Wikipedia

Search results

Tuesday, February 14, 2017

ಲಕ್ಷ್ಮೇಶ್ವರ ಉತ್ಸವ


Wishes


'ಅಂಬಲಿ ಹಳಸಿತು ಕಂಬಳಿ ಬೀಸಿತು' ಮೈಲಾರದಲ್ಲಿ ಗೊರವಯ್ಯ ಕಾರ್ಣಿಕ...ಏನಿದರರ್ಥ?

ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರಲಿಂಗ
ಸ್ವಾಮಿಯ ಕಾರಣೀಕೋತ್ಸವ ಇಂದು ನಡೆಯಿತು.
ಮೈಲಾರದಲ್ಲಿನ ಡಂಕನ ಮರಡಿ ಪ್ರದೇಶದಲ್ಲಿ
ಗೊರವಪ್ಪ ದೈವದ ಬಿಲ್ಲನ್ನೇರಿ ಕಾರ್ಣಿಕ ನುಡಿದನು.
'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್'
ಎಂಬುದು ಈ ವರ್ಷದ ಕಾರ್ಣಿಕವಾಗಿದೆ.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ
ಜನ ಮೈಲಾರಲಿಂಗೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿದರು.
ತದನಂತರ ಮೈಲಾರ ದೇವಸ್ಥಾನದಿಂದ ಕುದುರೆಯ ಮೇಲೆ
ದೇವಸ್ಥಾನದ ಧರ್ಮಕರ್ತರನ್ನು ಮೆರವಣಿಗೆ ಮೂಲಕ
ಡಂಕನ ಮರಡಿ ಪ್ರದೇಶಕ್ಕೆ ಕರೆತರಲಾಯಿತು.

ಗುರುವಿನ ಸ್ಥಾನದಲ್ಲಿದ್ದ ಧರ್ಮಕರ್ತರು ಕಳೆದ 9
ದಿನಗಳಿಂದ ವೃತಾಚರಣೆ ಮೂಲಕ ಇದ್ದ
ಗೊರವಪ್ಪನಿಗೆ ಬೋಧನೆ ಮಾಡುತ್ತಾರೆ. ನಂತರ
ಗೊರವಪ್ಪ ದೈವದ 20 ಅಡಿಗೂ ಎತ್ತರದ
ಬಿಲ್ಲನ್ನೇರಿ ಈ ವರ್ಷದ ಕಾರಣಿಕ ನುಡಿಯನ್ನು ನುಡಿಯುತ್ತಾನೆ.

ಈ ಕಾರಣಿಕದ ನುಡಿಯನ್ನು ಕಳೆದ ಹಲವು ಶತಮಾನಗಳಿಂದ
ರಾಜ್ಯದ ಜನತೆ ಮುಂದಿನ ವರ್ಷದ ಕೃಷಿ,
ರಾಜಕೀಯ ಮೊದಲಾದವುಗಳ ಬಗ್ಗೆ ತಮಗೆ
ಅರಿತಂತೆ ವಿಶ್ಲೇಷಣೆ ಮಾಡುತ್ತಾರೆ.

ಕಳೆದ 2007ರಲ್ಲೂ ಇದೇ ರೀತಿ ನುಡಿಯಲಾಗಿತ್ತು. ಈ
ಕಾರಣಿಕ ನುಡಿಯನ್ನು ಉತ್ತಮ ಮಳೆಯಾಗಿ ಬೆಳೆ ಬರುತ್ತದೆ.

ಜೊತೆಗೆ ಅತಿವೃಷ್ಟಿಯಿಂದ
ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು, ಅಲ್ಲದೆ
ರಾಜಕೀಯವಾಗಿ ಬದಲಾವಣೆಗಳ ಪರ್ವ
ಆರಂಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.