Wikipedia

Search results

Friday, February 16, 2018

ಬಜೆಟ್ ಮುಖ್ಯಾಂಶಗಳು

ರೈತರ ಸಾಲ ಮನ್ನಾ*

*ಬಜೆಟ್ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.*

– *ಬಜೆಟ್ ಗಾತ್ರ 209181 ಲಕ್ಷ ಕೋಟಿ*

– *ಮೃತ ರೈತರ ಸಾಲ ಮನ್ನಾ. ಸಹಕಾರಿ ಸಂಘದಲ್ಲಿ ಬೆಳೆ ಸಾಲ ಪಡೆದಿದ್ದ ರೈತರ 1 ಲಕ್ಷದ ವರೆಗೆ ಸಾಲ ಮನ್ನಾ*

*ಯಾವುದಕ್ಕೆ ಎಷ್ಟು ಕೋಟಿ?*
ಶಿಕ್ಷಣ 26864 ಕೋಟಿ, ಜಲಸಂಪನ್ಮೂಲ 18112 ಕೋಟಿ ರೂ.
ನಗರಾಭಿವೃದ್ಧಿ 17196 ಕೋಟಿ, ಗ್ರಾಮೀಣಾಭಿವೃದ್ಧಿ – ಪಂಚಾಯತ್ ರಾಜ್ 14268 ಕೋಟಿ,
ಇಂಧನ 14135 ಕೋಟಿ, ಸಮಾಜ ಕಲ್ಯಾಣ 11822 ಕೋಟಿ,
ಲೋಕೋಪಯೋಗಿ 9271 ಕೋಟಿ,
ಒಳಾಡಳಿತ ಮತ್ತು ಸಾರಿಗೆ 8855 ಕೋಟಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 8822 ಕೋಟಿ, ಕೃಷಿ ಮತ್ತು ತೋಟಗಾರಿಕೆ 7031 ಕೋಟಿ, ಕಂದಾಯ 6642 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ 5371 ಕೋಟಿ, ವಸತಿ 3942 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು 3882 ಕೋಟಿ, ಇತರೆ 75081 ಕೋಟಿ ರೂ.

*ಕೃಷಿ*
– ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಧನ ಸಹಾಯ. ಪ್ರತಿವರ್ಷ ಗರಿಷ್ಠ 1 ಹೆಕ್ಟೇರ್‍ಗೆ 5 ಸಾವಿರ, 10 ಸಾವಿರ ಬ್ಯಾಂಕ್ ಖಾತೆಗೆ ಜಮೆ
– ಸಹಕಾರಿ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರು ಮೃತಪಟ್ಟರೆ 1 ಲಕ್ಷದವರೆಗಿನ ಸಾಲ ಮನ್ನ
– ಕೃಷಿ ಚಟುವಟಿಕೆಯಲ್ಲಿ ಹಾವು ಕಡಿದರೆ 1ಲಕ್ಷದಿಂದ 2 ಲಕ್ಷ ಪರಿಹಾರ
– ಬಣವೆಗಳಿಗೆ ಬೆಂಕಿ ಬಿದ್ದರೆ 10 ರಿಂದ 20 ಸಾವಿರಕ್ಕೆ ಏರಿಕೆ

– ಮೃತ ರೈತರ ಸಾಲ ಮನ್ನಾ
– 1 ಲಕ್ಷದ ವರೆಗೆ ಸಹಕಾರಿ ಸಾಲ ಮನ್ನಾ
– 25 ಎಪಿಎಂಸಿಗಳಲ್ಲಿ ಗುಣ ವಿಶ್ಲೇಷಣಾ ಪ್ರಯೋಗಾಲಯ
– ಪ್ರತಿ ಸಮಿತಿಗೆ 10 ಲಕ್ಷ ವೆಚ್ಚದಂತೆ 2.5 ಕೋಟಿ
– ವಸತಿ ರಹಿತ 1 ಸಾವಿರ ಹಮಾಲರಿಗೆ ವಸತಿ ಸೌಲಭ್ಯ

*ಲೋಕೋಪಯೋಗಿ*
* ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನ ಕೈಗೊಳ್ಳಲು 150 ಕೋಟಿ ರೂ.
* ದೆಹಲಿಯ ಕರ್ನಾಟಕ ಭವನ ಹಳೇ ಕಟ್ಟಡ ಕೆಡವಿ ಹೊಸ ಭವನ ನಿರ್ಮಾಣ – 30 ಕೋಟಿ
* ಬೆಂಗಳೂರು ಎಂ.ಎಸ್.ಬಿಲ್ಡಿಂಗ್ ಹತ್ತಿರ 20 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವಲ್ ಕಾರ್ ಪಾರ್ಕಿಂಗ್

– ಅಂತರ್ ಜಾತಿಯ ವಿವಾಹಕ್ಕೆ ಪ್ರೋತ್ಸಾಹ
– ಒಂದೂವರೆ ಲಕ್ಷದಷ್ಟು ಸರ್ಕಾರಿ ಹುದ್ದೆಗಳ ಭರ್ತಿ. ಬಂಡವಾಳ ಹೂಡಿಕೆಗೆ ದೇಶದಲ್ಲೇ ಕರ್ನಾಟಕ ಪ್ರಸಕ್ತ ಸ್ಥಳ
– ಬೆಂಗಳೂರನ್ನು ಸ್ಟಾರ್ಟ್‍ ಅಪ್ ನಗರಿಯಾಗಿ ಅಭಿವೃದ್ಧಿ
– ಅಭಿವೃದ್ಧಿಯೆಡೆಗೆ ನಡೆಯಬೇಕೆಂಬ ಬಯಕೆ, ನಮ್ಮದು ರೈತ ಸ್ನೇಹಿ ಸರ್ಕಾರ

ಅಲ್ಪಸಂಖ್ಯಾತ ಸಮುದಾಯಕ್ಕೆ 2281 ಕೋಟಿ ರೂ.
– ಕ್ರೈಸ್ತ ಸಮುದಾಯಕ್ಕೆ 200 ಕೋಟಿ ರೂ.
– ಜೈನ, ಸಿಖ್ ಸಮುದಾಯಕ್ಕೆ 80 ಕೋಟಿ ರೂ.
– ಮದರಸಾಗಳ ಆಧುನೀಕರಣಕ್ಕೆ 15 ಕೋಟಿ ರೂ.

*ವಾಣಿಜ್ಯ ಮತ್ತು ಕೈಗಾರಿಕೆ*
* ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಲು ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಬೆಂಗಳೂರು ಸಮೀಪ 400 ಎಕರೆಯಲ್ಲಿ, ಹುಬ್ಬಳ್ಳಿಯಲ್ಲಿ 50 ಎಕರೆಯಲ್ಲಿ ಅಭಿವೃದ್ಧಿ
* ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗದೊಂದಿಗೆ 23 ಕೋಟಿ ವೆಚ್ಚದಲ್ಲಿ ಕೈಗಾರಿಕಾ ತಂತ್ರಜ್ಞಾನದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ – ಯೋಜನಾ ವೆಚ್ಚದಲ್ಲಿ ಸರ್ಕಾರದ ಪಾಲು ಶೇ.50ರಷ್ಟು
* ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು 20 ರಿಂದ 30 ಎಕರೆಗಳ ಬಂಜರು ಅಥವಾ ಒಣ ಭೂಮಿಯನ್ನ ಗ್ರಾಮೀಣ ಉದ್ಯಮ ವಲಯ ಎಂದು ಅಧಿಸೂಚಿಸಲಾಗುವುದು.

*ಪ್ರಾಥಮಿಕ – ಪ್ರೌಢ ಶಿಕ್ಷಣ 22350 ಕೋಟಿ*
* 100 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
* ಪ್ರತಿ ಶಾಲೆಗೆ 5 ಲಕ್ಷ ದಂತೆ ಒಟ್ಟು 5 ಕೋಟಿ ಅನುದಾನ
* ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ
* 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯ 5 ಕೋಟಿ
* 100 ವರ್ಷ ಪೂರೈಸಿದ ಪಾರಂಪರಿಕ ಶಾಲೆ ಗುರುತಿಸಿ ನವೀಕರಣ
* 7.5 ಕೋಟಿ ವೆಚ್ಚದಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯ

*ಉನ್ನತ ಶಿಕ್ಷಣ – 4514 ಕೋಟಿ*
* ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರಕ್ಕೆ 2 ಕೋಟಿ
* ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆ ಜಮಖಂಡಿಯಲ್ಲಿ ರಾಣಿ * * * * ಚೆನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ತಲಾ 1 ಕೋಟಿ
* ಉನ್ನತ ಶಿಕ್ಷಣ ಪಡೆಯುವ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ
* ಧಾರವಾಡ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ 1 ಕೋಟಿ

ಆರೋಗ್ಯ ಇಲಾಖೆಗೆ 6,645 ಕೋಟಿ ರೂ.

* ಆರೋಗ್ಯ ಕರ್ನಾಟಕ ಯೋಜನೆ
* ಹೊಸದಾಗಿ 571 ಪ್ರಾಥಮಿಕ ಆರೋಗ್ಯ ಕೇಂದ್ರ
* ಖಾಸಗಿ ಆಸ್ಪತ್ರೆಗೆ ಮೇಲ್ವಿಚಾರಣೆಗೆ ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಆರೋಗ್ಯ ಪರಿಷತ್ತು ಸ್ಥಾಪನೆ

ವೈದ್ಯಕೀಯ ಶಿಕ್ಷಣ 2,177 ಕೋಟಿ ರೂ.
* ಬಿಎಂಸಿಯಲ್ಲಿ 1000 ಹಾಸಿಗೆ ಇರುವ ಹೆಚ್ಚುವರಿ ವಾರ್ಡ್
* ಗದಗ, ಕೊಪ್ಪಳ ಚಾಮರಾಜನಗರದ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ.
* ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7.81 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯ
* ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಪೆಟ್ ಸಿಟಿ ಸ್ಕ್ಯಾನ್ ಸೌಲಭ್ಯ
* ಮೈಸೂರು ನರ್ಸಿಂಗ್ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ
* ಬೀದರ್, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ
* ಗುಲ್ಬರ್ಗಾ ವೈದಕೀಯ ಕಾಲೇಜಿನಲ್ಲಿ ಸುಟ್ಟಗಾಯಗಳ ವಾರ್ಡ್ ಆರಂಭ
* ಹಾಸನ, ಮೈಸೂರು, ಕಾರವಾರ ವೈದಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ
* ನರ್ಸಿಂಗ್ ಕಾಲೇಜುಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ

ಮಾಹಿತಿ ತಂತ್ರಜ್ಞಾನ – 247 ಕೋಟಿ ರೂ.
* ಕಲಬುರಗಿಯಲ್ಲಿ 5 ಕೋಟಿ ವೆಚ್ಚದಲ್ಲಿ ಇನ್‍ ಕ್ಯೂಬೇಷನ್ ಸೆಂಟರ್ ಸ್ಥಾಪನೆ – ದೇಶಪಾಂಡೆ ಫೌಂಡೇಷನ್ ಸಹಯೋಗ
* ಕೇಂದ್ರ ಸರ್ಕಾರದ ಸಂಸ್ಥೆ ಸಿ-ಕ್ಯಾಂಪ್ ಸಹಯೋಗದೊಂದಿಗೆ ಅಗ್ರಿ ಇನ್ನೋವೇಷನ್ ಕೇಂದ್ರ ಸ್ಥಾಪನೆ
* ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಸ್ಥಾಪನೆ
* ಉದ್ಯಮಗಳ ವಿನ್ಯಾಸ ಹಾಗೂ ಉತ್ಪನ್ನಗಳ ವಿನ್ಯಾಸ ಉತ್ತೇಜನಕ್ಕೆ ಸೆಂಟರ್ ಫಾರ್ ಎಕ್ಸ್ ಲೆನ್ಸ್ ಇನ್ ಡಿಸೈನ್ ಸ್ಥಾಪನೆ
* ತಂತ್ರಜ್ಞಾನಗಳನ್ನ ಕಾನೂನು ಚೌಕಟ್ಟಿನಲ್ಲಿ ತರುವ ಉದ್ದೇಶದಿಂದ ಲೀಗಲ್ ಫ್ರೇಮ್ ವರ್ಕ್ ಫಾರ್ ಇನ್ನೋವೇಷನ್ ಸ್ಥಾಪನೆ
* ವಿಜ್ಞಾನ ಮತ್ತು ಇಂಜಿನಿಯರಿಂಗ್‍ ನ ಪಿಎಚ್‍ಡಿ ಸಂಶೋದಕರಿಗೆ ಡಿಎಸ್‍ ಟಿ ಶಿಷ್ಯವೇತನ ಪ್ರಾರಂಭಿಸಲು 1 ಕೋಟಿ ರೂ.
* ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಮಿನಿ ತ್ರೀಡಿ ತಾರಾಲಯ ಸ್ಥಾಪನೆ

ಕಂದಾಯ ಇಲಾಖೆಗೆ 6,642 ಕೋಟಿ ರೂ.
* ಜಾತಿ ಪ್ರಮಾಣ ಪತ್ರ ನೀಡಲು `ಈ ಕ್ಷಣ’ ಯೋಜನೆ ಆರಂಭ
* ಭೂ ಮಾಪನ ಇಲಾಖೆಯಿಂದ 5 ಮೊಬೈಲ್ ಆ್ಯಪ್ ಅವುಗಳೆಂದ್ರೆ ಸಂಯೋಜನೆ, ಸಮೀಕ್ಷೆ, ಮೌಲ್ಯ, ದಿಶಾಂಕ್, ಆಧಾರ್ ಸಂಗ್ರಹಣೆ
* ಪಹಣಿ ದಾಖಲೆ ಉಪಯೋಗಿಸಲು ಲ್ಯಾಂಡ್ ಟೈಟಲಿಂಗ್ ಯೋಜನೆ, 3 ತಾಲೂಕುಗಳಲ್ಲಿ ಪ್ರಾಯೋಗಿಕ ಆರಂಭ
* 1568 ಜನವಸತಿ ಪ್ರದೇಶ ಕಂದಾಯ ಗ್ರಾಮವಾಗಿ ಘೋಷಣೆ
* ಮುಂದಿನ ವರ್ಷದಲ್ಲಿ 2500 ಗ್ರಾಮ ಪೋಡಿ ಮುಕ್ತ
* ಸಾಮಾಜಿಕ ಭದ್ರತಾ ಪಿಂಚಣಿ ಮಾಸಿಕ 500 ರೂ. ನಿಂದ 600 ರೂ. ಗೆ ಹೆಚ್ಚಳ
* ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಫಲಾನುಭವಿಗಳಿಗೆ ಅನ್ವಯ
* ರುದ್ರಭೂಮಿ ಖರೀದಿಗೆ 10 ಕೋಟಿ ರೂ.ಮೀಸಲು
* ಹವಾಮಾನ ಮುನ್ಸೂಚನೆ ಮುನ್ನೆಚರಿಕೆ ನೀಡಲು ಮೊಬೈಲ್ ಆ್ಯಪ್
* ಅರ್ಚಕರಿಗೆ ತಸ್ತಿಕ್ ನೀಡಲು ವಾರ್ಷಿಕ 20 ಕೋಟಿ ರೂ. ಅನುದಾನ
* ತಿರುಮಲದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅತಿಥಿ ಗೃಹ