Wikipedia

Search results

Friday, September 30, 2016

ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ

ನವದೆಹಲಿ: ‘ಭಾರತೀಯ ಸೇನಾಪಡೆ ಬುಧವಾರ ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿಯ ಭಯೋತ್ಪಾದಕ ಅಡಗುತಾಣಗಳ ಮೇಲೆ ‘ಸರ್ಜಿಕಲ್‌ ಕಾರ್ಯಾಚರಣೆ’ ನಡೆಸಿದ್ದು, ಯಾವುದೇ ಬಗೆಯ ಪರಿಣಾಮಗಳನ್ನು ಎದುರಿಸಲು ದೇಶ ಸನ್ನದ್ಧವಾಗಿದೆ’ ಎಂದು ಭಾರತೀಯ ಸೇನಾ ಪಡೆಯ ಲೆ.ಜ. ರಣವೀರ್‌ ಸಿಂಗ್‌ ಹೇಳಿದ್ದಾರೆ.

ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಸಹ ಹಾಜರಿದ್ದರು.

‘ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳು ಸಾಕಷ್ಟು ಧ್ವಂಸವಾಗಿವೆ’ ಎಂದಿರುವ ಅವರು ಕಾರ್ಯಾಚರಣೆ ಮುಂದುವರಿಸುವ ಯಾವುದೇ ಯೋಜನೆ ಇಲ್ಲ’ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಭಯೋತ್ಪಾದಕ ಅಡಗುತಾಣಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ. ‘ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಅವಕಾಶ ನೀಡುವುದಿಲ್ಲ’ ಎಂದು ಸಿಂಗ್‌ ಖಡಕ್‌ ಆಗಿ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಕಮಿಟಿ ಸಭೆ ನಡೆಸಿದ ನಂತರವೇ ಸಿಂಗ್‌ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಗೃಹಸಚಿವ ರಂಜತ್‌ ಸಿಂಗ್‌, ಆರ್ಥಿಕ ಸಚಿವ ಅರುಣ್್ ಜೇಟ್ಲಿ ಮತ್ತು ಸೇನಾ ಮುಖ್ಯಸ್ಥ ದಲ್ಬಿರ್‌ ಸಿಂಗ್‌ ಸುಹಾಗ್‌ ಸಹ ಹಾಜರಿದ್ದರು.

ಸರ್ಜಿಕಲ್ ಕಾರ್ಯಾಚರಣೆ ಎಂದರೇನು?
ನಿರ್ದಿಷ್ಟ ಮತ್ತು ನಿಖರ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಆಪರೇಷನ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್‌ ಆಪರೇಷನ್ ಎಂದೂ ಕರೆಯಲಾಗುತ್ತದೆ. ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ.

1) ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಜನರ ಬಿಡುಗಡೆಗಾಗಿ.

2) ವೈರಿ ದೇಶದಲ್ಲಿ ನಮ್ಮ ದೇಶದ ಸರ್ಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.

ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.

ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ನೈಜೀರಿಯಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಆಪರೇಷನ್‌ಗೆ ಉತ್ತಮ ಉದಾಹರಣೆ.

ಸರ್ಜಿಕಲ್ ಅಥವಾ ಪ್ರಿಸಿಷನ್ ಕಾರ್ಯಾಚಾರಣೆಯು ಒಂದು ದೇಶದ ಮಿಲಿಟರಿ ಬಲ, ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಬುದ್ಧಿವಂತಿಕೆ ತೋರುವ ಟ್ಯಾಕ್ಟಿಕಲ್ ಯುದ್ಧತಂತ್ರವೂ ಹೌದು.

ಸಿಂಹದ ಮರಿಗಳು ನಮ್ಮ ಸೈನಿಕರು

ಸಿಂಹದ ಮರಿಗಳು
ನಮ್ಮ ಸೈನಿಕರು
ಸಿಡಿದೆದ್ದು ನಿಂತರೆ
ನಿರ್ನಾಮ ಶತ್ರುಗಳು

'ಉರಿ'ಯ ತನ್ನವರ ಬಲಿದಾನ
ಕೆಣಕಿತ್ತು ಯೋಧರ ಸ್ವಾಭಿಮಾನ
ಶತ್ರು  ಆಕ್ರಮಿತ ನೆಲದಲ್ಲೇ
ನೆತ್ತರು ಚೆಲ್ಲಿ ನೀಡಿತು ತರ್ಪಣ

ಶಸ್ತ್ರಗಳು ಮಲಗಿದ್ದ ವೇಳೆ
ದಾಳಿ ನಡೆಸಿ ಬೀಗಿದ ಹೇಡಿಗಳು
ಶಸ್ತ್ರಸಜ್ಜಿತ ನೆಲೆಗಳ ಮೇಲೆ
ಎರಗಿ ಸೇಡು ತೀರಿಕೊಂಡ ಕಲಿಗಳು

ಶಾಂತಿಮಂತ್ರ  ಪಠಿಸುವ ನಮ್ಮಲ್ಲಿ
ಕ್ರಾಂತಿಯ ಸ್ಫೋಟಿಸಿ ಸದೆಬಡಿದರು
ಸುಮ್ಮಸುಮ್ಮನೆ ಕೆಣಕಿದರೆ
ಕೈಕಟ್ಟಿ ಕೂರುವವರಲ್ಲ ನಮ್ಮ ಯೋಧರು


ಅಮಾಯಕರ ಸಾವಿನ ಬೆಲೆ
ತೆತ್ತಾಯಿತು ಆ ಶತ್ರು ನೆಲೆ
ಉಗ್ರವಾದಕೆ ಕೊನೆ ಹಾಡಲು
ಉತ್ತರ ಕೊಟ್ಟಿತು ನಮ್ಮ ಯೋಧಪಡೆ

ಅಭಿಮಾನದೊಂದು ನಮನ
ಆತ್ಮವಿಶ್ವಾಸ ಮೂಡಿದ ಕ್ಷಣ
ಕೈಲಾಗದವರಲ್ಲ ನಾವು
ಕೈ ಎತ್ತಿದರೆ ಶರಣಾಗುವುದು ಸಾವು

ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ : ಅವಧಿ ವಿಸ್ತರಣೆ

ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಹಾಗೂಪ.ಪಂಗಡದ 1 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಆನ್ಲೈನ್ ಮೂಲಕ ಅರ್ಜಿs ಸಲ್ಲಿಸಲು 2017 ರ ಮಾರ್ಚ್ 31 ರವರೆಗೆ ಅವಧಿ ವಿಸ್ತರಿಸಲಾಗಿದೆ.ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾದ್ಯಾಯರುಗಳು ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಪ್ರಸಕ್ತ ಸಾಲಿನ ಒಂದನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಆನ್ಲೈನ್ ಮೂಲಕ 2017 ರ ಮಾರ್ಚ್ 31 ರೊಳಗಾಗಿ ಸಲ್ಲಿಸಬೇಕು. ಇದುವರೆಗೂ ಆನ್ಲೈನ್ ಮೂಲಕ ನೋಂದಣಿ ಮಾಡದ 2 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನೋಂದಣಿ ಅರ್ಜಿಯ ನಮೂನೆ, ನವೀಕರಣ ವಿದ್ಯಾರ್ಥಿಗಳು ಅನುಬಂಧ-2 ರಲ್ಲಿ ಹಾಗೂ ವರ್ಗಾವಣೆಯಾಗಿ ಬಂದ ವಿದ್ಯಾರ್ಥಿಗಳು ಅನುಬಂಧ-1 ರಲ್ಲಿ ಮಾಹಿತಿ ಭರ್ತಿ ಮಾಡಿ ಕಾರ್ಯಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಅನುಬಂಧಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆಯಬಹುದು. ಅರ್ಜಿಯೊಂದಿಗೆ ಮುಖ್ಯೋಪಾದ್ಯಾಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಪಿ.ಡಿ.ಓ ಉಚಿತ ಆನ್ ಲೈನ್ ಅಣಕು ಪರೀಕ್ಷೆ (PDO FREE ONLINE MOCK TEST)

ಆತ್ಮೀಯ ಓದುಗರೇ,

ಕರುನಾಡುಎಗ್ಸಾಂ (karunaduexams.com) ತಂಡ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆ ಆಕಾಂಕ್ಷಿಗಳಿಗಾಗಿ ಉಚಿತ ಆನ್ ಲೈನ್ ಅಣಕು ಪರೀಕ್ಷೆಯನ್ನು ನಡೆಸಲು ಇಚ್ಚಿಸಿದೆ*.

ಈ ಅಣಕು ಪರೀಕ್ಷೆಯು ಪತ್ರಿಕೆ-2 (ಗ್ರಾಮೀಣಭೀವೃದ್ದಿ ಮತ್ತು ಪಂಚಾಯತ್ ರಾಜ್)  ಸಂಬಂಧಿಸಿದ್ದು, 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪ್ರಶ್ನೆ ಪತ್ರಿಕೆಯನ್ನು ನುರಿತ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಂದ ಸಿದ್ದಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಒಳಗೊಂಡಿರಲಿದೆ.

ಈ ಉಚಿತ ಆನ್ ಲೈನ್ ಪರೀಕ್ಷೆಯನ್ನು karunaduexams.com ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ತೆಗೆದುಕೊಳ್ಳಬಹುದಾಗಿದೆ.
ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ನೀಡಿ ಲಾಗಿನ್ ಆಗಬೇಕು (ಈ ಮಾಹಿತಿಗಳು ಗೌಪ್ಯವಾಗಿರಲಿವೆ).
ಪ್ರಶ್ನೆಪ್ರತಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 1 ಗಂಟೆ 30 ನಿಮಿಷ ಅವಧಿಯೊಳಗೆ ಉತ್ತರಿಸಬೇಕು.
ಒಬ್ಬರು ಒಂದು ಬಾರಿ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಪರೀಕ್ಷೆಯನ್ನು ದಿನಾಂಕ 02/10/2016 ಭಾನುವಾರ ಮಧ್ಯಾಹ್ನ 2.00 ಗಂಟೆ ಮೇಲೆ ತೆಗೆದುಕೊಳ್ಳಬಹುದು (ಇದು ತಾತ್ಕಲಿಕ ದಿನಾಂಕವಾಗಿದ್ದು, ಪರೀಕ್ಷೆ ದಿನಾಂಕ ಬದಲಾವಣೆಯಾದರೆ ಮುಂಚಿತವಾಗಿ ತಿಳಿಸಲಾಗುವುದು)
ಪ್ರಶ್ನೆಗಳನ್ನು ಈಗಾಗಲೇ ನಮ್ಮ ವೆಬ್ ಸೈಟ್ ನಲ್ಲಿ ನೀಡಿರುವ ಕ್ವಿಜ್ ಸೇರಿದಂತೆ ಇತರೆ ಪ್ರಶ್ನೆಗಳನ್ನು ಹೆಚ್ಚಾಗಿ ಒಳಗೊಂಡಿರಲಿದೆ.
ಈ ಪರೀಕ್ಷೆಯಿಂದ ಅಭ್ಯರ್ಥಿಗಳು ಈಗಾಗಲೇ ತಾವು ಎಷ್ಟರ ಮಟ್ಟಿಗೆ ತಯಾರಿ ನಡೆಸಿದ್ದಾರೆ ಎನ್ನುವುದರ ಜೊತೆಗೆ ಇತರೆ ವಿಷಯವನ್ನು ತಿಳಿದುಕೊಳ್ಳಬಹುದು.

ವಿ.ಸೂಚನೆ:

ನಮ್ಮ ಈ ಅಣಕು ಪರೀಕ್ಷೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಪರೀಕ್ಷೆಗೂ ಯಾವ ಸಂಬಂಧವಿಲ್ಲ.

ಕೋರಿಕೆ:

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ವಿವಿಧ ಹುದ್ದೆಗಳ ಆಕಾಂಕ್ಷಿಗಳಿಗೆ ಸಹಾಯವಾಗಲು ಕರುನಾಡುಎಗ್ಸಾಂ ತಂಡ ಸಣ್ಣ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆ ನೀರಿಕ್ಷೆಯಲ್ಲಿರುವವರಿಗೆ (ಪಿಎಸ್ಐ ಪರೀಕ್ಷೆಗೂ ಮುಂದಿನ ದಿನಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು) ಸಹಾಯ ಮಾಡುವುದು ನಮ್ಮ ಉದ್ದೇಶ. ಅದಕ್ಕೆ ನಿಮ್ಮ ಸಹಕಾರ ಅತಿ ಅಗ್ಯತ. ಆಗಾಗಿ ನಮ್ಮ ಈ ಪ್ರಯತ್ನವನ್ನು ತಾವುಗಳು ಫೇಸ್ ಬುಕ್ ಮತ್ತು ವಾಟ್ಸ್ ಆಫ್ ನಲ್ಲಿ ಶೇರ್ ಮಾಡುವ ಮೂಲಕ ಎಲ್ಲಾ ಆಕಾಂಕ್ಷಿಗಳಿಗೂ ತಲುಪಿಸಬೇಕೆಂದು ಕೋರಿದೆ. ನಮ್ಮ ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದಗಳು.

ಕರುನಾಡುಎಗ್ಸಾಂ ತಂಡ (www.karunaduexams.com)

Thursday, September 29, 2016

ಸರ್ಜಿಕಲ್ ಸ್ಟ್ರೈಕ್ ಎಂದರೇನು ಗೊತ್ತಾ.? ನಿಮಗೆ ಖಂಡಿತ ಗೊತ್ತಿರಲೇ ಬೇಕು.!


ಯಾರೂ ನಿರೀಕ್ಷಿಸದ ಒಂದು ಕಾರ್ಯಚರಣೆ ಭಾರತದ ಸೇನೆಯು ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ತಾಣಗಳ ಮೇಲೆ ದಾಳಿ ಮಾಡಿ,ಉಗ್ರರನ್ನು ಮೇಲೆ ಕಳುಹಿಸಿ ಬಂದಿದ್ದಾರೆ.!

ಇದು ಭಾರತದ ಪಾಲಿಗೆ ಸಿಹಿ ಸುದ್ದಿಯಾದರೆ,ಪಾಕಿಸ್ತಾನಕ್ಕೆ ಅಮಾವಾಸ್ಯೆಯ ಎಫೇಕ್ಟ್ ಎನ್ನಬಹುದು.! ಭಾರತದ ಸೇನೆ ಸರ್ಜಿಕಲ್ ಸ್ಟ್ರೈಕ್ ಆಪರೇಷನ್ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತಿದೆ ಆದರೆ ಈ ಸರ್ಜಿಕಲ್ ಸ್ಟ್ರೈಕ್ ಎನೆಂದು ಪ್ರಸ್ತುತ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿರಬೇಕು.!

ಸರ್ಜಿಕಲ್ ಸ್ಟ್ರೈಕ್ ಎಂದರೆ ಶತ್ರು ನೆಲೆಯ ಮೇಲೆ ದಾಳಿ ಮಾಡಿ,ನಿರ್ದಿಷ್ಟ ಗುರಿ ಎನಿದೆಯೊ ಅದನ್ನು ಸಾಧಿಸಿ ಮರಳುವುದು.ಇದರಿಂದ ಶತ್ರು  ನೆಲದಲ್ಲಿ ಇರುವ ಸಾರ್ವಜನಿಕ ಕಟ್ಟಡ, ನಾಗರಿಕರು, ಆಸ್ತಿ ಪಾಸ್ತಿಗಳ ಹಾನಿ ಆಗುವುದಿಲ್ಲ,ಹಾಳು ಮಾಡಬಾರದು.! ಇದು ಶತ್ರುಗಳಿಗೆ ಬಿಸಿ ಮುಟ್ಟಿಸುವ ಕಾರ್ಯಚರಣೆ,ಹಾಗೂ ಈ ಕಾರ್ಯಚರಣೆ ಯುದ್ಧವಲ್ಲ,ಸರ್ಜಿಕಲ್ ಸ್ರೈಕ್'ನಲ್ಲಿ ಕಾರ್ಯಚರಣೆಯ ನಂತರ ಕೂಡಲೆ ವಾಪಾಸಬೇಕು.!

ಭಾರತ ಸೇನೆಯೂ ಇದಕ್ಕೂ ಮುಂಚೆಯೊಮ್ಮೆ ಮಯನ್ಮಾರ್'ಗೆ ನುಗ್ಗಿ 40 ನಿಮಿಷದೊಳಗೆ 38 ನಾಗ ಬಂಡಕೋರರನ್ನು ಬಗ್ಗುಬಡಿದು ವಾಪಾಸ್ಸಾಗಿದ್ದರಲ್ಲ ಅದೆ ಸರ್ಜಿಕಲ್ ಸ್ರೈಕ್'ಗೆ ಉದಾಹರಣೆ
ಕೊನೆ ಮಾತು.!

ನಮ್ಮ‌ ಸೇನೆ ನಮ್ಮ ಹೆಮ್ಮ

Wednesday, September 28, 2016

KPSC GROUP C post revised key Ans availabl in website:

http://kpsc.kar.nic.in/Revised%20Key%20Answer%20of%20Non-Technl%20exam%2028-8-16.pdf

ಹಿರಿಯ ಸಾಹಿತಿ ,ವರಕವಿ ದ.ರಾ.ಬೇಂದ್ರೆ ಅವರ 2ನೇ ಪುತ್ರ ಡಾ.ವಾಮನ ಬೇಂದ್ರೆ ಇನ್ನಿಲ್ಲ

ಇಂದು ಬೆಳಿಗ್ಗೆ
ಬೆಳಿಗ್ಗೆ 4.30ಕ್ಕೆ ವಿಧಿ ವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಜುಲೈ ೨೮, ೧೯೩೫ರಲ್ಲಿ ಜನಿಸಿದ್ದರು.
ವಾಮನ ಬೇಂದ್ರೆ ತಂದೆ ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದ ವಾಮನ ಬೇಂದ್ರೆ.
ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ.
ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.
ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದರು.
ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.
ವಾಮನ ಬೇಂದ್ರೆಯವರ ಮೊದಲ ಕವನ ಮೊದಲ ತೊದಲು.
ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು.
ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿವೆ.

Saturday, September 24, 2016

ಮಕ್ಕಳ ಆಧಾರ್‌ ನೋಂದಣಿಗೆ ಬಂತು ಟ್ಯಾಬ್ಲೆಟ್‌

ಮಕ್ಕಳ ಆಧಾರ್‌ ನೋಂದಣಿಗೆ 2 ಸಾವಿರ ಟ್ಯಾಬ್ಲೆಟ್‌
ಅಂಗನವಾಡಿ ಮೇಲ್ವಿಚಾರಕರಿಗೆ ವಿತರಣೆ

ಟ್ಯಾಬ್ಲೆಟ್‌ ಖರೀದಿಗೆ 4.08 ಲಕ್ಷ ರೂ. ವೆಚ್ಚಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗಿರುವ ನೋಂದಣಿ*

ಡಿ. 31ರ ವೇಳೆಗೆ 41 ಲಕ್ಷ ಮಕ್ಕಳ ನೋಂದಣಿ ಗುರಿ

ಬೆಂಗಳೂರು ನವಜಾತ ಶಿಶು ಸೇರಿದಂತೆ ಆರು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ್‌ ನೋಂದಣಿ ಕಾರ್ಯಕ್ಕೆ 2 ಸಾವಿರ ಟ್ಯಾಬ್ಲೆಟ್‌ಗಳನ್ನು (ಕಿರು ಕಂಪ್ಯೂಟರ್‌) ಇ-ಆಡಳಿತ ಇಲಾಖೆ ಖರೀದಿಸಿದೆ. ಈಗಾಗಲೇ ಅಂಗನವಾಡಿಗಳಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಿದ್ದು, ನೋಂದಣಿ ಕಾರ್ಯ ಆರಂಭವಾಗಿದೆ.

ಸರಕಾರಿ ಸವಲತ್ತು ಪಡೆಯಲು ಬಹುಮುಖ್ಯ ಆಧಾರವಾಗಿರುವ 'ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್‌) ಡಿ. 31ರೊಳಗೆ ಎಲ್ಲ ಮಕ್ಕಳಿಗೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ 'ಇಂಟೆಲಿಕ್‌ ಸಿಸ್ಟಂ' ಎಂಬ ಕಂಪೆನಿಯಿಂದ 2 ಸಾವಿರ ಟ್ಯಾಬ್ಲೆಟ್‌ಗಳನ್ನು ಖರೀದಿಸಲಾಗಿದೆ. ಟ್ಯಾಬ್ಲೆಟ್‌ ಮತ್ತು ಬೆರಳಚ್ಚು ಮುದ್ರಣದ ಪರಿಕರಗಳ ಖರೀದಿಗೆ 4.08 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಮೊತ್ತವನ್ನು ಇ-ಆಡಳಿತ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಭರಿಸಿವೆ. ರಾಜ್ಯದಲ್ಲಿ 61,187 ಅಂಗನವಾಡಿಗಳು ಮತ್ತು 3331 ಮಿನಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ.

ಇಲ್ಲಿ ಸುಮಾರು 41 ಲಕ್ಷ ಮಕ್ಕಳಿದ್ದಾರೆ. 25-30 ಅಂಗನವಾಡಿಗಳ ನಿರ್ವಹಣೆಯ ಹೊಣೆ ಹೊತ್ತಿರುವ ಮೇಲ್ವಿಚಾರಕರಿಗೆ ಮಕ್ಕಳ ಆಧಾರ್‌ ನೋಂದಣಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಹಾಜರಾಗುವ ಮಕ್ಕಳ ಆಧಾರ್‌ ನೋಂದಣಿಗಾಗಿ 1647 ಮಂದಿ ಮೇಲ್ವಿಚಾರಕರಿಗೆ ಇ-ಆಡಳಿತ ಇಲಾಖೆಯು ತರಬೇತಿ ನೀಡಿತ್ತು. ಆ ಬಳಿಕ ಪರೀಕ್ಷೆಯನ್ನೂ ಸಹ ನಡೆಸಿದ್ದು, ಇದರಲ್ಲಿ 1529 ಮಂದಿ ಉತ್ತೀರ್ಣರಾಗಿದ್ದಾರೆ. ಇವರಿಗೆ ಪ್ರಮಾಣಪತ್ರ ನೀಡಿ, ಗುರುತಿನ ಸಂಖ್ಯೆಯೊಂದನ್ನು ಕೊಡಲಾಗಿದೆ. ಮಕ್ಕಳ ಆಧಾರ್‌

*ನೋಂದಣಿ ಹೇಗೆ?*

: ಪ್ರತಿ ಟ್ಯಾಬ್ಲೆಟ್‌ಗೆ ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ ಅಳವಡಿಸಿ, ಅಂತರ್ಜಾಲದ ಸಂಪರ್ಕ ಪಡೆಯಲಾಗಿದೆ. ಇದಕ್ಕಾಗಿ ತಿಂಗಳಿಗೆ 8 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.

ಇದರಲ್ಲಿ ಯುಐಡಿಎಐ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಆನ್‌ಲೈನ್‌ ಸಂಪರ್ಕದ ಮೂಲಕವೇ ಮಕ್ಕಳ ಆಧಾರ್‌ ನೋಂದಣಿ ಮಾಡಿಸಲಾಗುತ್ತಿದೆ. ಮಗುವಿನ ಭಾವಚಿತ್ರ ಮತ್ತು ತಂದೆ, ತಾಯಿಯ ಬಯೋಮೆಟ್ರಿಕ್‌ ಆಧಾರದಲ್ಲಿ ಮಗುವಿಗೆ ಆಧಾರ್‌ ಸಂಖ್ಯೆ ನೀಡಲಾಗುತ್ತದೆ. ಈ ವೇಳೆ ಆರು ವರ್ಷದ ಒಳಗಿನ ಮಗುವಿನ ಬಯೋಮೆಟ್ರಿಕ್‌ (10 ಬೆರಳುಗಳ ಬೆರಳಚ್ಚು) ಮತ್ತು ಕಣ್ಣಿನ ಐರಿಷ್‌ ವಿವರ ಪಡೆಯುವುದಿಲ್ಲ. ಐದು ವರ್ಷ ತುಂಬಿದ ಬಳಿಕ ಆಧಾರ್‌ ಸಂಖ್ಯೆಗೆ ಈ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಇದಲ್ಲದೇ 15 ವರ್ಷ ತುಂಬಿದ ಬಳಿಕ ಮತ್ತೊಮ್ಮೆ ಬಯೋಮೆಟ್ರಿಕ್‌ ಮಾಹಿತಿ ಪಡೆದು ಅಪ್‌ಡೇಟ್‌ ಮಾಡಲಾಗುತ್ತದೆ. ಆಧಾರ್‌ ನೋಂದಣಿ ಬಳಿಕ ಯಾವುದೇ ರೀತಿಯ ಸ್ವೀಕೃತಿ ಪತ್ರ ನೀಡುವುದಿಲ್ಲ. ಬದಲಿಗೆ ಪೋಷಕರ ಮೊಬೈಲ್‌ ಸಂಖ್ಯೆಗೆ ನೋಂದಣಿ ಕುರಿತು ಸಂದೇಶವನ್ನು ನೇರವಾಗಿ ರವಾನಿಸಲಾಗುತ್ತದೆ. ಆಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಅಲ್ಲಿನ ಮೇಲ್ವಿಚಾರಕರ ಆಧಾರ್‌ ಸಂಖ್ಯೆ ಬಳಸಿ ನೋಂದಣಿ ಮಾಡಿಸಲಾಗುತ್ತಿದೆ. ಆಧಾರ್‌ ನೋಂದಣಿ ಮುಗಿದ ಬಳಿಕ ಟ್ಯಾಬ್ಲೆಟ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ಬಳಸಿಕೊಳ್ಳಲಿದೆ. ಮಕ್ಕಳ ಬೆಳವಣಿಗೆಯ ಪ್ರತಿ ಹಂತಗಳಲ್ಲಿ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಒದಗಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಆಧಾರ್‌ ಮೂಲಕವೇ ಪತ್ತೆ ಮಾಡಲು ತೀರ್ಮಾನಿಸಿದೆ. ಅಂಗನವಾಡಿ ಕೇಂದ್ರಗಳಲ್ಲಷ್ಟೇ ಅಲ್ಲ; ಏಕಕಾಲಕ್ಕೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶಾಲೆಗಳು, ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಆಧಾರ್‌ ನೋಂದಣಿ ಕಾರ್ಯ ಚುರುಕು ಪಡೆದುಕೊಂಡಿದೆ.

ಆಧಾರ್‌ ನೋಂದಣಿಗಾಗಿ ಬೆಂಗಳೂರು ಒನ್‌ ಕೇಂದ್ರಗಳಲ್ಲಿ 88 ಕಿಟ್‌ಗಳು, ಕರ್ನಾಟಕ ಒನ್‌ ಕೇಂದ್ರಗಳಲ್ಲಿ 37, ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ 770 ಮತ್ತು 692 ಮೊಬೈಲ್‌ ಕಿಟ್‌ಗಳನ್ನು ಇ-ಆಡಳಿತ ಇಲಾಖೆ ಒದಗಿಸಿದೆ. ಶೇ 88.75ರಷ್ಟು ಗುರಿ ಸಾಧನೆ: ರಾಜ್ಯವು 6,46,60,412 ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಈ ಪೈಕಿ 5,73,85,067 ಮಂದಿಗೆ ಆಧಾರ್‌ ಸಂಖ್ಯೆಯನ್ನು ವಿತರಿಸಲಾಗಿದೆ. ಅದರಂತೆ ಶೇ 88.75ರಷ್ಟು ಗುರಿ ಸಾಧಿಸಲಾಗಿದೆ.

ಕೇವಲ 72,75,345 ಜನರಿಗೆ ಮಾತ್ರ ಆಧಾರ್‌ ಸಂಖ್ಯೆ ಪಡೆದುಕೊಂಡಿಲ್ಲ. ಒಂದರಿಂದ ಹತ್ತನೇ ತರಗತಿಯಲ್ಲಿ 1,01,14,286 ಮಕ್ಕಳಿದ್ದು, 84,71,114 ಮಂದಿಯ ಆಧಾರ್‌ ನೋಂದಣಿ ಆಗಿದೆ. ಹೆರಿಗೆ ಆಸ್ಪತ್ರೆಗಳಲ್ಲಿ ನೋಂದಣಿ: ಇ-ಆಡಳಿತ ಇಲಾಖೆಯ ಸಿಬ್ಬಂದಿಯು ಹೆರಿಗೆ ಆಸ್ಪತ್ರೆಗಳಿಗೆ ತೆರಳಿ ಆಗಷ್ಟೇ ಜನಿಸಿದ ಮಗುವಿಗೂ ಆಧಾರ್‌ ನೋಂದಣಿ ಮಾಡಿಸುತ್ತಿದ್ದಾರೆ. ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ 200 ನವಜಾತ ಶಿಶುಗಳಿಗೆ ಆಧಾರ್‌ ವಿತರಿಸಲಾಗಿದೆ. ಈ ಹಂತದಲ್ಲಿ ಮಗುವಿನ ಭಾವಚಿತ್ರ ಮತ್ತು ಪೋಷಕರ ಬಯೋಮೆಟ್ರಿಕ್‌ ವಿವರವನ್ನಷ್ಟೇ ಪಡೆಯಲಾಗುತ್ತಿದೆ. ಮಗುವಿಗೆ ತಡವಾಗಿ ನಾಮಕರಣ ಮಾಡುವುದರಿಂದ ತಾಯಿಯ ಹೆಸರಿನಲ್ಲಿ ಆಧಾರ್‌ ನೀಡಲಾಗಿದೆ. ವೃದ್ಧರ ಮನೆ ಬಾಗಿಲಿಗೆ ಆಧಾರ್‌: ''ವರ್ಷಾಂತ್ಯದೊಳಗೆ ಶೇ 100ರಷ್ಟು ಆಧಾರ್‌ ನೋಂದಣಿ ಗುರಿ ಸಾಧಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಗುಡ್ಡಗಾಡು ಪ್ರದೇಶ ಸೇರಿದಂತೆ ಕುಗ್ರಾಮಗಳಲ್ಲೂ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ವಯೋವೃದ್ಧರು, ಬುದ್ಧಿಮಾಂದ್ಯರು, ದೃಷ್ಟಿ ವಿಕಲಚೇತನರು ಸೇರಿದಂತೆ ಇತರೆ ವಿಶೇಷಚೇತನ ಮಕ್ಕಳಿರುವೆಡೆಯೇ ತೆರಳಿ ಆಧಾರ್‌ ನೋಂದಣಿ ಮಾಡಿಸಲಾಗುತ್ತಿದೆ,''. -ಕೆ.ರವಿಕುಮಾರ್‌, ಯೋಜನಾ ವ್ಯವಸ್ಥಾಪಕ (ಯುಐಡಿ), ಇ-ಆಡಳಿತ ಇಲಾಖೆ ಜಿಲ್ಲಾವಾರು

*ಟ್ಯಾಬ್ಲೆಟ್‌ ವಿತರಣೆ:*

ಜಿಲ್ಲೆ ವಿತರಿಸಿದ ಟ್ಯಾಬ್ಲೆಟ್‌
ಬಾಗಲಕೋಟೆ 89
ಬಳ್ಳಾರಿ 76
ಬೆಳಗಾವಿ 223
ಬೆಂಗಳೂರು ಗ್ರಾಮೀಣ 39
ಬೆಂಗಳೂರು ನಗರ 86
ಬೀದರ್‌ 52
ಚಾಮರಾಜನಗರ 18
ಚಿಕ್ಕಮಗಳೂರು 46
ಚಿಕ್ಕಬಳ್ಳಾಪುರ 34
ಚಿತ್ರದುರ್ಗ 57
ದಕ್ಷಿಣ ಕನ್ನಡ 83
ದಾವಣಗೆರೆ 68
ಧಾರವಾಡ 63
ಗದಗ 48
ಕಲಬುರಗಿ 112
ಹಾಸನ 47
ಹಾವೇರಿ 81
ಕೊಡಗು 18
ಕೋಲಾರ 23
ಕೊಪ್ಪಳ 75
ಮಂಡ್ಯ 44
ಮೈಸೂರು 64
ರಾಯಚೂರು 91
ರಾಮನಗರ 34
ಶಿವಮೊಗ್ಗ 62
ತುಮಕೂರು 83
ಉಡುಪಿ 49
ಉತ್ತರ ಕನ್ನಡ 99
ವಿಜಯಪುರ 89
ಯಾದಗಿರಿ 47 -
--------> ಒಟ್ಟು 2000

ಆತ್ಮೀಯರೇ*, *ಉಚಿತ ಊಟ - ವಸತಿಯೊಂದಿಗೆ ನಡೆಯಲಿದೆ* *ಕಾಬ್ ಸೆಟ್ ಸಂಸ್ಥೆ , ಚಿಕಮಗಳೂರು ಇವರ ವತಿಯಿಂದ*,,,

1) *04-10-2016 ರಿಂದ 04-11-2016*     ವರೆಗೆ 30 ದಿನಗಳ ವಿದ್ಯುತ್ ಮೋಟಾರ್ ರಿ ವೈಂಡಿಂಗ್ ಮತ್ತು ಪಂಪ್ ಸೆಟ್ ನಿರ್ವಹಣಾ ತರಬೇತಿ        

2) *04-10-2016 ರಿಂದ 04-11-2016*     ವರೆಗೆ 21 ದಿನಗಳ ಡಿಜಿಟಲ್  ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ  ತರಬೇತಿ 

3) *05-11-2016 ರಿಂದ 05-12-2016*     ವರೆಗೆ 30 ದಿನಗಳ ರೆಫ್ರಿಜರೇಟರ ಮತ್ತು ಏರ್ ಕಂಡೀಶನ್ ರ್  ದುರಸ್ತಿ ಮತ್ತು ನಿರ್ವಹಣೆ       

4) *1-11-2016 ರಿಂದ 15-12-2016*     ವರೆಗೆ 45 ದಿನಗಳ ಕಂಪ್ಯೂಟರ್ ಹಾರ್ಡ್ ವೇರ್  ಮತ್ತು ನೆಟ್ ವರ್ಕಿಂಗ್ ಸರ್ವಿಸ್ ತರಬೇತಿ      

5) *12-10-2016 ರಿಂದ 11-11-2016*     ವರೆಗೆ 30 ದಿನಗಳ ಟೇಲರಿಂಗ  ತರಬೇತಿ                                                       
ಈ ತರಬೇತಿಗೆ ನಿಮ್ಮ ಊರಿನ ಆಸಕ್ತ  ಯುವಕರಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.

ಒಬ್ಬ ನಿರುದ್ಯೋಗಿಗೆ ಉದ್ಯೋಗ ಕೊಡಿಸಿದ ಪುಣ್ಯವು ನಿಮಗೆ ದೊರೆಯುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮಾಡಿ*
*9449148705/ 08262-221515/221616*

ಒಂದು Miss Call ಮಾಡಿ ನಿಮ್ಮ ಬ್ಯಾಂಕ್ ವಿವರಗಳನ್ನು ತಿಳಿದುಕೊಳ್ಳಿ. ಈಗ ನೀವು ಬ್ಯಾಂಕ್ Balance ತಿಳಿದುಕೊಳ್ಳಲು ಬ್ಯಾಂಕು ಅಥವಾ ATM ಗೆ ಹೊಗಬೇಕಾಗಿಲ್ಲ. ನಿಮ್ಮ ಫೋನ್ ನಲ್ಲಿ ಈ ಕೆಳಗೆ ನೀಡಿರುವ ನಂಬರ್ ಗೆ Miss Call ಮಾಡಿದರೆ ಸಾಕು ಮಾಹಿತಿಯನ್ನು ಪಡೆಯುವಿರಿ.


Corporation Bank - 09268892688

Axis bank – 09225892258

Andhra bank – 09223011300

Allahabad bank – 09224150150

Bank of baroda – 09223011311

Bhartiya Mahila bank – 09212438888

Dhanlaxmi bank – 08067747700

IDBI bank – 09212993399

Kotak Mahindra bank – 18002740110

Syndicate bank – 09664552255

Punjab national bank – 18001802222

ICICI bank – 02230256767

HDFC bank – 18002703333

Bank of india – 02233598548

Canara bank – 09289292892

Central bank of india – 09222250000

Karnataka bank – 18004251445

Indian bank – 09289592895

State Bank of india – Get the balance via IVR 1800112211 and 18004253800

union bank of india – 09223009292

UCO bank – 09278792787

Vijaya bank – 18002665555

Yes bank – 09840909000

South indian bank- 092 23 008488

Friday, September 16, 2016

(ಸೆ.17) ವಿಶ್ವಕರ್ಮ ಜಯಂತಿ

"ಆಡು ಮುಟ್ಟದ ಸೊಪ್ಪಿಲ್ಲ,
ವಿಶ್ವಕರ್ಮರು ಆವರಿಸದ ಕ್ಷೇತ್ರವಿಲ್ಲ,
ಅವರ ಪಾತ್ರವಿಲ್ಲದ ಕ್ಷೇತ್ರಗಳಿಲ್ಲ, ಜಾತ್ರೆಗಳಿಲ್ಲ."

ಸೃಷ್ಟಿಕತ೯ ಬ್ರಹ್ಮನಾದರೆ,
ಅವನ ವಂಶಸ್ಥನಾದ ವಿಶ್ವಕರ್ಮನು
ಇಡೀ ಸೃಷ್ಟಿಯ
ಕರಡು ಪ್ರತಿಯ ಪಿತಾಮಹ,
ಸೃಷ್ಟಿಯ ನೀಲನಕ್ಷೆ ತಯಾರಕ.
(Draftsman of the whole Universe).

ಇಂದು ನಾವೆಲ್ಲರೂ ಒಂದು ಅತ್ಯದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾಯ೯ತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೇರೆ ಇನ್ನೇನಿಲ್ಲ.

ವಿಶ್ವಕಮ೯ ಎಂದರೆ ಸ್ವಗ೯ದ ಶಿಲ್ಪಿ. ಸಮುದ್ರಮಥನ ಕಾಲದಲ್ಲಿ ಹುಟ್ಟಿದ ಕಾಮಧೇನು, ಕಲ್ಪವೃಕ್ಷಗಳ ಹಾಗೆ 14 ಅತ್ಯಮೂಲ್ಯ ರತ್ನಗಳಲ್ಲಿ ವಿಶ್ವಕಮ೯ರೂ
ಒಬ್ಬರು.

"ವಿಶ್ವಕರ್ಮ ಎಂಬುವರು ವ್ಯಕ್ತಿಯಲ್ಲ ಅದೊಂದು ಅದ್ಭುತ, ಅದ್ವಿತೀಯ ದೈವ ಶಕ್ತಿ." ಎಂಬುದನ್ನು ಮರೆಯಬಾರದು

*ಋಗ್ವೇದದ ಪ್ರಕಾರ:

"ವಿಶ್ವಕರ್ಮರು ಇಡೀ ವಿಶ್ವದ ವಾಸ್ತುಶಿಲ್ಪಿ"
(Principal architecture of the universe,  Devine engineer of the world.)

*ಮಹಾಭಾರತದ ಪ್ರಕಾರ:

"ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಲಾದೇವತೆಯೇ ವಿಶ್ವಕಮ೯"
(The Lord of the arts,executor of a thousand handicrafts, the carpenter of the God's, the most eminent of artisans, the fashioner of all ornaments and a great & immortal god.)

ವಿಶ್ವಕಮ೯ರ ಕಾಯಕಯೋಗ:

*ದೇವಾನುದೇವತೆಗಳಿಗೆ ಸುಂದರ ಅರಮನೆಗಳನ್ನು ನಿಮಿ೯ಸಿಕೊಟ್ಟ ಕೀತಿ೯.

*ಪಂಚಮವೇದ ಎಂದೇ ಕರೆಯಲ್ಪಡುವ
'ಸ್ಥಪತ್ಯವೇದ'ವನ್ನು ನೀಡಿದ ಮಹಾ ಮೇಧಾವಿ.
ಸ್ಥಪತ್ಯವೇದವು ಯಂತ್ರಶಾಸ್ತ್ರ ಹಾಗೂ ಶಿಲ್ಪಶಾಸ್ತ್ರದ ವಿಜ್ಞಾನವಾಗಿದೆ.
(The science of mechanics and architecture)

*ದೇವಾನುದೇವತೆಗಳ ಹಾರುವ ರಥಗಳ ವಿನ್ಯಾಸಕಾರ.

*ದೇವಾನುದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ & ಪಟ್ಟಣಗಳನ್ನು ನಿಮಿ೯ಸಿದ ಕೀತಿ೯ ಇವರಿಗಿದೆ.
ಸತ್ಯಯುಗದಲ್ಲಿ-ಸ್ವಗ೯ದ ನಿಮಾ೯ಣ
ತ್ರೇತಾಯುಗದಲ್ಲಿ-ಲಂಕಾ ಪಟ್ಟಣ
ದ್ವಾಪರಯುಗದಲ್ಲಿ-ಶ್ರೀಕೃಷ್ಣನ ರಾಜಧಾನಿಯಾದ ದ್ವಾರಕಾ ಪಟ್ಟಣ ನಿಮಾ೯ಣ ಮಾಡಿದರು.

ಕೌರವರಿಗೆ ಹಸ್ತಿನಾಪುರ & ಪಾಂಡವರಿಗೆ ಇಂದ್ರಪ್ರಸ್ಥ ಎಂಬ ಸುಂದರ ನಗರಗಳ ನಿಮಾ೯ಣದ ಕೀತಿ೯ಯು ಇವರಿಗೆ ಸಲ್ಲುತ್ತದೆ.

ದೃಷ್ಟಾಂತ:

ವಿಶ್ವಕಮ೯ರ ಕಾಯ೯ದ ನೈಪುಣ್ಯತೆ ಹಾಗೂ ಕೌಶಲದ ಚಾಕಚಕ್ಯತೆ ಹೇಗಿದೆ ಎಂಬುದನ್ನು ಈ ದೃಷ್ಟಾಂತದ ಮೂಲಕ ತಿಳಿಯಬಹುದು.

ರಾಮಾಯಣದ ಪ್ರಕಾರ ಹೇಳುವಂತೆ
ತ್ರೇತಾಯುಗದಲ್ಲಿ ಶಿವನು ಪಾವ೯ತಿಯನ್ನು ಮದುವೆಯಾದ ಸಂದಭ೯ದಲ್ಲಿ, ಶಿವನು ತನ್ನ ಮಡದಿಯಾದ ಪಾವ೯ತಿಗಾಗಿ ಬಂಗಾರದ ಅರಮನೆಯನ್ನು ಉಡುಗೊರೆಯಾಗಿ ನೀಡಬೇಕೆಂದು ನಿಧ೯ರಿಸಿ,
ಬಂಗಾರದ ಅರಮನೆಯನ್ನು ನಿಮಿ೯ಸಿಕೊಡಬೇಕೆಂದು ವಿಶ್ವಕರ್ಮರಲ್ಲಿ ವಿನಂತಿಸಿದಾಗ ವಿಶ್ವಕರ್ಮರು ಅತ್ಯಂತ  ವಿಧೇಯರಾಗಿ ಒಪ್ಪುತ್ತಾರೆ.

ಶಿವನು ಬಂಗಾರದ ಅರಮನೆಯ ನಿಮಾ೯ಣಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ನೀಡುತ್ತಾನೆ.

ಕೆಲವು ದಿನಗಳ ನಂತರ ವಿಶ್ವಕರ್ಮರು ಅತ್ಯಂತ ಸುಂದರ & ಭವ್ಯವಾದ ಸುವಣ೯ಸೌಧ (ಬಂಗಾರದ ಅರಮನೆ)ವನ್ನು ನಿಮಿ೯ಸುತ್ತಾರೆ.

ಈ ಭವ್ಯ ಅರಮನೆಯ ಗೃಹಪ್ರವೇಶಕ್ಕೆ
(House opening ceremony) ಶಿವನು ತನ್ನ ಗುರುಗಳಾದ
'ಪುಲಸ್ಯ ಮಹಷಿ೯'ಗಳನ್ನು ಆಹ್ವಾನಿಸುತ್ತಾನೆ
(ಪುಲಸ್ಯ ಮಹಷಿ೯ಗಳು ಕುಬೇರ & ರಾವಣರ ಅಜ್ಜ).

ಪುಲಸ್ಯ ಮಹಷಿ೯ಗಳು ಗೃಹಪ್ರವೇಶ ಕಾಯ೯(ಕ್ರಮ)ವನ್ನು ಪೂತಿ೯ಗೊಳಿಸಿದ ನಂತರ ಶಿವನು,
ತನ್ನ ಗುರುಗಳು ಗುರುಕಾಣಿಕೆಯಾಗಿ ಏನನ್ನಾದರೂ ಸ್ವೀಕರಿಸಬೇಕೆಂದು ಕೇಳಿಕೊಂಡಾಗ, ಗುರುಗಳಾದ ಪುಲಸ್ಯ ಮಹಷಿ೯ಗಳು ಆಗಲೇ ಆ ಅರಮನೆಯ ಸೌಂದರ್ಯಕ್ಕೆ, ಕಲಾಕೃತಿಗಳ ಸೂಕ್ಷ್ಮ ಕೆತ್ತನೆಗೆ ಮನಸೋತಿದ್ದರು. ಆ ಬಂಗಾರದ ಅರಮನೆಯು ಮಹಷಿ೯ಗಳ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ,
ಗುರುಗಳು ಯಾವ ಅರಮನೆಯ ಗೃಹಪ್ರವೇಶವನ್ನು ಮಾಡಿದ್ದರೋ ಅದೇ ಅರಮನೆಯನ್ನು ಗುರುಕಾಣಿಕೆಯಾಗಿ ಕೇಳುತ್ತಾರೆ!!.

ಆಗ ಶಿವನಿಗೆ ಆಶ್ಚರ್ಯದ ಜೊತೆಗೆ ವಿಶ್ವಕಮ೯ರ ಕಾಯ೯ಕೌಶಲ್ಯದ ಬಗ್ಗೆ ಹೆಮ್ಮೆ ಎನಿಸಿತು.

ಶಿವನು ತನ್ನ ಗುರುಗಳಿಗೆ ಅತ್ಯಂತ ವಿಧೇಯನಾಗಿ ಆ ಭವ್ಯ ಬಂಗಾರದ ಅರಮನೆಯನ್ನು ಗುರುಕಾಣಿಕೆಯಾಗಿ ನೀಡುತ್ತಾನೆ.

ಪುಲಸ್ಯ ಮಹಷಿ೯ಗಳು ಈ ಅರಮನೆಯನ್ನು ತನ್ನ ಪ್ರೀತಿಯ ಮೊಮ್ಮಗನಾದ ಕುಬೇರನಿಗೆ ಉಡುಗೊರೆಯಾಗಿ ನೀಡುತ್ತಾರೆ.

ಕಾಲಕ್ರಮೇಣ ರಾವಣನು ಕುಬೇರನನ್ನು ಸೋಲಿಸಿದಾಗ ಈ ಅರಮನೆಯು ರಾವಣನ ಕೈವಶವಾಗುತ್ತದೆ.
ಸುವಣ೯ಲಂಕೆಯು ಕಾಲಾನಂತರದಲ್ಲಿ ಶ್ರೀಲಂಕೆ ಎಂದಾಯಿತು.

ವಿಶ್ವಕರ್ಮರ 5 ಜನ ಮಕ್ಕಳು ಒಂದೊಂದು ವೃತ್ತಿಯನ್ನು ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಆ ಪಂಚಕಮ೯ರು ಯಾರೆಂದರೆ:

1.ಮನು - ಕಮ್ಮಾರ(Blacksmith)

2.ಮಾಯಾ - ಬಡಿಗ(Carpenter)

3.ತ್ವಸ್ತರ - ಕಂಚಗಾರ(Bellmetal worker)

4.ಶಿಲ್ಪಿ - ಶಿಲ್ಪಕಾರ(Stone Masons)

5.ವಿಶ್ವಜ್ಞ- ಅಕ್ಕಸಾಲಿಗ/ಪತ್ತಾರ(Goldsmith).

ಪಂಚಕಮ೯ರನ್ನು ಪಂಚ್ಯಾಳರು ಎಂದು, ಇವರನ್ನು ವಿಶ್ವಕರ್ಮದವರೆಂದು ಹಾಗೂ ವಿಶ್ವಬ್ರಾಹ್ಮಣರೆಂದೂ ಕರೆಯಲಾಯಿತು.

ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಥಳಗಳು ಸೇರಿದಂತೆ ಭಾರತದ ಅಜಂತಾ,ಎಲ್ಲೋರಾ,ಖಜುರಾಹೋ,ಲಂಕಾ, ದ್ವಾರಕಾ, ನಳಂದಾ, ದೆಹಲಿಯ ಕುತುಬ್ ಮಿನಾರ, ಕೋನಾಕ೯ನ ಸೂಯ೯ದೇವಾಲಯ,
ಕನಾ೯ಟಕದ ಐಹೊಳೆ, ಹಂಪಿ, ಬದಾಮಿ, ಪಟ್ಟದಕಲ್ಲುಗಳಲ್ಲಿರುವ ಪ್ರವಾಸಿ ತಾಣಗಳು ವಿಶ್ವಕರ್ಮರ ಬೃಹತ್ ಕೊಡುಗೆಗಳಾಗಿವೆ.

ಇಂದು ಪ್ರತಿ ಗ್ರಾಮದ ಪ್ರತಿಯೊಂದು ಕಾಯ೯ಕ್ಕೂ ವಿಶ್ವಕಮ೯ರ ಅಗತ್ಯವಿದೆ.
ಆದ್ದರಿಂದ ಜಾತಿ, ಧಮ೯, ಪಂಗಡಗಳಿಗೆ ಅವರನ್ನು ಸೀಮಿತಗೊಳಿಸದೇ
ಸವ೯ರೂ ಅವರನ್ನು ಆರಾಧಿಸೋಣ, ಪೂಜಿಸೋಣ ಹಾಗೂ ಗೌರವಿಸೋಣ.

Thursday, September 15, 2016

ಪಟಾಕಿ

ಈ ಬಾರಿ ಯಾರೂ ಸಹ ದೀಪಾವಳಿಗೆ ಪಟಾಕಿಗಳನ್ನು ಖರೀದಿಸಬೇಡಿ..
ಕಾರಣ ಇಷ್ಟೇ... ನಾವು ಖರೀದಿಸುವ ಎಲ್ಲಾ ತರಹದ ಪಟಾಕಿಗಳು ಉತ್ಪಾದನೆಯಾಗುವುದು *ತಮಿಳುನಾಡಿನಲ್ಲಿ*..
ಈ ರೀತಿ ಪಟಾಕಿ ಹಚ್ಚುವುದನ್ನು ನಿಲ್ಲಿಸಿದರೆ ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ನಮ್ಮ ಜೀವಜಲ ಕಿತ್ತುಕೊಂಡ ತಮಿಳಿಗರಿಗೆ ಬೃಹತ್ ನಷ್ಟ ಆಗುತ್ತದೆ..
ಆದ್ದರಿಂದ ಸರಿಯಾಗಿ ಯೋಚಿಸಿ ಕೆಚ್ಚೆದೆಯ ಕನ್ನಡಿಗರೇ...
ಸ್ವಾಭಿಮಾನಿ ಕನ್ನಡಿಗರಾಗಿ.. ಪಟಾಕಿ ನಿಷೇಧಿಸಿ..
ಪ್ರತಿಯೊಬ್ಬ ನಿಜವಾದ ಕನ್ನಡಿಗನೂ ಶೇರ್ ಮಾಡಿ..

(ಸೆಪ್ಟೆಂಬರ್-16) "ವಿಶ್ವ ಓಝೋನ್ ದಿನ"

ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ
"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ.
ಹೀಗಾಗಿ ಕಷ್ಟ-ಸಂಕಷ್ಟ,
ಕೀಟ-ಕೋಟಲೆಗಳ ಭಯವೇಕೆ?
ಸಂಕಷ್ಟ ಬಂದರೆ
ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು." ಎಂಬ ಮಾತಿನಂತೆ
ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ.

“If earth is our mother,
then Ozone is our father”
ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ,
ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ.
ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು.

ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!!
ಭೂಮಿ ಬದುಕಲು
ಓಝೋನ್ ಬೇಕೇ-ಬೇಕು.

ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ,
ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ.

ಇತಿಹಾಸ:

ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್‌,
ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ಕ್ರಿಸ್ಟಿಯನ್‌ ಫ್ರೆಡ್ರಿಕ್‌ ಸ್ಕಾನ್‌ಬೀನ್‌ ಎಂಬಾತನಿಂದ 1840ರಲ್ಲಿ ಸೂಚಿಸಲ್ಪಟ್ಟಿತು.
ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ 'ಓಝೀನ್'‌
(ವಾಸನೆ ಬೀರುವುದು) ಎಂಬ ಗ್ರೀಕ್‌ ಕ್ರಿಯಾಪದದ ಹೆಸರನ್ನು ಅವನು ಓಝೋನ್‌ಗೆ ಇರಿಸಿದ.
ಓಝೋನ್‌ಗೆ ಸಂಬಂಧಿಸಿದ ಸೂತ್ರವಾದ O3 ಎಂಬುದು,
ಜಾಕ್ವೆಸ್‌-ಲೂಯಿಸ್‌ ಸೋರೆಟ್‌ ಎಂಬಾತನಿಂದ 1865ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್‌ಬೀನ್‌ ಎಂಬಾತನಿಂದ 1867ರಲ್ಲಿ ದೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.

1985ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು.ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸಕಾ೯ರದ ಮುಖ್ಯಸ್ಥರು ಒಟ್ಟಾಗಿ ಸೇರಿ
1987ರ ಸೆ.16ರಲ್ಲಿ ವಿಯೆನ್ನಾದಲ್ಲಿ ಓಜೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು.
ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧದ
"ಮಾಂಟ್ರೆಲ್ ಪ್ರೊಟೊಕಾಲ್‌"ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಜೋನ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ಹಾಗೂ 1994 ಸೆಪ್ಟೆಂಬರ್ 16 ರಂದು ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಿ,
1987ರ ಸೆಪ್ಟೆಂಬರ್ 16ರಂದು     ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿರುವುದನ್ನು ನೆನಪಿಸಲು,
ಸೆಪ್ಟೆಂಬರ್ 16 ಅನ್ನು
"ವಿಶ್ವ ಓಝೋನ್ ದಿನ" ಆಚರಿಸಲು ತೀರ್ಮಾನಿಸಿತು.
ಇದರ ಉದ್ದೇಶ ಓಜೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.

“Ozone is like your Heart,
If broken,
then you are Finish.” ಎಂಬ ಮಾತಿನಂತೆ ಓಝೋನ್ ಪದರ
250 ರಿಂದ 305 ಡಾಬ್ಸನ್ ಯುನಿಟ್ಟಿಗೆ ನಷ್ಟು ದಪ್ಪ (ಗಟ್ಟಿ)  ಇರಬೇಕು. ಆದರೆ ಈ ಹಿಂದೆ ಓಝೋನ್ ಪದರದಲ್ಲಿ ರಂಧ್ರವಾಗಿದೆ, ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಾಬ್ಸನ್ ನಷ್ಟಿತ್ತು.

2016 ಸಾಲಿನ ಘೋಷವಾಕ್ಯ(Theme):

"Ozone and climate: Restored by a world united"
ಅಂದರೆ ವಿಶ್ವವೇ ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವುದು.

ಆಮ್ಲಜನಕದ ಮೂರು ಪರಮಾಣುಗಳು ಸೇರಿ ಓಝೋನ್ (03) ಆಗುತ್ತದೆ.
ವಾತಾವರಣದ ಮೇಲೆ ಭೂಮಿಯನ್ನು ಆವರಿಸಿರುವ ಓಝೋನ್ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.

ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ  ಓಝೋನ್ ಪದರು ಭೂಮಿಯನ್ನು ಆವರಿಸಿದೆ.

ಓಝೋನ್ ಪದರಿನ ಮುಖ್ಯವಾದ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.

ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(O2) ಮೇಲೆ ಬಿದ್ದಾಗ ಆಮ್ಲಜನಕ ಎರಡು ಅಣುಗಳಾಗಿ (O+O) ಬೇರ್ಪಡುತ್ತವೆ.
ಬೇರ್ಪಡದೇ ಇದ್ದ ಆಮ್ಲಜನಕದ(O2) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಜೋನ್ (O3) ಆಗುತ್ತದೆ.

ಓಝೋನ್ ಪದರು ನಾಶವಾಗಲು ಮುಖ್ಯವಾದ ಕಾರಣಗಳು:

*ಪ್ರಿಜ್ ಮತ್ತು ಕೋಲ್ಡ ಹೌಸಗಳಲ್ಲಿ ಉಪಯೋಗಿಸುವ ChloroFluoroCarbons (CFC's) ಮತ್ತು ವಾಯುಮಾಲಿನ್ಯ,
CFCನ ಒಂದು ಅಣುವು
ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ.
ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.

*ಬಾಹ್ಯಾಕಾಶ ಸಂಶೋಧನೆ, ಉಪಗ್ರಹಗಳ ಉಡಾವಣೆಗೆ ಹಾರಿಬಿಡುವ ರಾಕೆಟ್‌ಗಳಿಂದ ಹಾನಿ.

*ಬೃಹತ್ ಕೈಗಾರಿಕೆ ಮತ್ತು ವಾಹನಗಳ ಹೊಗೆ.

ಓಝೋನ್ ಪದರದ ನಾಶದಿಂದಾಗುವ ಪರಿಣಾಮಗಳು:

ಅತಿಯಾದ ಮಳೆ,
ಅತಿಯಾದ ಬರ,
ಸಮುದ್ರ ಮಟ್ಟದ ಏರಿಕೆ,
ನದಿ ಪ್ರವಾಹಗಳು,
ಒಣಗುತ್ತಿರುವುದು & ಬರಿದಾಗುವ ಕಾಡುಗಳು,
ಭೂತಾಪ ಏರಿಕೆ,
ಅತಿಯಾದ ಚಳಿ,
ಅತಿಯಾದ ಶಾಖ,
ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಇದರಿಂದಾಗಿ ಶಹರದಲ್ಲಿ ಉಸಿರಾಡಲು ಶುದ್ಧವಾದ ಗಾಳಿಸಿಗುವುದೇ ಕಷ್ಟವಾಗಿದೆ. ಮತ್ತು ಮನುಷ್ಯನು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಭೂಮಿಯ ಮೇಲಿರುವ ಓಝೋನ್ ಪದರು ನಾಶವಾದರೆ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ.
ಆಗ ಭೂಮಿಯ ಮೇಲೆ ಅತಿಯಾದ ಶಾಖ, ಉಂಟಾಗುತ್ತದೆ.
ಭೂಮಿಯ ಮೇಲೆ ಇರುವ ಉತ್ತರ,
ದಕ್ಷಿಣ ಧೃವದಲ್ಲಿ ಹಾಗೂ ಭೂಮಿಯ ಮೇಲೆ ಇರುವ ಎಲ್ಲ ಮಂಜುಗಡ್ಡೆ ಕರಗಿ ನೀರಾಗಿ ನದಿಗಳ ಮುಖಾಂತರ ಸಮುದ್ರವನ್ನು ಸೇರುತ್ತವೆ.
ಆಗ ಸಮುದ್ರದ ಮಟ್ಟವು 113 ಅಡಿಗಳಷ್ಟು ಏರುತ್ತದೆ.
ಸಮುದ್ರ ಮಟ್ಟ ಇಷ್ಟು ಏರಿದರೆ ಭೂಮಿಯು ನೀರಿನಿಂದ ಆವರಿಸುತ್ತದೆ.
ಈ ದಿನವನ್ನೇ ನಾವು "ಡೂಮ್ಸಡೇ" ಎಂದು ಕರೆಯುತ್ತೇವೆ.
ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ.

ಓಝೋನ ಪದರನ್ನು ರಕ್ಷಣೆ ಮಾಡುವ ವಿಧಾನಗಳು :

ಓಜೋನ್ ರಕ್ಷಣೆಗಾಗಿ ಇಷ್ಟು ಮಾಡಬೇಕು

* ಕೃಷಿಯಲ್ಲಿ ಕೀಟನಾಶಕವಾಗಿ ಬಳಸುತ್ತಿರುವ ಮಿಥೈಲ್ ಬ್ರೋಮೈಡ್‌ಗೆ ನಿಷೇಧ

* ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ

* ಸಿಎಫ್‌ಸಿ ಇಲ್ಲದ ಶೀತಲ ಯಂತ್ರಗಳು, ಹವಾ ನಿಯಂತ್ರಣದ ಉಪಕರಣಗಳ ಬಳಕೆ.

* ಭೂಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ,

* ಅರಣ್ಯನಾಶ ಮಾಡಬಾರದು

* ಹೆಚ್ಚೆಚ್ಚು ಸಸ್ಯ ಬೆಳೆಸುವುದು

* ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.

* ಪೆಟ್ರೋಲ್, ಡಿಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು.

* ರೆಪ್ರಿಜರೇಟರ್ ಹಾಗೂ ಕೋಲ್ಡ್ ಹೌಸಗಳಲ್ಲಿ CFCs ಅಣುವಿನ ಬದಲು Hydro ChloroFluoroCarbon (HCFCs) ರಾಸಾಯಿನಿಕ ಉಪಯೋಗಿಸಬೇಕು.

ನಾವೆಲ್ಲರೂ ಮಾಡಲೇಬೇಕಾದ ಸಂಕಲ್ಪ:

“Save ozone layer else you may lie in no zone”

"ಓಝೋನ್ ಇಲ್ಲದ ಭೂಮಿಯು
ಮೇಲ್ಛಾವಣಿ ಇಲ್ಲದ ಮನೆಯಂತೆ"
ಆದ್ದರಿಂದ
‘ವಿಶ್ವ ಓಝೋನ್ ದಿನ’ ದಂದು ನಾವು ಪ್ರತಿಜ್ಞೆ ಗೈಯೋಣ
“ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸುತ್ತೇವೆ.
ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ, ಹಾಗೆ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡುತ್ತೇವೆ”.ಎಂದು ಸಂಕಲ್ಪ ಮಾಡೋಣ, ಆ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಗಳಾಗೋಣ.