Wikipedia

Search results

Thursday, June 09, 2016

ಒಂದು ಸಣ್ಣ ಹೂ ತೋಟದಲ್ಲಿ ಸುಂದರವಾದ ಪುಷ್ಪಗಳು ಅರಳಿ ನಿಂತಿದ್ದವು,
ಇದನ್ನು ಕಂಡ ತೋಟದ ಮಾಲೀಕ ತುಂಬಾ ಸಂತಸಗೊಂಡು “ನನ್ನ ಶ್ರಮಕ್ಕೆ ತಕ್ಕ ಫಲ ದೇವರು ಕೊಟ್ಟಿದ್ದಾನೆಂದು” ಹೇಳಿದ.

ಅದೇ ದಾರಿಯಲ್ಲಿ ಹೋಗುತ್ತಿದ್ದ ಕವಿ ಹೂ ನೋಡಿ “ಅದರ ಸೊಬಗನ್ನು ವರ್ಣಿಸಿ ಕವಿತೆ ಬರೆದ”,

ವರ್ತಕ ನೋಡಿ, ಹೂವಿನ ಮಾರುಕಟ್ಟೆ ಬೆಲೆಯ ಬಗ್ಗೆ ಲೆಕ್ಕಹಾಕಿದ,

ಹೂವು ಮಾರುವ ಹೆಣ್ಣು ಮಗಳು ಹೂತೋಟವನ್ನು ನೋಡಿ “ಇದನ್ನು ನನ್ನ ದಿನನಿತ್ಯದ ಮನೆಗಳಿಗೆ ಕೊಟ್ಟರೆ ನನ್ನ ಆದಾಯ ದ್ವಿಗುಣವಾಗುತ್ತೆ” ಎಂದು ಆಲೋಚಿಸಿದಳು,

ಒಬ್ಬ ಪ್ರೇಮಿ ಇದನ್ನು ನೋಡಿ “ನನ್ನ ಪ್ರಿಯತಮೆಗೆ ಇದನ್ನು ಕೊಟ್ಟು ಅವಳ ಮನಃ ಸಂತೋಷಪಡಿಸುತ್ತೇನೆ ” ಎಂದು ತೀರ್ಮಾನಿಸಿದ ,

ಅದೇ ಪ್ರಕೃತಿ ಪ್ರಿಯ ನೋಡಿ “ಹಾ ಹಾ, ಸುಂದರವಾದ ಪ್ರಕೃತಿ ಸೊಬಗು ಇದು, ಹೀಗೇ ಇರಲಿ” ಎಂದ,

ಮತೊಬ್ಬ ಪುರೋಹಿತ “ಈ ಪುಷ್ಪಗಳು ದೇವರ ಪೂಜೆಗೆ ತಕ್ಕ ಹೂವು” ಎಂದ,

ಅದೇ ದಾರಿಯಲ್ಲಿ ಬಂದ ರಾಜ “ಈ ಸುಂದರವಾದ ಹೂಗಳು ಅರಮನೆಯ ಶೃಂಗಾರಕ್ಕೆ ಸರಿಯಾದುದು” ಎಂದ,

ಹೀಗೆ ಬೆಳಿಗ್ಗೆ ಅರಳಿ ಸಂಜೆ ಬಾಡುವ ಪುಷ್ಪಗಳಿಗೆ ಇಷ್ಟು, ಇನ್ನಷ್ಟು ,ಮತ್ತಷ್ಟು ಅಭಿಪ್ರಾಯಗಳು ಬರುತ್ತವೆ.,

ಅ೦ದಾಗ
ಈ ಸಮಾಜದಲ್ಲಿ ಬದುಕುತ್ತಿರುವ ನಮ್ಮನ್ನು ಜನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಣುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ನಮ್ಮ ಜೀವನವನ್ನು ಸಾರ್ಥಕವಾಗಿಸುತ್ತಾ ಸನ್ಮಾರ್ಗದಲ್ಲಿ ನಡೆಯುತ್ತಾ ದೇವರನ್ನು ನೆನೆದು ಆ ಹೂವಿನ೦ತೆ ನಮ್ಮ ಜೀವನವನ್ನರಳಿಸಬೇಕು ಮತ್ತು ನಮ್ಮ ಕರ್ತವ್ಯವನ್ನು ಪೂರ್ಣ ಮಾಡಬೇಕು.......
ಅಲ್ಲವೇ ಗೆಳೆಯರೇ ....??