Wikipedia

Search results

Monday, June 13, 2016

ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಪೇಚಾಟ:~

ವಿಜಯವಾಣಿ JUN 13, 2016

ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ರಾಜ್ಯ ಶಿಕ್ಷಣ ಇಲಾಖೆ ವರ್ಷವಾದರೂ ಅಂತಿಮ ಆಯ್ಕೆಪಟ್ಟಿ ಪ್ರಕಟಿಸದ್ದರಿಂದ ತೊಂದರೆಯಾಗಿದೆ ಎಂದು ರಾಜ್ಯದ ವಿವಿಧ ಪ್ರೌಢಶಾಲೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ವಿಜಯವಾಣಿ ಸಹಾಯವಾಣಿಗೆ ಕರೆಮಾಡಿ ಅಳಲು ತೋಡಿಕೊಂಡಿದ್ದರು. ಈ ಕುರಿತ ವಿಸõತ ವರದಿ ಇಲ್ಲಿದೆ.

ಶ್ರೀಕಾಂತ್ ಕುರುವತ್ತಿ

ಚಿತ್ರದುರ್ಗ: ಸರ್ಕಾರ ಮತ್ತು ಸುಪ್ರೀಂಕೋರ್ಟ್ ವಾದ ವಿವಾದದಲ್ಲಿ ಸಿಕ್ಕು ರಾಜ್ಯಾದ್ಯಂತ ಪ್ರೌಢಶಾಲಾ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ನರಳುವಂತಾಗಿದೆ.

ದಾಖಲೆಗಳ ಪರಿಶೀಲನೆಯಾಗಿ ವರ್ಷ ವಾದರೂ ಶಿಕ್ಷಣ ಇಲಾಖೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿಲ್ಲ. ಇದರಿಂದ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂಬುದು ಪ್ರೌಢಶಾಲೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಆರೋಪ.

ಈವರೆಗೆ ನಡೆದ ಪ್ರಕ್ರಿಯೆ:

2015 ಏ. 6ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಕಲಬುರಗಿ ವಿಭಾಗದಿಂದ ಒಟ್ಟು 1729 ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗೆ ಆನ್​ಲೈನ್​ನಲ್ಲಿ ಅರ್ಜಿ ಆಹ್ವಾನಿಸಿತ್ತು. ನೇಮಕಾತಿಗಾಗಿ 2015 ಜೂ. 13 ಮತ್ತು 14ರಂದು ಸಿಇಟಿ ನಡೆಸಿ ಆ.14ರಂದು 1:2 ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದರ ಆಧಾರದಲ್ಲಿ ಆ.17ರಂದು ಆಯಾ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆಯೂ ನಡೆದಿದೆ. ಆದರೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿಲ್ಲ.

ವಾಸ್ತವ ಏನು?:

ಇಂಗ್ಲಿಷ್ ಶಿಕ್ಷಕ ಹುದ್ದೆ ಆಕಾಂಕ್ಷಿ ಗಳು ಬಿಎ ಹಂತದಲ್ಲಿ ಇಂಗ್ಲಿಷನ್ನು ಐಚ್ಛಿಕವಾಗಿ ಓದಿರಬೇಕು. ಅಂಥವರು ಆಯ್ಕೆಗೆ ಅರ್ಹರು ಎಂಬ ನಿಯಮ ಹೇರಲಾಗಿತ್ತು. ಇದರಿಂದ ಪೇಚಿಗೆ ಸಿಲುಕಿದ ಡಿಪ್ಲೊಮಾ ಇಂಗ್ಲಿಷ್ ಅಭ್ಯರ್ಥಿಗಳು ತಮ್ಮ ಹಕ್ಕು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಅಂತಿಮ ಪಟ್ಟಿ ಪ್ರಕಟಿಸುವ ವೇಳೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದು ಆಯ್ಕೆ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ.

ಸಾವಿರಾರು ರೂ. ಶುಲ್ಕ ಪಾವತಿಸಿ ಎಂಎಸ್ಸಿ, ಎಂಎಗೆ ಸೇರಿ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದೇವೆ. ಶೀಘ್ರವೇ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡದಿದ್ದರೆ ನಮ್ಮಂತೆ ಬಹುತೇಕರ ಉನ್ನತ ಶಿಕ್ಷಣದ ಕನಸಿಗೆ ಮಸಿ ಬಳಿದಂತಾಗುತ್ತದೆ.

| ಪಲ್ಲವಿ, ಪಾಲಯ್ಯ, ಪ್ರೌಢಶಾಲಾ ಶಿಕ್ಷಕ ಹುದ್ದೆ ಆಕಾಂಕ್ಷಿಗಳು

ಹುದ್ದೆ ನಿರೀಕ್ಷೆಯಲ್ಲಾದ ಅನ್ಯಾಯ

ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆಂದು ಕಾದು ಕುಳಿತಿರುವ ಅಭ್ಯರ್ಥಿ ಗಳು ಉನ್ನತ ಶಿಕ್ಷಣಕ್ಕೂ ಹೋಗದೆ ಇತ್ತ ಶಿಕ್ಷಕ ಹುದ್ದೆಯೂ ಸಿಗದೆ ಪರದಾಡುವಂತಾಗಿದೆ. ವಿಜ್ಞಾನ ಹಾಗೂ ಕಲಾ ವಿಭಾಗದ ಬಹುತೇಕ ವಿದ್ಯಾರ್ಥಿಗಳು ಸಾವಿರಾರು ರೂ. ಶುಲ್ಕ ಪಾವತಿಸಿ ಎಂಎಸ್ಸಿ, ಎಂಎ ಸ್ನಾತಕೋತ್ತರ ಪದವಿಗೆ ಸೇರಿಕೊಂಡಿದ್ದಾರೆ. ಆದರೆ ಕಾಲೇಜಿಗೆ ಹೋಗಲು ಮೂಲ ದಾಖಲೆ ಸಲ್ಲಿಸಬೇಕು. ಇವನ್ನು ಕೊಟ್ಟರೆ ಮುಂದೆ ಶಿಕ್ಷಕ ಹುದ್ದೆಗೆ ತೊಂದರೆ ಆಗುವುದ ರಿಂದ ಹಣ ಹೋದರೂ ಚಿಂತೆ ಇಲ್ಲವೆಂದು ಮನೆಯಲ್ಲಿ ಉಳಿಯುವಂತಾಗಿದೆ.

ನಮ್ಮದೇನೂ ಇಲ್ಲ. ಎಲ್ಲ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆಯೇ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

| ಎಂ.ರೇವಣಸಿದ್ದಪ್ಪ ಡಿಡಿಪಿಐ ಚಿತ್ರದುರ್ಗ

ಬಾರದ ಟಿಇಟಿ ಅರ್ಹತಾ ಪ್ರಮಾಣಪತ್ರ

ಸಂತೋಷ ವೈದ್ಯ

ಹುಬ್ಬಳ್ಳಿ: ಯಾವುದೇ ಶೈಕ್ಷಣಿಕ ಅಥವಾ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲು ವಿಳಂಬವಾಗಿರು ವುದನ್ನು ಕಂಡಿದ್ದೇವೆ. ಆದರೆ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆದು 10 ತಿಂಗಳು ಕಳೆದರೂ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈವರೆಗೂ ಅರ್ಹತಾ ಪ್ರಮಾಣ ಪತ್ರ ವಿತರಿಸಿಲ್ಲ!

ಅಭ್ಯರ್ಥಿಗಳು ಇಲಾಖೆಯ ಕೇಂದ್ರೀ ಕೃತ ದಾಖಲಾತಿ ಘಟಕ(ಬೆಂಗಳೂರು)ಕ್ಕೆ ಕರೆ ಮಾಡಿದರೆ, ಈ ವಾರ ಕಳುಹಿಸುತ್ತೇವೆ, ಮುಂದಿನ ವಾರ ಕಳುಹಿಸುತ್ತೇವೆ ಎಂಬ ಉತ್ತರ ಕೇಳುವುದೇ ಆಗಿದೆ. ಘಟಕದ ಅಧಿಕಾರಿಗಳು ಹೀಗೆ ಹೇಳುತ್ತ 5-6 ತಿಂಗಳು ಕಳೆದಿದ್ದಾರೆ ಎಂದು ಟಿಇಟಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ದೂರಿದ್ದಾರೆ. ಆಗಸ್ಟ್ 2015ರಲ್ಲಿ ಟಿಇಟಿ ನಡೆಸಲಾಗಿತ್ತು. 2 ತಿಂಗಳ ಬಳಿಕ ಫಲಿತಾಂಶ ಪ್ರಕಟವಾಗಿದೆ. ಆದರೆ, ತೇರ್ಗಡೆಯಾಗಿರುವವರಿಗೆ ಇನ್ನೂ ಅರ್ಹತಾ ಪ್ರಮಾಣಪತ್ರ ತಲುಪಿಲ್ಲ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ 2014ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಟಿಇಟಿ ನಡೆಸಲಾಗಿತ್ತು. ಸಾಕಷ್ಟು ಗೊಂದಲಗಳ ಬಳಿಕ ಅದರ ಆಧಾರದ ಮೇಲೆ ನೇಮಕಾತಿ ಪೂರ್ಣಗೊಂಡಿದೆ. ಆಗಸ್ಟ್ 2015ರಲ್ಲಿ ನಡೆಸಿದ 2ನೇ ಟಿಇಟಿ ಫಲಿತಾಂಶದ ಆಧಾರದ ಮೇಲೆ ಸಿಇಟಿ (ಜಿಲ್ಲಾಮಟ್ಟದ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ) ನಡೆಸಿ ನೇಮಕಾತಿ ಮಾಡಿಕೊಳ್ಳಬೇಕಿದೆ.

2016-17ನೇ ಶೈಕ್ಷಣಿಕ ವರ್ಷಕ್ಕೆ 17 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಈಗಾಗಲೇ ಹೇಳಿದ್ದಾರೆ. ನೇಮಕಾತಿಗಾಗಿ ಸಿಇಟಿ ನಡೆಸಬೇಕು. ಸಿಇಟಿ ಬರೆಯಲು ಅಭ್ಯರ್ಥಿಗಳ ಕೈಯಲ್ಲಿ ಟಿಇಟಿ ಅರ್ಹತಾ ಪ್ರಮಾಣಪತ್ರ ಇರಬೇಕು. ಆದರೆ, ಇಲಾಖೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದೆ.

ಖಾಸಗಿಯವರೂ ಕೇಳುತ್ತಾರೆ:

ಸಿಇಟಿ ನಡೆಸುವ ಸಮಯಕ್ಕೆ ಇಲಾಖೆ ಪ್ರಮಾಣಪತ್ರ ನೀಡಬಹುದು ಎಂದು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಯಾಕೆಂ ದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ತಾವು ನಡೆಸುವ ನೇಮಕಾತಿಗೆ ಅಭ್ಯರ್ಥಿಗಳಿಂದ ಟಿಇಟಿ ಪ್ರಮಾಣಪತ್ರ ಕೇಳುತ್ತಿವೆ. ಇದು ಟಿಇಟಿ ತೇರ್ಗಡೆಯಾಗಿರುವ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಟಿಇಟಿ ತೇರ್ಗಡೆಯಾಗಿರುವುದಕ್ಕೆ ಅಭ್ಯರ್ಥಿಗಳ ಬಳಿ ಯಾವುದೇ ಆಧಾರವಿಲ್ಲ. ಅತ್ತ ಸರ್ಕಾರಿ ಶಾಲೆಗಳಲ್ಲಿ ನೇಮಕಾತಿ ನಡೆಯುತ್ತಿಲ್ಲ. ಇತ್ತ ಖಾಸಗಿ ಶಿಕ್ಷಣ ಸಂಸ್ಥೆಗಳು ಟಿಇಟಿ ಪ್ರಮಾಣಪತ್ರವನ್ನು ಕೇಳುತ್ತಿವೆ.

ಟಿಇಟಿ ಅರ್ಹತಾ ಪ್ರಮಾಣಪತ್ರವು ಅಂಕಪಟ್ಟಿಯನ್ನು ಒಳಗೊಂಡಿರುತ್ತದೆ. ಇದನ್ನು ಸಾಶಿಇ ಕೇಂದ್ರೀಕೃತ ದಾಖಲಾತಿ ಘಟಕ ಆಯಾ ಜಿಲ್ಲೆಯ ಡಿಡಿಪಿಐ ಕಚೇರಿಗಳಿಗೆ ರವಾನಿಸಬೇಕು. ಜತೆಗೆ, ಡಿಡಿಪಿಐ ಕಚೇರಿಯಿಂದ ಪ್ರಮಾಣಪತ್ರ ಪಡೆದುಕೊಳ್ಳಿ ಎಂದು ಪ್ರತಿ ಅಭ್ಯರ್ಥಿಗೆ ಎಸ್​ಎಂಎಸ್ ಸಂದೇಶ ಕಳುಹಿಸಬೇಕು. ನೀವು ಯಾವಾಗಾದರೂ ಸಿಇಟಿ ನಡೆಸಿ, ನಮಗೆ ಮೊದಲು ಅರ್ಹತಾ ಪ್ರಮಾಣಪತ್ರ ನೀಡಿ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.