Wikipedia

Search results

Friday, June 24, 2016

ಗೋಧಿ-ಸಂಸ್ಕೃತದಲ್ಲಿ ಗೋಧೂಮ ಎಂಬುದು ವೇದಕಾಲದಲ್ಲೇ ಉಲ್ಲೇಖ ಇದೆ. ಯಜ್ಞ ಯಾಗಾದಿಗಳಲ್ಲಿ,  ದಾನಕ್ಕಾಗಿ, ಜ್ಯೌತಿಷ್ಯೋಕ್ತ ವಿವಿಧ ಪರಿಹಾರಗಳಲ್ಲಿ ಗೋಧೂಮವನ್ನು ಉಲ್ಲೇಖಿಸಿದ್ದಾರೆ.ಆಯುರ್ವೇದದಲ್ಲೂ ಗೂಧೂಮದ ಬಗ್ಗೆ ಬೇಕಾದಷ್ಟು ಆಧಾರ ಇದೆ. ಉದಾಹರಣೆಗೆ ಮೇಲಿನ ಶ್ಲೋಕವನ್ನು ನೋಡಿ. ಗೋಧಿಯು ವಾತ ಪಿತ್ತ ಶಮಕ, ಬಲ್ಯ, ವೃಷ್ಯ, ಸಂಧಾನೀಯ ,ವರ್ಣ್ಯವಿಷಯ, , ಶರೀರ ವನ್ನು ಸರ್ವಾಂಗೀಣವಾಗಿ ಗಟ್ಟಿ ಗೊಳಿಸುವಿಕೆ ಇತ್ಯಾದಿ ಹಲವು ಉಪಯೋಗಗಳನ್ನು.ಹೇಳಲಾಗಿದೆ. ಆದ್ದರಿಂದ ಯಾವುದೇ ಗೊಡ್ಡು ಲೇಖನಗಳಿಗೆ ಕಿವಿಗೊಡದೆ ಗೋಧಿಯ ಉಪಯೋಗ ಮಾಡಬಹುದು. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ಆಧಾರ ಸಹಿತ ಕೊಡಬಹುದು. ಆದರೆ ಮೈದಾ ದ ಉಪಯೋಗ ಒಳ್ಳೆಯದಲ್ಲ.           ಮನೆಯಲ್ಲಿ ಸತ್ಯನಾರಾಯಣ ಕಥೆ ವೃತ ನಡೆದಿರುತ್ತದೆಂದು ಭಾವಿಸಿ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ಸತ್ಯನಾರಾಯಣ ಕಥೆಯಲ್ಲಿ ಪ್ರಸಾದರೂಪದಲ್ಲಿ ಕೊಡುವ ಸಪಾದಭಕ್ಷ್ಯವನ್ನು ತಯಾರು ಮಾಡುವ ವಿಧಾನವನ್ನೂ ಸತ್ಯನಾರಾಯಣ ಕಥೆಯಲ್ಲೇ ಹೇಳಲಾಗಿದೆ. ಅದರಲ್ಲಿ ಗೋದೂಮಶ್ಚಕ ಚೂರ್ಣಂ ಎಂದು ಕರೆಯಲ್ಪಡುವ ಗೋಧಿ ನಮ್ಮ ದೇಶಕ್ಕೆ ಕೇವಲ ಐವತ್ತು ವರ್ಷಗಳ ಹಿಂದೆ ಪರಿಚಯವಾಯಿತೆನ್ನುವ ಮೂರ್ಖ ವಾದಸರಣಿಗೆ ಏನಾದರೂ ಸಾಕ್ಷ್ಯಾಧಾರಗಳಿವೆಯೇ? ಹಾಗಾದರೆ ಸತ್ಯನಾರಾಯಣ ಕಥೆಗೆ ಕೇವಲ ಐವತ್ತೇ ವರ್ಷಗಳ ಇತಿಹಾಸವೇ?  ಇತ್ತೀಚೆಗೆ ಪ್ರಸಿದ್ದವಾಗುತ್ತಿರುವ ರಾಮ್ ದೇವ್ ಬಾಬಾರವರ ಪತಂಜಲೀ ಉತ್ಪನ್ನಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮೈದಾವನ್ನು ಬಳಸದೇ ಶುದ್ದ ಗೋಧಿಯನ್ನೇ ಬಳಸುತ್ತಿರುವುದರಿಂದ ತಮ್ಮ ಮಾರುಕಟ್ಟೆಯನ್ನು ಕಳೆದು ಕೊಂಡ ಕೆಲ ವಿದೇಶಿ ಕಂಪೆನಿಗಳು ವ್ಯವಸ್ತಿತವಾಗಿ ಇಂತಹದ್ದೊಂದು ಅಪಪ್ರಚಾರ ನಡೆಸುತ್ತಿವೆ. ದಯಮಾಡಿ ಅಂತಹ ಸಂದೇಶಗಳಲ್ಲಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಇನ್ನೊಂದು ಗುಂಪಿಗೆ ದಾಟಿಸಿ. ಇವತ್ತು ಗೋದಿಯ ಬಗ್ಗೆ ಹೇಳಿದವರು ನಾಳೆ ಅಕ್ಕಿಯ ಬಗೆಗೂ ಹೇಳುತ್ತಾರೆ.  ಸುಮ್ಮನೆ ಸುದ್ದಿ ಹರಡುತ್ತ ಹೋದರೆ ನಮ್ಮ ರೈತರಿಗೆ ನಾವೇ ವಿಷ ಕೊಟ್ಟಂತಾಗುತ್ತದೆ.