Wikipedia

Search results

Thursday, January 12, 2017

ಸ್ವಾಮಿ ವಿವೇಕಾನಂದರ ಮುತ್ತಿನಂತ ಮಾತುಗಳು


“ಎಲ್ಲಿಯವರೆಗೆ ಲಕ್ಷಾಂತರು ಜನರು ಹಸಿವು ಮತ್ತು ಅಜ್ಞಾನದಲ್ಲಿ ಬಳಲುತ್ತಿರುತ್ತಾರೋ  ಅಲ್ಲಿಯವರೆಗೆ ಅಂಥವರ ಬಗ್ಗೆ ಕಿಂಚಿತ್ತೂ ಗಮನ ಕೊಡದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ್ರೋಹಿಯೇ ಆಗಿರುತ್ತಾನೆ” - *ಸ್ವಾಮಿ ವಿವೇಕಾನಂದ*

- *"ನಿಮ್ಮ ಸ್ವಭಾವಕ್ಕೆ ಒಪ್ಪುವಂತಹ ಧರ್ಮವೇ ಶ್ರೇಷ್ಟ ಧರ್ಮ. ನಿಮ್ಮಲ್ಲಿ ನೀವು ವಿಶ್ವಾಸವಿಡಿ"*- ಸ್ವಾಮಿ ವಿವೇಕಾನಂದ

- "ನಿಮ್ಮ ಮನಸ್ಸನ್ನು ಆವರಿಸಿಕೊಂಡಿರುವ ಮೂಢನಂಬಿಕೆಯನ್ನು ಹೊರಹಾಕಿ. ಧೀರವಂತರಾಗಿರೋಣ ಬನ್ನಿ. ಸತ್ಯವನ್ನು ಅರಿತು ಸತ್ಯವನ್ನು ಪಾಲಿಸಬೇಕು. ಗುರಿ ದೂರವಿರಬಹುದು ಆದರೆ ಸದಾ ಎಚ್ಚರವಾಗಿದ್ದು ಗುರಿ ತಲುಪುವವರೆಗೂ ವಿಶ್ರಮಿಸದಿರೋಣ"-  ಸ್ವಾಮಿ ವಿವೇಕಾನಂದ

- _*"ಧರ್ಮ ಎಂದರೆ ಯೇಸು ಕ್ರಿಸ್ತ ಅಥವಾ ಪ್ರವಾದಿ ಮಹಮ್ಮದರ ಅನುಕರಣೆ ಅಲ್ಲ. ಅನುಕರಣೆ ಒಳ್ಳೆಯದಾಗಿದ್ದಾಗಲೂ ಅದು ಎಂದೂ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ. ಯೇಸುವನ್ನು ಅನುಕರಿಸಲು ಹೋಗಬೇಡಿ. ಯೇಸುವೇ ಆಗಿ. ನೀವು ಯೇಸು, ಬುದ್ಧ  ಅವರಷ್ಟೇ ಒಳ್ಳೆಯವರಾಗಿರುತ್ತೀರಿ. ಒಂದೊಮ್ಮೆ ಹಾಗಿಲ್ಲ ಎನಿಸಿದರೆ ಹಾಗೆ ಆಗಲು ಯತ್ನಿಸಿ"*_ - ಸ್ವಾಮಿ ವಿವೇಕಾನಂದ

- "ವಿವಿಧ ಧರ್ಮಗಳ ಅಧ್ಯಯನದಿಂದ ತಿಳಿದು ಬರುವ ಸಂಗತಿ ಎಂದರೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದೆ- ಸ್ವಾಮಿ ವಿವೇಕಾನಂದ"- ಸ್ವಾಮಿ ವಿವೇಕಾನಂದ

- _*"ಜ್ಯೋತಿಷ್ಯ ಮತ್ತಿತರ ಎಲ್ಲಾ ತಂತ್ರ-ಮಂತ್ರಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಚಿನ್ಹೆಗಳು. ಅವು ನಮ್ಮ ಮನಸ್ಸಿನಲ್ಲಿ ಮುಖ್ಯ ಎನಿಸಿದೊಡನೆ ಒಬ್ಬ ತಜ್ಞವೈದ್ಯರನ್ನು ಕಂಡು ಬಂದು ಉತ್ತಮ ಆಹಾರ ಸೇವಿಸಿ ವಿಶ್ರಾಂತಿ ಪಡೆಯುವುದು ಸೂಕ್ತ. ಮೂಢನಂಬಿಕೆ ಪ್ರವೇಶಿಸಿದ ಕ್ಷಣದಲ್ಲಿ ಮೆದುಳು ನಾಶವಾಗುತ್ತದೆ"*_ - ಸ್ವಾಮಿ ವಿವೇಕಾನಂದ

  - "ಪರಿಪೂರ್ಣ ಸ್ತ್ರೀತ್ವದ ಯೋಚನೆ ಎಂದರೆ ಪರಿಪೂರ್ಣ ಸ್ವಾತಂತ್ರ್ಯದ ಯೋಚನೆ ಎಂದರ್ಥ" - ಸ್ವಾಮಿ ವಿವೇಕಾನಂದ

_*"ಬನ್ನಿ, ಮನುಷ್ಯರಾಗಿ! ಯಾವಾಗಲೂ ಪ್ರಗತಿಗೆ ವಿರುದ್ಧವಾಗಿರುವ ಈ ಪುರೋಹಿತರನ್ನು ಒದ್ದೋಡಿಸಿ. ಯಾಕೆಂದರೆ ಅವರು ಎಂದಿಗೂ ಬದಲಾಗುವುದಿಲ್ಲ. ಅವರ ಹೃದಯಗಳೆಂದೂ ವಿಶಾಲಗೊಳ್ಳುವುದಿಲ್ಲ. ಶತಮಾನಗಳ ಮೌಢ್ಯ ಮತ್ತು ನಿರಂಕುಶತೆಯ ಕೂಸುಗಳು ಅವರು. ಈ ಪುರೋಹಿತಶಾಹಿಯನ್ನು ಮೊದಲು ಬೇರು ಸಮೇತ ಕಿತ್ತೊಗೆಯಿರಿ. ಬನ್ನಿ, ಮನುಷ್ಯರಾಗಿ! ನಿಮ್ಮ ಸಂಕುಚಿತ ಬಿಲಗಳಿಂದ ಹೊರ ಬಂದು ಹೊರಜಗತ್ತಿಗೆ ಕಣ್ಣುಹಾಯಿಸಿ. ದೇಶಗಳೆಲ್ಲ ಹೇಗೆ ದಾಪುಗಾಲಿಡುತ್ತಿವೆ ನೋಡಿ! ನೀವು ಮನುಷ್ಯನನ್ನು ಪ್ರೀತಿಸುವಿರಾ? ನಿಮ್ಮ ದೇಶವನ್ನು ಪ್ರೀತಿಸುವಿರಾ? ಹಾಗಿದ್ದರೆ ಬನ್ನಿ, ಉದಾತ್ತವಾದ ವಿಷಯಗಳಿಗಾಗಿ ಹೋರಾಡೋಣ ಬನ್ನಿ. ಹಿಂತಿರುಗಿ ನೋಡಬೇಡಿ. ಏನೇ ಆಗಲಿ ಹಿಂದೆ ನೋಡದೆ ಮುಂದೆ ನೋಡುತ್ತಾ ನಡೆಯಿರಿ"*_ -
- ಸ್ವಾಮಿ ವಿವೇಕಾನಂದ