Wikipedia

Search results

Friday, July 01, 2016


🌏ಕಾಲಾನುಕ್ರಮಣಿಕೆ🌏

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.

ಸಂಯೋಜಿತ ಬಿಎಡ್‌ಗೆ ರಾಷ್ಟ್ರವ್ಯಾಪಿ ಸಿಇಟಿಗೆ ಚಿಂತನೆ

ನವದೆಹಲಿ: ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳು ನಡೆಸುತ್ತಿರುವ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ಕೋರ್ಸ್‌ ಪ್ರವೇಶಕ್ಕೆ ರಾಷ್ಟ್ರವ್ಯಾಪಿ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಚಿಂತನೆ ನಡೆಸುತ್ತಿದೆ.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಾಲ್ಕು ವರ್ಷಗಳ ಬಿಎ–ಬಿಎಡ್‌ ಮತ್ತು ಬಿಎಸ್‌ಸಿ–ಬಿಎಡ್‌ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ‘ಪಿಯುಸಿ ನಂತರ ಅತ್ಯುತ್ತಮ ವಿದ್ಯಾರ್ಥಿಗಳು ಶಿಕ್ಷಕ ತರಬೇತಿಗೆ ಸೇರುವಂತೆ ಮಾಡಲು ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ನಡೆಸಬೇಕು’ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯ ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಗಳು ಕೂಡ ತಮ್ಮ ವ್ಯಾಪ್ತಿಯಲ್ಲಿರುವ ಶಿಕ್ಷಕ ತರಬೇತಿ ಸಂಸ್ಥೆಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಅವರು ಕೋರಿದ್ದಾರೆ. ಈಗ ಇರುವ ಶಿಕ್ಷಕ ತರಬೇತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಮಾನವ ಸಂಪನ್ಮೂಲ ಸಚಿವಾಲಯ ಬಯಸಿದೆ ಎಂದು ಕುಂಟಿಯ ತಿಳಿಸಿದ್ದಾರೆ.

ಮುಂದಿನ 10–20 ವರ್ಷಗಳ ಅವಧಿಯಲ್ಲಿ ಎಷ್ಟು ಶಿಕ್ಷಕರ ಅಗತ್ಯ ಇದೆ ಎಂಬುದನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಶಿಕ್ಷಕ ವೃತ್ತಿಗೆ ಆಕರ್ಷಿಸಲು ಯೋಜನೆ ರೂಪಿಸಲಾಗುವುದು. ಈಗ ಶಿಕ್ಷಕ ವೃತ್ತಿಗೆ ಪ್ರತಿಭಾವಂತರು ಬರುತ್ತಿಲ್ಲ. ಪ್ರತಿಭಾವಂತರು ಈ ಕ್ಷೇತ್ರಕ್ಕೆ ಬರುವ ರೀತಿಯಲ್ಲಿ ವೃತ್ತಿಯನ್ನು ಆಕರ್ಷಕಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು
* ದೇಶದಲ್ಲಿರುವ ಒಟ್ಟು ಶಿಕ್ಷಕ ತರಬೇತಿ ಕಾಲೇಜುಗಳು: 18,839
* ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಖಾಸಗಿ
* ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ಕೋರ್ಸ್‌ ಕಳೆದ ವರ್ಷ ಆರಂಭ
* ಶಿಕ್ಷಣ ಕ್ಷೇತ್ರಕ್ಕೆ ಪ್ರತಿಭಾವಂತರನ್ನು ಆಕರ್ಷಿಸುವುದು ಉದ್ದೇಶ
* ರಾಜ್ಯಗಳಲ್ಲಿ ಪ್ರತ್ಯೇಕ ಶಿಕ್ಷಕರ ಕೇಡರ್‌ ರೂಪಿಸಲು ಸಲಹೆ
* ನಾಲ್ಕು ವರ್ಷಗಳ ಬದಲಿಗೆ ಪ್ರತಿ ವರ್ಷ ಖಾಲಿ ಹುದ್ದೆ ಭರ್ತಿಗೆ ಮನವಿ
* ಡಯೆಟ್‌ನಲ್ಲಿ ಶೇ 38 ರಷ್ಟು ಹುದ್ದೆಗಳು ಖಾಲಿ ( 15,900 ಹುದ್ದೆಗಳಲ್ಲಿ  6,083 ಖಾಲಿ )

ಸಂಪತ್ತಿನ ವ್ಯಾಮೋಹ:~
(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)
                    ಬಾವಿಯ ಅಂಚಿನಲ್ಲಿ ಆಡುತ್ತಿದ್ದ ಮಗುವೊಂದು ಆಯತಪ್ಪಿ ಒಳಗೆ ಜಾರಿತು.
ಮಗು ಬಿದ್ದ ಸದ್ದು ಕೇಳಿ ಹೆತ್ತವರು ಎದೆ ಬಡಿದುಕೊಂಡು ಗೋಳಾಡುತ್ತಾ ಬಾವಿಯತ್ತ ಓಡಿಬಂದರು.

ಅಷ್ಟರಲ್ಲಿ ಅಲ್ಲೇ ಬಾವಿಯ ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವನೊಬ್ಬ ಮಗು ಬಿದ್ದದ್ದನ್ನು ಕಂಡು ಬಾವಿಗೆ ಧುಮುಕಿದ.

ಆತ  ಈಜಿಕೊಂಡು ಮಗುವನ್ನು ಸಮೀಪಿಸುತ್ತಿದ್ದಂತೆ ಬಾವಿಯ ಸುತ್ತ ನಿಂತವರ ಆಕ್ರಂದನ ಜೋರಾಗತೊಡಗಿತು.

ನೀನು ಕೇಳಿದ್ದನ್ನು ಕೊಡ್ತೀವಿ ನಮ್ಮ ಮಗುವನ್ನು ಬದುಕಿಸಿಕೊಡಪ್ಪಾ -ಎಂದು ಹೆತ್ತವರು ಅಂಗಲಾಚುತ್ತಿದ್ದರು.

ಅಷ್ಟು ಪ್ರಕ್ಷುಬ್ಧ ವಾತಾವರಣದಲ್ಲಿಯೂ ಆತನ ಮುಖಭಾವ ಬಾವಿಯ ನೀರಿನಂತೆ ತಣ್ಣಗಿತ್ತು.
ಮಗು ಜೀವಂತವಾಗಿದೆ ಎಂದು ಆತ ಮೇಲಿನವರಿಗೆ ಸನ್ನೆ ಮಾಡಿದಾಗ ಎಲ್ಲರೂ ನಿರಾಳರಾದರು.

ಆತ ಕೇವಲ ಮಗುವನ್ನು ಮಾತ್ರ ಮೇಲಕ್ಕೆ ಎತ್ತು ತರಲಿಲ್ಲ.
ಅಲ್ಲೇ ಬಾವಿಯ ಇನ್ನೊಂದು ಬದಿಯಲ್ಲಿ ಕೊಳೆತ ತೆಂಗಿನ ಗರಿಯನ್ನು ಕಚ್ಚಿಕೊಂಡು ಜೀವ ಉಳಿಸಿಕೊಳ್ಳಲು ಹೆಣಗುತ್ತಿದ್ದ ನಾಯಿ ಮರಿಯನ್ನೂ ಎತ್ತಿಕೊಂಡು ಬಂದ.
ನಾಯಿ ಮರಿಯನ್ನು ಮುದ್ದಾಡುತ್ತಿದ್ದಾಗ ಮಗುವು ಮರಿಯ ಜೊತೆಗೆ ಬಾವಿಗೆ ಬಿದ್ದಿತ್ತು.

ಮಗುವಿನ ನಡುವಿನಲ್ಲಿದ್ದ ಚಿನ್ನದ ಉಡುದಾರ ನೀರಿನಲ್ಲಿ ಜಾರಿಹೋಗಿತ್ತು.

ಮೊದಲು ಮಗು ಬದುಕುಳಿದರೆ ಸಾಕೆಂದು ಪ್ರಾರ್ಥಿಸುತ್ತಿದ್ದ ಹೆತ್ತವರ ಸಂಭ್ರಮವನ್ನು ಉಡುದಾರದ ಚಿಂತೆ  ನುಂಗಿ ಹಾಕಿತು.!!!

ಇನ್ನೊಂದು ಕಡೆ ಬಾವಿಯ ಅಂಚಿನಲ್ಲಿ ನಿರ್ಲಿಪ್ತವಾಗಿ ನೋಡುತ್ತಿದ್ದ ನಾಯಿ ತನ್ನ ಮರಿ ಮೇಲೆ ಬಂದ ಕೂಡಲೇ ಅಕ್ಕರೆಯಿಂದ ನೆಕ್ಕತೊಡಗಿತು,
ಯಾವ ದಾರದ ಗೊಡವೆಯೂ ಇಲ್ಲದೇ.

ಹೆತ್ತವರ ನಾಟಕಿಯ ಬದಲಾವಣೆ ಆತನನ್ನು ಬಾಧಿಸಲಿಲ್ಲ.
ಕಪಟತೆ ಅರಿಯದ ಎರಡು ಜೀವಿಗಳನ್ನು ರಕ್ಷಿಸಿದ ಸಂತೃಪ್ತಿಯಿಂದ ಹೆಜ್ಜೆ  ಹಾಕಿದ.

*ಮತ್ತೆ-ಉಲ್ಬಣಿಸುತ್ತಿದೆ,,,,,,ಡೆಂಗ್ಯೂ-ಮಹಾಮಾರಿ.......*
ಮಳೆಗಾಲ ಬಂತೆಂದರೆ ಎಲ್ಲರ ಎದೆಯಲ್ಲಿ ಡವಡವ. ಹೌದು ಸುರಿಯುತ್ತಿರುವ ಮೊದಲ ಮಳೆಗೆ ಅದೆಷ್ಟೋ ಜನ ಸಣ್ಣ ಪುಟ್ಟ ಖಾಯಿಲೆಗಳಿಗೆ ತುತ್ತಾಗುತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಎಂಬ ಮಹಾಮಾರಿಯೊಂದು ಎಲ್ಲರ ಮನೆ ಕದ ತಟ್ಟುತಿದೆ. 
*ಏನಿದು ಡೆಂಗ್ಯೂ??????*
ಸೋಂಕಿತ ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವೈರಸ್ ನಿಂದ ಬರುವ ರೋಗವಾಗಿದೆ.

*ಡೆಂಗ್ಯೂ* *ಜ್ವರದ* *ಲಕ್ಷಣಗಳೇನು?????*
ಡೆಂಗ್ಯೂ ವೈರಸ್ ಸೋಂಕಿನ ರೋಗಲಕ್ಷಣಗಳು ಇತರೇ ವೈರಲ್ ಜ್ವರದ ಲಕ್ಷಣಗಳನ್ನು ತೋರಿಸಬಹುದು ಮತ್ತು ತೋರದೇ ಇರಬಹುದು.
ಇದ್ದಕ್ಕಿದ್ದಂತೆ ತೀವ್ರ ಸ್ವರೂಪದ ಜ್ವರ ಕಾಣಿಸಿಕೊಳ್ಳುವುದು.
ತೀವ್ರ ತಲೆನೋವು, ಗಂಟಲು ನೋವು, ಕಣ್ಣು ನೋವು, ಜಂಟಿ ಮತ್ತು ಸ್ನಾಯು ನೋವು, ಹಸಿವಾಗದಿರುವುದು, ಉದರದ ಅಸ್ವಸ್ಥತೆ,ತುರಿಕೆ,  ಚಿಕ್ಕ ಮಕ್ಕಳಿಗೆ ಶೀತ , ಬೇದಿ, ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುವಿಕೆಗಳ ಲಕ್ಷಣಗಳನು ತೋರುತ್ತಾರೆ.
ಡೆಂಗ್ಯೂ ಜ್ವರಮುದ್ರೆ ಪ್ಲೇಟ್ಲೆಟ್ ಕೌಂಟ್ ಇಳಿಕೆಯಾಗುವುದು ಈ ಲಕ್ಷಣಗಳು ಮಾನವನ ದೇಹದಲ್ಲಿ ಕಂಡ ಎಂಟು ಗಂಟೆಗಳ ವಿರಾಮದಲ್ಲಿ ಪ್ಲೇಟ್ಲೆಟ್ ಎಣಿಕೆಯನ್ನು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ.

*ಡೆಂಗ್ಯೂ* *ರೋಗಿ* *ಏನೆಲ್ಲಾ* *ಅನುಸರಿಸಬೇಕು?????*
ಸೋಂಕಿತ ವ್ಯಕ್ತಿಯು ಹೆಚ್ಚಿನ ವಿಶ್ರಾಂತಿಯಲ್ಲಿರುವುದು ಬಹುಮುಖ್ಯವಾಗಿದೆ. ನೀರಿನ ಹೊರತು ಸಾಕಷ್ಟು ಪ್ರಮಾಣದಲ್ಲಿ ರಸ, ಸಾರು, ಅಂಬಲಿಯಂತಹ ದ್ರವಗಳನ್ನು ಸೇವಿಸುವುದು. ಪಪ್ಪಾಯಿ ಎಲೆಯ/ ಹಣ್ಣಿನ ರಸ, 
ಸೂಪ್, greul , ಇತರೇಹಣ್ಣಿನ ರಸವನ್ನು - ಒಂದು ದಿನದಲ್ಲಿ ಎರಡೂವರೆ ಲೀಟರ್ ಗಳವರೆಗೆ ಕುಡಿಯಬೇಕು. Paracetemol ಮಾತ್ರೆಯನ್ನು ಜ್ವರ ನಿಯಂತ್ರಿಸಲು ತೆಗೆದುಕೊಳ್ಳಬೇಕು.  ಪ್ಯಾರಸಿಟಮಾಲ್ ಹೊರತಾಗಿಯೂ ಜ್ವರ ಹೆಚ್ಚಿದ್ದರೇ ಒದ್ದೆಬಟ್ಟೆಯಲ್ಲಿ ದೇಹವನ್ನು ಒರೆಸಿರಿ ಮಾಡಿ. ಪ್ಲೇಟ್ಲೆಟ್ ಎಣಿಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಡಾರ್ಕ್ ಹೊಂದಿರುವ ಕಲರ್ಡ್ ಮಲ ಈ ಲಕ್ಷಣಗಳಿದ್ದಲ್ಲಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡುವುದು.

*ಡೆಂಗ್ಯೂ ಜ್ವರ ಬಂದಾಗ *ಏನೇನು* *ಮಾಡಬಾರದು?????*
ದೇಹವು ಬಿಸಿಯಾಗಿದ್ದೂ, ಕೈ ಮತ್ತು ಕಾಲು ತಣ್ಣಗಿರುವಾಗ ಆಸ್ಪಿರಿನ್ ಮತ್ತು ಸಾಂಪ್ರದಾಯಿಕ ನೋವು ನಿವಾರಕಗಳನ್ನು,ಸ್ಟೀರಾಯ್ಡ್ ಗಳನ್ನು, ಪ್ರತಿಜೀವಕಗಳನ್ನು, ರಕ್ತ ಅಥವಾ ಪ್ಲೇಟ್ಲೆಟ್ ವರ್ಗಾವಣೆಗಳನ್ನು ಆದಷ್ಟು ತಪ್ಪಿಸಬೇಕು.ಯಾವುದೇ ಹೊರವಸ್ತು ಅಥವಾ ಔಷಧಗಳಿಂದ ಪ್ಲೇಟ್ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ, ಡೆಂಗ್ಯೂವನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಈ ರೋಗದ ತೊಡಕುಗಳನ್ನು ತಡೆಯಬಹುದು.

*ಯಾವಾಗ* *ರೋಗಿಯನ್ನು* *ಆಸ್ಪತ್ರೆಯಿಂದ* *ಡಿಸ್ಚಾರ್ಜ್**ಮಾಡಬೇಕು?????* 
ವೈದ್ಯರ ಸೂಚನೆಯಂತೆ
ಪ್ಲೇಟ್ಲೆಟ್ ಎಣಿಕೆ 50,000ಕ್ಕೂ ಹೆಚ್ಚಿದ್ದಲ್ಲಿ, ಉತ್ತಮ ಹಸಿವು, ರೋಗಿಯ ಸಾಮಾನ್ಯ ಸ್ಥಿತಿಯಲ್ಲಿ ಉತ್ತಮ ಬದಲಾವಣೆ ಕಾಣಿದ್ದಲ್ಲಿ, Paracetemol ಬಳಸದೆ 24 ಗಂಟೆಗಳ ಕಾಲ ಜ್ವರ ಬಾರದ ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೆ ಮಾಡಬಹುದು.
*ಡೆಂಗ್ಯೂ ನಿಯಂತ್ರಣ ಕ್ರಮಗಳು.......*
●ಸೊಳ್ಳೆ ತಾಣಗಳ ಸಂಪೂರ್ಣ ನಾಶ ಮಾಡುವುದು.
●ಪರಿಸರ ನೈರ್ಮಲ್ಯ ನಾವು ವಾಸಿಸುವ ಹೊರಾಂಗಣ ಸ್ವಚ್ಛತೆಯಿಂದಿರಲಿ.
●ಅನುಉಪಯುಕ್ತ ಪ್ಪಾಸ್ಟಿಕ್, ಗಾಜಿನ ಬಾಟಲಿಗಳು, ಪಾತ್ರೆಗಳು, ಟಯರ್ ಇತ್ಯಾದಿ ವಸ್ತಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು.
●ಮಲಗುವಾಗ ಸೊಳ್ಳೆಪರದೆ ಉಪಯೋಗಿಸುವುದು.
●ಸಂಜೆಯ ವೇಳೆಯಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ಆದಷ್ಟು ಮುಚ್ಚುವುದು.
● ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸುವುದು.
●ನೀರಿನ ಎಲ್ಲಾ ತೋಟ್ಟಿ, ಡ್ರಮು, ಬ್ಯಾರಲ್ ಗಳನ್ನು ಖಾಲಿ ಮಾಡಿ ಸ್ವಚ್ಛ ಗೊಳಿಸುವುದು.

- forward to your friends, relatives