Wikipedia

Search results

Wednesday, February 15, 2017

634 ವಿದ್ಯಾರ್ಥಿಗಳ ಪ್ರವೇಶಾತಿ ರದ್ದು 15-2-2017

 ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, 2008 ರಿಂದ 2013ರ ಅವಧಿಯಲ್ಲಿ ಅಕ್ರಮವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ 634 ವಿದ್ಯಾರ್ಥಿಗಳ ಪ್ರವೇಶಾತಿಯನ್ನು ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಮೂವರು ಸದಸ್ಯರ ಪೀಠ, 'ವಿದ್ಯಾರ್ಥಿಗಳು ಮೋಸ ಮಾಡಿದ್ದಾರೆ' ಎಂದು ಹೇಳಿ ಎಲ್ಲ ಅರ್ಜಿಗಳನ್ನು ತಳ್ಳಿಹಾಕಿತು. ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯಲ್ಲಿ (ವ್ಯಾಪಂ) ಭಾರಿ ಅಕ್ರಮ ನಡೆದಿತ್ತು.

Tuesday, February 14, 2017

ಲಕ್ಷ್ಮೇಶ್ವರ ಉತ್ಸವ


Wishes


'ಅಂಬಲಿ ಹಳಸಿತು ಕಂಬಳಿ ಬೀಸಿತು' ಮೈಲಾರದಲ್ಲಿ ಗೊರವಯ್ಯ ಕಾರ್ಣಿಕ...ಏನಿದರರ್ಥ?

ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರಲಿಂಗ
ಸ್ವಾಮಿಯ ಕಾರಣೀಕೋತ್ಸವ ಇಂದು ನಡೆಯಿತು.
ಮೈಲಾರದಲ್ಲಿನ ಡಂಕನ ಮರಡಿ ಪ್ರದೇಶದಲ್ಲಿ
ಗೊರವಪ್ಪ ದೈವದ ಬಿಲ್ಲನ್ನೇರಿ ಕಾರ್ಣಿಕ ನುಡಿದನು.
'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್'
ಎಂಬುದು ಈ ವರ್ಷದ ಕಾರ್ಣಿಕವಾಗಿದೆ.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ
ಜನ ಮೈಲಾರಲಿಂಗೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿದರು.
ತದನಂತರ ಮೈಲಾರ ದೇವಸ್ಥಾನದಿಂದ ಕುದುರೆಯ ಮೇಲೆ
ದೇವಸ್ಥಾನದ ಧರ್ಮಕರ್ತರನ್ನು ಮೆರವಣಿಗೆ ಮೂಲಕ
ಡಂಕನ ಮರಡಿ ಪ್ರದೇಶಕ್ಕೆ ಕರೆತರಲಾಯಿತು.

ಗುರುವಿನ ಸ್ಥಾನದಲ್ಲಿದ್ದ ಧರ್ಮಕರ್ತರು ಕಳೆದ 9
ದಿನಗಳಿಂದ ವೃತಾಚರಣೆ ಮೂಲಕ ಇದ್ದ
ಗೊರವಪ್ಪನಿಗೆ ಬೋಧನೆ ಮಾಡುತ್ತಾರೆ. ನಂತರ
ಗೊರವಪ್ಪ ದೈವದ 20 ಅಡಿಗೂ ಎತ್ತರದ
ಬಿಲ್ಲನ್ನೇರಿ ಈ ವರ್ಷದ ಕಾರಣಿಕ ನುಡಿಯನ್ನು ನುಡಿಯುತ್ತಾನೆ.

ಈ ಕಾರಣಿಕದ ನುಡಿಯನ್ನು ಕಳೆದ ಹಲವು ಶತಮಾನಗಳಿಂದ
ರಾಜ್ಯದ ಜನತೆ ಮುಂದಿನ ವರ್ಷದ ಕೃಷಿ,
ರಾಜಕೀಯ ಮೊದಲಾದವುಗಳ ಬಗ್ಗೆ ತಮಗೆ
ಅರಿತಂತೆ ವಿಶ್ಲೇಷಣೆ ಮಾಡುತ್ತಾರೆ.

ಕಳೆದ 2007ರಲ್ಲೂ ಇದೇ ರೀತಿ ನುಡಿಯಲಾಗಿತ್ತು. ಈ
ಕಾರಣಿಕ ನುಡಿಯನ್ನು ಉತ್ತಮ ಮಳೆಯಾಗಿ ಬೆಳೆ ಬರುತ್ತದೆ.

ಜೊತೆಗೆ ಅತಿವೃಷ್ಟಿಯಿಂದ
ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು, ಅಲ್ಲದೆ
ರಾಜಕೀಯವಾಗಿ ಬದಲಾವಣೆಗಳ ಪರ್ವ
ಆರಂಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Saturday, February 11, 2017

ಇಂದಿನಿಂದ ಲಕ್ಕುಂಡಿ ಉತ್ಸವ


4000 ಪ್ರಾ. ಶಿಕ್ಷಕರ ನೇಮಕ: ಮಾ 2 ಕೊನೆ ದಿನ

ರಾಜ್ಯದ ಪ್ರಾಥಮಿಕ
ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು
ಹಾತೊರೆಯುತ್ತವರಿಗೆ ಇಲ್ಲೊಂದು
ಸಂತಸದ ಸುದ್ದಿ. ರಾಜ್ಯ ಸರಕಾರವು
ಬರೋಬ್ಬರಿ 4,000 ಪ್ರಾಥಮಿಕ ಶಾಲಾ
ಶಿಕ್ಷಕರನ್ನು ನೇಮಿಸಿಕೊಳ್ಳಲು ಅಂಕಿತ
ಹಾಕಿದೆ. ಯಾದಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ
ಹೆಚ್ಚು 450 ಮತ್ತು ಧಾರವಾಡ ಜಿಲ್ಲೆಯಲ್ಲಿ
ಅತಿ ಕಡಿಮೆ ಅಂದರೆ 15 ಶಿಕ್ಷಕರ ನೇಮಕಾತಿ
ನಡೆಯಲಿದೆ.
ಹೀಗೆ ನೂತನವಾಗಿ ನೇಮಕಗೊಂಡ
ಶಿಕ್ಷಕರು 2013 -14ನೇ ಶೈಕ್ಷಣಿಕ ವರ್ಷದಿಂದ
ಸೇವೆಗೆ ಸಿದ್ಧರಾಗಬೇಕಾಗುತ್ತದೆ.
ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ
ಕೊರತೆಯಿರುವುದು 12,000 ಮಂದಿ. ಆದರೆ
4,000 ಮಂದಿಯನ್ನಷ್ಟೇ ನೇಮಕ
ಮಾಡಿಕೊಳ್ಳಲು ಶಕ್ತ್ಯವಾಗಿದೆ ಎಂದು
ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.


ಮುಖ್ಯಾಂಶಗಳು:

* ಜಿಲ್ಲಾ ಮಟ್ಟದಲ್ಲಿ ಸಂಯುಕ್ತ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ
ನೇಮಕಾತಿ.
* ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ
ನೇಮಕಾತಿ ನಡೆಯಲಿದೆ.
* ಅಂತರ್ಜಾಲದ ಮೂಲಕವೇ ಅರ್ಜಿ
ಸಲ್ಲಿಸಬೇಕು.
* ಗಮನಿಸಿ, ಖುದ್ದು ಅಥವಾ ಅಂಚೆ ಮೂಲಕ
ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ.
* ಇಲಾಖೆಯ ವೆಬ್ ಸೈಟ್
www.schooleducation.kar.nic.in
* ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ. 4ರಿಂದ ಆರಂಭ.
ಮಾ. 2 ಅರ್ಜಿ ಸಲ್ಲಿಕೆಗೆ ಕೊನೆ ದಿನ.
* ಮಾರ್ಚ್ 24ರಂದು ಆಯಾ ಜಿಲ್ಲಾ
ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಜಿಲ್ಲಾವಾರು ನೇಮಕಗೊಳ್ಳುವ ಶಿಕ್ಷಕರ
ಸಂಖ್ಯೆ:
ರಾಮನಗರ - 160
ಮಧುಗಿರಿ - 90
ಬೆಳಗಾವಿ - 110
ಬಾಗಲಕೋಟೆ - 120
ಬಿಜಾಪುರ - 130
ಗುಲ್ಬರ್ಗಾ - 230
ಬೀದರ್ - 200
ರಾಯಚೂರು - 300
ಕೊಪ್ಪಳ - 225
ಧಾರವಾಡ - 15
ಕಾರವಾರ - 30
ಶಿರಸಿ - 210
ಬಳ್ಳಾರಿ - 270
ಶಿವಮೊಗ್ಗ - 150
ಕೊಡಗು - 20
ಚಿಕ್ಕೋಡಿ - 400
ಯಾದಗಿರಿ - 450
ಗದಗ, ದಾವಣಗೆರೆ ತಲಾ - 40
ಹಾಸನ, ಚಿಕ್ಕಮಗಳೂರು, ಮೈಸೂರು ತಲಾ -
70
ತುಮಕೂರು, ಕೋಲಾರ, ಮಂಡ್ಯ,
ಹಾವೇರಿ, ಚಿತ್ರದುರ್ಗ ತಲಾ - 60
ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ,
ಚಾಮರಾಜನಗರ ತಲಾ - 100

Monday, February 06, 2017

PDO key answer

" ನಾ ಗೆದ್ದೇ ಗೆಲ್ಲುವೆ ಒಂದು ದಿನ " ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..!

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ
ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು
ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು
ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು
ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ
ಅನ್ಕೊಂಡ್ರೆ ನೀವು ಶಾಶ್ವತವಾಗಿ
ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ
ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್
ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ
ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಕೈ
ಹತ್ತುತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ
ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ.
ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..! ಆದ್ರೆ ಗೆಲ್ಲೋ
ತನಕ ಸೋತಿದ್ದರ ಬಗ್ಗೆ ಚಿಂತೆ ಮಾಡಲ್ಲ ಅಂತ ಡಿಸೈಡ್
ಮಾಡಿರ್ತಾರೆ..! ಹಾಗಾಗಿ ಅವರು ಅಂತ ಸೋಲನ್ನು ಮೀರಿ
ಗೆದ್ದಿರ್ತಾರೆ..! ಯಾವಾಗ ಸೋತು ಸೋತು ಗೆಲ್ಲಬೇಕು ಅನ್ನೋ ಹಠ
ಶುರುವಾಗುತ್ತೋ ಅವಾಗ್ಲೆ ಗೆಲ್ಲೋಕೆ ಸಾಧ್ಯ..! ಯಾವಾಗ ಗೆಲ್ಲೋ ಹಠ
ಜಾಸ್ತಿಯಾಗಿ ಗೆದ್ದುಬಿಡ್ತೀರೋ, ಆಮೇಲೆ ಗೆಲ್ಲೋದು ನಿಮಗೆ
ಚಟ ಆಗೋಗುತ್ತೆ..! ಅದೊಂದೇ ಚಟ,
ಜೀವನದ ಅತ್ಯಂತ ಒಳ್ಳೇ ಚಟ…
ಜೀವನದಲ್ಲಿ ನಿಮ್ಮನ್ನು ಎತ್ತರೆತ್ತರಕ್ಕೆ
ಕರ್ಕೊಂಡೋಗಿ ಬಿಡೋ ಚಟ..! ಆ ಚಟ ನಿಮಗೆ
ಅಭ್ಯಾಸ ಆಗೋ ತನಕ ತಿರುಗಿ ನೋಡದೇ ನುಗ್ತಾ ಇದ್ರೆ, ಯಾವ ಸೋಲೂ
ನಿಮ್ಮನ್ನು ಏನೂ ಮಾಡಕ್ಕಾಗಲ್ಲ..!
ಜೀವನ ಹೆಂಗಿರುತ್ತೆ ಗೊತ್ತಾ..?
ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ
ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ,
ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..!
ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ
ಸಮಸ್ಯೆಗಳನ್ನ ತಲೆ ಮೇಲೆ
ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ
ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ
ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ,
ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು
ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್
ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ
ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ
ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ,
ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ
ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು
ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ,
ಸೋಲು ಅನ್ನೋದು ಶತೃವಿನ ಹಾಗೆ ಕಾಟ ಕೊಡುತ್ತೆ, ಸೋಲು
ನಿಮ್ಮ ಸತ್ವ ಪರೀಕ್ಷೆ ಮಾಡುತ್ತೆ.. ಆದ್ರೆ
ಅದನ್ನೆಲ್ಲಾ ಎದುರಿಸಿ, ಹೆದರಿಸಿ ನುಗ್ಗಿ ಗೆದ್ದು ಬಿಟ್ರೆ ಸೋಲು
ನಿಮಗೇ ಶರಣಾಗಿ ಬಿಡುತ್ತೆ..! ಸೋಲು ನಿಮ್ಮನ್ನು ಸೋಲಿಸುವ ಮುನ್ನ,
ನೀವೇ ಸೋಲನ್ನು ಸೋಲಿಸಿಬಿಡಿ..!
ಜ್ಯಾಕ್ ಮಾ ಅಂತ ಒಂದು ಹೆಸರು ಕೇಳಿರಬೇಕು
ನೀವು. ಅವರು ಚೀನಾದ ಅತ್ಯಂತ
ಶ್ರೀಮಂತ..! ಆಲಿಬಾಬಾ ಡಾಟ್ ಕಾಮ್ ಸಂಸ್ಥೆಯ
ಚೇರ್ಮನ್..! ಇವತ್ತು ಅವರ ಆಸ್ತಿ ಅದೆಷ್ಟೋ ಸಾವಿರ ಸಾವಿರ
ಕೋಟಿ..! ಅವರು ಆ ಸಾವಿರ ಸಾವಿರ ಕೊಟಿ ಇವತ್ತು
ಅನುಭವಿಸ್ತಿರಬಹುದು. ಆದ್ರೆ ಅದರ ಹಿಂದೆ ಸೋತಿದ್ದು ಎಷ್ಟು
ಸಲ ಗೊತ್ತಾ.. ಲೆಕ್ಕವೇ ಇಲ್ಲದಷ್ಟು ಸಲ..! ನಿನ್ ಕೈಲಿ
ಏನಾಗುತ್ತೆ ಹೋಗಲೆ ಅಂತ ಅವರನ್ನು ಕಾಲೆಳೆದವರು ಇವತ್ತು
ಅವರದೇ ಆಫೀಸಲ್ಲಿ ಕೆಲಸ ಮಾಡ್ತಿದ್ದಾರೆ..
ಬರೀ 12 ಡಾಲರ್ ಸಂಬಳಕ್ಕೆ ಟೀಚರ್
ಕೆಲಸ ಮಾಡ್ತಿದ್ದವರು ಇವತ್ತು 15-20 ಸಾವಿರ ಜನರಿಗೆ ಕೆಲಸ
ಕೊಟ್ಟಿದ್ದಾರೆ.. ಪ್ರತಿಷ್ಟಿತ ಕೆ.ಎಫ್.ಸಿ ಸಂಸ್ಥೆ,
ಅವರನ್ನು ಸರ್ವರ್ ಆಗಿಯೂ ಕೆಲಸಕ್ಕೆ
ಸೇರಿಸಿಕೊಂಡಿರಲಿಲ್ಲ..! ಆದ್ರೆ ಇವತ್ತು ಆ ಸೋಲಿಗೆ
ಹೆದರದೇ ಇದ್ದ ಕಾರಣಕ್ಕೆ ಎತ್ತರೆತ್ತಕ್ಕೆ ಏರಿದ್ದಾರೆ.. ಅವತ್ತು
ಜ್ಯಾಕ್ ಮಾ ಜೊತೆ ಕೆ.ಎಫ್.ಸಿ ಗೆ 24 ಜನ ಕೆಲಸಕ್ಕೆ
ಟ್ರೈ ಮಾಡಿದ್ರು. ನೀವು ನಂಬ್ತಿರೋ ಬಿಡ್ತಿರೋ, ಆ 23
ಜನಾನೂ ಸೆಲೆಕ್ಟ್ ಆಗಿದ್ರು. ಆದ್ರೆ ಜಾಕ್ ಮಾ ಆಗಿರಲಿಲ್ಲ..!
ಅಯ್ಯೋ ನಾನು ಸೋತುಬಿಟ್ಟೆ ಅಂತ ಅವರೇನಾದ್ರೂ
ಅನ್ಕೊಂಡಿದ್ದಿದ್ರೆ ಇವತ್ತು ಅಲಿಬಾಬಾ ಡಾಟ್ ಕಾಮ್
ಎಲ್ಲಿರ್ತಿತ್ತು..? ಗೆದ್ದಾಗ ಹೆಂಗೆ ಗೆಲ್ಲಬೇಕು ಅನ್ನೋದು
ಗೊತ್ತಾದ್ರೆ, ಸೋತಾಗ ಇನ್ನು ಮುಂದೆ ಹೇಗೆ ಸೋಲಬಾರದು
ಅನ್ನೋದು ಗೊತ್ತಗುತ್ತೆ..! ಸೋ ಸೋಲು ಅಂದ್ರೆ ಗೆಲ್ಲೋ
ರೋಡಿನ ಹಂಪ್ ಗುಂಡಿ ಅಷ್ಟೆ..! ಅಯ್ಯೋ ಹೆಂಗಪ್ಪಾ
ಈ ಗುಂಡಿ ದಾಟೋದು, ಹೆಂಗಪ್ಪಾ ಹಂಪ್ ಎಗರಿಸೋದು
ಅಂತ ಯೋಚನೆ ಮಾಡ್ತಾ ಕೂತ್ರೆ ನಾವು ಯಾವತ್ತೂ ಗುರಿ ಮುಟ್ಟೋಕೆ
ಸಾಧ್ಯಾನೇ ಆಗಲ್ಲ..!
ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ
ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು
ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ
1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ
ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ
ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ
ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ
ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು
ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು
ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ
ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು
ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ
ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ
ಮುಂದೊಂದು ದಿನ
ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..!
ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ
ಅಂದಮಾತ್ರಕ್ಕೆ ಅದು ಸೋಲಲ್ಲ..! ಹಂಗೇನಾದ್ರೂ ರೆಡ್ ಬಸ್
ಡಾಟ್ ಇನ್ ಶುರು ಮಾಡಿದವರು ಆರಂಭದಲ್ಲಿ ಸೋತಾಗ ಹೆದರಿದ್ರೆ
ಇವತ್ತು ಆ ಕಂಪನಿ ಎಲ್ಲಿರ್ತಿತ್ತು..? ಇವತ್ತು ನಾವು ಎಲ್ಲಿಗೇ
ಹೋಗ್ಬೇಕು ಅಂದ್ರೆ ಬಸ್ ಟಿಕೆಟ್ ಬುಕ್ ಮಾಡೋಕೆ ರೆಡ್ ಬಸ್ ಡಾಟ್
ಕಾಮ್ ನೋಡ್ತೀವಿ. ಆದ್ರೆ ಅವತ್ತು ಇದೇ ರೆಡ್ ಬಸ್
ಕಂಪನಿ ಕಟ್ಟೋಕೆ ಅವರು ಅದೆಷ್ಟು ಒದ್ದಾಡಿದ್ರು
ಗೊತ್ತಾ..? ಊಟ ತಿಂಡಿ ಬಿಟ್ಟು, ಇರೋ ದುಡ್ಡಲ್ಲಿ
ಒದ್ದಾಡ್ಕೊಂಡು ಕಟ್ಟಿದ ಕಂಪನಿ ಇವತ್ತು
ಮಿಲಿಯನ್ ಡಾಲರ್ ಕಂಪನಿ..! ಹಬ್ಬಕ್ಕೆ ಊರಿಗೆ ಹೋಗೋಕೆ
ಬಸ್ ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ರಜದಲ್ಲಿ ಕೂತು ಅವರು
ಡೆವಲಪ್ ಮಾಡಿದ ರೆಡ್ ಬಸ್ ಡಾಟ್ ಇನ್ ಆರಂಭದಲ್ಲಿ ಸೋತು
ಸೋತು ಸತ್ತೇ ಹೋಗಬೇಕಿತ್ತು. ಆದ್ರೆ ಅದನ್ನು ಹುಟ್ಟುಹಾಕಿದ
ಫಣೀಂದ್ರ ರೆಡ್ಡಿ ಸಮಾ, ಸುದಾಕರ್ ಪಸುಪುನುರಿ,
ಚರಣ್ ಪದ್ಮರಾಜು ಆ ಸೋಲಿನ ಹೊಡೆತಕ್ಕೆ
ಹೆದರಿಹೋಗ್ಲಿಲ್ಲ.. ಹೆಂಗಾದ್ರೂ ಗೆದ್ದೇ ಗೆಲ್ತೀನಿ
ಅಂತ ಹಠಕ್ಕೆ ಬಿದ್ದರು ಅಷ್ಟೆ..! ಆರಂಭದಲ್ಲಿ ಇವರ
ವೆಬ್ ಸೈಟ್ ಮೂಲಕ ನಿಮ್ಮ ಬಸ್ ಟಿಕೆಟ್ ಬುಕ್ ಮಾಡ್ಬೋದು
ಅಂತ ಹೇಳಿದ್ರೆ ಬಸ್ ಏಜೆಂಟರು, ಬುಕಿಂಗ್
ಆಫೀಸಿನವರು ಬೈದು ಕಳಿಸೋರಂತೆ. `ತಲೆ ತಿನಬೇಡ್ರಿ,
ಹೋಗ್ರಪ್ಪ’ ಅಂತ..! ಆದ್ರೂ ಅವರು ನಾವು ಸೋಲ್ತೀವಿ
ಅನ್ನೋ ಭಯಕ್ಕೆ ಬೀಳದೇ, ನಾವು ಗೆಲ್ಲಬೆಕು ಅನ್ನೋ
ಚಟಕ್ಕೆ ಬಿದ್ರು..! ಆರಂಭದಲ್ಲಿ ಸೀಟು
ಕೊಡದೇ ಇದ್ದವರು, ಇವರ ಕಾಟಕ್ಕೆ ಆಮೇಲಾಮೇಲೆ
ಬಸ್ಸಿನ ಹಿಂದಿನ ಸೀಟುಗಳನ್ನು ಬುಕಿಂಗ್ ಗೆ
ಕೊಟ್ರು.. ಆಮೇಲೆ ಅದರಲ್ಲಿನ ಬುಕಿಂಗ್ ನೋಡಿ
ಮತ್ತಷ್ಟು ಸೀಟ್ ಕೊಟ್ರು.. ಇವತ್ತು ರೆಡ್
ಬಸ್ ಬೇಕು ಅಂದ್ರೆ ಸಪರೇಟ್ ಬಸ್ ಬಿಡೋಕೂ ಬಸ್
ಮಾಲೀಕರು ರೆಡಿ ಇರ್ತಾರೆ..! ಅವತ್ತು ಸೋತುಸೋತು
ಸತ್ತುಹೋಗಬೇಕಾದವರು ಇವತ್ತು ಗೆದ್ದು ಬೀಗ್ತಾ ಇದ್ದಾರೆ..
ಅವತ್ತು ಒಂದು ಟಿಕೆಟ್ ಬುಕ್ ಆದ್ರೆ ಸಂಭ್ರಮಿಸ್ತಾ
ಇದ್ದವರು, ಇವತ್ತು ದೇಶದ ಮೂಲೆಮೂಲೆಯಲ್ಲಿ ಲಕ್ಷಗಟ್ಟಲೇ
ಟಿಕೆಟ್ ಬುಕ್ ಮಾಡಿ ಸಂಭ್ರಮಿಸ್ತಿದ್ದಾರೆ..! ಅವತ್ತು ಕೇವಲ
ಬೆರಳೆಣಿಕೆಯ ಟಿಕೆಟ್ ಬುಕ್ ಆದಾಗ `ಇದ್ಯಾಕೋ ಗೆಲ್ಲೋದು ಡೌಟು ‘
ಅನ್ನೋ ಸಣ್ಣ ಹುಳ ಏನಾದ್ರೂ ಅವರ ತಲೆ ಹೊಕ್ಕಿದ್ರೆ,
ಇವತ್ತು ಅವರ ಕಂಪನಿಯನ್ನು 800 ಕೋಟಿ ರೂಪಾಯಿ
ಕೊಟ್ಟು ಗೋ ಇಬಿಬೋ ತಗೋತಾ ಇರ್ಲಿಲ್ಲ..! ದಟ್ ಈಸ್
ಕಾಲ್ಡ್ ಎಫರ್ಟ್, ಅಂಡ್ ದಟ್ ಈಸ್ ಕಾಲ್ಡ್ ವಿನಿಂಗ್…!
ಏನೇ ಶುರು ಮಾಡೋಕೆ ಮುಂಚೆ ಎಲ್ಲದಕ್ಕೂ ರೆಡಿ ಆಗಿರಿ.
ಮೆಂಟಲಿ ಪ್ರಿಪೇರ್ ಆಗಿರಿ.. ಇದ ಹೆಂಗಿರಬೇಕು ಅನ್ನೋದು
ಗೊತ್ತಿರಲಿ, ಹಂಗಾಗ್ಲಿಲ್ಲ ಅಂದ್ರೆ ಹೆಂಗೆ
ಅನ್ನೋದರ ಬಗ್ಗೆನೂ ಗೊತ್ತಿರಲಿ..! ಯಾವಾಗ
ಆಲ್ಟರ್ನೇಟಿವ್ ಐಡಿಯಾ ಇರಲ್ವೋ, ಅವಾಗ್ಲೇ ಸೋಲು
ಸುತ್ತಾಕ್ಕೊಂಡು ನಿಮ್ಮ ಹತ್ತಿರ ಬರೋದು..!
ಯಾವುದೇ ಇನ್ವೆಸ್ಟ್ ಮೆಂಟ್ ಮಾಡುವಗ ಅದರ ಲಾಭ
ನಷ್ಟದ ಬಗ್ಗೆ ಐಡಿಯಾ ಇರಲಿ. ಇದರಲ್ಲಿ ಲಾಸ್ ಆದ್ರೆ
ಮತ್ತೆಷ್ಟು ಕಳ್ಕೋತೀನಿ ಅಂತ ಯೋಚನೆ ಮಾಡಬೇಡಿ..
ಅಪ್ಪಿತಪ್ಪಿ ಲಾಸ್ ಆದ್ರೆ ಮತ್ತೆ ಇದರಲ್ಲೇ ಹೇಗೆ ರಿಕವರ್
ಮಾಡ್ಕೊಳ್ಳಿ ಅಂತ ಯೋಚನೆ ಮಾಡಿ..! ಅಟ್ ದ
ಸೇಮ್ ಟೈಂ, ಶುರುಮಡೋಕೂ ಮುಂಚೆ ನೆಗೆಟಿವ್ ಮೈಂಡ್ ಸೆಟ್
ಇಟ್ಕೊಂಡು ಏನೂ ಆರಂಭಿಸಬೇಡಿ.
ಅಂತವರು ಗೆಲ್ಲೋದು ಕಷ್ಟ ಕಷ್ಟ ಕಷ್ಟ..!
ಗೆಲ್ತೀನಿ ಅಂದವರು ಮಾತ್ರ ಗೆಲ್ತಾರೆ, ನಾನು
ಸೋಲ್ತೀನಿ ಅಂತ ಅನ್ಕೊಂಡು ಟ್ರೈ
ಮಾಡೋರು ಎಷ್ಟೇ ಆದ್ರೂ ಗೆಲ್ಲಲ್ಲ..! ಆ ಮನಸ್ಥಿತಿ
ಶಾಶ್ವತವಾಗಿದ್ರೆ, ನೀವು ಶಾಶ್ವತವಾಗಿ ಗೆಲ್ಲಲ್ಲ..!
ಆಗಿದ್ದಾಗ್ಲಿ ಅಂತ ನುಗ್ಗಿ, ಆಗೋದೆಲ್ಲಾ ಒಳ್ಳೇದೇ ಆಗುತ್ತೆ..!
ಆಗದೇ ಇದ್ರೆ ಹೆಂಗೆ ಅಂತ ನುಗ್ಗೋಕೆ ಹಿಂದೆಮುಂದೆ
ನೋಡಿದ್ರೆ, ಇನ್ಯಾರೋ ನುಗ್ಗಿ ಗೆದ್ದು ಬಿಡ್ತಾರೆ.. ಅವತ್ತು
ಪಶ್ಚಾತ್ತಾಪ ಪಟ್ಟರೆ ನೋ ಯೂಸ್..! ನೀವು ಪಾಸಿಟಿವ್
ಆಗಿದ್ರೆ ಎಲ್ಲಾ ಪಾಸಿಟಿವ್ ಆಗಿರುತ್ತೆ..! ನೀವು ನೆಗೆಟಿವ್
ಆಗಿದ್ರೆ ನಿಮ್ಮ ರಿಸಲ್ಟ್ ನೆಗೆಟಿವ್ವೇ ಆಗಿರುತ್ತೆ.. ಬಿ
ಆಪ್ಟಿಮಿಸ್ಟ್.. ನಾಟ್ ಪೆಸಿಮಿಸ್ಟ್..! ಇತಿಹಾಸದಲ್ಲಿ
ಪೆಸಿಮಿಸ್ಟ್ ಗಳು ಗೆದ್ದ ಉದಾಹರಣೇನೇ ಇಲ್ಲ..!
ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು
ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ
ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ
ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ
ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು
ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ
ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು
ಉಳಿಸ್ಕೊಳೋ ಐಡಿಯಾ ಇರುತ್ತೆ. ಯಾಕಂದ್ರೆ ಅವನು
ಈ ಹಿಂದೆ ಸೋತಿದ್ದು ಯಾವ್ಯಾವ ಕಾರಣಕ್ಕೆ ಅಂತ
ಅವನಿಗೆ ಗೊತ್ತಿರುತ್ತೆ..! ಸೋ ಸೋತಾಗ
ಸೊರಗಬೇಡಿ.. ಜೊತೆಲಿದ್ದವರು ದೂರ
ಆಗ್ತಾರೆ. ಆಗ್ಲಿ ಬಿಡಿ..! ಕ್ಲೋಸ್ ಫ್ರೆಂಡ್
ಅನಿಸಿಕೊಂಡೋನು ಫ್ರೆಂಡ್ ಶಿಪ್ ಕ್ಲೋಸ್
ಮಾಡ್ತಾನೆ.. ಮಾಡ್ಲಿಬಿಡಿ..! ನಿಮ್ಮ ಮನೆಯಲ್ಲೇ ನಿಮಗೆ
ಅವಮಾನಗಳಾಗ್ಬೋದು, ಆಗ್ಲಿಬಿಡಿ..! ಸಾಲ ಕೊಟ್ಟವರು
ಮನೆಗೆ ಬಂದು ಕೂರಬಹುದು, ಕೂರ್ಲಿಬಿಡಿ..! ಅಂತಹ
ಟೈಮಲ್ಲಿ ನಿಮ್ಮ ಹುಮ್ಮಸ್ಸು ಕಳ್ಕೋಬೇಡಿ, ಇನ್ನಾಗಲ್ಲ
ಅಂತ ಕೈಚೆಲ್ಲಬೇಡಿ..! ನನ್ನ ಲೈಫ್ ಮುಗೀತು
ಅಂತ ಕೊರಗಬೇಡಿ..!
ಕಳ್ಕೊಂಡವರನ್ನು ನೆನಸ್ಕೊಂಡು
ದುಃಖ ಪಡಬೇಡಿ..! ಹೆಂಗಿದ್ರೂ ಸೋತಿದೀನಿ, ಮತ್ತೆ ಟ್ರೈ
ಮಾಡ್ತೀನಿ.. ಗೆದ್ರೆ ಕೇಕೆ ಹಾಕ್ತೀನಿ.. ಸೋತ್ರೆ
ಮತ್ತೆ ಇವತ್ತಿನ ದಿನ ಅಷ್ಟೆ ತಾನೇ ಅಂತ ನುಗ್ಗಿ.. ಎಸ್..
ನುಗ್ಗಿ..! ನೀವು ಮತ್ತೆ ತಿರುಗಿ ನೋಡಲ್ಲ..! ಬಿಟ್ಟು
ಹೋದವರಿಗೆ ಮತ್ತೆ ನಿಮ್ಮ ಹತ್ತಿರ ಬರೋ ಮುಖ ಇರಲ್ಲ..!
ಅವತ್ತು ನೀವೇ ಅವರನ್ನು ಕರೆದು ಮಾತಾಡಿಸಿ..! ದೂರ
ಆದವರನ್ನು ಹತ್ತಿರ ಕರೆಸಿ..! ಅದು ನಿಮ್ಮ ನಿಜವಾದ ಗೆಲುವು…!
ಸೋಲು ಯಾವತ್ತೂ ಅನಾಥ, ಆದ್ರೆ ಗೆಲುವಿಗೆ ನೂರಾರು ಜನ
ಅಪ್ಪಂದಿರು..! ಡೋಂಟ್ ವರಿ… ಗೆಟ್ ರೆಡಿ ಟು
ರೀಚ್ ದ ಗೋಲ್..! ನೀವು ಸೋತಾಗ `ಅವನ್ಯಾರೋ
ನಂಗೆ ಗೊತ್ತಿಲ್ಲ, ನಮ್ಮ ದೂರದ ರಿಲೇಶನ್,
ನಂಗೂ ಅವನಿಗೂ ಅಷ್ಟಕ್ಕಷ್ಟೆ’ ಅಂದವರು, ಗೆದ್ದಾಗ `
ಅವನು ನನ್ನ ಕ್ಲೋಸ್ ಫ್ರೆಂಡ್, ನಮ್ಮ ಹತ್ತಿರದ ರಿಲೇಟಿವ್,
ನಾನೂ ಅವನು ಸಖತ್ ಕ್ಲೋಸ್’ ಅಂತ ಹೇಳ್ತಾರೆ..! ನಿಮ್ಮ
ಗೆಲುವಿನ ಜೊತೆಗೆ ಅದನ್ನೂ ಎಂಜಾಯ್ ಮಾಡಿ..!
ಆದ್ರೆ ಗೆಲುವು ಯಾವಾಗಲೂ ತುದಿಯಲ್ಲಿರುತ್ತೆ ಅನ್ನೋದು
ನೆನಪಿರಲಿ..! ಅಲ್ಲಿಗೆ ತಲುಪೋದು ಎಷ್ಟು ಕಷ್ಟವೋ,
ಅಲ್ಲಿಂದ ಕೆಳಗೆ ಬೀಳೋದು ಅಷ್ಟೇ ಸುಲಭ..!
ಅಲ್ಲಿದ್ದಾಗ ತಳ್ಳೋಕೆ ತುಂಬ ಜನ ಪ್ರಯತ್ನ ಪಡಬಹುದು,
ಆದ್ರೆ ನಿಮ್ಮ ಗೆಲುವಿನ ಗೂಟ ಬಲವಾಗಿರಲಿ..ಅದನ್ನು
ಅಲುಗಾಡಿಸೋದು ತುಂಬಾ ಕಷ್ಟ ಇದೆ ಅನ್ನೋದು ಉಳಿದವರಿಗೆ
ಅರ್ಥ ಮಾಡಿಸಿ..! ಒಂದು ದಿನ ಅಂತಹ ಪ್ರಯತ್ನಗಳು
ನಿಂತು ಹೋಗುತ್ತೆ. ಅವತ್ತು ನೀವು ಆ ಗೆಲುವಿನ
ಹೀರೋ…! ಜಗತ್ತಿನ ಪಾಲಿಗೆ ಹೀರೋ..! ಸೋಲು
ಯಾವತ್ತೂ ಸೋಲೋ, ಅಂದ್ರೆ ಸಿಂಗಲ್,.. ಡೋಂಟ್ ವರಿ,
ಸಿಂಗ ಸಿಂಗಲ್ಲಾದವರು..! ಸಿಂಗಲ್ಲಾಗಿ ಸಿಂಹದ
ಹಾಗೆ ನುಗ್ಗಿ.. ಗೆಲುವು ಬೇಡ ಅಂದ್ರೂ ನಿಮ್ಮ ಹೆಗಲೇರಿಬಿಡುತ್ತೆ
..!

Saturday, February 04, 2017

ಫೆ.8ರ ಬಳಿಕ ಜಿಮೇಲ್ ಬಳಕೆ ಅಸಾಧ್ಯ!ಯಾಕೆ ಗೊತ್ತಾ?

ನೀವು ವಿಂಡೋಸ್ XP ಅಥವಾ ವಿಂಡೋಸ್ ವಿಸ್ಟಾ
ಬಳಕೆದಾರರಾಗಿದ್ರೆ ನಿಮಗೆ ಶಾಕಿಂಗ್ ಸುದ್ದಿಯಿದೆ.
ಫೆಬ್ರವರಿ 8ರ ನಂತರ ನಿಮ್ಮ ಸಿಸ್ಟಮ್ ನಲ್ಲಿ
ಜಿಮೇಲ್ ಕಾರ್ಯನಿರ್ವಹಿಸೋದಿಲ್ಲ. ಕ್ರೋಮ್ ಬ್ರೌಸರ್ ನ 53ನೇ
ಹಾಗೂ ಅದಕ್ಕಿಂತ ಕೆಳಗಿನ ವರ್ಷನ್ ಗಳಲ್ಲಿ ಜಿಮೇಲ್
ಕಾರ್ಯನಿರ್ವಹಿಸುವುದಿಲ್ಲ ಅಂತಾ ಗೂಗಲ್ ಹೇಳಿದೆ.
ಯಾರ್ಯಾರು ತಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್
ನಲ್ಲಿ ವಿಂಡೋಸ್ XP ಅಥವಾ ವಿಂಡೋಸ್ ವಿಸ್ಟಾದಲ್ಲಿ
ಕ್ರೋಮ್ ಬೌಸರ್ ಬಳಸುತ್ತಿದ್ರೆ ಅವರು ಫೆಬ್ರವರಿ 8ರ
ನಂತರ ಜಿಮೇಲ್ ಬಳಕೆ ಮಾಡಲು ಸಾಧ್ಯವಿಲ್ಲ.
ಮೈಕ್ರೋಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್ ನಲ್ಲಿ
ವಿಂಡೋಸ್ XP ಮತ್ತು ವಿಂಡೋಸ್ ವಿಸ್ಟಾಗೆ ಸಪೋರ್ಟ್
ಬಂದ್ ಮಾಡಿರುವುದೇ ಇದಕ್ಕೆ ಕಾರಣ.
2015 ರ ಎಪ್ರಿಲ್ ಮತ್ತು ನವೆಂಬರ್ ನಲ್ಲಿ
ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ ನಿಂದ
ಮೆಂಟೇನ್ ಮಾಡಲಾಗುತ್ತಿಲ್ಲ ಹಾಗಾಗಿ ವಿಂಡೋಸ್ XP
ಮತ್ತು ವಿಂಡೋಸ್ ವಿಸ್ಟಾ ಬಳಕೆ ಮಾಡುತ್ತಿರುವವರೆಲ್ಲ
ಅಪ್ ಗ್ರೇಡೆಡ್ ವರ್ಷನ್ ಬಳಕೆ ಮಾಡುವಂತೆ ಸೂಚಿಸಲಾಗಿತ್ತು.

10 ಲಕ್ಷ ಕನ್ನಡಿಗರಿಗೆ ತಪ್ಪಿತು ಐಟಿ-ಬಿಟಿ ಉದ್ಯೋಗ!

ಒಂದೆಡೆ ಐಟಿ, ಬಿಟಿ ಸೇರಿದಂತೆ
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ
ನೀಡುತ್ತೇವೆ ಎಂದು ಹೇಳಿಕೊಂಡು
ಬರುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ,
ಇನ್ನೊಂದು ಕಡೆಯಲ್ಲಿ ತಾನೇ ಮಾಡಿದ
ತಪ್ಪಿನಿಂದಾಗಿ ಎಂಟರಿಂದ ಹತ್ತು ಲಕ್ಷ
ಮಂದಿ ಕನ್ನಡಿಗರಿಗೆ ಉದ್ಯೋಗ ತಪ್ಪಿಸಿರುವುದೂ ಬೆಳಕಿಗೆ
ಬಂದಿದೆ.
ಇತ್ತೀಚೆಗಷ್ಟೇ ಡಾ. ಸರೋಜಿನಿ ಮಹಿಷಿ
ವರದಿಯಂತೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ
ಉದ್ಯೋಗ ನೀಡಲೇಬೇಕೆಂಬ ಶಿಫಾರಸ್ಸು ಜಾರಿಗೆ
ಯತ್ನಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ,
2014ರಲ್ಲಿಯೇ ಸದ್ದು ಗದ್ದಲವಿಲ್ಲದೆ ರಾಜ್ಯದಲ್ಲಿ
ಐಟಿ ಬಿಟಿ, ಬಿಪಿಒ, ಸ್ಟಾರ್ಟಪ್ ಕಂಪನಿಗಳಿಗೆ
ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕೆನ್ನುವ
ಕಾಯ್ದೆಯಿಂದ ಸಂಪೂರ್ಣ ವಿನಾಯಿತಿ
ನೀಡಿದೆ.
ಏನಿದು ಅವಾಂತರ?: ರಾಜ್ಯದಲ್ಲಿ ಸ್ಥಾಪನೆಯಾಗುವ
ಐಟಿ,ಬಿಟಿ ಸೇರಿದಂತೆ ಸ್ಟಾರ್ಟ್ಅಪ್, ಆಯನಿಮೇಶನ್,
ಗೇಮಿಂಗ್, ಕಂಪ್ಯೂಟರ್ ಗ್ರಾμಕ್ಸ್, ಟೆಲಿಕಾಂ,
ಬಿಪಿಒ, ಕೆಪಿಒ ಸೇರಿದಂತೆ ಜ್ಞಾನಾಧಾರಿತ ಉದ್ಯಮಗಳಿಗೆ
ಕೇಂದ್ರ ಸರ್ಕಾರದ ಕಾರ್ಮಿಕ ಕಾಯ್ದೆ 1946 ರ
(ಸ್ಟಾಂಡಿಂಗ್ ಆರ್ಡರ್ಸ್) ನಿಯಮಗಳಿಂದ
ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ
ಹೊರಡಿಸಿದೆ.
ಅತ್ಯಾಚಾರವಾದರೂ ಕೇಳುವ ಹಾಗಿಲ್ಲ : ಐಟಿ ಬಿಟಿ ಸ್ಟಾರ್ಟ
ಅಪ್, ಬಿಪಿಒ ಸೇರಿದಂತೆ ಜ್ಞಾನಾಧಾರಿತ ಉದ್ಯಮಗಳಿಗೆ
ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯಿಂದ ವಿನಾಯಿತಿ
ನೀಡಿರುವುದರಿಂದ ಆ ಸಂಸ್ಥೆಗಳಲ್ಲಿ
ನಡೆಯುವ ಯಾವುದೇ ಚಟುವಟಿಕೆಗಳೂ ಹೊರಗೆ
ಬರುವುದಿಲ್ಲ. ಒಂದು ವೇಳೆ ಈ ರೀತಿಯ
ಕಂಪನಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ
ದೌರ್ಜನ್ಯ ನಡೆದರೆ, ಉದ್ಯೋಗಿಗಳು ಮತ್ತು ಆಡಳಿತ
ಮಂಡಳಿಯ ಸಮಿತಿಯಲ್ಲಿಯೇ ಬಗೆ
ಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2001ರಲ್ಲಿಯೇ ಐಟಿ ಉದ್ಯಮಕ್ಕೆ ಉತ್ತೇಜನ
ನೀಡಲು ಆಗಿನ ರಾಜ್ಯ ಸರ್ಕಾರ 10 ವರ್ಷಗಳವರೆಗೆ
ಕಾರ್ಮಿಕ ಕಾಯ್ದೆಯಿಂದ ವಿನಾ ಯಿತಿ ನೀಡಿತ್ತು.
ಆದರೆ, ಅದೇ ಆದೇಶದ ಲಾಭ ಪಡೆದಿರುವ ಐಟಿ,ಬಿಟಿ
ಕಂಪನಿಗಳು, ತಮ್ಮ ಎಲ್ಲ ವ್ಯವಹಾರಗಳು ಹಾಗೂ
ನೇಮಕಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ
ರೀತಿಯ ಹಸ್ತಕ್ಷೇಪ ಮಾಡದಂತೆ
ನೋಡಿಕೊಂಡಿದ್ದವು.
2014ರಲ್ಲಿ ರಾಜ್ಯ ಸರ್ಕಾರ ಮತ್ತೆ ಐದು ವರ್ಷಗಳಿಗೆ
ಐಟಿ, ಬಿಟಿ ಸೇರಿದಂತೆ ಜ್ಞಾನಾಧಾರಿತ ನವೋದ್ಯಮಗಳಿಗೆ
ವಿನಾಯಿತಿ ನೀಡಿದ್ದು, ಇದರಿಂದ
ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ
ನೀಡಬೇಕೆಂಬ ಸರೋಜಿನಿ ಮಹಿಷಿ ವರದಿಯ
ಶಿಫಾರಸ್ಸಿಗೆ ಹಿನ್ನಡೆಯಾದಂತಾಗಿದೆ. ಕಾರ್ಮಿಕ ಇಲಾಖೆ
ಮಾಡಿರುವ ಈ ಆದೇಶದಿಂದ ಐಟಿ, ಬಿಟಿ, ಸ್ಟಾರ್ಟ್ ಅಪ್
ಕಂಪನಿಗಳಿಗೆ ಉದ್ಯಮ ಸ್ಥಾಪಿಸಲು ಅನುಮತಿ
ನೀಡು ವುದಷ್ಟೇ ರಾಜ್ಯ ಸರ್ಕಾರದ ಕೆಲಸವಾ ಗಿದ್ದು,
ಉಳಿದಂತೆ ಈ ಉದ್ಯಮಗಳ ಕಾರ್ಯ ವೈಖರಿ, ಅಲ್ಲಿ
ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆಯೂ ಕೇಳಲು
ರಾಜ್ಯಕ್ಕೆ ಅಧಿಕಾರವಿಲ್ಲ.
500 ಜನರಲ್ಲಿ ಐವರು ಕನ್ನಡಿಗರು!: ಬೆಂಗಳೂರು
ಸೇರಿದಂತೆ ರಾಜ್ಯದಲ್ಲಿರುವ ಮಾಹಿತಿ, ಜೈವಿಕ
ತಂತ್ರಜ್ಞಾನ ಕಂಪನಿಗಳು ಒಮ್ಮೆ ಐನೂರು ಜನರನ್ನು
ನೇಮಕ ಮಾಡಿ ಕೊಂಡರೆ, ಅವರಲ್ಲಿ
ಕನ್ನಡಿಗರಿಗೆ ಕೇವಲ ಐವರು ಕನ್ನಡಿಗರಿಗೆ ಮಾತ್ರ ಅವಕಾಶ
ದೊರೆಯುತ್ತಿದೆ. ಶೇ.100ರಷ್ಟು ಕನ್ನಡಿಗರಿಗೇ
ಉದ್ಯೋಗ ನೀಡಬೇಕೆನ್ನುವ ಕಾನೂನಿನಲ್ಲಿ ಶೇ.10
ರಷ್ಟೂ ಜಾಗ ಕನ್ನಡಿಗರಿಗೆಸಿಗುತ್ತಿಲ್ಲ. ಇದೇ ಕಾರಣದಿಂದ
ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ
ಐಟಿ ಕಂಪನಿಗಳು ಕ್ಯಾಂಪಸ್ ಇಂಟರ್ವ್ಯೂ
ನಡೆಸುತ್ತಿಲ್ಲ. ಕೇವಲ ಬೆರಳೆಣಿಕೆ ಯಷ್ಟು ಪ್ರತಿಷ್ಠಿತ
ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿವೆ.
ರಾಜ್ಯ ಸರ್ಕಾರವೇ ಪರೋಕ್ಷವಾಗಿ ಐಟಿ ಕ್ಷೇತ್ರದಲ್ಲಿ
ನಿರುದ್ಯೋಗ ಹೆಚ್ಚಳಕ್ಕೆ ಉಡುಗೊರೆ
ನೀಡಿದಂತಾಗಿದೆ. ಒಂದು ಮಾಹಿತಿ ಪ್ರಕಾರ
ಬೆಂಗಳೂರು ನಗರ ಒಂದರಲ್ಲಿಯೇ ಸುಮಾರು 3500 ಕ್ಕೂ
ಹೆಚ್ಚು ಐಟಿ ಕಂಪನಿಗಳಿದ್ದು, 290 ಬಿಟಿ
ಕಂಪನಿಗಳಿವೆ.
ಇವುಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ
ಉದ್ಯೋಗಿಗಳಿದ್ದಾರೆ.
ಈ ಕಂಪನಿಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳೂ
ಸೇರಿದಂತೆ ಶೇ.50ರಷ್ಟೂ ಕೂಡ ಕನ್ನಡಿಗರಿಗೆ ಉದ್ಯೋಗ
ದೊರೆತಿಲ್ಲ ಎನ್ನಲಾಗಿದೆ. ಸರೋಜಿನಿ ಮಹಿಷಿ
ಪರಿಷ್ಕೃತವರದಿ ಪ್ರಕಾರ ಎ ಮತ್ತು ಬಿ. ದರ್ಜೆಯ
ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.65 ರಿಂದ 70 ರಷ್ಟು
ಹಾಗೂ ಸಿ ಮತ್ತು ಡಿ. ದರ್ಜೆಯ ಹುದ್ದೆಗ ಳಲ್ಲಿ ಶೇ.100
ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು
ಶಿಫಾರಸ್ಸು ಮಾಡಲಾ ಗಿದೆ. ಕಾರ್ಮಿಕ ಇಲಾಖೆಯ
ನಿರೀಕ್ಷರು ಮತ್ತು ಅಧಿಕಾರಿಗಳು ಕಂಪನಿಗಳ
ಕಾರ್ಯ ಚಟುವಟಿಕೆಗಳ ಬಗ್ಗೆ ತಪಾಸಣೆ ನಡೆಸುವುದಕ್ಕೂ
ನಿರ್ಬಂಧ ಹೇರಲಾಗಿದೆ.
ಈ ರೀತಿಯ ಆದೇಶ ಮಾಡಿರುವುದು ನನ್ನ ಗಮನಕ್ಕೆ
ಬಂದಿದೆ. ಐಟಿ ಕಂಪನಿಗಳಿಗೆ ಉತ್ತೇಜನ
ನೀಡಲು ಸರ್ಕಾರ ಹಿಂದೆಯೇ ವಿನಾಯಿತಿ
ನೀಡಿದೆ. ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ
ಕೊಡಿಸಲು ತೀರ್ಮಾನ
ತೆಗೆದುಕೊಳ್ಳುವ ಸಂದರ್ಭದಲ್ಲಿ ಈಗಿರುವ
ಆದೇಶದ ಜೊತೆಗೆ ಕನ್ನಡಿಗರಿಗೆ ಕಡ್ಡಾಯ
ಉದ್ಯೋಗ ನೀಡಬೇಕೆಂಬ ಅಂಶವನ್ನು ಸೇರಿಸಿ
ಆದೇಶ ಹೊರಡಿಸಲಾಗುವುದು. ವಿನಾಯಿತಿ
ನೀಡಿರುವುದು ಸ್ಟಾಂಡಿಂಗ್ ಆದೇಶ
ಇರುವುದರಿಂದ ಅದನ್ನು ರಾಜ್ಯ ಸರ್ಕಾರ ಯಾವಾಗ
ಬೇಕಾದರೂ ಬದಲಾಯಿಸಬಹುದು. ಆ ನಿಟ್ಟಿನಲ್ಲಿ ಸರ್ಕಾರ
ಪ್ರಯತ್ನ ನಡೆಸುತ್ತಿದೆ.
- ಸಂತೋಷ್ ಲಾಡ್ ಕಾರ್ಮಿಕ ಸಚಿವ.
ಐಟಿ ಬಿಟಿ ಕಂಪನಿಯವರು ಪಾಳೆಗಾರರು ಇದ್ದ ಹಾಗೆ,
ಒಬ್ಬೊಬ್ಬರು ಒಂದೊಂದು
ಪಾಳೆಗಾರಿಕೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ
ಮುನ್ನೂರು ನಾನೂರು ಎಕರೆ ಜಮೀನು
ತೆಗೆದುಕೊಂಡು ಬಂಗಲೆ
ಕಟ್ಟಿಕೊಂಡು ಜೀವನ
ನಡೆಸುತ್ತಿದ್ದಾರೆ. ಐಟಿ. ಬಿಟಿಯವರು ಕನ್ನಡ ದ್ರೋಹಿಗಳು,
ಅವರ ಮೈಯಲ್ಲಿ ಕನ್ನಡ ವಿರೋಧಿ ರಕ್ತ ಹರಿಯುತ್ತಿದೆ.
ಸರ್ಕಾರ ಅವರಿಗೇಕೆ ವಿನಾಯಿತಿ ನೀಡಬೇಕು. ಕಾರ್ಮಿಕ
ಕಾಯ್ದೆಯಿಂದ ವಿನಾಯಿತಿ ನೀಡಿರುವುದನ್ನು
ತಕ್ಷಣ ವಾಪಸ್ ಪಡೆಯಬೇಕು.
- ವಾಟಾಳ್ ನಾಗರಾಜ್ ಕನ್ನಡ ವಾಟಾಳ್ ಪಕ್ಷದ ನಾಯಕ.
ಐಟಿ ಕಂಪನಿಗಳಲ್ಲಿ ಹೊಸ ನೇಮಕಾತಿಗಳಲ್ಲಿ
ಕನ್ನಡಿಗರು ತೀರಾ ಕಡಿಮೆ
ಸಂಖ್ಯೆಯಲ್ಲಿರುತ್ತಾರೆ. ನಮ್ಮ ರಾಜ್ಯದಲ್ಲಿ
ಕ್ಯಾಂಪಸ್ ಇಂಟರ್ವ್ಯೂ ಮಾಡುವುದಿಲ್ಲ.
ಆಂಧ್ರ, ತಮಿಳುನಾಡು, ಕೋಲ್ಕತ್ತಾಗಳಲ್ಲಿ ಕ್ಯಾಂಪಸ್
ಇಂಟರ್ವ್ಯೂಸ್ ಮಾಡುವ ಮೂಲಕ ಹೆಚ್ಚಿನ
ಸಂಖ್ಯೆಯವರನ್ನು ಸೇರಿಸಿಕೊಳ್ಳುತ್ತಾರೆ.
ರಾಜ್ಯ ಸರ್ಕಾರ ಐಟಿ ಕಂಪನಿಗಳನ್ನೂ ಇತರ
ಉದ್ಯಮಗಳಂತೆ ನೋಡಬೇಕು ಹೆಚ್ಚಿನ ವಿನಾಯಿತಿ
ನೀಡುವುದರಿಂದ ಕನ್ನಡಿಗರು ಅಲ್ಪ
ಸಂಖ್ಯಾತರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.

Friday, February 03, 2017

ಎಫ್ಡಿಎ, ಎಸ್ಡಿಎ ಪರೀಕ್ಷೆ: ಗುರುತಿನ ಚೀಟಿ ಕಡ್ಡಾಯ

ಕರ್ನಾಟಕ ಲೋಕಸೇವಾ ಆಯೋಗವು ಫೆಬ್ರುವರಿ
5, 11 ಮತ್ತು 12 ರಂದು ನಡೆಸಲಿರುವ ಎಫ್ಡಿಎ ಹಾಗೂ
ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ
ಅಭ್ಯರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿ
ತರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಷಣ್ಮುಖ
ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಬುಧವಾರ ನಡೆದ ಎಫ್ಡಿಎ ಹಾಗೂ ಎಸ್ಡಿಎ
ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜರಾಗುವ
ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಭಾವಚಿತ್ರಗಳನ್ನು
ಹೊಂದಿರುವ ಚುನಾವಣಾ ಗುರುತಿನ ಚೀಟಿ,
ಆಧಾರ್ ಕಾರ್ಡ್, ವಾಹನ ಚಾಲನೆ ಪರವಾನಗಿ ಪತ್ರ, ಪಾನ್ಕಾರ್ಡ್,
ಪಾಸ್ಪೋರ್ಟ್, ಸರ್ಕಾರಿ ನೌಕರರ ಗುರುತಿನ ಚೀಟಿ
ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು
ಕಡ್ಡಾಯ ಹಾಜರುಪಡಿಸಬೇಕು. ಹಾಜರು ಪಡಿಸದ
ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ
ಪ್ರವೇಶ ನೀಡುವುದಿಲ್ಲ ಎಂದು ಹೇಳಿದರು.
ಜಿಲ್ಲೆಯ 22 ಕೇಂದ್ರಗಳಲ್ಲಿ ಪರೀಕ್ಷೆ
ನಡೆಯಲಿದೆ. ಕೇಂದ್ರಗಳಲ್ಲಿ ಯಾವುದೇ ರೀತಿಯ
ಅಹಿತಕರ ಘಟನೆಗಗಳು ನಡೆಯದಂತೆ ಎಚ್ಚರ
ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ
ಪತ್ರಿಕೆಗಳನ್ನು ತಲುಪಿಸುವುದು ಮತ್ತು ಪರೀಕ್ಷಾ
ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ
ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಲು
ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆಗಾಗಿ
ನಿಯೋಜನೆಗೊಂಡ ಅಧಿಕಾರಿಗಳು
ಪರೀಕ್ಷೆ ಕೇಂದ್ರಗಳಿಗೆ ನಿಗದಿತ ಅವಧಿಗಿಂತ
ಒಂದು ಗಂಟೆ ಮುಂಚಿತವಾಗಿ ತೆರಳಿ ಅಗತ್ಯ
ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪರೀಕ್ಷೆ ವೀಕ್ಷಕರಾಗಿ
ನೇಮಕಗೊಂಡ ಅಧಿಕಾರಿಗಳು
ಪರೀಕ್ಷೆಯ ಹಿಂದಿನ ದಿನ ತಮಗೆ ಹಂಚಿಕೆ
ಮಾಡಲಾಗಿರುವ ಪರೀಕ್ಷಾ ಉಪ ಕೇಂದ್ರಗಳಿಗೆ
ಕಡ್ಡಾಯ ಭೇಟಿ ನೀಡಿ, ಆಸನ ವ್ಯವಸ್ಥೆ, ಟೇಬಲ್
ಅಥವಾ ಡೆಸ್ಕ್ಗಳ ಮೇಲೆ ಬರೆದಿರುವ ನೋಂದಣಿ
ಸಂಖ್ಯೆಗಳನ್ನು ಪರಿಶೀಲಿಸಬೇಕು ಎಂದು
ನಿರ್ದೇಶನ ನೀಡಿದರು. ಪರೀಕ್ಷೆಗೆ
ನಿಯೋಜನೆಗೊಂಡ ವೀಕ್ಷಕರು,
ಮೇಲ್ವಿಚಾರಕರು, ಹೆಚ್ಚುವರಿ ಮೇಲ್ವಿಚಾರಕರು ಹಾಗೂ ಇತರೆ
ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು
ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎಲ್ಲ ಪರೀಕ್ಷಾ
ಕೇಂದ್ರಗಳಿಗೆ ಒಬ್ಬ ಮಹಿಳಾ 
ಪೊಲೀಸ್ ಅಧಿಕಾರಿಯನ್ನು
ಒಳಗೊಂಡಂತೆ
ಪೊಲೀಸ್ ಸಿಬ್ಬಂದಿಯನ್ನು
ನಿಯೋಜಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ
ಕೇಂದ್ರಗಳಿಗೆ ತಲುಪಿಸುವ ಅಧಿಕಾರಿಗಳಿಗೆ ರಕ್ಷಣೆ
ಒದಗಿಸಬೇಕು ಎಂದು ಹೆಚ್ಚುವರಿ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ
ಶ್ರೀಹರಿಬಾಬು ತಿಳಿಸಿದರು.
ಪರೀಕ್ಷೆಯ ದಿನಗಳಂದು ಪರೀಕ್ಷಾ
ಕೇಂದ್ರಗಳ ಸುತ್ತಮುತ್ತ 200 ಮೀಟರ್
ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಪರೀಕ್ಷೆಗೆ ನಿಯೋಜನೆಗೊಂಡಿರುವ
ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳನ್ನು
ಹೊರತುಪಡಿಸಿ ಪರೀಕ್ಷಾ
ಕೇಂದ್ರಗಳಲ್ಲಿ ಯಾರೊಬ್ಬರು
ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ
200 ಮೀಟರ್ ಅಂತರದಲ್ಲಿ ಝೆರಾಕ್ಸ್
ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕು
ಎಂದು ತಿಳಿಸಿದರು.