Wikipedia

Search results

Wednesday, November 09, 2016

ಹಳೇ 500, 1,000 ರುಪಾಯಿ ನೋಟು ಏನು ಮಾಡೋದು:

500 ಹಾಗೂ 1,000 ರುಪಾಯಿ
ನೋಟುಗಳ ಬಳಕೆ ಅಧಿಕೃತವಾಗಿ ನಿಂತಿದ್ದು, ಇನ್ನೇನಿದ್ದರೂ
500, 2000 ರುಪಾಯಿ ನೋಟು ಸದ್ಯದಲ್ಲೇ ಚಾಲನೆಗೆ
ಬರಲಿದೆ. ನಕಲಿ ನೋಟುಗಳನ್ನು ದೇಶದೊಳಗೆ
ಚಲಾವಣೆ ಆಗುವಂತೆ ಮಾಡಿದ್ದ ಪಾಕಿಸ್ತಾನದ
ಕುತಂತ್ರಕ್ಕೆ ಇದು ಬಲವಾದ ಹೊಡೆತ.
ಈ ನೋಟು ಚಲಾವಣೆ ಹಿನ್ನೆಲೆಯಲ್ಲಿ ಕೆಲ
ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ. ಅದರ
ಜತೆಗೆ ಕೆಲವು ಸಹಜವಾದ ಪ್ರಶ್ನೆಗಳಿಗೆ ಉತ್ತರ ಕೂಡ
ನೀಡಲಾಗಿದೆ.

-ನವೆಂಬರ್ 8ರ ಮಧ್ಯರಾತ್ರಿಯಿಂದ 500 ಹಾಗೂ
1,000 ರುಪಾಯಿ ನೋಟುಗಳ ಅಧಿಕೃತವಾಗಿ ಮೌಲ್ಯವನ್ನು
ಕಳೆದುಕೊಳ್ಳುತ್ತದೆ.
-ಈಗ ಇರುವ 500 ಹಾಗೂ 1,000 ರುಪಾಯಿ ನೋಟುಗಳನ್ನು
ನವೆಂಬರ್ 10 ಹಾಗೂ ಡಿಸೆಂಬರ್ 30ರ ಮಧ್ಯೆ
ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ
ಬದಲಿಸಿಕೊಳ್ಳಬಹುದು.
-ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಹೊಸದಾದ 500 ಹಾಗೂ 2000 ರುಪಾಯಿ ನೋಟು
ವಿತರಿಸುತ್ತದೆ.
-ನಿಗದಿತ ದಿನಾಂಕದೊಳಗೆ ಹಳೆಯ ನೋಟುಗಳನ್ನು
ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಘೋಷಣಾ ಪತ್ರ
ನೀಡಿ, ಆ ನಂತರ ಬದಲಾವಣೆ
ಮಾಡಿಕೊಳ್ಳಬಹುದು.
-ಮುಂದಿನ 72 ಗಂಟೆಗಳ ಕಾಲ ವಿಶೇಷ ಅನುಕೂಲ
ಮಾಡಲಾಗಿದೆ. ಆಸ್ಪತ್ರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ,
ಪೆಟ್ರೋಲ್ ಬ್ಯಾಂಕ್ ಗಳಲ್ಲಿ 500 ಹಾಗೂ 1,000 ರುಪಾಯಿ
ನೋಟುಗಳನ್ನು ಸ್ವೀಕರಿಸಲಾಗುತ್ತದೆ.
-ನವೆಂಬರ್ 9ರಂದು ಬ್ಯಾಂಕ್ ಗಳು ಸಾರ್ವಜನಿಕ
ಸೇವೆಗೆ ಲಭ್ಯವಿರುವುದಿಲ್ಲ.
ನಿಮಗೆ ಗೊತ್ತಿರಬೇಕಾದ ಸಂಗತಿಗಳು
500 ಹಾಗೂ 1,000 ರುಪಾಯಿ ನೋಟುಗಳಿಗೆ ಎಲ್ಲಿಯವರೆಗೆ
ಬೆಲೆ ಇರುತ್ತದೆ?
ಈ ನೋಟುಗಳಿಗೆ ಡಿಸೆಂಬರ್ 30ರವರೆಗೆ ಬೆಲೆ ಇರುತ್ತದೆ.
ಅಲ್ಲಿಯವರೆಗೆ ಬ್ಯಾಂಕ್ ಗೆ ಡೆಪಾಸಿಟ್ ಮಾಡಬಹುದು.
ಎಷ್ಟು ಮೊತ್ತದ ಹಣವನ್ನು ನಗದು
ರೂಪದಲ್ಲಿ ಸದ್ಯಕ್ಕೆ ಪಡೆಯಬಹುದು?
4 ಸಾವಿರ ರುಪಾಯಿ ನಗದು ರೂಪದಲ್ಲಿ ಪಡೆಯಬಹುದು. ಮಿಕ್ಕ
ಹಣ ಬ್ಯಾಂಕ್ ಖಾತೆಗೆ ಜಮೆ ಮಾಡ್ತಾರೆ.
ನನ್ನ ಹತ್ತಿರ ಅಷ್ಟೊಂದು ನಗದು
ಇಲ್ಲ, ಏನು ಮಾಡೋದು?
ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್
ಕಾರ್ಡ್, ಚೆಕ್ ಬಳಸಬಹುದು.
ಬ್ಯಾಂಕ್ ಅಕೌಂಟ್ ಇಲ್ಲದ ಪಕ್ಷದಲ್ಲಿ ಏನು
ಮಾಡಬಹುದು?
ಒಂದು ಬ್ಯಾಂಕ್ ಖಾತೆ ತೆರೆಯಬೇಕು ಅಥವಾ ಹಣವನ್ನು
ಪೋಸ್ಟ್ ಆಫೀಸ್ ನಲ್ಲಿ, ಆರ್ ಬಿಐನಲ್ಲಿ. ವಾಣಿಜ್ಯ
ಬ್ಯಾಂಕ್ ಗಳಲ್ಲಿ, ಕೋ ಆಪರೇಟಿವ್ ಬ್ಯಾಂಕ್ ಗಳು
ಮತ್ತು ಇತರೆಡೆ ಖಾತೆ ತೆರೆಯಬಹುದು.
ನಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕಾ?
ನಾಲ್ಕು ಸಾವಿರದವರೆಗಿನ ನೋಟು ಬದಲಾವಣೆಗೆ ಯಾವುದೇ
ಬ್ಯಾಂಕ್ ಗೆ ಹೋಗಬಹುದು. ಅದಕ್ಕಿಂತ ಹೆಚ್ಚಿನ
ಮೊತ್ತವಾದರೆ ಈಗಾಗಲೇ ಖಾತೆ ಇರುವ ಬ್ಯಾಂಕ್
ಗೆ ಹೋಗಬೇಕು. ನಾಲ್ಕು ಸಾವಿರ ಮೇಲ್ಪಟ್ಟ
ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ.
ಒಂದು ವೇಳೆ ಬೇರೆ ಬ್ಯಾಂಕ್ ಗೆ ಹೋಗೋದಾದರೆ ಅಧಿಕೃತ
ಗುರುತಿನ ಚೀಟಿ ಹಾಗೂ ಬ್ಯಾಂಕ್ ಮಾಹಿತಿ
ನೀಡಿದರೆ ಹೆಚ್ಚಿನ ಹಣವನ್ನು ಖಾತೆಗೆ
ಹಾಕಲಾಗುತ್ತದೆ.
ನನ್ನ ಖಾತೆ ಇರುವ ಬ್ಯಾಂಕ್ ನ ಯಾವುದೇ ಶಾಖೆಗೆ
ಹೋಗಬಹುದಾ?
ಹೌದು, ಹೋಗಬಹುದು.
ನನ್ನ ಸ್ನೇಹಿತರು ಅಥವಾ ಸಂಬಂಧಿಕರು ಖಾತೆ
ಹೊಂದಿರುವ ಬ್ಯಾಂಕ್ ಗೆ ಹೋಗಬಹುದಾ?
ಹೋಗಬಹುದು. ಅವರು ಲಿಖಿತ ರೂಪದಲ್ಲಿ ಅನುಮತಿ
ನೀಡಬೇಕು. ಜತೆಗೆ ಗುರುತಿನ ಚೀಟಿ
ತೆಗೆದುಕೊಂಡು ಹೋಗಬೇಕು.
ನಾವೇ ವೈಯಕ್ತಿಕವಾಗಿ ಬ್ಯಾಂಕ್ ಗೆ ಹೋಗಬೇಕಾ?
ನೀವೇ ಹೋದರೆ ಇಡೀ ಪ್ರಕ್ರಿಯೆ ತುಂಬ
ಸಲೀಸು. ನಿಮ್ಮ ಪರವಾಗಿ ಯಾರನ್ನಾದರೂ ಕಳಿಸಿದರೆ
ಲಿಖಿತವಾಗಿ ಬರೆದು, ಅವರು ನಿಮ್ಮ ಪ್ರತಿನಿಧಿ ಅಂತ
ತಿಳಿಸಬೇಕು. ಅದರ ಜತೆಗೆ ಅವರ ಅಧಿಕೃತ ಗುರುತಿನ
ಚೀಟಿಯನ್ನೂ ಜತೆಗೆ ತೆಗೆದುಕೊಂಡು
ಹೋಗಬೇಕು.
ಗುರುತಿನ ಚೀಟಿ ಅನ್ನೋ ಹಾಗೆ ಯಾವ
ದಾಖಲೆಗಳನ್ನು ನೀಡಬಹುದು?
ಆಧಾರ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ
ಚೀಟಿ, ಪಾಸ್ ಪೋರ್ಟ್, ನರೇಗಾ ಕಾರ್ಡ್, ಪಾನ್ ಕಾರ್ಡ್,
ಸರಕಾರದ ಯಾವುದೇ ಇಲಾಖೆ ವಿತರಿಸಿದ ಗುರುತಿನ
ಚೀಟಿ, ಸಾರ್ವಜನಿಕ ಉದ್ದಿಮೆಗಳು ತಮ್ಮ
ನೌಕರರಿಗೆ ನೀಡಿದ ಗುರುತಿನ ಚೀಟಿ.
ಎಟಿಎಂನಲ್ಲಿ ಹಣ ಡಿಪಾಸಿಟ್ ಮಾಡಬಹುದಾ?
ಹೌದು ಮಾಡಬಹುದು. ಆದರೆ ನವೆಂಬರ್ 9ರಂದು
ಎಟಿಎಂ ಬಂದ್ ಆಗಿರುತ್ತವೆ.
ಎಟಿಎಂನಿಂದ ಎಷ್ಟು ಹಣ ವಿಥ್ ಡ್ರಾ
ಮಾಡಬಹುದು?
ನವೆಂಬರ್ 18ರವರೆಗೆ ಎರಡು ಸಾವಿರ ರುಪಾಯಿ, ಆ
ನಂತರ ಅದನ್ನು 4 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಹಣ ಡ್ರಾ ಮಾಡುವುದಕ್ಕೆ ಚೆಕ್ ಬಳಸಬಹುದಾ?
ಹೌದು ಚೆಕ್ ಬಳಸಬಹುದು. ಆದರೆ ಚೆಕ್ ಅಥವಾ ವಿಥ್ ಡ್ರಾ
ಸ್ಲಿಪ್ ಬಳಸಿ ದಿನಕ್ಕೆ ಹತ್ತು ಸಾವಿರ ಮಾತ್ರ ಡ್ರಾ ಮಾಡಲು
ಸಾಧ್ಯ. ಒಂದು ವಾರಕ್ಕೆ ಗರಿಷ್ಠ ಅಂದರೆ
ಎಟಿಎಂನ ವ್ಯವಹಾರವೂ ಸೇರಿ ಇಪ್ಪತ್ತು ಸಾವಿರ ಮಿತಿ
ನಿಗದಿಯಾಗಿದೆ. ಇದು ನವೆಂಬರ್ 24ರವರೆಗೆ ಈ
ರೀತಿ ಇರುತ್ತದೆ.
ನಾನು ದೇಶದಿಂದ ಹೊರಗೆ ಇದ್ದರೆ ಏನು
ಮಾಡೋದು?
ನಿಮ್ಮ ಪರವಾಗಿ ಯಾರಿಗಾದರೂ ನೋಟು ಡಿಪಾಸಿಟ್ ಮಾಡುವಂತೆ
ಹೇಳಬಹುದು. ಅದಕ್ಕಿರುವ ನಿಯಮ ಪಾಲಿಸಬೇಕು ಅಷ್ಟೇ.
ನಾನು ಅನಿವಾಸಿ ಭಾರತೀಯ, ಏನು ಮಾಡೋದು?
ಎನ್ ಆರ್ ಒ ಖಾತೆಯಲ್ಲಿ ಹಣ ಜಮೆ ಮಾಡಬಹುದು.
ನಾನು ವಿದೇಶಿ ಪ್ರವಾಸಿ, ಏನು ಮಾಡಬಹುದು?
72 ಗಂಟೆಯೊಳಗಾಗಿ ಐದು ಸಾವಿರ
ಮೊತ್ತಕ್ಕೆ ಸಮನಾದ ವಿದೇಶಿ ಕರೆನ್ಸಿ
ಪಡೆಯಬಹುದು. ಅದಕ್ಕೆ ಗುರುತಿನ ಚೀಟಿ
ತೋರಿಸಬೇಕಾಗುತ್ತದೆ.
ನಮಗೆ ಸಮಸ್ಯೆ ಎದುರಾದರೆ ಏನು ಮಾಡಬಹುದು?
www.rbi.org.in ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ನಿಮ್ಮ
ದೂರುಗಳನ್ನು publicquery@rbi.orgಗೆ ಮೇಲ್ ಮಾಡಬಹುದು.
ಅಥವಾ 022-22602201/02222602944
ಸಂಪರ್ಕಿಸಬಹುದು.

Tuesday, November 08, 2016

ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!

'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು
'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ.
ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ
ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ
ಬಾರಿಸುತ್ತಿದೆ. ಆಗಿದ್ದು ಆಗಿ ಹೋಯಿತು ಎಂದು
ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ
ವರೆಸಿಕೊಳ್ಳುವ ದುರಂತ ಇದಲ್ಲ. ಈ
ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು,
ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are
Twenty, Problems are Plenty ಎಂಬುದನ್ನು
ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ  ಸುಮಾರು 20 ಅಂಶಗಳನ್ನು
ಚಲನಚಿತ್ರರಂಗದ ಪಾದಾರವಿಂದಗಳಲ್ಲಿ
ಅರ್ಪಿಸುತ್ತಿದ್ದಾರೆ.

ಓದಿ

1: ತಿಪ್ಪಗೊಂಡನಹಳ್ಳಿ ಜಲಾಶಯದ ನಿಷೇಧಿತ
ಪ್ರದೇಶಗಳಲ್ಲಿ ಚಿತ್ರೀಕರಿಸಬಾರದು ಅಂತ
ಜಲಮಂಡಳಿ ಷರತ್ತು ವಿಧಿಸಿದ್ದರೂ,
ಉಲ್ಲಂಘಿಸಿದ್ದು ಯಾಕೆ?

2: ನೀರಿನಲ್ಲಿ ಚಿತ್ರೀಕರಣ ಮಾಡಬಾರದು
ಅಂತ ಹೇಳಿದ್ದರೂ, ಆ ಕೆಲಸ ಮಾಡಲು ಅಂಥ
ಕಾರಣವೇನಿತ್ತು?

3: ಭಾರತೀಯ ಚಿತ್ರರಂಗದ ಖ್ಯಾತ ಸಾಹಸ
ನಿರ್ದೇಶಕ ಅಂತ್ಹೇಳಿಕೊಳ್ಳುವ ರವಿವರ್ಮ
ರವರಿಗೆ 'ನೀರಿನ ಸ್ಟಂಟ್' ಮತ್ತು
ಅದರಿಂದ ಆಗಬಹುದಾದ ಅಪಾಯದ ಅರಿವಿರಲಿಲ್ಲವೇ?

4: ಈಜು ಬಾರದೇ ಇರುವವರನ್ನು 100ಕ್ಕೂ ಹೆಚ್ಚು ಅಡಿ
ಎತ್ತರದಿಂದ ಧುಮುಕಿಸಿದ್ದು ಎಷ್ಟು ಸರಿ?

5: ಮೊದಲು 30-40 ಅಡಿ ಅಂತ ಕಲಾವಿದರಿಗೆ
ಹೇಳಿ, ಸ್ಪಾಟ್ ಗೆ ಬಂದ ಮೇಲೆ 100 ಅಡಿ ಎತ್ತರ
ಎಂದು ಅನಿಲ್ ಹಾಗೂ ಉದಯ್ ಗೆ ಶಾಕ್
ಕೊಟ್ಟಿದ್ದು ಯಾಕೆ?

6: ಡ್ಯೂಪ್ ಬಳಕೆ ಮಾಡಲಿಲ್ಲ. ಕಾರಣ ಏನು.?

7: ಜ್ವರ ಅಂತ ಉದಯ್ ಹೇಳಿದ್ದರೂ, ಪರ್ಯಾಯ
ವ್ಯವಸ್ಥೆ ಏಕೆ ಮಾಡಲಿಲ್ಲ?

8: ಮೊದಲು ಡ್ಯೂಪ್ ಅಂತ ಹೇಳಿ, ನಂತರ
'ನೀವೇ ಮಾಡಬೇಕು' ಅಂತ ಅನಿಲ್ ಹಾಗೂ ಉದಯ್
ಗೆ ಬಲವಂತ ಮಾಡಿದ್ದರ ಹಿಂದಿನ ಉದ್ದೇಶ?

9: ಹೆಲಿಕಾಫ್ಟರ್ ನಿಂದ ಜಿಗಿಯುವಂತೆ ಅನಿಲ್ ಹಾಗೂ
ಉದಯ್ ಮೇಲೆ ಒತ್ತಡ ಹೇರಿದ್ದು ಯಾಕೆ?

10: ಹೆಲಿಕಾಫ್ಟರ್ ನಿಂದ ಖಳನಟರು ಹಾರಬೇಕಾದಾಗ ರೋಪ್
(ಹಗ್ಗ) ಬಳಕೆ ಮಾಡಲಿಲ್ಲ. ಇದು ಸರಿಯೇ?

11: ನೀರಿಗೆ ಹಾರಲಿದ್ದಾರೆ ಅಂತ
ಗೊತ್ತಿದ್ದರೂ, ಲೈಫ್ ಜಾಕೆಟ್
ತೊಡಿಸಲಿಲ್ಲ. ನಿಮಗೆ ಜವಾಬ್ದಾರಿ ಇಲ್ಲವೇ.?

12: ಖಳನಟರಿಗೆ ನೀವು ಯಾವುದೇ ರೀತಿಯ
ಟ್ರೈನಿಂಗ್ ಕೊಟ್ಟಿರಲಿಲ್ಲವೇಕೆ.?

13: ಹೆಲಿಕಾಪ್ಟರ್ ನಿಂದ ಹಾರುವ ಜಾಗದ ಕಡೆ ಮೋಟರ್ ಬೋಟ್
ಇರಿಸದೆ ದಡದಲ್ಲಿ ಇರಿಸುವ ಪ್ಲಾನ್ ಕೊಟ್ಟವರು
ಯಾರು?

14: ಸ್ಪೀಡ್ ಬೋಟ್ ಅವಶ್ಯಕವಾಗಿತ್ತು. ಆದರೂ
ಅದನ್ನ ಇಟ್ಟುಕೊಂಡಿರಲಿಲ್ಲ. ಯಾಕೆ?

15: ಇಂತಹ ದುಸ್ಸಾಹಸಕ್ಕೆ ಕೈಹಾಕುವ ಬದಲು ಗ್ರಾಫಿಕ್ಸ್
ಮೂಲಕ ಕೆಲಸ ಮುಗಿಸಬಹುದಿತ್ತಲ್ಲವೇ?

16: ಚಿತ್ರೀಕರಣ ನಡೆಯುವಾಗ ಯಾವುದೇ ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳದೇ ಇರುವುದು ನಿಮ್ಮ
ಮೂರ್ಖತನ ಎಂದು ಭಾವಿಸಬಹುದೇ?

17: ದುನಿಯಾ ವಿಜಯ್ ರವರನ್ನ ರಕ್ಷಿಸಿದ ನೀವು,
ಖಳನಟರ ಜೀವವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ
ಕಾರಣ?

18: ಉದಯೋನ್ಮುಖ ನಟರ ಜೀವ ನಿಮಗೆ ತೃಣ
ಸಮಾನವಾಯಿತೇ?

19: ತಿಪ್ಪಗೊಂಡನಹಳ್ಳಿ ಕೆರೆಯ ಸ್ಥಿತಿ-ಗತಿ
ಬಗ್ಗೆ ಅರಿವಿರಲಿಲ್ಲವೇ?

20: ಅನಿಲ್ ಮತ್ತು ಉದಯ್ ಸಾವಿಗೆ ಹೊಣೆ
ಯಾರು?

Saturday, November 05, 2016

PDO ಪರೀಕ್ಷೆ ಜನವರಿಯಲ್ಲಿ

ಯಾವ ಯಾವ ಪರೀಕ್ಷೆ ಕೇಂದ್ರಗಳಲ್ಲಿ ಎಷ್ಟೆಷ್ಟು ಅಭ್ಯರ್ಥಿಗಳು ಪರೀಕ್ಷಾ ಬರೆಲಿದ್ದಾರೆ?:*

PDO ಪರೀಕ್ಷೆ ಜನವರಿಯ
1624 ಪಿಡಿಓ & ಪಂ. ಕಾರ್ಯದರ್ಶಿ ಹುದ್ದೆಗೆ ಬಂದಿದ್ದು ಬರೋಬ್ಬರಿ 3.62 ಲಕ್ಷ ಅರ್ಜಿ.!!*

ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

ತಾಲೂಕು ಕೇಂದ್ರಗಳಲ್ಲೂ ಆಯೋಜಿಸಲು ನಿರ್ಧಾರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಕಾರವು 815 ಪಂಚಾಯಿತಿ ಅಭಿವೃದ್ ಅಕಾರಿ (ಪಿಡಿಓ) ಹಾಗೂ 809 ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ನೇರ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ *ಒಟ್ಟು 3,62,899 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.*

ಡಿಸೆಂಬರ್‌ 4 ರಂದು ಪರೀಕ್ಷೆ ನಡೆಸಲು ಪ್ರಾಕಾರ ಉದ್ದೇಶಿಸಿತ್ತು. ಆದರೆ, ನಿರೀಕ್ಷೆಗಿಂತ ಹೆಚ್ಚು  ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ಪರೀಕ್ಷೆ ನಡೆಸಲು ಜಿಲ್ಲಾ ಕೇಂದ್ರಗಳಲ್ಲಿ ಅಷ್ಟು ಸಂಖ್ಯೆಯ ಕಾಲೇಜುಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಈ ನಡುವೆ, ಈದ್‌ಮಿಲಾದ್‌, ಕ್ರಿಸ್ಮಸ್‌ ಹಬ್ಬಗಳ ಜತೆಗೆ, ಡಿ. 18 ರಂದು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯೊಂದು ನಡೆಯುತ್ತಿದೆ.
ಆದ್ದರಿಂದ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಅಡ್ಡಿಯಾಗುತ್ತಿದೆ. ಈ ಕಾರಣಕ್ಕಾಗಿ ಜನವರಿ 2 ಅಥವಾ 3 ನೇ ಭಾನುವಾರ ಪರೀಕ್ಷೆ ನಡೆಸಲು ಪ್ರಾಕಾರ ತೀರ್ಮಾನಿಸಿದೆ.

‘‘ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಗರಿಷ್ಠ 1.80 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರು. ಹೀಗಾಗಿ, ಇದುವರೆಗೆ ಜಿಲ್ಲಾ ಕೇಂದ್ರಗಳ ಪಿಯು ಕಾಲೇಜುಗಳನ್ನಷ್ಟೇ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ,

ಪಿಡಿಓ ಹಾಗೂ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ 3,62,899 ಅಭ್ಯರ್ಥಿಗಳು
ಹಾಜರಾಗುತ್ತಿರುವುದರಿಂದ *ಕನಿಷ್ಟ 750 ಕಾಲೇಜುಗಳು ಬೇಕಾಗಬಹುದು.* ಹೀಗಾಗಿ, ಕೇವಲ ಪದವಿ ಪೂರ್ವ ಕಾಲೇಜುಗಳಷ್ಟೇ ಅಲ್ಲದೆ, ಪ್ರೌಢಶಾಲೆ, ಎಂಜಿನಿಯರಿಂಗ್‌ ಹಾಗೂ ಪದವಿ ಕಾಲೇಜುಗಳ ಕೊಠಡಿಗಳನ್ನೂ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ,’’ ಎಂದು ಕನಾರ್ಟಕ ಪರೀಕ್ಷಾ ಪ್ರಾಕಾರದ ಆಡಳಿತಾಕಾರಿ ಗಂಗಾಧರಯ್ಯ ‘ವಿಕ’ಕ್ಕೆ ತಿಳಿಸಿದರು.

*‘‘ಸ್ಪರ್ಧಾತ್ಮಕ ಪರೀಕ್ಷೆಗೆ ಕಾಲೇಜುಗಳನ್ನು ಬಿಟ್ಟು ಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಕೋರಲಾಗುತ್ತಿದೆ. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಪರೀಕ್ಷಾ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ,’’ ಎಂದು ಅವರು ಸ್ಪಷ್ಟಪಡಿಸಿದರು.*

‘‘ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ಅಡ್ಡಿ ಇಲ್ಲ. ಆದರೆ,
*ಬೆಳಗಾವಿ, ಬಾಗಲಕೋಟ, ವಿಜಯಪುರದಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರ*ೆ.

ಆದರೆ, ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜುಗಳು ಲಭ್ಯವಾಗದ ಕಾರಣ ತಾಲೂಕು ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ,’’ ಎಂದು ಅವರು ಹೇಳಿದರು.

*4,96,873 ಮಂದಿ ಅರ್ಜಿ ಸಲ್ಲಿಕೆ:*

ಸ್ಪರ್ಧಾತ್ಮಕ ಪರೀಕ್ಷೆಗೆ ಒಟ್ಟು 4,96,863 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ 3,50,375 ಮಂದಿ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ.

ಇನ್ನು ಪರೀಕ್ಷಾ ಶುಲ್ಕದಿಂದ ವಿನಾಯಿತಿ ಪಡೆದಿರುವ 12,332 ವಿಶೇಷಚೇತನರೂ ಸೇರಿದರೆ ಒಟ್ಟು 3,62,899 ಮಂದಿ ಪರೀಕ್ಷೆಗೆ ಹಾಜರಾಗುವುದು ದೃಢವಾಗಿದೆ.

*ಯಾವ ಕೇಂದ್ರಗಳಲ್ಲಿ ಎಷ್ಟು ಅರ್ಜಿ:?*

ಬಾಗಲಕೋಟ- 12,316,

ಬೆಂಗಳೂರು- 46,213,

ಬೆಳಗಾವಿ- 21,214,

ಬಳ್ಳಾರಿ- 10,928,

ಬೀದರ್‌- 8,294,

ವಿಜಯಪುರ- 24,734,

ಚಾಮರಾಜನಗರ- 4,349,

ಚಿಕ್ಕಬಳ್ಳಾಪುರ- 6,590,

ಚಿಕ್ಕಮಗಳೂರು- 5,710,

ಚಿತ್ರದುರ್ಗ- 11,578,

ದಕ್ಷಿಣ ಕನ್ನಡ- 8079,

ದಾವಣಗೆರೆ- 15,223,

ಧಾರವಾಡ- 20,421,

ಗದಗ- 7,489,

ಕಲಬುರಗಿ- 23,248,

ಹಾಸನ- 10,376,

ಹಾವೇರಿ- 10,095,

ಕೊಡಗು- 2087,

ಕೋಲಾರ- 8407,

ಕೊಪ್ಪಳ- 8,963,

ಮಂಡ್ಯ- 7,573,

ಮೈಸೂರು- 24,458,

ರಾಯಚೂರು- 10,933,

ರಾಮನಗರ- 4801,

ಶಿವಮೊಗ್ಗ- 14,672,

ತುಮಕೂರು- 16,015,

ಉಡುಪಿ- 5766,

ಉತ್ತರ ಕನ್ನಡ- 5,791,

ಯಾದಗಿರಿ- 6,384

Tuesday, November 01, 2016

ಕನ್ನಡ ರಾಜ್ಯೋತ್ಸವ ವಿಶೇಷ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಇತಿಹಾಸ

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಟಯ್ಯ .

ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.
ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ನವೆಂಬರ್ ೧೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್ ೧ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟ ಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲಿಯು ಹಾರಾಡುತ್ತಿರುತ್ತದೆ.