ಮಾರ್ಚ್ 31ರ ಬಳಿಕವೂ 10 ಸಾವಿರ
ರೂ.ಗಿಂತ ಹೆಚ್ಚಿನ ಹಳೆಯ ನೋಟನ್ನು
ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧ.
ನೋಟ್ ಬ್ಯಾನ್ ಬಳಿಕ ಕೇಂದ್ರ ಸರ್ಕಾರ
ಇಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ
ಕ್ಯಾಬಿನೆಟ್ ಸಭೆ ನಡೆಸಿತು.
ಈ ವೇಳೆ ಮಾರ್ಚ್ 31ರ
ನಂತರವೂ 10 ಸಾವಿರ ರೂ.ಗಿಂತ ಹೆಚ್ಚಿನ
ಹಳೆಯ ನೋಟನ್ನು ಹೊಂದಿದ್ದರೆ ಅವರಿಗೆ ಕನಿಷ್ಟ
50 ಸಾವಿರ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ
ವಿಧಿಸಲು ಕಾನೂನು ತರಲು ಸರ್ಕಾರ
ಮುಂದಾಗಿದ್ದು, ಈ ಸಂಬಂಧ ಸುಗ್ರೀವಾಜ್ಞೆ
ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು
ಮೂಲಗಳು ಮಾಹಿತಿ ನೀಡಿವೆ.
ಡಿಸೆಂಬರ್ 30ರ ನಂತರ ಮಾರ್ಚ್ 31ರವರೆಗೆ ಹಳೇ
ನೋಟ್ಗಳನ್ನ ನೇರವಾಗಿ ಆರ್ಬಿಐ
ಕಚೇರಿಯಲ್ಲೇ ಜಮೆ ಮಾಡಬೇಕಿದೆ.
ಕಾಳ ಧನಿಕರಿಗೆ ಪ್ರಧಾನ ಮಂತ್ರಿ ಗರೀಬ್
ಕಲ್ಯಾಣ್ ಯೋಜನೆಯಡಿ ಕಪ್ಪು ಹಣವನ್ನು
ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಈ
ಯೋಜನೆಯಡಿ ದಾಖಲೆಯಿಲ್ಲದ ಹಣದ ಮೇಲೆ
ಶೇ.50ರಷ್ಟು ತೆರಿಗೆ ಬೀಳಲಿದೆ. ಇನ್ನುಳಿದ
ಹಣದಲ್ಲಿ ಶೇ.25ರಷ್ಟು ಹಣವನ್ನು 4
ವರ್ಷಗಳವರೆಗೆ ಠೇವಣಿ ಇಡಬೇಕಾಗುತ್ತದೆ.
ಈ
ಹಣಕ್ಕೆ ಠೇವಣಿದಾರನಿಗೆ ಯಾವುದೇ ಬಡ್ಡಿ
ಸಿಗುವುದಿಲ್ಲ.