Wikipedia

Search results

Thursday, December 29, 2016

ಕುವೆಂಪು-ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ

ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು.

ರಸಋಷಿ ಕುವೆಂಪು
ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದಂತ ಕುವೆಂಪುರವರು ತಾವೆ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪುರವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು,ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ "ಪರ್ವತಾರಣ್ಯ ಪ್ರಪಂಚ"ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ ,ಕಾದಂಬರಿ,ನಾಟಕ,ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ. ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ,ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು,ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಕಲಿಸುತ್ತ ಬಂದಿದ್ದಾರೆ. ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನದ ಪಲ್ಲಟಗಳನ್ನು ತಲ್ಲಣಗಳನ್ನೂ ಅವರ ಗ್ರಹನಾ ಶಕ್ತಿಯಿಂದ ವ್ಯಕ್ತವಾಗಿದೆ

ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನಗಳಿಂದ ಶ್ರೀಮಂತವಾಗಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟಿದೆ. ರಸಋಷಿಯ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯ ಭಾರತದ ವಾಸ್ಥವವನ್ನು ಕುರಿತ ವಿಮರ್ಷೆಯಾಗಿ ತೋರುತ್ತದೆ. ಹಾಗೆಯೇ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರಗೆ ಅವರು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರನ್ನು ಅರಗಿಸಿ ಕೊಂಡ ಕ್ರಮಗಳು ಹಾಗು ಯುಗ ಪರಿವರ್ತನೆಯ ಸೂಕ್ಷ್ಮತೆಗಳಿಗೆ ಸ್ಪಂದಿಸುತ್ತ ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪುರವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿವೆ.

ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು,ಸಾಮಾನ್ಯ ಜನರ ಬದುಕನ್ನು ನಿರ್ಧೇಶಿಸಿದಂತೆಯೇ ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೊದಯ, ಸಮನ್ವಯ ಮತ್ತು ಪೂರ್ಣ ದೃಷ್ಠಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗು ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೆ ವಿಶ್ವಮಾನವ ಸಂದೇಶ ,ಇದರ ಗೌರವಾರ್ಥವಾಗಿ ಕುವೆಂಪುರವರಿಗೆ 'ವಿಶ್ವಮಾನವ' ಎಂಬ ಬಿರುದಿದೆ.

***ಕಾದಂಬರಿಗಳು+++
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ)
***ನಾಟಕಗಳು*--
ಬೆರಳ್ಗೆ ಕೊರಳ್
ಶೂದ್ರ ತಪಸ್ವಿ
ಸ್ಮಶಾನ ಕುರುಕ್ಷೇತ್ರ
ರಕ್ತಾಕ್ಷಿ
ಬಿರುಗಾಳಿ
ಯಮನ ಸೋಲು
ನನ್ನ ಗೋಪಾಲ (ಮಕ್ಕಳ ನಾಟಕ)
ವಾಲ್ಮೀಕಿಯ ಭಾಗ್ಯ
ಮಹಾರಾತ್ರಿ
ಜಲಗಾರ
ಚಂದ್ರಹಾಸ
ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ)
***ಕಾವ್ಯಗಳು***
ಶ್ರೀ ರಾಮಾಯಣ ದರ್ಶನ೦
ಕೊಳಲು
ಅಗ್ನಿಹಂಸ
ಅನಿಕೇತನ
ಅನುತ್ತರಾ
ಇಕ್ಶುಗಂಗೋತ್ರಿ
ಕದರಡಕೆ
ಕಥನ ಕವನಗಳು
ಕಲಾಸುಂದರಿ
ಕಿಂಕಿಣಿ
ಕೃತ್ತಿಕೆ
ಜೇನಾಗುವ
ನವಿಲು
ಪಕ್ಷಿಕಾಶಿ
ಚಿತ್ರಾಂಗದಾ
ಪ್ರೇತಕ್ಯು
ಪ್ರೇಮಕಾಶ್ಮೀರ
ಮಂತ್ರಾಕ್ಷತೆ
ಷೋಡಶಿ
ಹಾಳೂರು
ಕೋಗಿಲೆ
ಪಾಂಚಜನ್ಯ
ಕುಟೀಚಕ
***ಕಥಾಸಂಕಲನ : **
ನನ್ನ ದೇವರು ಮತ್ತು ಇತರ ಕಥೆಗಳು

ವಿಮರ್ಶೆ : ದ್ರೌಪದಿಯ ಶ್ರೀಮುಡಿ

ಜೀವನ ಚರಿತ್ರೆ : ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ

ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು : ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ, ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ,

ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು
1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.
1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.

1956ರಿಂದ95-೮ ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ......

ಯುಗದ ಕವಿ
ಜಗದ ಕವಿ
ಕವಿ ಸಂತ
ರಾಷ್ಟ್ರಕವಿ
ರಸಋಷಿ ಕುವೆಂಪುರವರ
ಜನ್ಮ ಮಹೋತ್ಸವದ(ವಿಶ್ವ ಮಾನವ ದಿನಾಚರಣೆಯ) ಶುಭಾಷಯಗಳು..

Wednesday, December 28, 2016

10 ಸಾವಿರ ರೂ.ಗಿಂತ ಹೆಚ್ಚಿನ ಹಳೆಯ ನೋಟ್ ಹೊಂದಿದ್ದರೆ 4 ವರ್ಷ ಜೈಲು ಶಿಕ್ಷೆ

ಮಾರ್ಚ್ 31ರ ಬಳಿಕವೂ 10 ಸಾವಿರ
ರೂ.ಗಿಂತ ಹೆಚ್ಚಿನ ಹಳೆಯ ನೋಟನ್ನು
ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧ.

ನೋಟ್ ಬ್ಯಾನ್ ಬಳಿಕ ಕೇಂದ್ರ ಸರ್ಕಾರ
ಇಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ
ಕ್ಯಾಬಿನೆಟ್ ಸಭೆ ನಡೆಸಿತು.

ಈ ವೇಳೆ ಮಾರ್ಚ್ 31ರ
ನಂತರವೂ 10 ಸಾವಿರ ರೂ.ಗಿಂತ ಹೆಚ್ಚಿನ
ಹಳೆಯ ನೋಟನ್ನು ಹೊಂದಿದ್ದರೆ ಅವರಿಗೆ ಕನಿಷ್ಟ
50 ಸಾವಿರ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ
ವಿಧಿಸಲು ಕಾನೂನು ತರಲು ಸರ್ಕಾರ
ಮುಂದಾಗಿದ್ದು, ಈ ಸಂಬಂಧ ಸುಗ್ರೀವಾಜ್ಞೆ
ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು
ಮೂಲಗಳು ಮಾಹಿತಿ ನೀಡಿವೆ.

ಡಿಸೆಂಬರ್ 30ರ ನಂತರ ಮಾರ್ಚ್ 31ರವರೆಗೆ ಹಳೇ
ನೋಟ್ಗಳನ್ನ ನೇರವಾಗಿ ಆರ್ಬಿಐ
ಕಚೇರಿಯಲ್ಲೇ ಜಮೆ ಮಾಡಬೇಕಿದೆ.
ಕಾಳ ಧನಿಕರಿಗೆ ಪ್ರಧಾನ ಮಂತ್ರಿ ಗರೀಬ್
ಕಲ್ಯಾಣ್ ಯೋಜನೆಯಡಿ ಕಪ್ಪು ಹಣವನ್ನು
ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದೆ.


ಯೋಜನೆಯಡಿ ದಾಖಲೆಯಿಲ್ಲದ ಹಣದ ಮೇಲೆ
ಶೇ.50ರಷ್ಟು ತೆರಿಗೆ ಬೀಳಲಿದೆ. ಇನ್ನುಳಿದ
ಹಣದಲ್ಲಿ ಶೇ.25ರಷ್ಟು ಹಣವನ್ನು 4
ವರ್ಷಗಳವರೆಗೆ ಠೇವಣಿ ಇಡಬೇಕಾಗುತ್ತದೆ.


ಹಣಕ್ಕೆ ಠೇವಣಿದಾರನಿಗೆ ಯಾವುದೇ ಬಡ್ಡಿ
ಸಿಗುವುದಿಲ್ಲ.

Puc time table

Tuesday, December 27, 2016

➡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ ಪರೀಕ್ಷೆಗಳು ನಡೆಯಲಿವೆ.

🌹*ಪರೀಕ್ಷೆಗಳು ನಡೆಯುವ ದಿನಾಂಕ ಮತ್ತು ವಿಷಯ:

*09-03-2017 ಜೀವಶಾಸ್ತ್ರ, ಇತಿಹಾಸ*
*10-03-2017 ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ*
*(MAHANTAGOUD.T.PATIL.SWCM.KSPSTA)*
*11-03-2017 ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್*

*13-03-2017 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ*

*14-03-2017 ಗಣಿತ*

*15-03-2017 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ*

*16-03-2017 ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ*

*17-03-2017 ಭೌತಶಾಸ್ತ್ರ*
*18-03-2017 ಮನಃಶಾಸ್ತ್ರ*

*20-03-2017 ರಸಾಯನಶಾಸ್ತ್ರ, ಬಿಸಿನೆಸ್ ಸ್ಟಟೀಸ್, ಐಚ್ಛಿತ ಕನ್ನಡ*
*21-03-2017 ರಾಜ್ಯಶಾಸ್ತ್ರ*

*22-03-2017 ಹಿಂದಿ, ತೆಲುಗು*

*23-03-2017 ಕನ್ನಡ, ತಮಿಳು, ಮಲಯಾಳಂ, ಅರೇಬಿಕ್*

*24-03-2017 ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್*

*25-03-2017 ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ*

*27-03-2017 ಇಂಗ್ಲೀಷ್*

ಭಾರತದ ಚಿನ್ಹೆಗಳು

1] ರಾಷ್ಟ್ರಧ್ವಜ‬:
  
ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ
        3:2.
  
ಭಾರತದ ರಾಷ್ಟ್ರಧ್ವಜವು ಕೇಸರಿ, ಬಿಳಿ ಮತ್ತು
       ಹಸಿರು ಬಣ್ಣಗಳನ್ನು ಹೊಂದಿದೆ.
  
ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24
       ಕಡ್ಡಿಗಳನ್ನು ಹೊಂದಿದ್ದು ನೀಲಿ ಬಣ್ಣದಿಂದ ಕೂಡಿದೆ.
       ಇದನ್ನು ಸಾರನಾಥದ ಅಶೋಕನ ಸ್ಥಂಭದಿಂದ
       ಆರಿಸಿಕೊಳ್ಳಲಾಗಿದೆ.
  
ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ
       1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
  
ಭಾರತದ ಧ್ವಜಸಂಹಿತೆ 26 ಜನವರಿ 2002 ರಂದು
        ಜಾರಿಗೆ ಬಂದಿತು.
  
ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು
        ಮೂಲಭೂತ ಹಕ್ಕು ಎಂದು ಕಲಂ 19(i)
        ವಿವರಿಸುವುದು.
  
ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ
        ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
  
ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ
        ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ್
        ಅಧಿವೇಶನದಲ್ಲಿ ಜವಾಹರಲಾಲ ನೆಹರೂ
        ಹಾರಿಸಿದರು.
  
ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ
       ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು.
  
ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಾಳಿ
        ವೆಂಕಯ್ಯ.
  
ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ
        ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.

2] ರಾಷ್ಟ್ರೀಯ ಚಿನ್ಹೆ‬:
  
ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ
        ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ
        ಸಾರನಾಥದ ಸ್ಥಂಭದಿಂದ  ಪಡೆಯಲಾಗಿದೆ.
  
ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ,
        ಗೂಳಿ ಮತ್ತು ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
  
ಭಾರತ ಸರ್ಕಾರವು ಇದನ್ನು 26 ಜನವರಿ 1950 ರಂದು
       ಅಳವಡಿಸಿಕೊಂಡಿತು.
  
ಇದರ ಕೆಳಗೆ ಮಂಡಕೋಪನಿಷತ್ತಿನಿಂದ ಪಡೆದಿರುವ
        ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ
        ಬರೆಯಲಾಗಿದೆ.

3] ‎ರಾಷ್ಟ್ರೀಯ ಹೂವು‬:
  
ಭಾರತದ ಪುಷ್ಪ - ಕಮಲದ ಹೂವು.
  
ಕಮಲದ ವೈಜ್ಞಾನಿಕ ಹೆಸರು - ನೆಲುಂಬೊ ನ್ಯುಸಿಫೆರಾ
       (Nelumbo nucifera)

4] ‎ರಾಷ್ಟ್ರಗೀತೆ‬:
  
ಭಾರತದ ರಾಷ್ಟ್ರಗೀತೆ 'ಜನಗಣಮನ".
  
ಮೂಲತಃ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು
       ರಚಿಸಿದವರು ರವೀಂದ್ರನಾಥ ಟ್ಯಾಗೋರ್.
  
ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ
       ರಾಷ್ಟ್ರಗೀತೆಯನ್ನು 24 ಜನವರಿ 1950 ರಂದು
       ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
  
ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್
       ಅಧಿವೇಶನದಲ್ಲಿ ಹಾಡಲಾಯಿತು.
  
ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
  
ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ
       ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ
       ಹಾಡುವ ನಿಯಮವಿದೆ.

5] ‎ರಾಷ್ಟ್ರೀಯ ಹಾಡು‬:
  
ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು
       ಭಾರತದ ಸಂವಿಧಾನ ರಚನಾ ಸಭೆಯು ಜನವರಿ 24,
       1950 ರಂದು ಅಳವಡಿಸಿಕೊಂಡಿತು.
  
ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ
       ಚಟ್ಟೋಪಾಧ್ಯಾಯರು 1882 ರಲ್ಲಿ ರಚಿಸಿದ
       'ಆನಂದಮಠ' ಕಾದಂಬರಿಯಿಂದ
       ಆಯ್ದುಕ್ಕೊಳ್ಳಲಾಗಿದೆ.
  
ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾದ
       ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
  
ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ
       ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.

6] ರಾಷ್ಟ್ರೀಯ ಪಂಚಾಂಗ:
  
ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ
       ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.
  
ಇದನ್ನು ಮಾರ್ಚ 22, 1957 ರಂದು
       ಅವಡಿಸಿಕ್ಕೊಳಲಾಗಿದೆ.
  
ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ
       ಮೊದಲನೇ ತಿಂಗಳು - ಚೈತ್ರ.
       ಕೊನೆಯ ತಿಂಗಳು - ಫಾಲ್ಗುಣ.
  
ರಾಷ್ಟ್ರೀಯ ಪಂಚಾಂಗದ ತಿಂಗಳುಗಳು:
       ಚೈತ್ರ, ವೈಶಾಖ, ಜೇಷ್ಟ, ಆಷಾಢ, ಶ್ರಾವಣ, ಭಾದ್ರಪದ,
       ಅಶ್ವಿನ, ಕಾರ್ತಿಕ, ಮೃಗಶಿರ, ಪುಷ್ಯ, ಮಾಘ, ಫಾಲ್ಗುಣ.

7] ರಾಷ್ಟ್ರೀಯ ಕ್ರೀಡೆ‬:
  
ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ.
  
ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11
       ಆಟಗಾರರಿರುತ್ತಾರೆ.
  
ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್.
  
ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ
       ಆಗಸ್ಟ್-29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ
       ಕ್ರೀಡಾ ದಿನವಾಗಿ ಆಚರಿಸುವರು.
  
ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ
        ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.
  
ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ -
        70 ನಿಮಿಷಗಳು.

8] ರಾಷ್ಟ್ರೀಯ ನದಿ‬:
  
ಭಾರತದ ರಾಷ್ಟ್ರೀಯ ನದಿ - ಗಂಗಾನದಿ.
  
ನವೆಂಬರ್ 04, 2008 ರಂದು ಗಂಗಾನದಿಯನ್ನು
       ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು
       ಘೋಷಿಸಿದರು.
  
ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ
        ಉದ್ದವಾಗಿದೆ(2510 km).
  
ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ
        ಪಾಟ್ನಾದಲ್ಲಿ.

9] ರಾಷ್ಟ್ರೀಯ ಜಲಪ್ರಾಣಿ‬:
  
ಭಾರತ ಸರ್ಕಾರವು ಅಕ್ಟೋಬರ್ 05, 2009 ರಂದು
      ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ
      ಜಲಪ್ರಾಣಿ ಎಂದು ಘೋಷಿಸಿದೆ.
  
ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ
       ಗ್ಯಾಂಗ್ಯಾಟಿಕಾ(Platanista gangetica).

10] ‪ರಾಷ್ಟ್ರೀಯ ಪಕ್ಷಿ‬:
     
ಭಾರತದ ರಾಷ್ಟ್ರೀಯ ಪಕ್ಷಿ - ನವಿಲು.
     
ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ
          ಜಿಲ್ಲೆಯ ಬಂಕಾಪೂರದಲ್ಲಿ ನವಿಲು
          ವನ್ಯಧಾಮಗಳಿವೆ.
     
ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್
          (Pavo cristatus).

11] ರಾಷ್ಟ್ರೀಯ ಮರ‬:
    
ಭಾರತದ ರಾಷ್ಟ್ರೀಯ ಮರ - ಬ್ಯಾನಿಯನ್ ಅಥವಾ
          ಅರಳಿ ಮರ.
    
ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್
         ಬೆಂಗಾಲೆನ್ಸಿಸ್ (Ficus benghalensis)

12] ‎ರಾಷ್ಟ್ರೀಯ ಹಣ್ಣು‬:
     
ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು.
     
ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೆರಾ
          ಇಂಡಿಕಾ (Mangifera indica).

13] ರಾಷ್ಟ್ರೀಯ ವಂಶ ಪಾರಂಪರ್ಯ ಪ್ರಾಣಿ‬:
    
ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು
         ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ
         ಎಂದು ಘೋಷಿಸಿದೆ.
    
ಆನೆಯ ವೈಜ್ಞಾನಿಕ ಹೆಸರು- ಎಲಿಫಾಸ್ ಮ್ಯಾಕ್ಷಿಮಸ್
         (Elephas maximus).

14] ರಾಷ್ಟ್ರೀಯ ಪ್ರಾಣಿ‬:
    
1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ
         ಎಂದು ಘೋಷಿಸಲಾಯಿತು.
    
ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್.
         (Panthera tigris).
    
ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ -
         1972.

15] ‎ರಾಷ್ಟ್ರೀಯ ಕಟ್ಟಡ‬:
    
ಭಾರತದ ರಾಷ್ಟ್ರೀಯ ಕಟ್ಟಡ‬ ದೆಹಲಿಯಲ್ಲಿರುವ
          ಇಂಡಿಯಾ ಗೇಟ್.

     ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ
          ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ
          ಕಟ್ಟಿಸಲಾಗಿದೆ.

16] ‎ರಾಷ್ಟ್ರೀಯ ದೊರೆ‬:
      ಭಾರತದ ರಾಷ್ಟ್ರೀಯ ದೊರೆ‬ - ಮೌರ್ಯ ವಂಶದ
          ಚಂದ್ರಗುಪ್ತ ಮೌರ್ಯ.

ದೇವನೂರ ಮಹದೇವ ಅವರಿಗೆ 2016ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ

🔵 ಬೆಂಗಳೂರು - ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರಲ್ಲಿ ಒಬ್ಬರಾದ ದೇವನೂರ ಮಹದೇವ ಅವರಿಗೆ 2016ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಂದಿದೆ.

🔵 ಪ್ರಶಸ್ತಿಯನ್ನು ಇದೇ 29ರಂದು ಕುಪ್ಪಳ್ಳಿಯಲ್ಲಿ ನಡೆಯುವ ವಿಶ್ವ ಮಾನವ ದಿನಾಚರಣೆ ಕುವೆಂಪು ಜನ್ಮ ದಿನೋತ್ಸವ ಹಾಗೂ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯ ಕ್ರಮದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಅತಿಥಿಗಳಿಂದ ಕವಿ ಶೈಲದಲ್ಲಿ ಕವಿ ನಮನ ಕಾರ್ಯಕ್ರಮ ನೆರವೇರಲಿದೆ.

🔵 11 ಗಂಟೆಗೆ ಹೇಮಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್. ಎನ್.ನಾಗಮೋಹನ್‍ದಾಸ್ ಪ್ರಧಾನ ಭಾಷಣ ಮಾಡಲಿದ್ದಾರೆ. ಶ್ರೀ ರಾಮಾಯಣದರ್ಶನಂ ವಿಶೇಷ ಆವೃತ್ತಿಯನ್ನು ಪ್ರಸಾರ ಭಾರತಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಬಿಡುಗಡೆ ಮಾಡಲಿದ್ದಾರೆ.

🔵 ಮಂಟಪದ ಉದ್ಘಾಟನೆಯನ್ನು ಕುವೆಂಪು ಪ್ರತಿಷ್ಠಾನದ ಸ್ಥಾಪಕ ಸದಸ್ಯರು ಹಾಗೂ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ನೆರವೇರಿಸುವರು.ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ 2017ರ ನೂತನ ಕ್ಯಾಲೆಂಡರ್‍ನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕುವೆಂಪು ವಿವಿ ಕುಲಪತಿ ಪ್ರೊ . ಜೋಗನ್ ಶಂಕರ್, ಸಾಹಿತಿ ಪ್ರೊ .ರಾಜೇಂದ್ರ ಚೆನ್ನಿ, ಕುವೆಂಪು ರಾಷ್ಟ್ರೀಯ ಪುರಸ್ಕಾರದ ದಾನಿಗಳಾದ ಎಂ.ಸಿ.ನರೇಂದ್ರ ಪಾಲ್ಗೊಳ್ಳುವರು.

🔵 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ .ಹಂ.ಪ.ನಾಗರಾಜಯ್ಯ, ತೀರ್ಥಹಳ್ಳಿ ತಾ.ಪಂ. ಅಧ್ಯಕ್ಷೆ ನವಮಣಿ, ಕುಪ್ಪಳ್ಳಿ ಜಿ.ಪಂ.ಸದಸ್ಯೆ ಕಲ್ಪನಾ ಪದ್ಮನಾಭ್ ಮತ್ತಿತರರು ಪಾಲ್ಗೊಳ್ಳುವರು.ಮಧ್ಯಾಹ್ನ 3 ರಿಂದ 4ರವರೆಗೆ ಕುವೆಂಪು ಕಾವ್ಯ ಗೀತ ಗಾಯನ ನಡೆದರೆ ಸಂಜೆ 4 ರಿಂದ ದೇವನೂರ ಮಹದೇವ ಅವರೊಂದಿಗೆ ಲೇಖಕ ಡಾ.ನಟರಾಜ್ ಹುಳಿಯಾರ್ ಅವರು ಸಂವಾದ ನಡೆಸಿಕೊಡಲಿದ್ದಾರೆ. ಇದೇ ವೇಳೆ ಕುವೆಂಪು ಗೀತೆಗಳ ನೃತ್ಯ ರೂಪಕ ಮನುಜ ಮತ, ವಿಶ್ವ ಪಥ, ನಾಟಕ ಸ್ವಪ್ನಸಿದ್ದಿ ಪ್ರದರ್ಶನಗೊಳ್ಳಲಿದೆ.

🔵 ವಿದ್ಯಾರ್ಥಿ ದೆಸೆಯಿಂದಲೇ ಜನಪರ ಆಂದೋಲನ ಗಳಲ್ಲಿ ಪಾಲ್ಗೊಂಡು ದಸಂಸದ ಸ್ಥಾಪಕರಲ್ಲೊಬ್ಬರಾದ ಬಂಡಾಯ ಸಾಹಿತಿ ದೇವನೂರ ಮಹಾದೇವ ಅವರು ಸಂಸ್ಕೃತಿ ಪಲ್ಲಟ, ರಾಜಕೀಯ ಮೇಲಾಟದ ನಡುವೆಯೂ ತಮ್ಮ ಸ್ವಂತಿಕೆ ಉಳಿಸಿಕೊಂಡ ಕೆಲವು ಕೆಲವು ಸಾಹಿತಿಗಳಲ್ಲಿ ಪ್ರಮುಖರು.ವೈಜ್ಞಾನಿಕ ದೃಷ್ಟಿಕೋನ, ವೈಚಾರಿಕ ಪ್ರಜ್ಞೆ ಮೈಗೂಡಿಸಿಕೊಂಡು ಕುವೆಂಪು ಅವರ ಆಶೋತ್ತರಗಳ ಮೂರ್ತ ರೂಪದಂತೆ ಬದುಕುತ್ತಿರುವ ದೇವನೂರರಿಗೆ ಈ ಬಾರಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಲ್ಲುತ್ತಿದೆ.......

Wednesday, November 09, 2016

ಹಳೇ 500, 1,000 ರುಪಾಯಿ ನೋಟು ಏನು ಮಾಡೋದು:

500 ಹಾಗೂ 1,000 ರುಪಾಯಿ
ನೋಟುಗಳ ಬಳಕೆ ಅಧಿಕೃತವಾಗಿ ನಿಂತಿದ್ದು, ಇನ್ನೇನಿದ್ದರೂ
500, 2000 ರುಪಾಯಿ ನೋಟು ಸದ್ಯದಲ್ಲೇ ಚಾಲನೆಗೆ
ಬರಲಿದೆ. ನಕಲಿ ನೋಟುಗಳನ್ನು ದೇಶದೊಳಗೆ
ಚಲಾವಣೆ ಆಗುವಂತೆ ಮಾಡಿದ್ದ ಪಾಕಿಸ್ತಾನದ
ಕುತಂತ್ರಕ್ಕೆ ಇದು ಬಲವಾದ ಹೊಡೆತ.
ಈ ನೋಟು ಚಲಾವಣೆ ಹಿನ್ನೆಲೆಯಲ್ಲಿ ಕೆಲ
ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ. ಅದರ
ಜತೆಗೆ ಕೆಲವು ಸಹಜವಾದ ಪ್ರಶ್ನೆಗಳಿಗೆ ಉತ್ತರ ಕೂಡ
ನೀಡಲಾಗಿದೆ.

-ನವೆಂಬರ್ 8ರ ಮಧ್ಯರಾತ್ರಿಯಿಂದ 500 ಹಾಗೂ
1,000 ರುಪಾಯಿ ನೋಟುಗಳ ಅಧಿಕೃತವಾಗಿ ಮೌಲ್ಯವನ್ನು
ಕಳೆದುಕೊಳ್ಳುತ್ತದೆ.
-ಈಗ ಇರುವ 500 ಹಾಗೂ 1,000 ರುಪಾಯಿ ನೋಟುಗಳನ್ನು
ನವೆಂಬರ್ 10 ಹಾಗೂ ಡಿಸೆಂಬರ್ 30ರ ಮಧ್ಯೆ
ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ
ಬದಲಿಸಿಕೊಳ್ಳಬಹುದು.
-ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಹೊಸದಾದ 500 ಹಾಗೂ 2000 ರುಪಾಯಿ ನೋಟು
ವಿತರಿಸುತ್ತದೆ.
-ನಿಗದಿತ ದಿನಾಂಕದೊಳಗೆ ಹಳೆಯ ನೋಟುಗಳನ್ನು
ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಘೋಷಣಾ ಪತ್ರ
ನೀಡಿ, ಆ ನಂತರ ಬದಲಾವಣೆ
ಮಾಡಿಕೊಳ್ಳಬಹುದು.
-ಮುಂದಿನ 72 ಗಂಟೆಗಳ ಕಾಲ ವಿಶೇಷ ಅನುಕೂಲ
ಮಾಡಲಾಗಿದೆ. ಆಸ್ಪತ್ರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ,
ಪೆಟ್ರೋಲ್ ಬ್ಯಾಂಕ್ ಗಳಲ್ಲಿ 500 ಹಾಗೂ 1,000 ರುಪಾಯಿ
ನೋಟುಗಳನ್ನು ಸ್ವೀಕರಿಸಲಾಗುತ್ತದೆ.
-ನವೆಂಬರ್ 9ರಂದು ಬ್ಯಾಂಕ್ ಗಳು ಸಾರ್ವಜನಿಕ
ಸೇವೆಗೆ ಲಭ್ಯವಿರುವುದಿಲ್ಲ.
ನಿಮಗೆ ಗೊತ್ತಿರಬೇಕಾದ ಸಂಗತಿಗಳು
500 ಹಾಗೂ 1,000 ರುಪಾಯಿ ನೋಟುಗಳಿಗೆ ಎಲ್ಲಿಯವರೆಗೆ
ಬೆಲೆ ಇರುತ್ತದೆ?
ಈ ನೋಟುಗಳಿಗೆ ಡಿಸೆಂಬರ್ 30ರವರೆಗೆ ಬೆಲೆ ಇರುತ್ತದೆ.
ಅಲ್ಲಿಯವರೆಗೆ ಬ್ಯಾಂಕ್ ಗೆ ಡೆಪಾಸಿಟ್ ಮಾಡಬಹುದು.
ಎಷ್ಟು ಮೊತ್ತದ ಹಣವನ್ನು ನಗದು
ರೂಪದಲ್ಲಿ ಸದ್ಯಕ್ಕೆ ಪಡೆಯಬಹುದು?
4 ಸಾವಿರ ರುಪಾಯಿ ನಗದು ರೂಪದಲ್ಲಿ ಪಡೆಯಬಹುದು. ಮಿಕ್ಕ
ಹಣ ಬ್ಯಾಂಕ್ ಖಾತೆಗೆ ಜಮೆ ಮಾಡ್ತಾರೆ.
ನನ್ನ ಹತ್ತಿರ ಅಷ್ಟೊಂದು ನಗದು
ಇಲ್ಲ, ಏನು ಮಾಡೋದು?
ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್
ಕಾರ್ಡ್, ಚೆಕ್ ಬಳಸಬಹುದು.
ಬ್ಯಾಂಕ್ ಅಕೌಂಟ್ ಇಲ್ಲದ ಪಕ್ಷದಲ್ಲಿ ಏನು
ಮಾಡಬಹುದು?
ಒಂದು ಬ್ಯಾಂಕ್ ಖಾತೆ ತೆರೆಯಬೇಕು ಅಥವಾ ಹಣವನ್ನು
ಪೋಸ್ಟ್ ಆಫೀಸ್ ನಲ್ಲಿ, ಆರ್ ಬಿಐನಲ್ಲಿ. ವಾಣಿಜ್ಯ
ಬ್ಯಾಂಕ್ ಗಳಲ್ಲಿ, ಕೋ ಆಪರೇಟಿವ್ ಬ್ಯಾಂಕ್ ಗಳು
ಮತ್ತು ಇತರೆಡೆ ಖಾತೆ ತೆರೆಯಬಹುದು.
ನಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕಾ?
ನಾಲ್ಕು ಸಾವಿರದವರೆಗಿನ ನೋಟು ಬದಲಾವಣೆಗೆ ಯಾವುದೇ
ಬ್ಯಾಂಕ್ ಗೆ ಹೋಗಬಹುದು. ಅದಕ್ಕಿಂತ ಹೆಚ್ಚಿನ
ಮೊತ್ತವಾದರೆ ಈಗಾಗಲೇ ಖಾತೆ ಇರುವ ಬ್ಯಾಂಕ್
ಗೆ ಹೋಗಬೇಕು. ನಾಲ್ಕು ಸಾವಿರ ಮೇಲ್ಪಟ್ಟ
ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ.
ಒಂದು ವೇಳೆ ಬೇರೆ ಬ್ಯಾಂಕ್ ಗೆ ಹೋಗೋದಾದರೆ ಅಧಿಕೃತ
ಗುರುತಿನ ಚೀಟಿ ಹಾಗೂ ಬ್ಯಾಂಕ್ ಮಾಹಿತಿ
ನೀಡಿದರೆ ಹೆಚ್ಚಿನ ಹಣವನ್ನು ಖಾತೆಗೆ
ಹಾಕಲಾಗುತ್ತದೆ.
ನನ್ನ ಖಾತೆ ಇರುವ ಬ್ಯಾಂಕ್ ನ ಯಾವುದೇ ಶಾಖೆಗೆ
ಹೋಗಬಹುದಾ?
ಹೌದು, ಹೋಗಬಹುದು.
ನನ್ನ ಸ್ನೇಹಿತರು ಅಥವಾ ಸಂಬಂಧಿಕರು ಖಾತೆ
ಹೊಂದಿರುವ ಬ್ಯಾಂಕ್ ಗೆ ಹೋಗಬಹುದಾ?
ಹೋಗಬಹುದು. ಅವರು ಲಿಖಿತ ರೂಪದಲ್ಲಿ ಅನುಮತಿ
ನೀಡಬೇಕು. ಜತೆಗೆ ಗುರುತಿನ ಚೀಟಿ
ತೆಗೆದುಕೊಂಡು ಹೋಗಬೇಕು.
ನಾವೇ ವೈಯಕ್ತಿಕವಾಗಿ ಬ್ಯಾಂಕ್ ಗೆ ಹೋಗಬೇಕಾ?
ನೀವೇ ಹೋದರೆ ಇಡೀ ಪ್ರಕ್ರಿಯೆ ತುಂಬ
ಸಲೀಸು. ನಿಮ್ಮ ಪರವಾಗಿ ಯಾರನ್ನಾದರೂ ಕಳಿಸಿದರೆ
ಲಿಖಿತವಾಗಿ ಬರೆದು, ಅವರು ನಿಮ್ಮ ಪ್ರತಿನಿಧಿ ಅಂತ
ತಿಳಿಸಬೇಕು. ಅದರ ಜತೆಗೆ ಅವರ ಅಧಿಕೃತ ಗುರುತಿನ
ಚೀಟಿಯನ್ನೂ ಜತೆಗೆ ತೆಗೆದುಕೊಂಡು
ಹೋಗಬೇಕು.
ಗುರುತಿನ ಚೀಟಿ ಅನ್ನೋ ಹಾಗೆ ಯಾವ
ದಾಖಲೆಗಳನ್ನು ನೀಡಬಹುದು?
ಆಧಾರ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ
ಚೀಟಿ, ಪಾಸ್ ಪೋರ್ಟ್, ನರೇಗಾ ಕಾರ್ಡ್, ಪಾನ್ ಕಾರ್ಡ್,
ಸರಕಾರದ ಯಾವುದೇ ಇಲಾಖೆ ವಿತರಿಸಿದ ಗುರುತಿನ
ಚೀಟಿ, ಸಾರ್ವಜನಿಕ ಉದ್ದಿಮೆಗಳು ತಮ್ಮ
ನೌಕರರಿಗೆ ನೀಡಿದ ಗುರುತಿನ ಚೀಟಿ.
ಎಟಿಎಂನಲ್ಲಿ ಹಣ ಡಿಪಾಸಿಟ್ ಮಾಡಬಹುದಾ?
ಹೌದು ಮಾಡಬಹುದು. ಆದರೆ ನವೆಂಬರ್ 9ರಂದು
ಎಟಿಎಂ ಬಂದ್ ಆಗಿರುತ್ತವೆ.
ಎಟಿಎಂನಿಂದ ಎಷ್ಟು ಹಣ ವಿಥ್ ಡ್ರಾ
ಮಾಡಬಹುದು?
ನವೆಂಬರ್ 18ರವರೆಗೆ ಎರಡು ಸಾವಿರ ರುಪಾಯಿ, ಆ
ನಂತರ ಅದನ್ನು 4 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಹಣ ಡ್ರಾ ಮಾಡುವುದಕ್ಕೆ ಚೆಕ್ ಬಳಸಬಹುದಾ?
ಹೌದು ಚೆಕ್ ಬಳಸಬಹುದು. ಆದರೆ ಚೆಕ್ ಅಥವಾ ವಿಥ್ ಡ್ರಾ
ಸ್ಲಿಪ್ ಬಳಸಿ ದಿನಕ್ಕೆ ಹತ್ತು ಸಾವಿರ ಮಾತ್ರ ಡ್ರಾ ಮಾಡಲು
ಸಾಧ್ಯ. ಒಂದು ವಾರಕ್ಕೆ ಗರಿಷ್ಠ ಅಂದರೆ
ಎಟಿಎಂನ ವ್ಯವಹಾರವೂ ಸೇರಿ ಇಪ್ಪತ್ತು ಸಾವಿರ ಮಿತಿ
ನಿಗದಿಯಾಗಿದೆ. ಇದು ನವೆಂಬರ್ 24ರವರೆಗೆ ಈ
ರೀತಿ ಇರುತ್ತದೆ.
ನಾನು ದೇಶದಿಂದ ಹೊರಗೆ ಇದ್ದರೆ ಏನು
ಮಾಡೋದು?
ನಿಮ್ಮ ಪರವಾಗಿ ಯಾರಿಗಾದರೂ ನೋಟು ಡಿಪಾಸಿಟ್ ಮಾಡುವಂತೆ
ಹೇಳಬಹುದು. ಅದಕ್ಕಿರುವ ನಿಯಮ ಪಾಲಿಸಬೇಕು ಅಷ್ಟೇ.
ನಾನು ಅನಿವಾಸಿ ಭಾರತೀಯ, ಏನು ಮಾಡೋದು?
ಎನ್ ಆರ್ ಒ ಖಾತೆಯಲ್ಲಿ ಹಣ ಜಮೆ ಮಾಡಬಹುದು.
ನಾನು ವಿದೇಶಿ ಪ್ರವಾಸಿ, ಏನು ಮಾಡಬಹುದು?
72 ಗಂಟೆಯೊಳಗಾಗಿ ಐದು ಸಾವಿರ
ಮೊತ್ತಕ್ಕೆ ಸಮನಾದ ವಿದೇಶಿ ಕರೆನ್ಸಿ
ಪಡೆಯಬಹುದು. ಅದಕ್ಕೆ ಗುರುತಿನ ಚೀಟಿ
ತೋರಿಸಬೇಕಾಗುತ್ತದೆ.
ನಮಗೆ ಸಮಸ್ಯೆ ಎದುರಾದರೆ ಏನು ಮಾಡಬಹುದು?
www.rbi.org.in ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ನಿಮ್ಮ
ದೂರುಗಳನ್ನು publicquery@rbi.orgಗೆ ಮೇಲ್ ಮಾಡಬಹುದು.
ಅಥವಾ 022-22602201/02222602944
ಸಂಪರ್ಕಿಸಬಹುದು.

Tuesday, November 08, 2016

ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!

'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು
'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ.
ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ
ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ
ಬಾರಿಸುತ್ತಿದೆ. ಆಗಿದ್ದು ಆಗಿ ಹೋಯಿತು ಎಂದು
ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ
ವರೆಸಿಕೊಳ್ಳುವ ದುರಂತ ಇದಲ್ಲ. ಈ
ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು,
ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are
Twenty, Problems are Plenty ಎಂಬುದನ್ನು
ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ  ಸುಮಾರು 20 ಅಂಶಗಳನ್ನು
ಚಲನಚಿತ್ರರಂಗದ ಪಾದಾರವಿಂದಗಳಲ್ಲಿ
ಅರ್ಪಿಸುತ್ತಿದ್ದಾರೆ.

ಓದಿ

1: ತಿಪ್ಪಗೊಂಡನಹಳ್ಳಿ ಜಲಾಶಯದ ನಿಷೇಧಿತ
ಪ್ರದೇಶಗಳಲ್ಲಿ ಚಿತ್ರೀಕರಿಸಬಾರದು ಅಂತ
ಜಲಮಂಡಳಿ ಷರತ್ತು ವಿಧಿಸಿದ್ದರೂ,
ಉಲ್ಲಂಘಿಸಿದ್ದು ಯಾಕೆ?

2: ನೀರಿನಲ್ಲಿ ಚಿತ್ರೀಕರಣ ಮಾಡಬಾರದು
ಅಂತ ಹೇಳಿದ್ದರೂ, ಆ ಕೆಲಸ ಮಾಡಲು ಅಂಥ
ಕಾರಣವೇನಿತ್ತು?

3: ಭಾರತೀಯ ಚಿತ್ರರಂಗದ ಖ್ಯಾತ ಸಾಹಸ
ನಿರ್ದೇಶಕ ಅಂತ್ಹೇಳಿಕೊಳ್ಳುವ ರವಿವರ್ಮ
ರವರಿಗೆ 'ನೀರಿನ ಸ್ಟಂಟ್' ಮತ್ತು
ಅದರಿಂದ ಆಗಬಹುದಾದ ಅಪಾಯದ ಅರಿವಿರಲಿಲ್ಲವೇ?

4: ಈಜು ಬಾರದೇ ಇರುವವರನ್ನು 100ಕ್ಕೂ ಹೆಚ್ಚು ಅಡಿ
ಎತ್ತರದಿಂದ ಧುಮುಕಿಸಿದ್ದು ಎಷ್ಟು ಸರಿ?

5: ಮೊದಲು 30-40 ಅಡಿ ಅಂತ ಕಲಾವಿದರಿಗೆ
ಹೇಳಿ, ಸ್ಪಾಟ್ ಗೆ ಬಂದ ಮೇಲೆ 100 ಅಡಿ ಎತ್ತರ
ಎಂದು ಅನಿಲ್ ಹಾಗೂ ಉದಯ್ ಗೆ ಶಾಕ್
ಕೊಟ್ಟಿದ್ದು ಯಾಕೆ?

6: ಡ್ಯೂಪ್ ಬಳಕೆ ಮಾಡಲಿಲ್ಲ. ಕಾರಣ ಏನು.?

7: ಜ್ವರ ಅಂತ ಉದಯ್ ಹೇಳಿದ್ದರೂ, ಪರ್ಯಾಯ
ವ್ಯವಸ್ಥೆ ಏಕೆ ಮಾಡಲಿಲ್ಲ?

8: ಮೊದಲು ಡ್ಯೂಪ್ ಅಂತ ಹೇಳಿ, ನಂತರ
'ನೀವೇ ಮಾಡಬೇಕು' ಅಂತ ಅನಿಲ್ ಹಾಗೂ ಉದಯ್
ಗೆ ಬಲವಂತ ಮಾಡಿದ್ದರ ಹಿಂದಿನ ಉದ್ದೇಶ?

9: ಹೆಲಿಕಾಫ್ಟರ್ ನಿಂದ ಜಿಗಿಯುವಂತೆ ಅನಿಲ್ ಹಾಗೂ
ಉದಯ್ ಮೇಲೆ ಒತ್ತಡ ಹೇರಿದ್ದು ಯಾಕೆ?

10: ಹೆಲಿಕಾಫ್ಟರ್ ನಿಂದ ಖಳನಟರು ಹಾರಬೇಕಾದಾಗ ರೋಪ್
(ಹಗ್ಗ) ಬಳಕೆ ಮಾಡಲಿಲ್ಲ. ಇದು ಸರಿಯೇ?

11: ನೀರಿಗೆ ಹಾರಲಿದ್ದಾರೆ ಅಂತ
ಗೊತ್ತಿದ್ದರೂ, ಲೈಫ್ ಜಾಕೆಟ್
ತೊಡಿಸಲಿಲ್ಲ. ನಿಮಗೆ ಜವಾಬ್ದಾರಿ ಇಲ್ಲವೇ.?

12: ಖಳನಟರಿಗೆ ನೀವು ಯಾವುದೇ ರೀತಿಯ
ಟ್ರೈನಿಂಗ್ ಕೊಟ್ಟಿರಲಿಲ್ಲವೇಕೆ.?

13: ಹೆಲಿಕಾಪ್ಟರ್ ನಿಂದ ಹಾರುವ ಜಾಗದ ಕಡೆ ಮೋಟರ್ ಬೋಟ್
ಇರಿಸದೆ ದಡದಲ್ಲಿ ಇರಿಸುವ ಪ್ಲಾನ್ ಕೊಟ್ಟವರು
ಯಾರು?

14: ಸ್ಪೀಡ್ ಬೋಟ್ ಅವಶ್ಯಕವಾಗಿತ್ತು. ಆದರೂ
ಅದನ್ನ ಇಟ್ಟುಕೊಂಡಿರಲಿಲ್ಲ. ಯಾಕೆ?

15: ಇಂತಹ ದುಸ್ಸಾಹಸಕ್ಕೆ ಕೈಹಾಕುವ ಬದಲು ಗ್ರಾಫಿಕ್ಸ್
ಮೂಲಕ ಕೆಲಸ ಮುಗಿಸಬಹುದಿತ್ತಲ್ಲವೇ?

16: ಚಿತ್ರೀಕರಣ ನಡೆಯುವಾಗ ಯಾವುದೇ ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳದೇ ಇರುವುದು ನಿಮ್ಮ
ಮೂರ್ಖತನ ಎಂದು ಭಾವಿಸಬಹುದೇ?

17: ದುನಿಯಾ ವಿಜಯ್ ರವರನ್ನ ರಕ್ಷಿಸಿದ ನೀವು,
ಖಳನಟರ ಜೀವವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ
ಕಾರಣ?

18: ಉದಯೋನ್ಮುಖ ನಟರ ಜೀವ ನಿಮಗೆ ತೃಣ
ಸಮಾನವಾಯಿತೇ?

19: ತಿಪ್ಪಗೊಂಡನಹಳ್ಳಿ ಕೆರೆಯ ಸ್ಥಿತಿ-ಗತಿ
ಬಗ್ಗೆ ಅರಿವಿರಲಿಲ್ಲವೇ?

20: ಅನಿಲ್ ಮತ್ತು ಉದಯ್ ಸಾವಿಗೆ ಹೊಣೆ
ಯಾರು?