಬೆಲೆಯನ್ನು ಕಂಡುಹಿಡಿಯುತ್ತಾರೆ ಎಂಬುವದರಲ್ಲಿ ನನಗೆ ಸಂಶಯವಿಲ್ಲ.

- ನಾಥೂರಾಮ ಗೋಡ್ಸೆ

Thursday, August 11, 2016

ಟೆಕ್ ಟಿಪ್ಸ್: ಎಕ್ಸೆಲ್ ಶಾರ್ಟ್ಕಟ್
excel

ಎಂಎಸ್ ಎಕ್ಸೆಲ್ ಬಳಸುವಾಗ ಶಾರ್ಟ್ಕಟ್ ಕೀಗಳ ಪರಿಚಯವಿದ್ದರೆ ಕೆಲಸಗಳು ಸರಾಗ.
* CTRL+1 ಫಾಮ್ರ್ಯಾಟ್ ಸೆಲ್ಗಳ ಡೈಲಾಗ್ ಬಾಕ್ಸ್ ಅನ್ನು ಪ್ರದರ್ಶಿಸುತ್ತದೆ.

* CTRL+2 ಬೋಲ್ಡ್ ಫಾಮ್ಯಾಟಿಂಗ್ ಅನ್ನು ಅಪ್ಲೈ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ.

* CTRL+3 ಇಟಾಲಿಕ್ ಫಾಮ್ಯಾಟಿಂಗ್ ಅನ್ನು ಅಪ್ಲೈ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ.

* CTRL+4 ಅಂಡರ್ ಲೈನ್ ಅನ್ನು ಅಪ್ಲೈ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ.

* CTRL+5 ಸ್ಟ್ರೈಕ್ತ್ರೋ(ಪದಗಳನ್ನು ಹೊಡೆದು ಹಾಕುವ ಗೆರೆ) ಅನ್ನು ಅಪ್ಲೈ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ.

* CTRL+6 ಆಬ್ಜೆಕ್ಟ್ ಅನ್ನು ಮರೆಮಾಚುವ, ಪ್ರದರ್ಶಿಶುವ, ಆಬ್ಜೆಕ್ಟ್ಗೆ ಪ್ಲೇಸ್ಹೋಲ್ಡರ್ಸ್ ಅನ್ನು ಪ್ರದರ್ಶಿಸುವ ಕೆಲಸಕ್ಕೆ ಬಳಕೆ ಮಾಡಬಹುದು.

* CTRL+8 ಔಟ್ಲೈನ್ ಸಿಂಬಲ್ ಅನ್ನು ಮರೆಮಾಚುವ ಅಥವಾ ಪ್ರದರ್ಶಿಸುವ ಕೆಲಸಕ್ಕೆ ಬಳಸಬಹುದು.

* CTRL+9 ಆಯ್ಕೆ ಮಾಡಿಕೊಂಡ ರೋ(್ಟಟಡಿs)ಗಳನ್ನು ಹೈಡ್ ಮಾಡುತ್ತದೆ.

* CTRL+0 ಆಯ್ಕೆ ಮಾಡಿಕೊಂಡ ಕಾಲಮ್ಗಳನ್ನು ಮರೆಮಾಚುತ್ತದೆ.

* ALT+F1 ಕರೆಂಟ್ ರೇಂಜ್ನಲ್ಲಿ ಡೇಟಾದ ಚಾರ್ಟ್ ರಚಿಸಬಹುದು.

* ALT+SHIFT+F1 ಹೊಸ ವರ್ಕ್ಶೀಟ್ ಅನ್ನು ಇನ್ಸರ್ಟ್ ಮಾಡಬಹುದು.

Sunday, August 07, 2016

ನನ್ನ ಮೊಬೈಲ್‌ ನಲ್ಲಿರುವ ನಂಬರ್‌ಗಳು ಅಳಿದು ಹೋಗಿರುತ್ತದೆ ಆ ಸಮಯದಲ್ಲಿ ನನಗೆ ೨ ಕರೆ ಬರುತ್ತದೆ
" ಒಂದು ನಾನು ಪ್ರೀತಿಸಿದ ಹುಡುಗಿಯಿಂದ "
" ಮತ್ತೂಂದು ನನ್ನ ಗೆಳೆಯ ನಿಂದ "
ನಂಬರ್‌ ಗೊತ್ತಾಗದೆ ಇಬ್ಬರಿಗು Who are you ಅಂತ ಸಂದೇಶ ಕಳುಹಿಸುತ್ತೇನೆ.

ಸ್ವಲ್ಪ ಸಮಯದ ನಂತರ

ಅವರಿಬ್ಬರಿಂದ ೨ ಸಂದೇಶ ಬರುತ್ತದೆ ಅದು ಏನೆಂದರೆ....

ಪ್ರೀತಿಸಿದವಳು : ನಾನು ಯಾರ ಹೋಗು ಇನ್ಮೇಲೆ ನಿನ್ನ ಹತ್ರ ನಾನು ಮಾತಾಡಲ್ಲ ಎಂದು....

ಗೆಳೆಯ : ಮಗಾ ಅದು Who are you ಅಲ್ಲ how are you ನಾನ್‌ ಚೆನ್ನಾಗಿದೀನಿ ಎಂದು....

ಗೆಳೆಯರಿಗೆ ಸಾಟಿ ಬೇರೆ ಯಾರು ಇಲ್ಲ.....
happy friendshif day in advence