Wikipedia

Search results

Friday, September 30, 2016

ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ

ನವದೆಹಲಿ: ‘ಭಾರತೀಯ ಸೇನಾಪಡೆ ಬುಧವಾರ ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿಯ ಭಯೋತ್ಪಾದಕ ಅಡಗುತಾಣಗಳ ಮೇಲೆ ‘ಸರ್ಜಿಕಲ್‌ ಕಾರ್ಯಾಚರಣೆ’ ನಡೆಸಿದ್ದು, ಯಾವುದೇ ಬಗೆಯ ಪರಿಣಾಮಗಳನ್ನು ಎದುರಿಸಲು ದೇಶ ಸನ್ನದ್ಧವಾಗಿದೆ’ ಎಂದು ಭಾರತೀಯ ಸೇನಾ ಪಡೆಯ ಲೆ.ಜ. ರಣವೀರ್‌ ಸಿಂಗ್‌ ಹೇಳಿದ್ದಾರೆ.

ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಸಹ ಹಾಜರಿದ್ದರು.

‘ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳು ಸಾಕಷ್ಟು ಧ್ವಂಸವಾಗಿವೆ’ ಎಂದಿರುವ ಅವರು ಕಾರ್ಯಾಚರಣೆ ಮುಂದುವರಿಸುವ ಯಾವುದೇ ಯೋಜನೆ ಇಲ್ಲ’ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಭಯೋತ್ಪಾದಕ ಅಡಗುತಾಣಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ. ‘ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಅವಕಾಶ ನೀಡುವುದಿಲ್ಲ’ ಎಂದು ಸಿಂಗ್‌ ಖಡಕ್‌ ಆಗಿ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಕಮಿಟಿ ಸಭೆ ನಡೆಸಿದ ನಂತರವೇ ಸಿಂಗ್‌ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಗೃಹಸಚಿವ ರಂಜತ್‌ ಸಿಂಗ್‌, ಆರ್ಥಿಕ ಸಚಿವ ಅರುಣ್್ ಜೇಟ್ಲಿ ಮತ್ತು ಸೇನಾ ಮುಖ್ಯಸ್ಥ ದಲ್ಬಿರ್‌ ಸಿಂಗ್‌ ಸುಹಾಗ್‌ ಸಹ ಹಾಜರಿದ್ದರು.

ಸರ್ಜಿಕಲ್ ಕಾರ್ಯಾಚರಣೆ ಎಂದರೇನು?
ನಿರ್ದಿಷ್ಟ ಮತ್ತು ನಿಖರ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಆಪರೇಷನ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್‌ ಆಪರೇಷನ್ ಎಂದೂ ಕರೆಯಲಾಗುತ್ತದೆ. ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ.

1) ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಜನರ ಬಿಡುಗಡೆಗಾಗಿ.

2) ವೈರಿ ದೇಶದಲ್ಲಿ ನಮ್ಮ ದೇಶದ ಸರ್ಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.

ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.

ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ನೈಜೀರಿಯಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಆಪರೇಷನ್‌ಗೆ ಉತ್ತಮ ಉದಾಹರಣೆ.

ಸರ್ಜಿಕಲ್ ಅಥವಾ ಪ್ರಿಸಿಷನ್ ಕಾರ್ಯಾಚಾರಣೆಯು ಒಂದು ದೇಶದ ಮಿಲಿಟರಿ ಬಲ, ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಬುದ್ಧಿವಂತಿಕೆ ತೋರುವ ಟ್ಯಾಕ್ಟಿಕಲ್ ಯುದ್ಧತಂತ್ರವೂ ಹೌದು.

ಸಿಂಹದ ಮರಿಗಳು ನಮ್ಮ ಸೈನಿಕರು

ಸಿಂಹದ ಮರಿಗಳು
ನಮ್ಮ ಸೈನಿಕರು
ಸಿಡಿದೆದ್ದು ನಿಂತರೆ
ನಿರ್ನಾಮ ಶತ್ರುಗಳು

'ಉರಿ'ಯ ತನ್ನವರ ಬಲಿದಾನ
ಕೆಣಕಿತ್ತು ಯೋಧರ ಸ್ವಾಭಿಮಾನ
ಶತ್ರು  ಆಕ್ರಮಿತ ನೆಲದಲ್ಲೇ
ನೆತ್ತರು ಚೆಲ್ಲಿ ನೀಡಿತು ತರ್ಪಣ

ಶಸ್ತ್ರಗಳು ಮಲಗಿದ್ದ ವೇಳೆ
ದಾಳಿ ನಡೆಸಿ ಬೀಗಿದ ಹೇಡಿಗಳು
ಶಸ್ತ್ರಸಜ್ಜಿತ ನೆಲೆಗಳ ಮೇಲೆ
ಎರಗಿ ಸೇಡು ತೀರಿಕೊಂಡ ಕಲಿಗಳು

ಶಾಂತಿಮಂತ್ರ  ಪಠಿಸುವ ನಮ್ಮಲ್ಲಿ
ಕ್ರಾಂತಿಯ ಸ್ಫೋಟಿಸಿ ಸದೆಬಡಿದರು
ಸುಮ್ಮಸುಮ್ಮನೆ ಕೆಣಕಿದರೆ
ಕೈಕಟ್ಟಿ ಕೂರುವವರಲ್ಲ ನಮ್ಮ ಯೋಧರು


ಅಮಾಯಕರ ಸಾವಿನ ಬೆಲೆ
ತೆತ್ತಾಯಿತು ಆ ಶತ್ರು ನೆಲೆ
ಉಗ್ರವಾದಕೆ ಕೊನೆ ಹಾಡಲು
ಉತ್ತರ ಕೊಟ್ಟಿತು ನಮ್ಮ ಯೋಧಪಡೆ

ಅಭಿಮಾನದೊಂದು ನಮನ
ಆತ್ಮವಿಶ್ವಾಸ ಮೂಡಿದ ಕ್ಷಣ
ಕೈಲಾಗದವರಲ್ಲ ನಾವು
ಕೈ ಎತ್ತಿದರೆ ಶರಣಾಗುವುದು ಸಾವು

ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ : ಅವಧಿ ವಿಸ್ತರಣೆ

ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಹಾಗೂಪ.ಪಂಗಡದ 1 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಆನ್ಲೈನ್ ಮೂಲಕ ಅರ್ಜಿs ಸಲ್ಲಿಸಲು 2017 ರ ಮಾರ್ಚ್ 31 ರವರೆಗೆ ಅವಧಿ ವಿಸ್ತರಿಸಲಾಗಿದೆ.ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾದ್ಯಾಯರುಗಳು ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಪ್ರಸಕ್ತ ಸಾಲಿನ ಒಂದನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಆನ್ಲೈನ್ ಮೂಲಕ 2017 ರ ಮಾರ್ಚ್ 31 ರೊಳಗಾಗಿ ಸಲ್ಲಿಸಬೇಕು. ಇದುವರೆಗೂ ಆನ್ಲೈನ್ ಮೂಲಕ ನೋಂದಣಿ ಮಾಡದ 2 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನೋಂದಣಿ ಅರ್ಜಿಯ ನಮೂನೆ, ನವೀಕರಣ ವಿದ್ಯಾರ್ಥಿಗಳು ಅನುಬಂಧ-2 ರಲ್ಲಿ ಹಾಗೂ ವರ್ಗಾವಣೆಯಾಗಿ ಬಂದ ವಿದ್ಯಾರ್ಥಿಗಳು ಅನುಬಂಧ-1 ರಲ್ಲಿ ಮಾಹಿತಿ ಭರ್ತಿ ಮಾಡಿ ಕಾರ್ಯಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಅನುಬಂಧಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆಯಬಹುದು. ಅರ್ಜಿಯೊಂದಿಗೆ ಮುಖ್ಯೋಪಾದ್ಯಾಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಪಿ.ಡಿ.ಓ ಉಚಿತ ಆನ್ ಲೈನ್ ಅಣಕು ಪರೀಕ್ಷೆ (PDO FREE ONLINE MOCK TEST)

ಆತ್ಮೀಯ ಓದುಗರೇ,

ಕರುನಾಡುಎಗ್ಸಾಂ (karunaduexams.com) ತಂಡ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆ ಆಕಾಂಕ್ಷಿಗಳಿಗಾಗಿ ಉಚಿತ ಆನ್ ಲೈನ್ ಅಣಕು ಪರೀಕ್ಷೆಯನ್ನು ನಡೆಸಲು ಇಚ್ಚಿಸಿದೆ*.

ಈ ಅಣಕು ಪರೀಕ್ಷೆಯು ಪತ್ರಿಕೆ-2 (ಗ್ರಾಮೀಣಭೀವೃದ್ದಿ ಮತ್ತು ಪಂಚಾಯತ್ ರಾಜ್)  ಸಂಬಂಧಿಸಿದ್ದು, 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪ್ರಶ್ನೆ ಪತ್ರಿಕೆಯನ್ನು ನುರಿತ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಂದ ಸಿದ್ದಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಒಳಗೊಂಡಿರಲಿದೆ.

ಈ ಉಚಿತ ಆನ್ ಲೈನ್ ಪರೀಕ್ಷೆಯನ್ನು karunaduexams.com ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ತೆಗೆದುಕೊಳ್ಳಬಹುದಾಗಿದೆ.
ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ನೀಡಿ ಲಾಗಿನ್ ಆಗಬೇಕು (ಈ ಮಾಹಿತಿಗಳು ಗೌಪ್ಯವಾಗಿರಲಿವೆ).
ಪ್ರಶ್ನೆಪ್ರತಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 1 ಗಂಟೆ 30 ನಿಮಿಷ ಅವಧಿಯೊಳಗೆ ಉತ್ತರಿಸಬೇಕು.
ಒಬ್ಬರು ಒಂದು ಬಾರಿ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಪರೀಕ್ಷೆಯನ್ನು ದಿನಾಂಕ 02/10/2016 ಭಾನುವಾರ ಮಧ್ಯಾಹ್ನ 2.00 ಗಂಟೆ ಮೇಲೆ ತೆಗೆದುಕೊಳ್ಳಬಹುದು (ಇದು ತಾತ್ಕಲಿಕ ದಿನಾಂಕವಾಗಿದ್ದು, ಪರೀಕ್ಷೆ ದಿನಾಂಕ ಬದಲಾವಣೆಯಾದರೆ ಮುಂಚಿತವಾಗಿ ತಿಳಿಸಲಾಗುವುದು)
ಪ್ರಶ್ನೆಗಳನ್ನು ಈಗಾಗಲೇ ನಮ್ಮ ವೆಬ್ ಸೈಟ್ ನಲ್ಲಿ ನೀಡಿರುವ ಕ್ವಿಜ್ ಸೇರಿದಂತೆ ಇತರೆ ಪ್ರಶ್ನೆಗಳನ್ನು ಹೆಚ್ಚಾಗಿ ಒಳಗೊಂಡಿರಲಿದೆ.
ಈ ಪರೀಕ್ಷೆಯಿಂದ ಅಭ್ಯರ್ಥಿಗಳು ಈಗಾಗಲೇ ತಾವು ಎಷ್ಟರ ಮಟ್ಟಿಗೆ ತಯಾರಿ ನಡೆಸಿದ್ದಾರೆ ಎನ್ನುವುದರ ಜೊತೆಗೆ ಇತರೆ ವಿಷಯವನ್ನು ತಿಳಿದುಕೊಳ್ಳಬಹುದು.

ವಿ.ಸೂಚನೆ:

ನಮ್ಮ ಈ ಅಣಕು ಪರೀಕ್ಷೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಪರೀಕ್ಷೆಗೂ ಯಾವ ಸಂಬಂಧವಿಲ್ಲ.

ಕೋರಿಕೆ:

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ವಿವಿಧ ಹುದ್ದೆಗಳ ಆಕಾಂಕ್ಷಿಗಳಿಗೆ ಸಹಾಯವಾಗಲು ಕರುನಾಡುಎಗ್ಸಾಂ ತಂಡ ಸಣ್ಣ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ಆನ್ ಲೈನ್ ಪರೀಕ್ಷೆಗಳನ್ನು ನಡೆಸಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆ ನೀರಿಕ್ಷೆಯಲ್ಲಿರುವವರಿಗೆ (ಪಿಎಸ್ಐ ಪರೀಕ್ಷೆಗೂ ಮುಂದಿನ ದಿನಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು) ಸಹಾಯ ಮಾಡುವುದು ನಮ್ಮ ಉದ್ದೇಶ. ಅದಕ್ಕೆ ನಿಮ್ಮ ಸಹಕಾರ ಅತಿ ಅಗ್ಯತ. ಆಗಾಗಿ ನಮ್ಮ ಈ ಪ್ರಯತ್ನವನ್ನು ತಾವುಗಳು ಫೇಸ್ ಬುಕ್ ಮತ್ತು ವಾಟ್ಸ್ ಆಫ್ ನಲ್ಲಿ ಶೇರ್ ಮಾಡುವ ಮೂಲಕ ಎಲ್ಲಾ ಆಕಾಂಕ್ಷಿಗಳಿಗೂ ತಲುಪಿಸಬೇಕೆಂದು ಕೋರಿದೆ. ನಮ್ಮ ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದಗಳು.

ಕರುನಾಡುಎಗ್ಸಾಂ ತಂಡ (www.karunaduexams.com)