Wikipedia

Search results

Friday, June 30, 2017

ಜಿಯೋದಿಂದ ಮತ್ತೊಂದು ಹೊಸ ಸಾಹಸ

ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಏಷಿಯಾ, ಆಫ್ರಿಕಾ, ಯುರೋಪ್(ಎ.ಎ.ಇ. -1) ಹೆಸರಲ್ಲಿ ಹೊಸ ಯೋಜನೆ ಕೈಗೊಂಡಿದೆ.ಫ್ರಾನ್ಸ್ ನ ಮಾರ್ಸೇಲ್ಸ್ ನಿಂದ ಹಾಂಗ್ ಕಾಂಗ್ ವರೆಗೆ 100 ಜಿ.ಬಿ.ಪಿ.ಎಸ್. ನ ಹೊಸ ಸಮುದ್ರದಾಳದ(ಸಬ್ ಮರೈನ್) ಕೇಬಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದೆ.ಜಿಯೋ ಯುರೋಪ್, ಮಧ್ಯಪ್ರಾಚ್ಯ, ಏಷ್ಯಾದ ಹಲವು ಪ್ರಮುಖ ಟೆಲಿಕಾಂ ಕಂಪನಿಗಳೊಂದಿಗೆ ಈ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿದೆ.ಹೊಸ ಎ.ಎ.ಇ. -1 ವ್ಯವಸ್ಥೆ ಏಷ್ಯಾ -ಯುರೋಪ್ ಸೇವಾ ಸಂಸ್ಥೆಗಳು ಮತ್ತು ಬಳಕೆದಾರರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಲಿದೆ.ಇನ್ನು ರಿಲಯನ್ಸ್ ಜಿಯೋ ಹೊಸ ಟೆರಾಬೈಟ್ ಸಾಮರ್ಥ್ಯದ ಅತಿವೇಗದ ಅಂತರ್ಜಾಲ, ಡಿಜಿಟಲ್ ಸೇವೆಗಳನ್ನು ನೀಡಲಿದೆ.100 ಜಿ.ಬಿ.ಪಿ.ಎಸ್. ನೇರ ಸಂಪರ್ಕ ಜಾಲದ ಮೂಲಕ ಇದನ್ನು ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಲಿದೆ.ಜಾಗತಿಕ ಮಾರುಕಟ್ಟೆಗೆ ನೇರ ಪ್ರವೇಶವನ್ನು ಇದು ಒದಗಿಸಿಕೊಡುತ್ತದೆ. ಅಲ್ಲದೇ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅನೇಕ ದೇಶಗಳ ಸಂಪರ್ಕದ ಅಗತ್ಯವನ್ನು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ.

ಎಚ್ಚರಿಕೆ!! ಎಚ್ಚರಿಕೆ!!: ~* *ಶಿಕ್ಷೆ ನೀಡುವ ಎಚ್ಚರಿಕೆ ಕೊಟ್ಟ ಶಿಕ್ಷಣ ಇಲಾಖೆ.!!*

ಸಹಾಯಕ ಪ್ರೊಪೆಸರ್ ಹುದ್ದೆಗಳಿಗೆ ನೇಮಕ ಆದೇಶ ನೀಡುವಂತೆ ಪ್ರತಿಭಟನೆ ಮಾಡಿದರೆ ಕಾನೂನು ರೀತ್ಯ ಕ್ರಮ.!!!! -ಕಾಲೇಜು ಶಿಕ್ಷಣ ಇಲಾಖೆ*

30-6-2017

*ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರೊಫೆಸರ್‌ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ನೇಮಕ ಆದೇಶ ನೀಡುವಂತೆ ಒತ್ತಾಯಿಸಿ ಅನಾವಶ್ಯಕವಾಗಿ ಸರಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದಲ್ಲಿ ಕಾನೂನುರೀತ್ಯ ಕ್ರಮ ಜರುಗಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಡಾ. ಅಜಯ್‌ ನಾಗಭೂಷಣ್‌ ಎಚ್ಚರಿಕೆ ನೀಡಿದ್ದಾರೆ.*

*''ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರಕಾರಿ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಗತಿಯಲ್ಲಿದೆ. ಈಗಾಗಲೇ ಪರಿಶೀಲನೆ ನಡೆಸಿರುವ ದಾಖಲೆಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಬಾಕಿಯಿರುವ ದಾಖಲೆಗಳ ಪರಿಶೀಲನಾ ವರದಿಯನ್ನೂ ಕೂಡಲೇ ಸರಕಾರಕ್ಕೆ ಸಲ್ಲಿಸಲಾಗುವುದು,'' ಎಂದು ಅವರು ತಿಳಿಸಿದ್ದಾರೆ.*

*''ಈ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮಗೆ ನೇಮಕ ಆದೇಶ ನೀಡುವಂತೆ ಒತ್ತಾಯಿಸಿ ಅನಾವಶ್ಯಕವಾಗಿ ಸರಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡುವ ಪ್ರವೃತ್ತಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಈ ಪ್ರವೃತ್ತಿ ಮರುಕಳಿಸಿದಲ್ಲಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು,'' ಎಂದು ಎಚ್ಚರಿಕೆ ನೀಡಿದ್ದಾರೆ.*

*2,160 ಸಹಾಯಕ ಪ್ರೊಫೆಸರ್‌ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ನೇಮಕ ಆದೇಶ ಪತ್ರ ನೀಡುವಂತೆ ಆಗ್ರಹಿಸಿ ಬುಧವಾರ ಕಾಲೇಜು ಶಿಕ್ಷಣ ಇಲಾಖೆ ಬಳಿ ಪ್ರತಿಭಟನೆ ನಡೆಸಿ, ಅಂತಿಮ ಪಟ್ಟಿ ಪ್ರಕಟಿಸಲು ಜುಲೈ 4ರ ಗಡುವು ನೀಡಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಆದೇಶ ಹೊರಡಿಸಿದೆ.*