Wikipedia

Search results

Friday, February 03, 2017

ಎಫ್ಡಿಎ, ಎಸ್ಡಿಎ ಪರೀಕ್ಷೆ: ಗುರುತಿನ ಚೀಟಿ ಕಡ್ಡಾಯ

ಕರ್ನಾಟಕ ಲೋಕಸೇವಾ ಆಯೋಗವು ಫೆಬ್ರುವರಿ
5, 11 ಮತ್ತು 12 ರಂದು ನಡೆಸಲಿರುವ ಎಫ್ಡಿಎ ಹಾಗೂ
ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ
ಅಭ್ಯರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿ
ತರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಷಣ್ಮುಖ
ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಬುಧವಾರ ನಡೆದ ಎಫ್ಡಿಎ ಹಾಗೂ ಎಸ್ಡಿಎ
ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜರಾಗುವ
ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಭಾವಚಿತ್ರಗಳನ್ನು
ಹೊಂದಿರುವ ಚುನಾವಣಾ ಗುರುತಿನ ಚೀಟಿ,
ಆಧಾರ್ ಕಾರ್ಡ್, ವಾಹನ ಚಾಲನೆ ಪರವಾನಗಿ ಪತ್ರ, ಪಾನ್ಕಾರ್ಡ್,
ಪಾಸ್ಪೋರ್ಟ್, ಸರ್ಕಾರಿ ನೌಕರರ ಗುರುತಿನ ಚೀಟಿ
ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು
ಕಡ್ಡಾಯ ಹಾಜರುಪಡಿಸಬೇಕು. ಹಾಜರು ಪಡಿಸದ
ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ
ಪ್ರವೇಶ ನೀಡುವುದಿಲ್ಲ ಎಂದು ಹೇಳಿದರು.
ಜಿಲ್ಲೆಯ 22 ಕೇಂದ್ರಗಳಲ್ಲಿ ಪರೀಕ್ಷೆ
ನಡೆಯಲಿದೆ. ಕೇಂದ್ರಗಳಲ್ಲಿ ಯಾವುದೇ ರೀತಿಯ
ಅಹಿತಕರ ಘಟನೆಗಗಳು ನಡೆಯದಂತೆ ಎಚ್ಚರ
ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ
ಪತ್ರಿಕೆಗಳನ್ನು ತಲುಪಿಸುವುದು ಮತ್ತು ಪರೀಕ್ಷಾ
ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ
ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಲು
ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆಗಾಗಿ
ನಿಯೋಜನೆಗೊಂಡ ಅಧಿಕಾರಿಗಳು
ಪರೀಕ್ಷೆ ಕೇಂದ್ರಗಳಿಗೆ ನಿಗದಿತ ಅವಧಿಗಿಂತ
ಒಂದು ಗಂಟೆ ಮುಂಚಿತವಾಗಿ ತೆರಳಿ ಅಗತ್ಯ
ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪರೀಕ್ಷೆ ವೀಕ್ಷಕರಾಗಿ
ನೇಮಕಗೊಂಡ ಅಧಿಕಾರಿಗಳು
ಪರೀಕ್ಷೆಯ ಹಿಂದಿನ ದಿನ ತಮಗೆ ಹಂಚಿಕೆ
ಮಾಡಲಾಗಿರುವ ಪರೀಕ್ಷಾ ಉಪ ಕೇಂದ್ರಗಳಿಗೆ
ಕಡ್ಡಾಯ ಭೇಟಿ ನೀಡಿ, ಆಸನ ವ್ಯವಸ್ಥೆ, ಟೇಬಲ್
ಅಥವಾ ಡೆಸ್ಕ್ಗಳ ಮೇಲೆ ಬರೆದಿರುವ ನೋಂದಣಿ
ಸಂಖ್ಯೆಗಳನ್ನು ಪರಿಶೀಲಿಸಬೇಕು ಎಂದು
ನಿರ್ದೇಶನ ನೀಡಿದರು. ಪರೀಕ್ಷೆಗೆ
ನಿಯೋಜನೆಗೊಂಡ ವೀಕ್ಷಕರು,
ಮೇಲ್ವಿಚಾರಕರು, ಹೆಚ್ಚುವರಿ ಮೇಲ್ವಿಚಾರಕರು ಹಾಗೂ ಇತರೆ
ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು
ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎಲ್ಲ ಪರೀಕ್ಷಾ
ಕೇಂದ್ರಗಳಿಗೆ ಒಬ್ಬ ಮಹಿಳಾ 
ಪೊಲೀಸ್ ಅಧಿಕಾರಿಯನ್ನು
ಒಳಗೊಂಡಂತೆ
ಪೊಲೀಸ್ ಸಿಬ್ಬಂದಿಯನ್ನು
ನಿಯೋಜಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ
ಕೇಂದ್ರಗಳಿಗೆ ತಲುಪಿಸುವ ಅಧಿಕಾರಿಗಳಿಗೆ ರಕ್ಷಣೆ
ಒದಗಿಸಬೇಕು ಎಂದು ಹೆಚ್ಚುವರಿ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ
ಶ್ರೀಹರಿಬಾಬು ತಿಳಿಸಿದರು.
ಪರೀಕ್ಷೆಯ ದಿನಗಳಂದು ಪರೀಕ್ಷಾ
ಕೇಂದ್ರಗಳ ಸುತ್ತಮುತ್ತ 200 ಮೀಟರ್
ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಪರೀಕ್ಷೆಗೆ ನಿಯೋಜನೆಗೊಂಡಿರುವ
ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳನ್ನು
ಹೊರತುಪಡಿಸಿ ಪರೀಕ್ಷಾ
ಕೇಂದ್ರಗಳಲ್ಲಿ ಯಾರೊಬ್ಬರು
ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ
200 ಮೀಟರ್ ಅಂತರದಲ್ಲಿ ಝೆರಾಕ್ಸ್
ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕು
ಎಂದು ತಿಳಿಸಿದರು.