Wikipedia

Search results

Wednesday, October 18, 2017

ದೀಪಗಳ ಹಬ್ಬ ದೀಪಾವಳಿ....🙏 ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಷಯಗಳು


_ಕತ್ತಲೆಯ  ಓಡಿಸಿ ಬೆಳಕನು ತಂದ ದೀಪ_

_ಕಷ್ಟವ ತೊಲಗಿಸಿ ಸುಖವ ಮೂಡಿಸಿದ ದೀಪ_

_ಮನುಜನ ಬದುಕಿಗೆ ಬೆಳಕು ನೀಡುವ ದೀಪ_

_ಹಗಲಲಿ ಬೆಳಗುವ ಸೂರ್ಯನ ಬೆಳಕು ಚಂದ_

_ಇರುಳಲಿ ಚಂದ್ರನ ತಂಪಿನ ಬೆಳಕು ಚಂದ_

_ಮನೆ ಮನೆಯಲಿ ದೀಪಾವಳಿಯ ಬೆಳಕು ಚಂದ_

_ವಿಚಾರಗಳು  ಬೇರೆಯಾದರೂ ಎಲ್ಲರಿಗಿರುವ ಮನಸು ಒಂದೆ_

_ಬೇರೆ ಬೇರೆ ದೀಪವಾದರು ಕೊಡುವ ಬೆಳಕು ಒಂದೆ_

_ಸದಾ ಮಿನುಗುತ್ತಿರಲಿ ನಕ್ಷತ್ರದಂತೆ ಈ ದೀಪ_

_ಮನೆ ಮನೆಯಲಿ ಹೊಮ್ಮಲಿ ಹರ್ಷದ ದೀಪ_

_ಜೀವನದಲಿ  ಶಾಶ್ವತವಾಗಲಿ ಸಂತಸದ ನಂದಾದೀಪ._

ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಸನಾತನ ಧರ್ಮದಲ್ಲಿ ಆಶ್ವಯುಜ ಕೃಷ್ಣ ತ್ರಯೋದಶಿ, ಆಶ್ವಯುಜ ಕೃಷ್ಣ ಚತುರ್ದಶಿ(ನರಕ ಚತುರ್ದಶಿ) ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ, ಮತ್ತು ಆಶ್ವಯುಜ ಶುಕ್ಲ ಪಾಡ್ಯಯಂದು ಬಲಿಪಾಡ್ಯಮಿ ಆಚರಣೆ ಮಾಡುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತದೆ. ಶ್ರೀಕೃಷ್ಣ, ನರಕಾಸುರನನ್ನು ವಧಿಸಿ ಜನರನ್ನು ರಕ್ಷಿಸಿದ ಈ ಹಿನ್ನೆಲೆಯಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ನಂತರದ ದಿನ ಅಂದರೆ ಅಮಾವಾಸ್ಯೆಯಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿ ಪೂಜೆ ಮಾಡುವ ಮೂಲಕ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಇನ್ನು ಬಲಿಪಾಡ್ಯಮಿ, ಇಂದ್ರನಿಂದ ಸಂಹರಿಸಲ್ಪಟ್ಟ ಬಲಿ ಚಕ್ರವರ್ತಿ ಶುಕ್ರಾಚಾರ್ಯರ ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿ ವಿಶ್ವಜಿತ್‌ ಎಂಬ ಯಾಗವನ್ನು ಮಾಡಿ, ಅಗ್ನಿದೇವನ ಮೂಲಕ ಧನ, ಅಶ್ವ, ಧ್ವಜಗಳನ್ನು ಪಡೆಯುತ್ತಾನೆ. ಬಳಿಕ ಇಂದ್ರನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ ಸ್ವರ್ಗ ರಾಜ್ಯವನ್ನು ಗೆಲ್ಲುತ್ತಾನೆ. ಈ ಗೆಲುವಿನಿಂದ ಬಲಿ ಚಕ್ರವರ್ತಿಯಲ್ಲಿ ಅಹಂಕಾರ ಮೂಡುತ್ತದೆ. ಇದನ್ನು ಕಂಡು ಹೆದರಿದ ದೇವತೆಗಳು ವಿಷ್ಣುವಿನಲ್ಲಿ ಮೊರೆಯಿಡುತ್ತಾರೆ. ಇದೇ ಸಂದರ್ಭದಲ್ಲಿ ವಾಮನಾವತಾರವಾಗುತ್ತದೆ.

ಅನಂತರ ಬಲಿ ಚಕ್ರವರ್ತಿ ನರ್ಮದಾ ತೀರದಲ್ಲಿ ಕೈಗೊಂಡ ಅಶ್ವಮೇಧಯಾಗಕ್ಕೆ ವಟುವಿನ ರೂಪದಲ್ಲಿ ಆಗಮಿಸುವ ವಾಮನನನ್ನು ಆದರದಿಂದ ಬರಮಾಡಿಕೊಂಡು ಪೂಜಿಸಿ ಬೇಕಾದುದನ್ನು ಕೇಳು ಎಂದಾಗ ಈ ವಾಮನ ವಟು ಕೇವಲ 3 ಹೆಜ್ಜೆ ಭೂಮಿಯನ್ನು ದಾನವಾಗಿ ನೀಡುವಂತೆ ಕೇಳುತ್ತಾನೆ. ಕುಬ್ಜನಾಗಿದ್ದ ವಾಮನ ಒಮ್ಮೆಲೇ ಆಕಾಶದೆತ್ತರಕ್ಕೆ ಬೆಳೆದು ತ್ರಿವಿಕ್ರಮನಾಗಿ 2 ಹೆಜ್ಜೆಗಳಲ್ಲಿ ಭೂಮಿ, ಅಂತರಿಕ್ಷಗಳನ್ನು ಅಳೆದು 3 ನೇ ಹೆಜ್ಜೆಯನ್ನು ಎಲ್ಲಿಡಬೇಕೆಂದು ಕೇಳುತ್ತಾನೆ. ವಚನಭ್ರಷ್ಟನಾಗದ ಬಲಿ ತನ್ನ ತಲೆಯ ಮೇಲೆ ಇಡುವಂತೆ ಹೇಳಿದಾಗ ವಾಮನ ರೂಪದ ವಿಷ್ಣು ಅದರಂತೆ ಮಾಡಿ ಬಲಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿ ಚಕ್ರವರ್ತಿಯ ತ್ಯಾಗ, ನಿಷ್ಠೆ, ದೃಢತೆಗಳನ್ನು ಮೆಚ್ಚಿದ ವಿಷ್ಣು, ಬಲಿ ವಧೆಯಾದ ಈ ದಿನಕ್ಕೆ ಬಲಿಪಾಡ್ಯ ಎಂದು ಹೆಸರನ್ನಿಟ್ಟನು ಹಾಗೂ ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ಬಲಿಯ ರಾಜ್ಯ ನಡೆಯುವಂತೆ ಅನುಗ್ರಹಿಸಿದ. ಬಲಿಪಾಡ್ಯದಂದು ಪೂರ್ತಿ ದಿನ ಬಲಿಯ ರಾಜ್ಯಭಾರ ನಡೆಯುತ್ತದೆ ಎಂಬುದು ನಂಬಿಕೆ. ಅಹಂಕಾರವೆಂಬುದು ತೊಲಗಿ ತ್ಯಾಗ, ನಿಷ್ಠೆ, ದೃಢತೆಗಳು ನೆಲೆಯಾಗಲಿ ಎಂಬುದು ಇದರ ಹಿಂದಿನ ಆಶಯವಾಗಿದೆ.

ಇದು ಪುರಾಣ್ವಾಯಿತು. ಈಗ?. ಯಾವುದೋ ಓಬಿರಾಯನ ಕಾಲದ ಕಥೆಗಳು, ಯಾವುದೂ ಸತ್ಯಕ್ಕೆ ಹತ್ತಿರವಾದುದ್ದಲ್ಲ. ಕಾಲ್ಪನಿಕ ಎಂದು ಜರಿಯುವ ಪ್ರಗತಿಪರರೇ ಜಾಸ್ತಿ. ಅವರಿಗೆ ದೀಪಾವಳಿಯ ರಾಕೆಟ್ ಗಳು, ಕ್ಷಣಾರ್ಧದಲ್ಲಿ ಉರಿದು ಬೂದಿಯಾಗುವ ಪಟಾಕಿಗಳೇ ವಾಸ್ತವವಾಗಿ ಕಾಣುತ್ತವೆ. ಆಧುನಿಕ ಭಾರತದಲ್ಲಿ ದೀಪಾವಳಿಗೆ ವ್ಯಾಖ್ಯಾನವೇ ಬದಲಾಗಿ ಹೋಗಿದೆ. ಹಿಂದೆಲ್ಲಾ ದೀಪಾವಳಿಯನ್ನು ದೀಪಗಳ ಹಬ್ಬವೆಂದೇ ಅಚರಿಸಲಾಗುತ್ತಿತ್ತು. ಒಂದಷ್ಟು ಆಕಾಶ ಬುಟ್ಟಿಗಳನ್ನು ಮನೆ ಅಂಗಳದಲ್ಲಿ ತೂಗುಹಾಕಿ ಸಂಭ್ರಮಿಸಲಾಗುತ್ತಿತ್ತು. ಇಂದಿನಂತೆ ಓಜೋನ್ ಪದರಕ್ಕೆ ಹಾನಿಯಾಗುವಂತಹ ಪಟಾಕಿಗಳ ಸದ್ದು ಇರುತ್ತಿರಲಿಲ್ಲ. ಕೃತಕ ಜೀವನ ಶೈಲಿಯಲ್ಲಿ ಎಲ್ಲವೂ ಕೃತಕಮಯವಾಗಿದ್ದು ದೀಪಗಳ ಹಬ್ಬವೂ ಕೃತಕವಾಗಿದೆ. ನಿಜ ಅರ್ಥದ ದೀಪಗಳೂ ಕೂಡ....!

ವರ್ಷಕ್ಕೊಮ್ಮೆ ಇಂತಿಷ್ಟು ಎಂದು ಪಟಾಕಿಗೆ ರೇಟು ಫಿಕ್ಸ್ ಮಾಡಿ ತರಹೇವಾರಿ ಮದ್ದುಗಳು ತುಂಬಿದ ಪಟಾಕಿ ಸಿಡಿಸುವುದೇ ದೀಪಾವಳಿ ಹಬ್ಬದ ದ್ಯೋತಕವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಆಚರಿಸುತ್ತಿರುವ ದೀಪಾವಳಿಯನ್ನು ದೀಪಗಳ ಹಬ್ಬವೆನ್ನುವುದಕ್ಕಿಂತಲೂ ಪಟಾಕಿಗಳ ಹಬ್ಬವೆನ್ನುವುದೇ ಹೆಚ್ಚು ಸೂಕ್ತ. ಇದರೊಂದಿಗೆ ಒಂದಷ್ಟು ಅನಾಹುತಗಳೂ ಸಂಭವಿಸುತ್ತವೆ ಎಂಬುದನ್ನು ಅಗತ್ಯವಾಗಿ ಗಮನದಲ್ಲಿಡಬೇಕು.

ದೀಪಾವಳಿ ಎಂಬುದು ಜ್ನಾನಜ್ಯೋತಿಯನ್ನು ಪ್ರಚೋದಿಸುವಂತದ್ದಾಗಬೇಕೇ ಹೊರತು ಪಟಾಕಿಗಳ ಮೇಲೆಯೇ ಕೇಂದ್ರೀಕೃತವಾಗಬಾರದು. ಪಟಾಕಿಗಳನ್ನೂ ಮೀರಿ ಸನಾತನ ಧರ್ಮ ತಿಳಿಸಿರುವ ತತ್ವಗಳನ್ನು ಮೈಗೂಡಿಸಿಕೊಂಡರೆ ಜೀವನವೂ ಸಾರ್ಥಕವಾಗುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಪಟಾಕಿ ಹೊಡೆದರೆ ಅದೆಷ್ಟೋ ಜನರು ಕಣ್ಣು, ಕಿವಿಗಳನ್ನು ಕಳೆದುಕೊಳ್ಳುವುದು ತಪ್ಪುತ್ತದೆ!..... 

ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಬಯಸಿ.....*👍

Sunday, October 15, 2017

ಭಾರತ ರತ್ನ ಅಬ್ದುಲ್ ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು

ಅಕ್ಟೋಬರ್. 15: ಭಾರತದ ಕ್ಷಿಪಣಿ ಪಿತಾಮಹ, ವಿಜ್ಞಾನಿಅಬ್ದುಲ್ ಕಲಾಂ ಅವರ ಜೀವನ ಸಾಧನೆಗಳ ಬಗ್ಗೆ ಹೇಳುವುದು ಏನೂ ಉಳಿದಿಲ್ಲ.

ಭಾಷಣ ಮಾಡುತ್ತಲೇ ವಿಧಿವಶರಾದ ಕಲಾಂ ಅವರ ಜನ್ಮದಿನಅಕ್ಟೋಬರ್ 15.ತನ್ನಿಮಿತ್ತ ಅವರ ಕೆಲವು ನುಡಿಮುತ್ತುಗಳನ್ನು ಓದಿ ಸ್ಫೂರ್ತಿ ಪಡೆದುಕೊಳ್ಳೋಣ.
ಪೀಪಲ್ಸ್ ಪ್ರೆಸಿಟೆಂಟ್ ಎಂದು ಜನರಿಂದಲೇ ಕರೆಸಿಕೊಂಡ ಕಲಾಂ ವ್ಯಕ್ತಿತ್ವಕ್ಕೆ ಮಾರು ಹೋಗದವರೇ ಇಲ್ಲ.

ಕಲಾಂ ಅವರ ಪ್ರತಿಯೊಂದು ಮಾತುಗಳು ಯುವಪೀಳಿಗೆಗೆ ಹೊಸ ದಿಕ್ಕನ್ನು ತೋರಿಸುತ್ತದೆ.

ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು. ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು, ಅವರೆಂದರೆ ತಂದೆ,ತಾಯಿ ಮತ್ತು ಗುರು.

ನಿಮ್ಮ ಗುರಿಯೆಡೆಗೆ ಸಾಗಬೇಕು ಎಂದಾದರೆ ಒಂದೆ ದೃಷ್ಟಿಯ ಯೋಚನೆ ಧ್ಯೆಯ ಬೆನ್ನ ಹಿಂದೆ ಇರಲಿ

ಮಹಾನ್ ವ್ಯಕ್ತಿಗಳ ಮಹಾನ್ ಕನಸುಗಳು ಒಂದಕ್ಕಿಂತ ಒಂದನ್ನು ಮೀರಿಸುತ್ತಲೇ ಸಾಗುತ್ತವೆ.

ಯಾರೂ ಪರಿಶ್ರಮ ಜೀವಿಯೋ ಆತನಿಗೆ ದೇವರು ಸದಾ ಸಹಾಯ ಮಾಡುತ್ತಾನೆ.

ಕಷ್ಟಗಳು ಬಂದಾಗ ಮಾತ್ರ ಸುಖ ಏನು ಎಂಬುದರ ಅರಿವಾಗಲು ಸಾಧ್ಯ

ಇವತ್ತಿನ ನಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರೆ ನಮ್ಮ ಮಕ್ಕಳ ನಾಳೆಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯ.

Wednesday, October 04, 2017

ಮಹಾರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.

ಹಿನ್ನೆಲೆ

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ.

ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು.

ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.

ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು.

ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ.

ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು.

ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ) ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು

ರಾಮಾಯಣ ರಚನೆಗೆ ಪ್ರೇರಣೆ:

   ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.

ಈ ಶ್ಲೋಕದ ಅರ್ಥ ಹೀಗಿದೆ :

    ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.
ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.
ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.
ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.

ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.

ಉತ್ತರ ರಾಮಾಯಣದಲ್ಲಿ ಒಂದು ಪಾತ್ರವಾಗಿ:

ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತೀಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ.

ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ.

ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ.

ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ.

ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.

ಮಹಾಕವಿ ಆದಿಕವಿ ವಾಲ್ಮೀಕಿಗೆ ನಮನ:

        ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
        ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||

    ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ .
    'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.

*"ಮಹಾರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು"*