Wikipedia

Search results

Tuesday, June 28, 2016

A ನಿದು ಪ್ರಪಂಚದಲ್ಲಿ
B ಹೇವಿಯರ್ ಸರಿಯಿಲ್ಲ
C ರಿವಂತರಿಗೆ ಸೆನ್ಸ್ ಯಿಲ್ಲ
D ಗ್ರೀ ಮಾಡಿದರೂ ಪ್ರಯೋಜನವಿಲ್ಲ
E ngineering ಮಾಡೋನಾಂದ್ರೆ
F uture ಇಲ್ಲ
G ವನದಲ್ಲಿ ಜಿಗುಪ್ಸೆಯಾಗಿದೆ
H ಆಗಿರುವ ಜನಸಂಖ್ಯೆಯಲ್ಲಿ
I ಯೋ ಅನ್ನೋರಿಲ್ಲ
J ail ಗೆ ಹೋಗೋಣಾಂದ್ರೆ
K D ಗಳ ಸಾಮ್ರಾಜ್ಯ
L ಹೋದ್ರು ಬೇಜಾರು
M oney ಇಲ್ಲ ಅಂದ್ರೆ
N ನ್ನಂತವರಿಗೆ ಜಾಗವಿಲ್ಲ
O ಬ್ಬನೆ ಇರೋಣಂದ್ರೆ ಬೇಜಾರ್
P icture ಗೆ ಹೋಗಾಣಾಂದ್ರೆ
Q ನಲ್ಲಿ ನಿಲ್ಕಕ್ಕಾಗಲ್ಲ
R ಮಿಗೆ ಸೇರೋಣಾಂದ್ರೆ
S ಕೇಪ್ ಅಗೋಕಾಗಲ್ಲ
T V ನೋಡೋಣಾಂದ್ರೆ
U seless ಅಂತಾರೆ
V ಚಿತ್ರವಾದ
W orld ನಲ್ಲಿ
X ಪಿರಿಯೆನ್ಸಯಿಲ್ಲ
Y man?ಅನ್ನೊರಿಲ್ಲ
Z oo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ ...........?

ಅ ಮ್ಮನ ಮಡಿಲಿಂದ
ಆ ಎನ್ದು ಅಳುತ್ತಾ
ಇ ಲ್ಲಿಗೆ
ಈ ಸಬೇಕು
ಉ ಪಕಾರಿಯಾಗಿ
ಊ ರಿಗೆ
ಋ ಣಿಯಾಗಲು
ಎ ಷ್ಟೇ ಏಗಿದರೂ
ಐ ದಂಕಿ ಸಂಬಳಕ್ಕೆ
ಒ ಗ್ಗಟ್ಟಿನಿಂದ
ಓ ಟದ ಜೀವನದಲ್ಲಿ
ಔ ಡು ಗಚ್ಚಿ
ಅಂ ದದ ಬದುಕಿಕಾಗಿ
ಅಃ ಹರ್ನಿಶಿ
ಕ ಷ್ಟ ಪಟ್ಟು
ಖ ಗದಂತೆ ಹಾರಿ , ಮೃಗದಂತೆ
ಗ ಟ್ಟಿಯಾಗಿ
ಘ ರ್ಜಿಸಲು ಆಗದೆ
ಙ ಸ್ವರದಂತೆ ಏಕಾಂಗಿಯಾಗಿ
ಚ ಲಿಸಲು ಕಷ್ಟ ಪಡುತ್ತಾ
ಛ ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಜ ಗತ್ತಿನಲ್ಲಿ
ಝ ರಿಯಂತೆ
ಞ (ನ್ಯಾ)ಸಾಗುತ್ತಾ (ಚೌಕಟ್ಟು)
ಟ ಗರಿನ ಚರ್ಮದಂತೆ
ಠ ಕ್ಕತನಕ್ಕೆ ಒಳಗಾಗುತ್ತಾ
ಡ ಮರುಗದ ಶಬ್ಧಕ್ಕೆ
ಢ ವಡವ ಗುಡುತ್ತಾ ಹ
ಣ ಕ್ಕೆ ಣ ಕಾರ ಇಲ್ಲದೇ ಬರಿದೇ
ತ ತ್ತರಿಸುತ್ತಾ..
ಥ ರಥರನೆ ನಡುಗುತ್ತಾ..
ದ ನಕ್ಕಿಂತ ಕೀಳಾಗಿ
ಧ ನಕ್ಕೆ ಆಳಾಗಿ ಕಿರು
ನ ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ
ಪ ರಿಸರಕ್ಕೆ
ಫ ಲವಾಗದೇ (ಪೂರಕವಾಗದೇ)
ಬ ರಿದೇ
ಭಂಡ
ಮ ನುಷ್ಯನಾಗಿ
ಯ ಮನಿಗೆ ತನ್ನನ್ನು
ರ ಕ್ಷಿಸು ಎಂದು ಸಾವಿನ
ವ ರ ಬಯಸುತ್ತಾ ಕೊನೆಗೆ
ಶ ವವಾಗಲು
ಸ ಮಯ ಕಾಯುತ್ತಾ
ಹ ಗಲಿರು
ಳ ಲ್ಲೂ
ಕ್ಷ ಣ ಬದುಕಿ ಸಾಯುವ ನಮ್ಮ ಜೀವನ...ಅ ಯಿಂದ ಕ್ಷ ಅಷ್ಟೇ..

A ನಿದು ಪ್ರಪಂಚದಲ್ಲಿ
B ಹೇವಿಯರ್ ಸರಿಯಿಲ್ಲ
C ರಿವಂತರಿಗೆ ಸೆನ್ಸ್ ಯಿಲ್ಲ
D ಗ್ರೀ ಮಾಡಿದರೂ ಪ್ರಯೋಜನವಿಲ್ಲ
E ngineering ಮಾಡೋನಾಂದ್ರೆ
F uture ಇಲ್ಲ
G ವನದಲ್ಲಿ ಜಿಗುಪ್ಸೆಯಾಗಿದೆ
H ಆಗಿರುವ ಜನಸಂಖ್ಯೆಯಲ್ಲಿ
I ಯೋ ಅನ್ನೋರಿಲ್ಲ
J ail ಗೆ ಹೋಗೋಣಾಂದ್ರೆ
K D ಗಳ ಸಾಮ್ರಾಜ್ಯ
L ಹೋದ್ರು ಬೇಜಾರು
M oney ಇಲ್ಲ ಅಂದ್ರೆ
N ನ್ನಂತವರಿಗೆ ಜಾಗವಿಲ್ಲ
O ಬ್ಬನೆ ಇರೋಣಂದ್ರೆ ಬೇಜಾರ್
P icture ಗೆ ಹೋಗಾಣಾಂದ್ರೆ
Q ನಲ್ಲಿ ನಿಲ್ಕಕ್ಕಾಗಲ್ಲ
R ಮಿಗೆ ಸೇರೋಣಾಂದ್ರೆ
S ಕೇಪ್ ಅಗೋಕಾಗಲ್ಲ
T V ನೋಡೋಣಾಂದ್ರೆ
U seless ಅಂತಾರೆ
V ಚಿತ್ರವಾದ
W orld ನಲ್ಲಿ
X ಪಿರಿಯೆನ್ಸಯಿಲ್ಲ
Y man?ಅನ್ನೊರಿಲ್ಲ
Z oo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ ...........?

ಅ ಮ್ಮನ ಮಡಿಲಿಂದ
ಆ ಎನ್ದು ಅಳುತ್ತಾ
ಇ ಲ್ಲಿಗೆ
ಈ ಸಬೇಕು
ಉ ಪಕಾರಿಯಾಗಿ
ಊ ರಿಗೆ
ಋ ಣಿಯಾಗಲು
ಎ ಷ್ಟೇ ಏಗಿದರೂ
ಐ ದಂಕಿ ಸಂಬಳಕ್ಕೆ
ಒ ಗ್ಗಟ್ಟಿನಿಂದ
ಓ ಟದ ಜೀವನದಲ್ಲಿ
ಔ ಡು ಗಚ್ಚಿ
ಅಂ ದದ ಬದುಕಿಕಾಗಿ
ಅಃ ಹರ್ನಿಶಿ
ಕ ಷ್ಟ ಪಟ್ಟು
ಖ ಗದಂತೆ ಹಾರಿ , ಮೃಗದಂತೆ
ಗ ಟ್ಟಿಯಾಗಿ
ಘ ರ್ಜಿಸಲು ಆಗದೆ
ಙ ಸ್ವರದಂತೆ ಏಕಾಂಗಿಯಾಗಿ
ಚ ಲಿಸಲು ಕಷ್ಟ ಪಡುತ್ತಾ
ಛ ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಜ ಗತ್ತಿನಲ್ಲಿ
ಝ ರಿಯಂತೆ
ಞ (ನ್ಯಾ)ಸಾಗುತ್ತಾ (ಚೌಕಟ್ಟು)
ಟ ಗರಿನ ಚರ್ಮದಂತೆ
ಠ ಕ್ಕತನಕ್ಕೆ ಒಳಗಾಗುತ್ತಾ
ಡ ಮರುಗದ ಶಬ್ಧಕ್ಕೆ
ಢ ವಡವ ಗುಡುತ್ತಾ ಹ
ಣ ಕ್ಕೆ ಣ ಕಾರ ಇಲ್ಲದೇ ಬರಿದೇ
ತ ತ್ತರಿಸುತ್ತಾ..
ಥ ರಥರನೆ ನಡುಗುತ್ತಾ..
ದ ನಕ್ಕಿಂತ ಕೀಳಾಗಿ
ಧ ನಕ್ಕೆ ಆಳಾಗಿ ಕಿರು
ನ ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ
ಪ ರಿಸರಕ್ಕೆ
ಫ ಲವಾಗದೇ (ಪೂರಕವಾಗದೇ)
ಬ ರಿದೇ
ಭಂಡ
ಮ ನುಷ್ಯನಾಗಿ
ಯ ಮನಿಗೆ ತನ್ನನ್ನು
ರ ಕ್ಷಿಸು ಎಂದು ಸಾವಿನ
ವ ರ ಬಯಸುತ್ತಾ ಕೊನೆಗೆ
ಶ ವವಾಗಲು
ಸ ಮಯ ಕಾಯುತ್ತಾ
ಹ ಗಲಿರು
ಳ ಲ್ಲೂ
ಕ್ಷ ಣ ಬದುಕಿ ಸಾಯುವ ನಮ್ಮ ಜೀವನ...ಅ ಯಿಂದ ಕ್ಷ ಅಷ್ಟೇ..

ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯುವಂತಿಲ್ಲ

ಬೆಂಗಳೂರು, ಜೂ.28: ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಖಾಸಗಿ ಶಾಲೆಗಳು 'ತಾವು ಡೊನೇಶನ್ ತೆಗೆದುಕೊಳ್ಳುವುದಿಲ್ಲ' ಎಂದು ಬೋರ್ಡ್ ಹಾಕಬೇಕು ಹಾಗೂ ನಿಯಮದ ಪ್ರಕಾರ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯ ಒಟ್ಟು ಸಂಬಳದ ಖರ್ಚು ಹಾಗೂ 30% ಹೆಚ್ಚುವರಿ ವೆಚ್ಚವನ್ನು ಒಟ್ಟು ಮಕ್ಕಳ ಸಂಖ್ಯೆಯಿಂದ ಭಾಗಿಸಿ ಬರುವಷ್ಟು ಮೊತ್ತದ ಶುಲ್ಕವನ್ನು ಮಾತ್ರ ಪಡೆಯಬೇಕು. ಹಾಗೂ ಅದನ್ನು ಶಾಲೆಯ ನೋಟಿಸ್ ಬೋರ್ಡ್ನಲ್ಲೂ ಹಾಕಬೇಕು ಎಂದು ನ್ಯಾ.ಅರವಿಂದ್ ಕುಮಾರ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಪ್ರತಿ ವರ್ಷದ ಜನವರಿ 15 ರೊಳಗೆ ಎಲ್ಲ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪ್ರತಿ ಕೋರ್ಸಿನ ಶುಲ್ಕ ವಿವರವನ್ನು ಡಿಡಿಪಿಐಗೆ ಸಲ್ಲಿಸಬೇಕು.
ಇದೇ ಅವಧಿಯೊಳಗೆ ಶುಲ್ಕ ವಿವರಗಳನ್ನು ತಮ್ಮ ಸಂಸ್ಥೆಯ ನೋಟಿಸ್ ಬೋರ್ಡ್ನಲ್ಲೂ ಹಾಕಬೇಕು. ಈ ಶುಲ್ಕ ಅಲ್ಲದೆ ಬೇರೆ ಯಾವುದೇ ರೀತಿಯ ಡೊನೇಶನ್ ಪಡೆಯುವುದಿಲ್ಲ ಎಂದು ಎದ್ದು ಕಾಣುವಂತೆ ಶಾಲೆಯಲ್ಲಿ ಬೋರ್ಡ್ ಹಾಕಬೇಕು. ಪ್ರತಿ ವರ್ಷ ಫೆಬ್ರವರಿ 15 ರೊಳಗೆ ಶಾಲೆಯ ಎಲ್ಲ ಸಿಬ್ಬಂದಿಯ ವೇತನ ವಿವರ, ಒಟ್ಟು ವಿದ್ಯಾರ್ಥಿಗಳ ವಿವರ ಹಾಗೂ ಅನುಮತಿ ನೀಡಲಾಗಿರುವ ವಿದ್ಯಾರ್ಥಿಗಳ ಪ್ರಮಾಣದ ಕುರಿತು ಡಿಡಿಪಿಐಗೆ ವಿವರ ಸಲ್ಲಿಸಬೇಕು. ಪ್ರತಿ ವರ್ಷ ಮಾರ್ಚ್ 30 ರೊಳಗೆ ತಮ್ಮ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿವರ ಸಲ್ಲಿಸಬೇಕು.
ಶಾಲೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಶುಲ್ಕ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಬಂದರೆ ಅದನ್ನು ಒಂದು ವಾರದೊಳಗೆ ಇತ್ಯರ್ಥ ಮಾಡಬೇಕು ಎಂದು ನ್ಯಾ. ಅರವಿಂದ್ ಕುಮಾರ್ ಅವರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

🔷ಪಿ.ಡಿ.ಓ ನೂತನ ಪಠ್ಯಕ್ರಮ 🔷
 
🖌ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಪಿ.ಡಿ.ಓ (ಪಂಚಾಯತಿ ಅಭಿವೃದ್ಧಿ ಅಧಿಕಾರಿ), ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ - 1 ಹುದ್ದೆಗಳ ಭರ್ತಿ ಆದಷ್ಟು ಬೇಗನೇ ಆಗಲಿದೆ. ಈ ಸಂಬಂಧ ಕೆಲವೇ ದಿನಗಳಲ್ಲಿ ಅಧಿಸೂಚನೆಯನ್ನು ಸರಕಾರ ಹೊರಡಿಸಲಿದೆ. ಸ್ಪರ್ಧಾರ್ಥಿಗಳು ಮುಂದಿನ ಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆ ತಯಾರಿಯನ್ನು ನಡೆಸಬಹುದು.

 

🔷ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) :-
ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 20,000 - 36,300 ರೂ
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.
 

ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತಿ ಸಹಾಯಕರು ಗ್ರೇಡ್ - 1 ಹುದ್ದೆಗಳಿಗೆ
ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 14,550 - 26,700 ರೂ.
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.
 

 

🔷 ಪರೀಕ್ಷೆಯ ಪಠ್ಯಕ್ರಮ :-
1. ಪತ್ರಿಕೆ - 1.

ಸಾಮಾನ್ಯ ತಿಳುವಳಿಕೆ  

ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗು - ಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಮಾತು ಸಾಮಾನ್ಯ ಮನೋಸಾಮರ್ಥ್ಯ.

🔷2. ಪತ್ರಿಕೆ - 2.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿರ್ಧೀಷ್ಟ ಪತ್ರಿಕೆ.

ಕರ್ನಾಟಕ, ಭಾರತದ ಗ್ರಾಮಗಳ ಜನರ ಸ್ಥಿತಿ - ಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್ಯ.
 
🔷 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಹಾಯಕ ಗ್ರೇಡ್ - 1 ಆಯ್ಕೆಗೋಸ್ಕರ ಪರೀಕ್ಷೆಯು ವಿವಿಧ ಆಯ್ಕೆಗಳ ಮಾದರಿ (ಬಹುಅಂಶ ಆಯ್ಕೆ) ಗಳನ್ವಯ ಪ್ರಶ್ನೆ ಪತ್ರಿಕೆ ಇರುತ್ತದೆ. 200 ಅಂಕಗಳನ್ನೊಳಗೊಂಡ ಎರಡು ಬರಹ ರೂಪದ ಪ್ರಶ್ನೆಗಳಿರುತ್ತವೆ. (ಗೆಜೆಟ್ ನಲ್ಲಿ ಇದೇ ರೀತಿ ಪ್ರಕಟಿಸಿರುತ್ತಾರೆ. ಅಂದರೆ ಈ ಪರೀಕ್ಷೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು)

 

🔷ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಅಭ್ಯರ್ಥಿಯು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ  ಉತ್ತರಿಸಬೇಕಾಗುತ್ತದೆ.

 

🔷ನೇಮಕಾತಿ ಅರ್ಜಿಗಳು :- ಯಾವುದೇ ಹುದ್ದೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸುವುದಾದಲ್ಲಿ ಅಂತಹ ಅರ್ಜಿಯಲ್ಲಿ ಜಿಲ್ಲೆಗಳ ಪೈಕಿ ಅವನು ಆಯ್ಕೆಯ ಒಂದು ಜಿಲ್ಲೆಯನ್ನು ನಮೂದಿಸಿರಬೇಕು. ಆಯ್ಕೆಯು ಆ ಜಿಲ್ಲೆಗೆ ಸೀಮಿತವಾಗಿರುತ್ತದೆ.