ಎಫ್ಡಿಎ_ಎಸ್ಡಿಎ_ಅಕ್ರಮದ_ಘಾಟು!
ಬೆಂಗಳೂರು: ನೇಮಕಾತಿ ಅಕ್ರಮಗಳಿಗೆ
ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ
ಹಾಕುತ್ತಿದ್ದರೂ ಎಚ್ಚೆತ್ತುಕೊಳ್ಳದ, ಲಂಗು
ಲಗಾಮಿಲ್ಲದ ಸಾಂವಿಧಾನಿಕ ಸಂಸ್ಥೆ ಎಂಬ
ಅಪಖ್ಯಾತಿ ಪಡೆಯುತ್ತಿರುವ ಕರ್ನಾಟಕ
ಲೋಕಸೇವಾ ಆಯೋಗದಲ್ಲೀಗ ಎಫ್ಡಿಎ
ಹಾಗೂ ಎಸ್ಡಿಎ ನೇಮಕ ಪ್ರಕ್ರಿಯೆಯಲ್ಲೂ
ಅಕ್ರಮದ ವಾಸನೆ ಬರುತ್ತಿದೆ.
ಎಸ್ಡಿಎ ಹಾಗೂ ಎಫ್ಡಿಎ ಹುದ್ದೆಗಳಿಗೆ ದಾಖಲೆ
ಪರಿಶೀಲನೆ ಆರಂಭವಾಗಿದ್ದರೂ, ಈವರೆಗೆ
ಅಭ್ಯರ್ಥಿಗಳ ಅಂಕ ಬಹಿರಂಗಗೊಳಿಸಿಲ್ಲ.
ನಿಯಮದಂತೆ 1:2 ಅನುಪಾತದಲ್ಲಿ ತನ್ನಿಷ್ಟದ
ಅರ್ಹತಾ ಪಟ್ಟಿಯನ್ನಷ್ಟೇ ಕೆಪಿಎಸ್ಸಿ ಪ್ರಕಟಿಸಿದೆ.
ಇದು ನೇಮಕದಲ್ಲಿ ಭಾರಿ ಅವ್ಯವಹಾರ
ನಡೆದಿರುವ ಅನುಮಾನ ಮೂಡಿಸಿದೆ.
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ
ಅರ್ಹತಾ ಪಟ್ಟಿ ಪ್ರಕಟಿಸುವಾಗ ಅರ್ಹ ಅಭ್ಯರ್ಥಿಗಳ
ಅಂಕ, ಕಟ್ ಆಫ್ ಅಂಕ, ಅಭ್ಯರ್ಥಿಗಳ ವಿವರವನ್ನು
ಪ್ರಕಟಿಸಬೇಕು.
.
ಆದರೆ ಕೆಪಿಎಸ್ಸಿ ಇವ್ಯಾವುದನ್ನೂ
ಪ್ರಕಟಿಸದಿರುವುದು ಆಯ್ಕೆ ಪ್ರಕ್ರಿಯೆ
ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ
ಅನುಮಾನಕ್ಕೆ ಪುಷ್ಟಿ ನೀಡಿದೆ. ವಿಚಿತ್ರವೆಂದರೆ
ಅರ್ಹತಾ ಪಟ್ಟಿಯಲ್ಲಿರುವವರಿಗೆ ತಮಗೆ ಎಷ್ಟು
ಅಂಕ ಬಂದಿದೆ ಎಂಬ ಮಾಹಿತಿ ಇಲ್ಲ. ಕೆಪಿಎಸ್ಸಿ ಕರೆದಿದೆ
ಎಂಬ ಕಾರಣಕ್ಕೆ ಬಂದು ದಾಖಲೆ ಪರಿಶೀಲನೆಗೆ
ಮುಂದಾಗಿದ್ದಾರೆ.
ಸುಮ್ಮನಿರುವ ಸಿಎಂ!: ಎಫ್ಡಿಎ ಹಾಗೂ ಎಸ್ಡಿಎ
ಅರ್ಹತಾ ಪಟ್ಟಿ ಪ್ರಕಟವಾಗುತ್ತಿದ್ದಂತೆ ಪ್ರತಿಭಟನೆ
ನಡೆಸಿದ ಕೆಲ ಅಭ್ಯರ್ಥಿಗಳು
ಮುಖ್ಯಮಂತ್ರಿಯನ್ನು ಭೇಟಿ ಮಾಡಿ,
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಒಂದೇ ಜಿಲ್ಲೆ
ಹಾಗೂ ಪರೀಕ್ಷಾ ಕೊಠಡಿಯ ಸಾಕಷ್ಟು
ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿ ಹೆಸರು
ಗಳಿಸಿದ್ದಾರೆ. ನೇಮಕದಲ್ಲಿ ಭಾರಿ
ಅವ್ಯವಹಾರವಾಗಿದೆ ಎಂದು ದೂರು ಪತ್ರ
ನೀಡಿದ್ದರು. ಆದರೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಇದನ್ನು ಗಂಭೀರವಾಗಿ
ತೆಗೆದುಕೊಂಡಿಲ್ಲ.
ನನ್ನನ್ನು ಅರ್ಹತಾ ಪಟ್ಟಿಗೆ ಸೇರಿಸಿಕೊಳ್ಳಿ
ಎನ್ನುತ್ತಿಲ್ಲ. ಕ್ರಮಬದ್ಧವಾಗಿ ನಾನು
ಅರ್ಹನಾಗುತ್ತೇನೆ. ಆದರೆ ಅರ್ಹತೆ ಪಡೆದವರ
ಅಂಕವೆಷ್ಟು ಎನ್ನುವ ಕುತೂಹಲಕ್ಕಾದರೂ
ಬಹಿರಂಗಪಡಿಸಬೇಕು.
.
| ಶಾಲಿನಿ ರಾವ್ ಬೆಂಗಳೂರು
ದೂರು ಆಲಿಸದ ಕರ್ನಾಟಕ ಲೋಕಸೇವಾ
ಆಯೋಗ
ಎಫ್ಡಿಎ ಹಾಗೂ ಎಸ್ಡಿಎ ಆಯ್ಕೆ ಪ್ರಕ್ರಿಯೆ
ಪಾರದರ್ಶಕವಾಗಿ ನಡೆದಿಲ್ಲ. ಮಾದರಿ ಉತ್ತರ ಪತ್ರಿಕೆ
ಪ್ರಕಾರ ನನಗೆ 157 ಅಂಕಗಳು ಬರಬೇಕಿತ್ತು.
ಆದರೆ ನನಗಿಂತ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳ
ಹೆಸರು ಅರ್ಹತಾ ಪಟ್ಟಿಯಲ್ಲಿದೆ ಎಂದು
ತಿಳಿದುಬಂದಿದೆ. ಈ ಬಗ್ಗೆ ಸ್ಪಷ್ಟನೆ ಕೊಡಿ.
ಅಂಕಗಳನ್ನು ಬಹಿರಂಗಗೊಳಿಸಿ. ಈ ಮೂಲಕ
ನಮ್ಮ ಆಯ್ಕೆಗೆ ಇರುವ ಸಮಸ್ಯೆಯನ್ನು ತಿಳಿಯಲು
ಆಗುತ್ತದೆ ಎಂದು ಮೈಸೂರಿನ ಶಿವಾನಂದ
ಎನ್ನುವ ಅಭ್ಯರ್ಥಿ ದೂರು ನೀಡಲು ಕೆಪಿಎಸ್ಸಿಗೆ
ಬಂದಿದ್ದಾರೆ. ಆದರೆ, ಅವರಿಗೆ ಕಚೇರಿ ಒಳಗೆ
ಹೋಗಲು ಅವಕಾಶ ನೀಡದೆ ಕಳುಹಿಸಿದ್ದಾರೆ.
'ವಿಜಯವಾಣಿ'ಗೆ ಲಭ್ಯವಾದ ಮಾಹಿತಿ ಪ್ರಕಾರ, ಎಸ್
ಡಿಎಯಲ್ಲಿ 152-154 ಅಂಕ ಗಳಿಸಿದ ಅಭ್ಯರ್ಥಿಗಳಿಗೂ
ದಾಖಲೆ ಪರಿಶೀಲನೆಗೆ ಕರೆಯಲಾಗಿದೆ. ತನ್ನ ಅಕ್ರಮ
ಮುಚ್ಚಿಕೊಳ್ಳುವ ಉದ್ದೇಶದಿಂದಲೇ
ಕೆಪಿಎಸ್ಸಿ ಅರ್ಹತಾ ಪಟ್ಟಿಯ ಅಭ್ಯರ್ಥಿಗಳ ಅಂಕ
ಬಹಿರಂಗಗೊಳಿಸುತ್ತಿಲ್ಲ ಎನ್ನಲಾಗಿದೆ.
ಅ'ಸಹಾಯಕ'ರಾದ ಅಭ್ಯರ್ಥಿಗಳು
ವಿವಾದಕ್ಕೆ ಗುರಿಯಾದ ಪ್ರಥಮ, ದ್ವಿತೀಯ ದರ್ಜೆ
ಸಹಾಯಕರ ನೇಮಕ ಪ್ರಕ್ರಿಯೆ
ದಾಖಲೆ ಪರಿಶೀಲನೆ ಆರಂಭವಾದರೂ ಅಂಕ
ಪ್ರಕಟಿಸದ ಕೆಪಿಎಸ್ಸಿ
ಮುಚ್ಚುಮರೆಯೇಕೆ?
.
ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಯಲ್ಲಿ ಉತ್ತರ
ಬರೆದ ಪ್ರತಿ ವಿದ್ಯಾರ್ಥಿಯ ಅಂಕಗಳ ವಿವರ ಕೆಪಿಎಸ್ಸಿ ಬಳಿ
ಇದೆ. ಆದರೆ ಈ ಅಂಕಗಳನ್ನು ಬಹಿರಂಗಪಡಿಸಲು
ಆಯೋಗ ಮೀನಮೇಷ ಎಣಿಸುತ್ತಿದೆ. ಈ ಬಗ್ಗೆ
ಆಯೋಗದ ಕಾರ್ಯದರ್ಶಿ ಮನೋಜ್
ಕುಮಾರ ಮೀನಾ ಅವರನ್ನು 'ವಿಜಯವಾಣಿ'
ಸಂರ್ಪಸಿದಾಗ, 'ಅರ್ಹತಾ ಪಟ್ಟಿ ಪ್ರಕಟಿಸುವ
ಸಂದರ್ಭದಲ್ಲಿ ಅಂಕ ಪ್ರಕಟಿಸುವ
ಅಗತ್ಯವೇನಿದೆ?' ಎಂದು ಮರುಪ್ರಶ್ನೆ
ಹಾಕಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು!
ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ
ತಂಡವೇ ಎಫ್ಡಿಎ ಹಾಗೂ ಎಸ್ಡಿಎ
ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿತ್ತು
ಎನ್ನುವುದು ಸಿಐಡಿ ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ
ಆರೋಪದ ಬಗೆಗೂ ಕಣ್ಮುಚ್ಚಿ ಕುಳಿತಿರುವ
ಸರ್ಕಾರ ಹಾಗೂ ಕೆಪಿಎಸ್ಸಿ, ಸೋರಿಕೆಯ ತೀವ್ರತೆ
ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆ ಎಫ್ಡಿಎ
ಹಾಗೂ ಎಸ್ಡಿಎ ಪರೀಕ್ಷೆಗಳಲ್ಲಿಯೂ ಕೆಪಿಎಸ್ಸಿ
'ಅವ್ಯವಹಾರ' ಇತಿಹಾಸ
ಮುಂದುವರಿದುಕೊಂಡು ಬಂದಿದೆ.
ಪರೀಕ್ಷೆ ಬರೆದ ಅಭ್ಯರ್ಥಿಗೆ ಅಂಕ
ತಿಳಿದುಕೊಳ್ಳುವ ಹಕ್ಕಿಲ್ಲವೆ? ಮಾದರಿ ಉತ್ತರ
ಪತ್ರಿಕೆ ಪ್ರಕಾರ ನನಗಿಂತ ಕಡಿಮೆ ಅಂಕ ಪಡೆದ ನನ್ನ
ಸ್ನೇಹಿತರು ಅರ್ಹತಾ ಪಟ್ಟಿಯಲ್ಲಿ
ಸೇರಿದ್ದಾರೆ.